Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೮ ನೇ ಸಾಲು:
'''ಭೂಮಿ''' - ಇದು [[ಸೌರಮಂಡಲ]]ದಲ್ಲಿ ೫ನೇ ಅತಿ ದೊಡ್ಡ ಗ್ರಹ. ಸೂರ್ಯನಿಂದ ಆರೋಹಣ ಕ್ರಮದಲ್ಲಿ ೩ನೇ [[ಗ್ರಹ|ಗ್ರಹವಾಗಿದೆ]]. [[ಸೌರಮಂಡಲ]]ದ ಘನರೂಪಿ ಗ್ರಹಗಳಲ್ಲಿ ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡ ಗ್ರಹ, ಇದಲ್ಲದೆ, [[ಮಾನವ]]ರಿಗೆ ಈಗ ತಿಳಿದಿರು ವಂತೆ, ಇಡೀ [[ಬ್ರಹ್ಮಾಂಡ]]ದಲ್ಲೇ ಜೀವ ಸಂಕುಲವನ್ನು ಹೊಂದಿರುವ ಏಕೈಕ ಕಾಯ - ಭೂಮಿ. ಅಷ್ಟೇ ಅಲ್ಲ, ಇದರ ಸಾಂದ್ರತೆಯೂ ಅತಿ ಹೆಚ್ಚು.
 
ವಾಸ್ತುವಿನ ಪ್ರಕಾರ ಭೂಮಿಯ ಮೇಲೆ ಒಂದು ಹೊಸ ಮನೆ ಕಟ್ಟುವಾಗ:- ವಾಸ್ತು ಪೂಜೆ
 
ಮನೆಯ ನಿರ್ಮಾಣದ ಬಗ್ಗೆ ನಾವು ವಾಸ್ತು ಪರವಾಗಿ ಚಿಂತಿಸುವಾಗ, ಸಾಧಾರಣ ನಾವು ಅಡಿಪಾಯ (ಅಡಿ ಕಲ್ಲು) ಹಾಕುವುದರ ಬಗ್ಗೆ ಹೆಚ್ಚು ಗಮನವನ್ನು ನೀಡುವುದಿಲ್ಲ. ವಾಸ್ತು ಶಾಸ್ತ್ರದ ಪ್ರಕಾರ ಅಡಿಕಲ್ಲಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡುವುದರಿಂದ ಮನೆಯು ಸುದೃಢವಾಗಿರುತ್ತದೆ.
ಮನೆ ಕಟ್ಟಲು ಅಡಿಕಲ್ಲು ಹಾಕುವ ಮೊದಲು ಭೂಮಿ ಪೂಜೆ ನಡೆಸಿ ವಾಸ್ತು ಪುರುಷನನ್ನು ಸಂತೋಷಗೊಳಿಸಬೇಕು. ಪೂಜೆ ನಡೆಸಿದ ನಂತರವೂ ಕೆಲವು ಕಾರ್ಯಗಳ ಬಗ್ಗೆ ಹೆಚ್ಚು ಶ್ರದ್ಧೆ ವಹಿಸ ಬೇಕೆಂದು ವಾಸ್ತುಶಾಸ್ತ್ರವು ಹೇಳುತ್ತದೆ.
ಕೆಲವು ಅಶುಭಕರವಾದ ಶಬ್ದ ಅಥವಾ ಸನ್ನಿವೇಷಗಳು ಈ ಸಮಯದಲ್ಲಿ ತಲೆದೋರಿದರೆ ಈ ಸಮಾರಂಭವನ್ನು ಇನ್ನೊಂದು ಮುಹೂರ್ತಕ್ಕೆ ಮುಂದೂಡುವುದು ಒಳ್ಳೆಯದು ಎಂದು ವಾಸ್ತು ತಜ್ನರ ಅಭಿಪ್ರಾಯ.
ವಾಸ್ತು ಪುರುಷಮಂಡಲವನ್ನು ನಮ್ಮ ಭ-ಚಕ್ರಕ್ಕೆ ಹೋಲಿಸಿದರೆ ಈಶಾನ್ಯ ಕೋನದಲ್ಲಿ ಈಶಾನ್ಯದ ಗ್ರಹಗಳಾದ ಗುರುಗ್ರಹ ಗುರು ಪುತ್ರಕಾರಕ, ಪೂರ್ವದ ಅಧಿಪತಿ ಸೂರ್ಯ ಮತ್ತು ಕುಬೇರ ಸ್ಥಾನದ ಅಧಿಪತಿ ಬುಧ.
 
ಗುರುಗ್ರಹ ಭ-ಚಕ್ರದ ನವಮ ಮತ್ತು ದ್ವಾದಶ ಸ್ಥಾನದ ರಾಶ್ಯಾದಿಪತಿ, ವಾಸ್ತುಪುರುಷಸ್ಥಾನದ ಯಜಮಾನನ ತಲೆಯ ಸ್ಥಾನ, ಈ ಯಜಮಾನ ತನ್ನ ಬಾಳಿನಲ್ಲಿ ಮತ್ತು ಉದ್ಯೋಗದಲ್ಲಿ ತನಗೆ ತೃಪ್ತಿ ಸಿಗಬೇಕಾದರೆ ಪುತ್ರಕಾರಕ ಗುರುವಿನ ಅನುಗ್ರಹಬೇಕು, ಅಂತೆಯೇ ಸೂರ್ಯಗ್ರಹ ತಂದೆಯ ಬಗ್ಗೆ ತಿಳಿಸುತ್ತದೆ.
 
ವಾಸ್ತು ಶಾಸ್ತ್ರದಲ್ಲಿ ಜಲ ಸ್ಥಾನವನ್ನು ಪುತ್ರನ ಸ್ಥಾನ ಎನ್ನುತ್ತಾರೆ. ಪೂರ್ವ ಜನ್ಮಪುಣ್ಯಸ್ಥಾನ ಸಹಾಯವಿಲ್ಲದೆ, ಪುತ್ರಸ್ಥಾನದ ಯೋಗ ಸಿಗುವುದಿಲ್ಲ. ಈ ಸ್ಥಾನಕ್ಕೆ ಜಠರ ಅಗ್ನಿಯ ಸ್ಥಾನವೆನ್ನುತ್ತಾರೆ.
 
ಸೂರ್ಯ ಗ್ರಹವು ಶ್ರೀಸಾಮಾನ್ಯನಿಗೆ ಆರೋಗ್ಯವನ್ನು ನೀಡುವ ಗ್ರಹವಾಗಿದೆ, ಆರೋಗ್ಯವಿಲ್ಲದಿದ್ದರೆ ಮನುಷ್ಯನ ವೀರ್ಯ ಬೆಳೆಯುವುದಿಲ್ಲ, ಅಂತೆಯ ಭ-ಚಕ್ರದ ಮೇಷರಾಶಿಯನ್ನು ಧರ್ಮಸ್ಥಾನ, ವೃಷಭರಾಶಿಯನ್ನು ಅರ್ಥಸ್ಥಾನ, ಮಿಥುನ ರಾಶಿಯನ್ನು ಕಾಮಸ್ಥಾನ ಮತ್ತು ಕಟಕರಾಶಿಯನ್ನು ಜಲಸ್ಥಾನವೆಂದು ಕರೆಯುತ್ತಾರೆ.
"https://kn.wikipedia.org/wiki/ಸದಸ್ಯ:Srinivas_ujire" ಇಂದ ಪಡೆಯಲ್ಪಟ್ಟಿದೆ