ಕರ್ನಾಟಕ ಸರ್ಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಬಾಂಬೆ → ಮುಂಬಯಿ (3) using AWB
ಚು ಬೋಟ್: ಸ್ಥಿರೀಕರಿಸುವ ಪುನರ್ನಿರ್ದೇಶನಗಳು
೨೩ ನೇ ಸಾಲು:
==ಇತಿಹಾಸ==
:'''ಕರ್ನಾಟಕದ ಏಕೀಕರಣ'''
*ಭಾರತವು ಸ್ವತಂತ್ರವಾದ ಮತ್ತು ದೇಶ ವಿಭಜನೆಯಾದ ಬಳಿಕ ಭಾಷಾವಾರು ಮತ್ತು ಇತರ ಮಾನದಂಡಗಳನ್ನು ಆಧರಿಸಿ ರಾಜ್ಯಗಳನ್ನು ರಚಿಸಲು ಪುನರ್ವಿಂಗಡಣೆಯ ಗಡಿಗಳನ್ನು ಗುರುತಿಸಲಾಯಿತು ಸ್ವಾತಂತ್ರ್ಯದ ನಂತರ, ಒಡೆಯರ್ ಅವರು ಜನರ ಚಳುವಳಿಯನ್ನು ಗಮನಿಸಿ ಅವರ ಅಪೇಕ್ಷೆ ಮನ್ನಿಸಿ [[ಭಾರತ]]ದ ಭಾಗವಾಗಲು ಸಮ್ಮತಿಸಿದರು. 1950 ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು, ಮಹಾರಾಜರು 1975 ರ ವರೆಗೆ ಅದರ ರಾಜ ಪ್ರಮುಖ, ಅಥವಾ [[ರಾಜ್ಯಪಾಲ]]ರಾದರು. ''ಏಕೀಕರಣ'' ಚಳುವಳಿ 19ನೆಯ ಶತಮಾನದ ಎರಡನೇ ಭಾಗದಲ್ಲಿ ಆರಂಭವಾಗಿ, 1956 ರಲ್ಲಿ ರಾಜ್ಯ ಪುನಸ್ಸಂಘಟನೆ ಕಾಯಿದೆಯೊಂದಿಗೆ ಚಳುವಳಿ ಮುಕ್ತಾಯವಾಯಿತು. ಇದರಿಂದ ಕೂರ್ಗ್ / [[ಕೊಡಗು]], ಮದ್ರಾಸ್`ಪ್ರಾಂತ್ಯ , [[ಹೈದರಾಬಾದ್‌, ತೆಲಂಗಾಣ|ಹೈದರಾಬಾದ್]], ಹಾಗು ಮುಂಬಯಿ ರಾಜ್ಯದ ಕನ್ನಡ ಭಾಷೆಯ ಜನರು ಹೆಚ್ಚು ಇರುವ ಭಾಗಗಳನ್ನು [[ಮೈಸೂರು]] ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮುಖ್ಯಮಂತ್ರಿಯಾದ ಡಿ.ದೇವರಾಜ ಅರಸು ಅವರ ಕಾಲದಲ್ಲಿ ೧ ನವೆಂಬರ್, ೧೯೭೩ ರಂದು, ಮೈಸೂರು ರಾಜ್ಯದ ಹೆಸರನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹೊಸ ಮೈಸೂರು ರಾಜ್ಯವು(ನಂತರ ವಿಶಾಲ ಮೈಸೂರು-ನಂತರ ಕರ್ನಾಟಕ) ೧ ನವೆಂಬರ್.೧೯೫೬ ರಲ್ಲಿ ರಚನೆಯಾಯಿತು ಅಂದಿನಿಂದ ೧ ನವೆಂಬರ್ ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.
*ಕನ್ನಡ ಭಾಷೆಯ ಕೆಲವು ಪ್ರದೇಶಗಳು ಸೇರ್ಪಡೆ ಆಗದ ಕಾರಣ ಕನ್ನಡಿಗರು ನಿರಾಶೆ ಹೊಂದಿದ್ದರೂ, ಸಂಸತ್ತಿನಲ್ಲಿ ಎಸ್ಆರ್ಸಿ (SRC)ರಾಜ್ಯ ಪುನರ್ವಿಂಗಡಣಾ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸಲು ಒಪ್ಪಿದರು. ರಾಜರ ಆಡಳಿತದಲ್ಲಿದ್ದ ಮೈಸೂರು ರಾಜ್ಯವು ಸಕಾರಾತ್ಮಕವಾಗಿ, ಪ್ರತಿಕ್ರಿಯಿಸಿತು .ಕರ್ನಾಟಕಕ್ಕೆ ಸೇರದೆ ಕೈಬಿಟ್ಟ ಹೆಚ್ಚು ಕನ್ನಡಿಗರಿರುವ ಪ್ರದೇಶಗಳ ಪೈಕಿ ಅತ್ಯಂತ ಗಮನಾರ್ಹವಾದ ಪ್ರದೇಶ [[ಕಾಸರಗೋಡು]]. ಇದು ಏಕೀಕರಣ ಚಳವಳಿಯನ್ನು ಪ್ರಾರಂಭಿಸಿದ ಕೇಂದ್ರಗಳಲ್ಲಿ ಒಂದಾಗಿದೆ. ಹೀಗಾಗಿ ಕನ್ನಡ ಮಾತನಾಡುವ ಜನಸಂಖ್ಯೆಯುಳ್ಳ ಪ್ರದೇಶಗಳಲ್ಲಿ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಅವರು ತಳಮಳ ಗೊಂಡಿದ್ದಾರೆ; ಹೋರಾಟ ಮುಂದುವರಿದಿದೆ.
*ಕರ್ನಾಟಕ ರಾಜ್ಯವು ತನ್ನ ರಾಜಧಾನಿಯಾಗಿ ಬೆಂಗಳೂರು ನಗರವನ್ನು ಆಯ್ಕೆ ಮಾಡಿಕೊಂಡಿತು, ಮತ್ತು ಕನ್ನಡಕ್ಕೆ ಆಡಳಿತ ಭಾಷೆಯ ಸ್ಥಾನಮಾನವನ್ನು ನೀಡಿತು. ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮೇಲ್ವಚಾರಣೆಯಲ್ಲಿ ವಿಧಾನಸೌಧದ ನಿರ್ಮಾಣವಾಗಿ, ಅದು ರಾಜ್ಯದ ಶಾಸನಸಭೆಯ (ಸಂಸತ್`ಭವನ) ಸದನವಾಯಿತು. ಹಿಂದಿನ ಸಚಿವಾಲಯವಾಗಿದ್ದ ‘ಅಠಾರಾ ಕಛೇರಿ'ಯನ್ನು (ಸರ್ಕಾರದ ಆಡಳಿತ ಕಛೇರಿ) ರಾಜ್ಯದ ಹೈಕೋರ್ಟ್ ಮಾಡಲಾಯಿತು.<ref>http://www.oneindia.com/2010/11/01/kannadigas-celebrate-karnata-rajyotsava-on-nov-1.html</ref><ref>[[ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]</ref>
:'''ಸ್ವಾತಂತ್ರಾನಂತರದ ನಂತರದ ಇತಿಹಾಸ'''
*ಕಾಂಗ್ರೆಸ್ ಪಕ್ಷದ ಕೆ.[[ಚಂಗಲರಾಯ ರೆಡ್ಡಿ]] (ಕ್ಯಾಸಂಬಳ್ಳಿ [[ಚೆಂಗಲರಾಯ ರೆಡ್ಡಿ]])25ನೇ ಅಕ್ಟೋಬರ್ 1947 ರಂದು[[ಮೈಸೂರು ರಾಜ್ಯ]]ದ ಮೊದಲ ಮುಖ್ಯಮಂತ್ರಿಯಾದರು. ಮೈಸೂರು ಮಹಾರಾಜ ಎಚ್.ಎಚ್.ಶ್ರೀ [[ಜಯಚಾಮರಾಜ ಒಡೆಯರ್|ಜಯಚಾಮರಾಜೇಂದ್ರ ಒಡೆಯರ್]] ರಾಜಪ್ರಮುಖರಾದರು. ನಂತರ ರಾಜ್ಯದ ರಾಜ್ಯಪಾಲರಾದರು. ರೆಡ್ಡಿಯವರ ನಂತರ ದಿ 30ನೇ ಮಾರ್ಚ್ 1952 ರಿಂದ ಕಾಂಗ್ರೆಸ್ [[ಕೆಂಗಲ್ ಹನುಮಂತಯ್ಯ]]ನವರು ಮುಖ್ಯಮಂತ್ರಿಯಾದರು.
 
==ಆಡಳಿತ ವಿಭಾಗಗಳು==
೪೦ ನೇ ಸಾಲು:
*ಮುಖ್ಯ ಲೇಖನ: [[ಕರ್ನಾಟಕದ ಏಕೀಕರಣ]]
*ಮೈಸೂರು ಮತ್ತು ಕೊಡಗು ರಾಜ್ಯಗಳು, ಮುಂಬಯಿ ಮತ್ತು ಹೈದರಾಬಾದ್,ನ ಮತ್ತು ಮದ್ರಾಸ್ ನ ಹಳೆಯ ರಾಜ್ಯಗಳ ಕನ್ನಡ ಮಾತನಾಡುವ ಜಿಲ್ಲೆಗಳು ಕರ್ನಾಟಕದಲ್ಲಿ ವಿಲೀನಗೊಂಡಿತು. *ನಂತರ, 1956 ರಲ್ಲಿ ತನ್ನ ಪ್ರಸಕ್ತ ರೂಪವನ್ನು ತೆಗೆದುಕೊಂಡಿತು. ಮೈಸೂರು ರಾಜ್ಯವು 10 ಜಿಲ್ಲೆಗಳನ್ನು ಹೊಂದಿತ್ತು ಅವು : [[ಬೆಂಗಳೂರು]], [[ಕೋಲಾರ]], [[ತುಮಕೂರು]], [[ಮಂಡ್ಯ]], [[ಮೈಸೂರು]], [[ಹಾಸನ]], [[ಚಿಕ್ಕಮಗಳೂರು]] (ಕಡೂರು), [[ಶಿವಮೊಗ್ಗ]] ಮತ್ತು [[ಚಿತ್ರದುರ್ಗ]]. [[ಬಳ್ಳಾರಿ]]ಯು 1953 ರಲ್ಲಿ ಈಗಿನ [[ಕರ್ನಾಟಕ]]ಕ್ಕೆ ಸೇರಿತು. (ಇವು ಎಲ್ಲಾ ಕರ್ನಾಟಕದಲ್ಲಿ ಸೇರಿದವು.)
*ಹೊಸ [[ಆಂಧ್ರ]] ರಾಜ್ಯವು ಮದ್ರಾಸ್` ನ ಉತ್ತರ ಜಿಲ್ಲೆಗಳಲ್ಲಿ ಸೃಷ್ಟಿಯಾಯಿತು. ಆಗ ಮೈಸೂರು ರಾಜ್ಯಕ್ಕೆ ಮದ್ರಾಸ್ ಪ್ರಾಂತ್ಯದಿಂದ ವರ್ಗಾಯಿಸಿದ. [[ಕೊಡಗು]] ಜಿಲ್ಲಾ(ಕೇಂದ್ರಾಡಳಿತ), ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಮದ್ರಾಸ್ ರಾಜ್ಯದ ಉತ್ತರ ಕನ್ನಡ [[ಧಾರವಾಡ]], [[ಬೆಳಗಾವಿ]] ಜಿಲ್ಲೆ, ಮತ್ತು ಮುಂಬಯಿ ಪ್ರಾಂತ್ಯದ [[ವಿಜಯಪುರ|ಬಿಜಾಪುರ]] ಜಿಲ್ಲೆ; ಮತ್ತು [[ಹೈದರಾಬಾದ್ ಪ್ರಾಂತ್ಯ]]ದಿಂದ [[ಬೀದರ್|ಬೀದರ್ ಜಿಲ್ಲೆ]], [[ಕಲಬುರಗಿ|ಗುಲ್ಬರ್ಗ]] ಜಿಲ್ಲೆ, ಮತ್ತು [[ರಾಯಚೂರು ಜಿಲ್ಲೆ|ರಾಯಚೂರು]] ಜಿಲ್ಲೆಗಳನ್ನು ಕರ್ನಾಟಕಕ್ಕೆ ವರ್ಗಾಯಿಸಲಾಯಿತು . 1989 ರಲ್ಲಿ ಗ್ರಾಮಾಂತರ ಪ್ರದೇಶ ಬೆಂಗಳೂರಿನಿಂದ ಬೇರ್ಪಟ್ಟು [[ಬೆಂಗಳೂರು ಗ್ರಾಮಾಂತರ ಜಿಲ್ಲೆ|ಬೆಂಗಳೂರು ಗ್ರಾಮಾಂತರ]] ಜಿಲ್ಲೆಯಾಯಿತು. 1997 ರಲ್ಲಿ [[ಬಾಗಲಕೋಟೆ|ಬಾಗಲಕೋಟೆ ಜಿಲ್ಲೆ]]ಯ [[ವಿಜಯಪುರ]]/[[ವಿಜಯಪುರ|ಬಿಜಾಪುರ]]ದಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಯಿತು. [[ಮೈಸೂರು|ಮೈಸೂರು ಜಿಲ್ಲೆ]] ಒಡೆದು [[ಚಾಮರಾಜನಗರ|ಚಾಮರಾಜನಗರ ಜಿಲ್ಲೆ]] ಆಯಿತು. [[ಧಾರವಾಡ|ಧಾರವಾಡ ಜಿಲ್ಲೆ]] ಒಡೆದು [[ಗದಗ|ಗದಗ ಜಿಲ್ಲೆ]] ಹುಟ್ಟಿತು. ಮತ್ತೆ [[ಧಾರವಾಡ|ಧಾರವಾಡ ಜಿಲ್ಲೆ]] ಒಡೆದು [[ಹಾವೇರಿ|ಹಾವೇರಿ ಜಿಲ್ಲೆ]] ಆಯಿತು. [[ರಾಯಚೂರು ಜಿಲ್ಲೆ]] ಒಡೆದು [[ಕೊಪ್ಪಳ|ಕೊಪ್ಪಳ ಜಿಲ್ಲೆ]] ಆಯಿತು. [[ದಕ್ಷಿಣ ಕನ್ನಡ]] ಬೇರ್ಪಟ್ಟು [[ಉಡುಪಿ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ಆಯಿತು. [[ದಾವಣಗೆರೆ|ದಾವಣಗೆರೆ ಜಿಲ್ಲೆ]]ಯನ್ನು [[ಬಳ್ಳಾರಿ]], [[ಚಿತ್ರದುರ್ಗ]], [[ಧಾರವಾಡ]], [[ಶಿವಮೊಗ್ಗ|ಶಿವಮೊಗ್ಗ ಜಿಲ್ಲೆ]]ಗಳ ಭಾಗಗಳಿಂದ ರಚಿಸಲಾಗಿದೆ. 2008 ರಲ್ಲಿ [[ಬೆಂಗಳೂರು ಗ್ರಾಮಾಂತರ ಜಿಲ್ಲೆ]]ಯನ್ನು ಇಬ್ಭಾಗಿಸಿ [[ರಾಮನಗರ]] ಎಂಬ ಹೊಸ ಜಿಲ್ಲೆಯ ರಚನೆಯಾಯಿತು. ಅದೇ ರೀತಿಯಲ್ಲಿ [[ಚಿಕ್ಕಬಳ್ಳಾಪುರ|ಚಿಕ್ಕಬಳ್ಳಾಪುರ ಜಿಲ್ಲೆ]]ಯನ್ನು, ಹಿಂದಿನ ಕೋಲಾರ ಜಿಲ್ಲೆಯನ್ನು ಒಡೆದು ಮಾಡಲಾಯಿತು.ಇದು ಇಂದಿನ (೨೦೧೬) ಕರ್ನಾಟಕ. ಈಗ ಕರ್ನಾಟಕದಲ್ಲಿ(೨೦೧೬) ೩೦ ಜಿಲ್ಲೆಗಳಿವೆ.([[ಕರ್ನಾಟಕದ ಜಿಲ್ಲೆಗಳು]]).
 
==೨೦೧೩ ರ ಚುನಾಯಿತ ಸರ್ಕಾರ==
"https://kn.wikipedia.org/wiki/ಕರ್ನಾಟಕ_ಸರ್ಕಾರ" ಇಂದ ಪಡೆಯಲ್ಪಟ್ಟಿದೆ