ಎ.ಆರ್.ಕೃಷ್ಣಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಇನ್ಫೋಬಾಕ್ಸ್ ಸೇರಿಸಲಾಗಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ
೧೯ ನೇ ಸಾಲು:
'''ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ''' ([[ಫೆಬ್ರುವರಿ ೧೨]], [[೧೮೯೦]] - [[ಫೆಬ್ರುವರಿ ೧]], [[೧೯೬೮]]) ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿಗಳೊಲ್ಲಬ್ಬರು. ಇವರ "ಬಂಗಾಳಿ ಕಾದಂಬರೀಕಾರ ಬಂಕಿಮ ಚಂದ್ರ" ಎಂಬ ಕೃತಿಗೆ [[೧೯೬೧]]ರ [[ಕೇಂದ್ರ ಸಾಹಿತ್ಯ ಅಕಾಡೆಮಿ]] ಪ್ರಶಸ್ತಿ ದೊರಕಿದೆ.<ref>[http://www.kamat.com/jyotsna/blog/a_r_krishnasastry.htm ಎ.ಆರ್.ಕೃಷ್ಣಶಾಸ್ತ್ರಿ ]</ref>
===ಬಾಲ್ಯ ===
ತಂದೆ, ಪ್ರಖ್ಯಾತ ವಯ್ಯಾಕರಣದವಯ್ಯಾಕರಣಿ ಅಂಬಳೆ ರಾಮಕೃಷ್ಣಶಾಸ್ತ್ರಿಗಳು. ಇವರು ಶೃಂಗೇರಿ ಸ್ವಾಮಿಗಳ ಬಳಿ ಪದಕ, ಶಾಲು ಜೋಡಿ, ಚಿನ್ನದ ಕಾಪು, ತೋಡಗಳನ್ನು ಪಡೆದವರು. ಮೈಸೂರಿನ ಸಂಸ್ಕೃತ ವಿದ್ಯಾಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ತಾಯಿ ಶಂಕರಮ್ಮನವರು. ಫೆ.೧೨, ೧೮೯೦ ರಲ್ಲಿ ಜನಿಸಿದರು. ಮೈಸೂರಿನ ದೇವೀರಮ್ಮಣ್ಣಿ ಅಗ್ರಹಾರದಲ್ಲಿ ವಾಸ್ತವ್ಯಹೂಡಿದ್ದ ಅವರ ಮನೆಯನ್ನು ಮಹಾರಾಜರೇ ಕೊಟ್ಟಿದ್ದರು. ಶಾಸ್ತ್ರಿಗಳಿಗೆ ಮನೆಯೇ ಪಾಠಶಾಲೆ, ಮತ್ತು ತಂದೆಯವರೇ ಶಿಕ್ಷಕರು. ಅವರ ಮೊದಲ ಪಾಠ, " ಓಂ ನಮಃ ಶಿವಾಯ. ತಮ್ಮ ೮ನೆ ವರ್ಷದಲ್ಲೇ ತಾಯಿಯವರ ಅಕಾಲನಿಧನದಿಂದ ತಂದೆಯವರ ಸಾನ್ನಿಧ್ಯ ಹೆಚ್ಚಾಯಿತು. ಅವರು ತಂದೆಯವರ ಜೊತೆಗೇ ಪಾಠಶಾಲೆಗೆ ಹೋಗುತ್ತಿದ್ದರು.
 
===ಕೃಷ್ಣಶಾಸ್ತ್ರಿಗಳ ವೇಶಭೂಷಣಗಳು :===
ಪಂಚೆ, ಶರ್ಟ್, ತಲೆಯಮೇಲೆ ಒಂದು ಟೋಪಿ, ಮತ್ತು ತಲೆಯಲ್ಲಿ ಜುಟ್ಟು ಇತ್ತು. ಹಣೆಯಲ್ಲಿ ತಿದ್ದಿದ ಗಂಧಾಕ್ಷತೆ. ಎಲ್ಲಿ ಹೋಗಬೇಕಾದರೂ ಬರಿಕಾಲಿನಲ್ಲಿಹೋಗುತ್ತಿದ್ದರು. ಶಾಲೆಯಲ್ಲಿ ಎಲ್ಲರಿಗಿಂತ ತಾವೇ ಮೊದಲಿಗರು. ಅವರಿಗೆ ವಿದ್ಯಾರ್ಥಿವೇತನ ಸಿಕ್ಕ ಮೊದಲ ತಿಂಗಳಲ್ಲೇ, ಒಂದು ಪುಸ್ತಕ ಖರೀದಿಸಿದರು. ಅದರ ಹೆಸರು," ಆನಂದ ಮಠ."