ವಿವಾಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೬೨ ನೇ ಸಾಲು:
==ಧರ್ಮಸಿಂಧು- ಕನ್ಯಾದಾನ ಕ್ರಮ==
:
:ವರನು ಕನ್ಯೆಯಮನೆಗೆ ಬಂದಾಗ ಅವನಿಗೆ ಉಪಚಾರಾರ್ಥವಾಗಿ ಕೊಡುವ ಜೇನು ಮಿಶ್ರಿತ ಮೊಸರೇ ಮಧುಪರ್ಕ. (ಗೃಹ ಗತಾಂ ಸ್ನಾತಕ ವರಂ ಮಧುಪರ್ಕೇಣಾರ್ಹಯಿಷ್ಯೇ) ಗೃಹ್ಯಸೂತ್ರ ಪ್ರಕಾರ ಪದ್ದತಿಗಳು ಬೇರೆ ಆಗುತ್ತವೆ. ಈಕ್ಷಣ: ವಧೂವರರ ಮಧ್ಯೆ ಅಂತಃಪಟ ವಸ್ತ್ರವನ್ನು ಹಿಡಿಯಬೇಕು. ವಧು ಪೂರ್ವಕ್ಕೆ ಮುಖ; ವರ ಪಶ್ಚಿಮಕ್ಕೆ ಮುಖ; ವಧೂವರರು ಕೈಯಲ್ಲಿ ಅಕ್ಷತೆಯನ್ನು ಇಟ್ಟುಕೊಳ್ಳಬೇಕು. ತಮ್ಮ ಇಷ್ಟದೇವತೆಯನ್ನು ನೆನೆಯಬೇಕು. ಜೋಯಿಸರು ಸಕಾಲಬಂದಾಗ ಮಂಗಲಾಷ್ಟಕ ಹೇಳಿ, ತದೇವ ಲಗ್ನಂ ಪಠಿಸಿ, “ಸುಮೂರ್ತಮಸ್ತು ಓಂ ಪ್ರತಿಷ್ಠಾಂ” ಹೇಳೀದ ನಂತರ ಅಂತಃಪಟ ವಸ್ತ್ರವನ್ನು ಉತ್ತರ ದಿಕ್ಕಿಗೆ ಸರಿಸಿದ ನಂತರ ವಧೂವರರು ಪರಸ್ಪರ ತಲೆಯ ಮೇಲೆ ಅಕ್ಷತೆಯನ್ನು ಹಾಕಿ ಪರಸ್ಪರ ನೋಡಿಕೊಳ್ಳುವರು , ಇದು “ಈಕ್ಷಣ”; ವರನು ವಧುವಿನ ಭ್ರೂಮಧ್ಯದಲ್ಲಿ “ಓಂ ಭೂರ್ಭುವಃಸುವಃ” ಎಂದು ದರ್ಭೆಯ ತುದಿಯನ್ನು ವರೆಸಿ ಚೆಲ್ಲಿ ಜಲಸ್ಪರ್ಶಮಾಡುವನು. ಇದು “ಅಕ್ಷತಾರೋಪಣ.”
;ಟಿಪ್ಪಣಿ:(ಈಗ ಇರುವ ಪದ್ದತಿ ಅಂತಃ ಪಟವನ್ನು ಸರಿಸಿದ ತಕ್ಷಣ ಪರಸ್ಪರ ನೋಡಿ ಹಾರ ಹಾಕುವುದು. )
|