ಮಂಥರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ. |
ಲೇಖನಕ್ಕೆ ಮತ್ತಷ್ಟು ವಿಷಯವನ್ನು ಸೇರಿಸಲಾಗಿದೆ. |
||
೧ ನೇ ಸಾಲು:
'''ಮಂಥರೆ''' ರಾಮಾಯಣದ ಒಂದು ವಿಶೇಷ ಪಾತ್ರ. ರಾಮಾಯಣದಲ್ಲಿ ಅವಳನ್ನು ಕುರೂಪಿಯಂತೆ ವರ್ಣಿಸಲಾಗಿದೆ. ಅವಿವಾಹಿತೆಯಾದ ಅವಳು ಕೈಕೇಯಿಯ ನಂಬುಗಸ್ತ ಸೇವಕಿ, ಸಖಿ. ಕುವೆಂಪು ಅವರು ತಮ್ಮ "ರಾಮಾಯಣದರ್ಶನಂ" ಕೃತಿಯಲ್ಲಿ ಮಂಥರೆ ಪಾತ್ರವನ್ನು 'ಕರುಣಾಳು ಮಂಥರೆ' ಎಂದು ಕರೆದಿದ್ದಾರೆ. ಅವರ ಪ್ರಕಾರ ಮಂಥರೆ ಇಲ್ಲದಿದ್ದರೆ ರಾಮನ ವ್ಯಕ್ತಿತ್ವ ನಾಡಿನಾದ್ಯಂತ ಪ್ರಜ್ವಲಿಸುತ್ತಿರಲಿಲ್ಲ.
==ಪರಿಚಯ==
* ಮಂಥರೆ [[ಅಯೋಧ್ಯೆ]]ಯ ರಾಜ [[ದಶರಥ]]ನ ಮೂರನೆಯ ಮಡದಿ [[ಕೈಕೇಯಿ]]ಯ ಸೇವಕಿಯಾಗಿದ್ದಳು. ಮದುವೆಯಾಗದ ಅವಳ ಮನದಲ್ಲೂ ಮಾತೃಸೆಲೆ ಜಿನುಗುತ್ತಿತ್ತು. ಆದರೆ ಕೈಕೇಯಿಯನ್ನು ಹೊರತು ಪಡಿಸಿ ಬೇರೆ ಯಾವ ರಾಣಿಯರು ಅವಳ ಕೈಗೆ ತಮ್ಮ ಮಕ್ಕಳನ್ನು ಆಡಿಸಲು ಕೊಡುತ್ತಿರಲಿಲ್ಲ. ಹಾಗಾಗಿ ಅವಳಿಗೆ ತಾನೇ ಬೆಳೆಸಿದ ಕೈಕೇಯಿಯ ಮಗ ಭರತನ ಮೇಲೆ ಅಪರಿಮಿತ ಪ್ರೀತಿ.
* ಆಗ ಹರಿವಾಣದ ಪನ್ನೀರಿನೊಳಗೆ ಚಂದ್ರಬಿಂಬ ಒಡಮೂಡುತ್ತದೆ. ಆಗ ಮಂಥರೆ ರಾಮನನ್ನು ಕರೆದು ನಿನ್ನ ಚಂದ್ರನನ್ನು ಭೂಮಿಗೆ ತಂದಿದ್ದೇನೆ ಆಟ ಆಡಿಕೊ ಹೋಗು ಎಂದಾಗ ಬಾಲ ರಾಮ ಅಳು ನಿಲ್ಲಿಸಿ ಕಿಲಕಿಲ ನಗುತ್ತಾನೆ. ಬೇರೆ ರಾಣಿಯರು ಮಂಥರೆಗೆ ಮಾಡಿದ ತಾರತಮ್ಯದಿಂದಾಗಿ ಮಂಥರೆ ಅವರ ಬಗ್ಗೆ ದ್ವೇಷ ಭಾವವನ್ನು ತಾಳುತ್ತಾಳೆ. ಇದು ರಾಮನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ.
==ರಾಮನನ್ನು ಕಾಡಿಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರವಾಗಿ==
ಶ್ರೀರಾಮ ಪ್ರಾಪ್ತ ವಯಸ್ಕನಾಗಿ, ವಿವಾಹವಾಗಿ ಯುವರಾಜನಾಗಿ ಪಟ್ಟಾಭಿಷಿಕ್ತನಾಗುವ ಸುದ್ದಿ ತಿಳಿದು, ತನ್ನ ಪ್ರಿಯ ರಾಣಿ ಕೈಕೇಯಿಯ ಮಗ ಭರತನೇ ಯುವರಾಜನಾಗಬೇಕೆಂದು ಆಶಿಸಿ, ಕೈಕೇಯಿಯ ಮನಸ್ಸು ಕೆಡಿಸಿ, ಅಯೋದ್ಯೆಯ ಸಿಂಹಾಸನಕ್ಕೆ [[ರಾಮ]]ನ ಬದಲು ಕೈಕೇಯಿಯ ಮಗನಾದ [[ಭರತ]]ನೇ ಪಟ್ಟವೇರುವಂತೆ ದಶರಥನನ್ನು ಒತ್ತಾಯಿಸಲು ಪ್ರೇರೇಪಿಸುವಳು. ಇದು ಮುಂದೆ ರಾಮಾಯಣದ ಎಲ್ಲಾ ಕಥೆಗೆ ಮೂಲವಾಯಿತು. ರಾಮ ರಾವಣನನ್ನು ಸಂಹರಿಸಿ ಲಂಕೆಯಿಂದ ಹಿಂದಿರುಗುವಾಗ ಹೆಚ್ಚು ಸಂತಸಪಟ್ಟವಳು ಮಂಥರೆಯೆಂದು ಕುವೆಂಪು ಅವರು ತಮ್ಮ "ರಾಮಾಯಣದರ್ಶನಂ" ಕೃತಿಯಲ್ಲಿ ಹೇಳಿದ್ದಾರೆ.
{{ರಾಮಾಯಣ}}
|