ಬಾಗಲಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು Adding {{ಕರ್ನಾಟಕದ_ಜಿಲ್ಲೆಗಳು}} using AWB |
|||
೧ ನೇ ಸಾಲು:
{{Infobox ಭಾರತದ ಭೂಪಟ
|native_name = ಬಾಗಲಕೋಟ
Line ೨೫ ⟶ ೨೪:
'''[[ಬಾಗಲಕೋಟ]]'''ಯು ಕರ್ನಾಟಕದ ಒಂದು [[ಜಿಲ್ಲೆ|ಜಿಲ್ಲಾ ಕೇಂದ್ರ]]. ಈ ಜಿಲ್ಲೆಯು ಉತ್ತರ ಕರ್ನಾಟಕದಲ್ಲಿ ಸ್ಥಾಪಿತವಾಗಿದೆ. ಮತ್ತು [[ಬೆಳಗಾವಿ]], [[ಗದಗ]], [[ಕೊಪ್ಪಳ]], [[ರಾಯಚೂರು]] ಹಾಗೂ [[ಬಿಜಾಪುರ]]ಗಳೊಂದಿಗೆ ತನ್ನ ಗಡಿಯನ್ನು ಹೊಂದಿದೆ. ೧೯೯೭ರಲ್ಲಿ ಭಾರತದ ೫೦ನೆಯ ಸ್ವಾತಂತ್ರ್ಯೋತ್ಸವದ ಸ್ಮರಣೀಯ ಘಟ್ಟದಲ್ಲಿ [[ಕರ್ನಾಟಕ ಸರ್ಕಾರ]]ದ ''[[ಪ್ರಕಟಣೆ ಆರ್ಡಿ ೪೨ ಎಲ್ಆರ್ಡಿ ೮೭ ಭಾಗ ೩]]'' ನಿರ್ದೇಶದ ದ್ವಾರಾ ಹೊಸ ಜಿಲ್ಲೆಯಾಗಿ ಅಂದಿನ ಮುಖ್ಯಮಂತ್ರಿ ಮಾನ್ಯ ಜೆ.ಎಚ್.ಪಟೇಲರಿಂದ ಉದ್ಘಾಟಿಸಲ್ಪಟ್ಟಿತು. ಐತಿಹಾಸಿಕವಾಗಿ ಬಾಗಲಕೋಟ ಜಿಲ್ಲೆಯು [[ಚಾಲುಕ್ಯ]]ರಾಳಿದ ನಾಡು. [[ಬಾದಾಮಿ]], [[ಐಹೊಳೆ]], [[ಪಟ್ಟದಕಲ್ಲು]], [[ಕೂಡಲಸಂಗಮ]] ಮತ್ತು [[ಮಹಾಕೂಟ]] ಇಲ್ಲಿಯ ಅತ್ಯಂತ ಪ್ರಮುಖ ಪ್ರೇಕ್ಷಣೀಯ ಸ್ಥಳಗಳು.
=='''ಇತಿಹಾಸ'''==
Line ೩೧ ⟶ ೨೯:
ಇಲ್ಲಿ ದೊರೆತ ಶಿಲಾಶಾಸನಗಳ ಪ್ರಕಾರ ಮೂಲ ಹೆಸರು ಬಾಗಡಿಗೆ ಎಂದು ಆಗಿತ್ತು. ಪುರಾಣಗಳ ಪ್ರಕಾರ ಲಂಕಾಧಿಪತಿಯಾದ ರಾವಣ ಈ ಪ್ರದೇಶವನ್ನು ಆಳುತ್ತಿದ್ದ, ಅವನು ಈ ನಗರವನ್ನು ಬಜಂತ್ರಿ (ಸಂಗೀತಗಾರರು) ಗೆ ಕೊಡುಗೆಯಾಗಿ ನೀಡಿದ್ದನು. ಬಿಜಾಪುರ ರಾಜರು ತನ್ನ ಮಗಳಿಗೆ ಕಂಕಣ ಕಾಣಿಕೆ (ಮಗಳ ಮದುವೆ ನಂತರ ಬಳೆ, ಸೀರೆ, ಆಭರಣಗಳ ಖರೀದಿಸಲು ತಂದೆ-ತಾಯಿ ಹಣ ಕೋಡುವ ಸಂಪ್ರದಾಯದಂತೆ) ಯಾಗಿ ಈ ಪಟ್ಟಣವನ್ನು ಕೊಡುಗೆಯಾಗಿ ನೀಡಿದನು ಎಂದು ಹೇಳಲಾಗುತ್ತದೆ. ಪರಿಣಾಮವಾಗಿ ಪಟ್ಟಣದ ಹೆಸರು "ಬಾಗಡಿಕೋಟೆ"ಯಾಗಿ ನಂತರ ಬಾಗಲಕೋಟೆಯಾಗಿ ಮಾರ್ಪಟ್ಟಿತು. ನಂತರದ ದಿನಗಳಲ್ಲಿ ಬಾಗಲಕೋಟೆ ವಿಜಯನಗರ ದೊರೆಗಳ, ಪೇಶ್ವೆಗಳ, ಮೈಸೂರಿನ ಹೈದರಾಲಿ, ಮರಾಠ ಆಡಳಿತಗಾರರು ಮತ್ತು ಅಂತಿಮವಾಗಿ 1818 ರಲ್ಲಿ ಬ್ರಿಟಿಷ್ ಆಳ್ವೆಕೆಗೆ ಒಳಗಾಯಿತು. 1865 ರಲ್ಲಿ ಪುರಸಭೆಯಾಗಿ ಅಸ್ಥಿತ್ವಕ್ಕೆ ಬಂದಿತು. ಬಾಗಲಕೋಟೆಯು "ಸ್ವಾತಂತ್ರ್ಯ ಚಳುವಳಿ" ಮತ್ತು "ಕರ್ನಾಟಕ ಏಕೀಕರಣ ಚಳುವಳಿ"ಗಳಿಗೆ ಕೇಂದ್ರವಾಗಿತ್ತು.
ಇಂದು, ಬಾಗಲಕೋಟೆ ಪಟ್ಟಣ ಎರಡು ಭಾಗಗಳಲ್ಲಿ ಹಂಚಿ ಹೋಗಿದೆ, ಹೊಸ ಬಾಗಲಕೋಟೆ ಅಥವಾ ನವನಗರ ಮತ್ತು ಹಳೆಯ ಬಾಗಲಕೋಟೆ ಪಟ್ಟಣ. [[ಆಲಮಟ್ಟಿ ಅಣೆಕಟ್ಟು
=='''ನದಿಗಳು'''==
ಇಲ್ಲಿ [[ಘಟಪ್ರಭಾ]], [[ಮಲಪ್ರಭಾ]], ಮತ್ತು [[ಕೃಷ್ಣಾ]] ನದಿಗಳು ಹರಿಯುತ್ತವೆ.
=='''ಶಿಕ್ಷಣ'''==
Line ೫೬ ⟶ ೫೨:
=='''ಸಾಹಿತ್ಯ'''==
ಸಂಶೋಧನೆ ಎಂಬುದು ಅನ್ವೇಷಣಾ ರೂಪದ ಬೌದ್ಧಿಕ ಕ್ರಿಯೆ. ಇದೊಂದು ಪರಿಶ್ರಮದ ಕ್ಷೇತ್ರ. ನಮ್ಮ ಜೀವನ ವಿಧಾನ, ಆಲೋಚನಾ ಪದ್ದತಿಗಳಲ್ಲಿ ಬಹುದೊಡ್ಡ ಬದಲಾವಣೆಗಳು ಸಂಭವಿಸಲು ನಮ್ಮ ಸಾಂಸ್ಕøತಿಕ ಇತಿಹಾಸದಲ್ಲಿ ಆರ್ಯರ ಆಗಮನ, ಆಂಗ್ಲರ ಪ್ರವೇಶಗಳು ಚರಿತ್ರಾರ್ಹ ಘಟನೆಗಳಾಗಿವೆ. ಕೃಷಿ ಸಂಸ್ಕøತಿಯ ಆರ್ಯರು, ಯಂತ್ರ ಸಂಸ್ಕøತಿಯ ಆಂಗ್ಲರು ನಮ್ಮ ಭೌತಿಕ ಮತ್ತು ಬೌದ್ಧಿಕ ಬದುಕಿನಲ್ಲಿ ಹೊಸ ಹೊಸ ಬದಲಾವಣೆಗಳನ್ನು ರೂಢಿಸಿದರು. ನಮ್ಮ ಹಳೆಯ ಜ್ಞಾನ ಶಾಖೆಗಳು ಹೊಸ ರೂಪ ಪಡೆದವು, ಪಶ್ಚಿಮದ ಹೊಸ ಜ್ಞಾನಶಾಖೆಯಾಗಿ ‘ಸಂಶೋಧನೆ’ ನಮ್ಮಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತು. ಬಾಗಲಕೋಟ ಜಿಲ್ಲೆಯಲ್ಲಿ ಸಾಹಿತ್ಯ ಮತ್ತು ಸಂಸ್ಕøತಿಗೆ ಸಂಬಂಧಿಸಿದಂತೆ ಸಂಶೋಧನಾ ಕೆಲಸವು ಕಳೆದ ಶತಮಾನದ ಮಧ್ಯಭಾಗದಲ್ಲಿ ಆರಂಭವಾದವು. ಜಿಲ್ಲೆಯ ಸಂಶೋಧನಾ ಕ್ಷೇತ್ರ ವೈವಿದ್ಯಮಯವಾಗಿದೆ. ಜಾನಪದ, ಶಾಸನ, ವಚನ, ಹರಿದಾಸ ಸಾಹಿತ್ಯ, ಹಸ್ತಪ್ರತಿ ಶಾಸ್ತ್ರ, ವ್ಯಾಕರಣ, ಛಂದಸ್ಸು, ಸೃಜನ, ಸೃಜನೇತರ ಸಾಹಿತ್ಯ, ಜೀವನ ಚರಿತ್ರೆ, ರಂಗಭೂಮಿ, ಚಿತ್ರಕಲೆ, ಗ್ರಾಮನಾಮ ವಿಜ್ಞಾನ ಮೊದಲಾದ ಪ್ರಕಾರಗಳಲ್ಲಿ ಸಂಶೋಧನಾ ಕಾರ್ಯ ಜರುಗಿವೆ. ಬಾಗಲಕೋಟ ಜಿಲ್ಲೆಯು ಕರ್ನಾಟಕದ ಸಾಹಿತ್ಯ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ತುಂಬಾ ಎತ್ತರದ ಸ್ಥಾನದಲ್ಲಿದೆ. ಈ ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕøತಿ ಕ್ಷೇತ್ರದಲ್ಲಿ ನಡೆದ ಕೆಲಸ ತುಂಬಾ ಗಮನಾರ್ಹವಾದುದು. ಜನಪದ ಮತ್ತು ಶಾಸನ ಸಾಹಿತ್ಯದಿಂದ ಹಿಡಿದು ಇಂದಿನ ಆಧುನಿಕ ಸಾಹಿತ್ಯದವರೆಗೆ ಸಂಶೋಧನೆಯಲ್ಲಿ ಈ ಜಿಲ್ಲೆಯ ನಡೆ ದಾಖಲಾರ್ಹವಾದುದು. ಬಾಗಲಕೋಟ ಜಿಲ್ಲೆಯು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಹಲವು ಪ್ರಥಮಗಳಿಗೆ ಸಾಕ್ಷಿಯಾಗಿದೆ. ಕನ್ನಡದ ಹರಿದಾಸ ಸಾಹಿತ್ಯ ಮತ್ತು ಜನಪದ ಸಾಹಿತ್ಯದ ಮೇಲೆ ಮೊದಲ ಪಿ.ಎಚ್.ಡಿ. ಪ್ರಬಂಧಗಳು ಈ ಜಿಲ್ಲೆಯಿಂದ ಹೊರಬಂದಿರುವುದು ಒಂದು ದಾಖಲೆಯೇ ಸರಿ. ಬಹುಮುಖಿಯಾಗಿ ವಿದ್ವತ್ ವಲಯವನ್ನು ಕಟ್ಟಿದ ನಮ್ಮ ಸಂಶೋಧಕರ ಶ್ರಮ ಮತ್ತು ಕಾಯಕ ಶ್ರದ್ಧೆಯನ್ನು ಈ ಪ್ರಬಂಧದಲ್ಲಿ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ. ಡಾ. ಅನಂತರಾಯ ಟಿ. ಪಾಟೀಲ ಅವರು ಬಾಗಲಕೋಟ ಜಿಲ್ಲೆಯಲ್ಲಿ ಪಿಎಚ್.ಡಿ. ಪದವಿ ಪಡೆದ ಮೊಟ್ಟ ಮೊದಲ ಸಂಶೋಧನ ಪ್ರಬಂಧಕಾರರು. ಡಾ. ಎ. ಟಿ. ಪಾಟೀಲ ಅವರು ‘ಶ್ರೀ ಪ್ರಸನ್ನವೆಂಕಟದಾಸರು ಮತ್ತು ಅವರ ಕೃತಿಗಳು’ ಕುರಿತು ಸಂಶೋಧನೆ ಕೈಕೊಂಡರು. ಮುಂಬಯಿ ವಿಶ್ವ ವಿದ್ಯಾಲಯದಿಂದ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಆರ್. ಎಸ್. ಪಂಚಮುಖಿ ಅವರ ಮಾರ್ಗದರ್ಶನದಲ್ಲಿ 11-03-1947 ರಲ್ಲಿ ಸಂಶೋಧನಾ ಕಾರ್ಯ ಆರಂಭಿಸಿದರು. ಕನ್ನಡ ಹರಿದಾಸ ಸಾಹಿತ್ಯದಲ್ಲಿ ಇದು ಮೊದಲ ಪಿಎಚ್.ಡಿ. ಪ್ರಬಂಧವಾಗಿ 1956 ರಲ್ಲಿ ಮಿಂಚಿನಬಳ್ಳಿ ಪ್ರಕಾಶನದಿಂದ ಪ್ರಕಟವಾಯಿತು. ಪ್ರಸ್ತುತ ಪ್ರಬಂಧದಲ್ಲಿ ವೈಷ್ಣವ ಭಕ್ತಿಯ ಬೆಳವಣಿಗೆ, ಉತ್ತರ ಭಾರತದಲ್ಲಿ ಭಕ್ತಿ ಪಂಥ, ಬಂಗಾಲ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಭಕ್ತಿ ಪಂಥದ ಜೊತೆಗೆ ಪ್ರಸನ್ನ ವೆಂಕಟದಾಸರ ಕಾಲ ನಿರ್ಣಯ, ಜೀವನ ಚರಿತ್ರೆ, ಕೃತಿ ವಿಮರ್ಶೆ, ಆ ಕಾಲದ ರಾಜಕಿಯ, ಸಾಮಾಜಿಕ ಜೀವನದೊಂದಿಗೆ ಪ್ರಸನ್ನ ವೆಂಕಟದಾಸರ ಕೀರ್ತನೆಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಭಾವನಾ ಪ್ರಧಾನವಾದ ಅಥವಾ ಪೂರ್ವಗ್ರಹ ಪ್ರತಿಕ್ಷಿಪ್ತವಾದ ಗ್ರಂಥಗಳು ಬರುವ ಹೊತ್ತಿನಲ್ಲಿ ಆ ಕಾಲದಲ್ಲಿ ಸಾಹಿತ್ಯ ಮತ್ತು ಸಾಂಸ್ಕøತಿಕ ಇತಿಹಾಸವನ್ನು ಕಟ್ಟಿಕೊಟ್ಟ ಈ ಪ್ರಬಂಧವು ತುಂಬಾ ಖ್ಯಾತಿಯನ್ನು ತಂದುಕೊಟ್ಟಿತು. ಕರ್ನಾಟಕ ವಿಶ್ವವಿದ್ಯಾಲಯದಿಂದ 1955 ರಲ್ಲಿ ಪಿಎಚ್.ಡಿ. ಪದವಿಗಾಗಿ ಮಾನ್ಯ ಮಾಡಿದ [[ಗದ್ದಗಿಮಠ, ಬಿ.ಎಸ್|
ದಶಕದ ಸಂಶೋಧನೆ (2001-2010) 2001 ರಲ್ಲಿ ಪ್ರಕಟವಾದ ಡಾ. ಅಶೋಕ ನರೋಡೆ ಅವರ ‘ಏಕಲವ್ಯನ ಪಾತ್ರ ಒಂದು ಅಧ್ಯಯನ’ ಸಂಶೋಧನಾ ಪ್ರಬಂಧದಲ್ಲಿ ಏಕಲವ್ಯನ ಕಥಾ ಪರಂಪರೆಯನ್ನು ಸಂಸ್ಕøತ, ಹಳಗನ್ನಡ, ಜೈನ, ನಡುಗನ್ನಡ ಮತ್ತು ಹೊಸಗನ್ನಡ ಸಾಹಿತ್ಯಗಳಲ್ಲಿಯ ವಿವರಗಳನ್ನು ಸಂಗ್ರಹಿಸಿ ವಿಶ್ಲೇಷಿಸಿದ್ದಾರೆ. ಗುಳೇದಗುಡ್ಡದ ಡಾ. ಆರ್. ಎಸ್. ಅಕ್ಕಮಹಾದೇವಿ ಅವರು 2001 ರಲ್ಲಿ ಡಾ. ವೀರೇಶ ಬಡಿಗೇರ ಅವರ ಮಾರ್ಗದರ್ಶನದಲ್ಲಿ ‘ಅಲಕ್ಷಿತ ವಚನಕಾರ್ತಿಯರ ವಚನಗಳ ಆಶಯ’ ಕುರಿತು ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ ಪ್ರಬಂಧ ಪ್ರಕಟವಾಗಿದೆ.ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪದವಿ ಪಡೆದಿರುವ ಡಾ. ಬಿ.ಎಂ.ಪಾಟೀಲ ಅವರ ‘ವಚನ ಪಿತಾಮಹ ಡಾ. ಫ.ಗು.ಹಳಕಟ್ಟಿ ಅವರ ಬದುಕು ಮತ್ತು ಸಾಹಿತ್ಯ ಮಹಾಪ್ರಬಂಧವು ‘ವಚನ ಗುಮ್ಮಟ’ ಹೆಸರಿನಲ್ಲಿ ಪ್ರಕಟವಾಗಿದೆ. ಡಾ. ಹಳಕಟ್ಟಿಯವರ ಕಾರ್ಯಸಾಧನೆಯನ್ನು ದಾಖಲಿಡುವ ಅಪರೂಪದ ಮಹಾಪ್ರಬಂಧ ಇದಾಗಿದೆ.
ಕನ್ನಡ ನವೋದಯ ಕಾವ್ಯಕ್ಕೆ ಜಾನಪದವೇ ಮೂಲ ಪ್ರೇರಣೆ ಪ್ರಭಾವ ಎಂಬುದನ್ನು ಸಾಧಿಸಿವುದರೊಂದಿಗೆ ನವೋದಯ ಕಾವ್ಯದ ನಾಲ್ಕನೆಯ ಕೇಂದ್ರವಾಗಿ ಹಲಸಂಗಿಯನ್ನು ಗುರುತಿಸಿ ವಿಸ್ತøತವಾಗಿ ಅಧ್ಯಯನಕ್ಕೆ ಒಳಪಡಿಸಿದ ಡಾ. ಪ್ರಕಾಶ ಗ. ಖಾಡೆಯವರ ‘ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ’ ಸಂಶೋಧನ ಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದಿಂದ 2005 ರಲ್ಲಿ ಪಿಎಚ್.ಡಿ. ಪದವಿ ದೊರೆತಿದೆ. 2007 ರಲ್ಲಿ ಮಹಾ ಪ್ರಬಂಧ ಪ್ರಕಟವಾಗಿ 2010 ರಲ್ಲಿ ಪುನಃ ಮುದ್ರಣ ಕಂಡಿದೆ. ಜಾನಪದ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಅನೇಕ ಸಂಶೋಧನೆಗಳು ನಡೆದಿವೆ. ಡಾ. ಬಿ.ಎಂ.ಹೊಸಮನಿ ಅವರ ‘ವೇಷಗಾರರು ಒಂದು ಅಧ್ಯಯನ’, ಹುನಗುಂದ ಕಾಲೇಜಿನ ಡಾ. ತಿಪ್ಪೇಸ್ವಾಮಿ ಅವರ ‘ಬಳ್ಳಾರಿ ಜಿಲ್ಲೆಯ ಜನಪದ ಗೀತ ಸಂಪ್ರದಾಯಗಳು’, ಡಾ. ಶಂಕರ ಮಾದರ ಅವರ ‘ವಸತಿ ಜಾನಪದ’, ಜಮಖಂಡಿ ಕಾಲೇಜಿನ ಡಾ. ಸದಾಶಿವ ಸಜ್ಜನ ಅವರ ‘ಕ್ರಿಯಾತ್ಮಕ ಜಾನಪದ’, ಮುಧೋಳ ಕಾಲೇಜಿನ ಲಲಿತಾ ಎಂ. ಕಲ್ಯಾಣಶೆಟ್ಟಿ ಅವರ ‘ಜಿ. ಬಿ. ಖಾಡೆ ಸಂಕಲಿತ ಜನಪದ ಸಾಹಿತ್ಯ’ ಸಂಶೋಧನಾ ಪ್ರಬಂಧಗಳು ಗಮನಾರ್ಹವಾಗಿವೆ.
ಜಮಖಂಡಿ ಓಲೆಮಠದ ಡಾ. ಚನ್ನಬಸವ ಮಹಾಸ್ವಾಮಿಗಳ ‘ಮೊಗ್ಗೆಯ ಮಾಯಿದೇವ ಒಂದು ಅಧ್ಯಯನ’, ಗುಳೇದಗುಡ್ಡದ ಡಾ. ರಾಜಶೇಖರ ಬಸುಪಟ್ಟದ ಅವರ ‘ಚಿತ್ತರಗಿ ಇಲಕಲ್ಲ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಒಂದು ಅಧ್ಯಯನ’, ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅವರ ‘ಬಸವೋತ್ತರ ಯುಗದ ವಚನ ಸಾಹಿತ್ಯ ಒಂದು ಅಧ್ಯಯನ’ ಸಂಶೋಧನಾ ಪ್ರಬಂಧವು ವಚನಕಾರರ ಅಭಿವ್ಯಕ್ತಿ ವಿಧಾನವನ್ನು ಸಂಪ್ರದಾಯ ಮತ್ತು ಅನ್ವಯಿಕ ಹಿನ್ನೆಲೆಯಲ್ಲಿ ವಿಸ್ತøತವಾಗಿ ರೂಪಿಸಲಾಗಿದೆ.ಡಾ. ಬಸವರಾಜ ಹದ್ಲಿ ಅವರ ‘ಬಾಲಲೀಲಾ ಮಹಾಂತ ಶಿವಯೋಗಿಗಳು ಒಂದು ಅಧ್ಯಯನ’, ಡಾ. ಡಿ.ಎಸ್. ಬಾಗಲಕೋಟ ಅವರ ‘ಪ್ರಭುಲಿಂಗ ಲೀಲೆ ಒಂದು ಯೋಗಿಕ ಅಧ್ಯಯನ’, ಡಾ. ಬಿ.ಎಸ್. ಬಿರಾದಾರ ಅವರ ‘ವಚನ ಸಾಹಿತ್ಯ ಪ್ರಕಟಣೆ ಮತ್ತು ಅಧ್ಯಯನ ಪರಂಪರೆ’, ಡಾ. ಜಿ.ಆಯ್. ನಂದಿಕೋಲಮಠ ಅವರ ‘ಕರಸ್ಥಲ ಪರಂಪರೆ ಒಂದು ಅಧ್ಯಯನ ಹಾಗೂ ಡಾ. ಎಂ.ಎಸ್. ಮದಭಾವಿ ಅವರ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಮತ್ತು ಕೃತಿ ಸಮೀಕ್ಷೆ ಈ ಮೊದಲಾದ ಸಂಶೋಧನಾ ಪ್ರಬಂಧಗಳು ಕನ್ನಡ ವಚನ ಪರಂಪರೆ, ಧಾರ್ಮಿಕ ನೆಲೆ ಹಾಗೂ ಸಾಧಕರ ಮೇಲೆ ಹೊಸ ಬೆಳಕು ಚೆಲ್ಲಿವೆ. ಬಾದಾಮಿ ತಾಲ್ಲೂಕು ನೀರಬೂದಿಹಾಳ ಗ್ರಾಮದವರಾಗಿರುವ ಡಾ. ಯ.ಮಾ.ಯಕೊಳ್ಳಿ ಹಾಗೂ ಅವರ ಪತ್ನಿ ಡಾ. ಪ್ರೇಮಾ ಯಾಕೊಳ್ಳಿ ಜಿಲ್ಲೆಯ ಅಪರೂಪದ ಡಾಕ್ಟರೇಟ ಪಡೆದ ದಂಪತಿಗಳಾಗಿದ್ದಾರೆ. ಡಾ. ಯ.ಮಾ.ಯಾಕೊಳ್ಳಿ ‘ಪ್ರಾಚೀನ ಕನ್ನಡ ಸಂಕಲನ ಕಾವ್ಯಗಳು’ ಕುರಿತು ಡಾ. ಪ್ರೇಮಾ ಯಾಕೊಳ್ಳಿ ‘ಕನ್ನಡದಲ್ಲಿ ಯುದ್ದೋತ್ತರ ಭಾರತ ಕಥೆ’ ಕುರಿತು ಜಿಲ್ಲೆಯ ಹಿರಿಯ ಸಂಶೋಧಕರಾದ ಡಾ. ಬಿ.ಆರ್. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಕೊಂಡು ಪದವಿ ಪಡೆದಿದ್ದಾರೆ. ಡಾ. ಸತ್ಯಾನಂದ ಪಾತ್ರೋಟ ಅವರ ‘ಬರಗೂರು ರಾಮಚಂದ್ರ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂದರ್ಭ’ ಕುರಿತ ಸಂಶೋಧನಾ ಪ್ರಬಂಧವು ‘ಭೂಮಿತತ್ವದ ಸೂತ್ರ’ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಡಾ. ಶಂಭು ಬಳಿಗಾರ ಅವರ ‘ಜೋಳದ ರಾಶಿ ದೊಡ್ಡನಗೌಡರು ಒಂದು ಅಧ್ಯಯನ’, ಡಾ. ಮೈನುದ್ದೀನ ರೇವಡಿಗಾರ ಅವರ ‘ಎನ್ಕೆ ಬದುಕು ಮತ್ತು ಸಾಹಿತ್ಯ ಒಂದು ಅಧ್ಯಯನ, ಡಾ|| ಸದಾನಂದ ಬಿಳ್ಳೂರ ಅವರ ‘ಕೆ.ಜಿ.ಕುಂದಣಗಾರ ಒಂದು ಅಧ್ಯಯನ’, ಡಾ. ಸಂಗಮೇಶ ಮಾಟೋಳ್ಳಿ ಅವರ ‘ದು.ನಿಂ.ಬೆಳಗಲಿ ಅವರ ಬದುಕು ಬರಹ ಒಂದು ಅಧ್ಯಯನ’, ಡಾ. ಮಹಾಂತೇಶ ಹೂಗಾರ ಅವರ ‘ಶಿವಕವಿ ಸಂಗಮೇಶ ಹೊಸಮನಿ ಒಂದು ಅಧ್ಯಯನ’, ಡಾ. ಎಸ್.ಜಿ.ಸಜ್ಜಲಗುಡ್ಡ ಅವರ ‘ಮುದೇನೂರ ಸಂಗಣ್ಣವರ ಬದುಕು ಬರಹ’ ಡಾ. ಸಣ್ಣ ಸಕ್ಕರಗೌಡರ ಅವರ ‘ಡಾ. ಬಿ.ವಿ.ಶಿರೂರ ಅವರ ಬದುಕು-ಬರಹ’ ಡಾ. ಮನೋಹರ ಪೂಜಾರ ಅವರ ‘ಈಶ್ವರ ಸಣಕಲ್ಲರ ಬದುಕು ಬರಹ’, ಡಾ. ಜಿ.ಕೆ. ಹಿರೇಮಠರ ‘ಮಹಾಜಂಗಮ’, ಸಂಶೋಧನಾ ಪ್ರಬಂಧಗಳು ನಾಡಿನ ಸಾಧಕರ ಬದುಕಿನ ವಿಸ್ತøತ ಅನಾವರಣ ಮಾಡಿವೆ. ಜಿಲ್ಲೆಯ ಹಿರಿಯ ಸಂಶೋಧಕರಲ್ಲಿ ಡಾ. ಸಂಗಮೇಶ ಬಿರಾದಾರ ಮುಖ್ಯರು. ‘ವೈಯಾಕರಣ ಎರಡನೆಯ ನಾಗವರ್ಮ’ ಇವರ ಸಂಶೋಧನಾ ಮಹಾಪ್ರಬಂಧ. ಕನ್ನಡ ವ್ಯಾಕರಣ ಮತ್ತು ಛಂದಸ್ಸು ಪ್ರಕಾರದಲ್ಲಿ ಈ ಪ್ರಬಂಧಕ್ಕೆ ಬಹುದೊಡ್ಡದಾದ ಸ್ಥಾನವಿದೆ. ಡಾ. ಬಿ.ಆರ್. ಹಿರೇಮಠ ಡಾ. ಎಂ.ಎಸ್.ಸುಂಕಾಪುರ, ಡಾ. ರಾ.ಯ. ಧಾರವಾಡಕರ, ಡಾ. ಸ.ಸ.ಮಾಳವಾಡ ಈ ಜಿಲ್ಲೆಯಿಂದ ಉದಯಿಸಿದ ಕನ್ನಡದ ಬಹುದೊಡ್ಡ ಸಂಶೋಧಕರು. ಡಾ. ಬಿ.ಕೆ. ಹಿರೇಮಠ ಅವರ ಹಸ್ತಪ್ರತಿಗಳಲ್ಲಿ ಚಿತ್ರಕಲೆ, ಡಾ. ಯಾದಪ್ಪ ಪರದೇಶಿ ಅವರ ಉತ್ತರ ಕರ್ನಾಟಕದಲ್ಲಿ ಭಿತ್ತಿ ಚಿತ್ರಕಲೆ ಡಾ. ಎಸ್.ಸಿ.ಪಾಟೀಲ ಅವರ ‘ಕರ್ನಾಟಕ ಜನಪದ ಚಿತ್ರಕಲೆ’, ಡಾ. ಶೀಲಾಕಾಂತ ಪತ್ತಾರ ಅವರ ‘ಬಾದಾಮಿ ಸಾಂಸ್ಕøತಿಕ ಪರಂಪರೆ’, ಡಾ. ಸಂಗಮೇಶ ಕಲ್ಯಾಣಿ ಅವರ ‘ಬಾಗಲಕೋಟ ಜಿಲ್ಲೆಯ ದೇಶಗತಿ ಮನೆತನಗಳು, ಡಾ. ಶಶಿಕಲಾ ಮೊರಬದ ಅವರ ‘ಜನಪ್ರಿಯ ಮಹಿಳಾ ಕಾದಂಬರಿಗಳು’, ಡಾ. ಸರೋಜಿನಿ ಪಾವಟೆ ಅವರ ‘ಬಾಗಲಕೋಟ ತಾಲೂಕು ಸಾಹಿತ್ಯ, ಸಾಂಸ್ಕøತಿಕ ಅಧ್ಯಯನ, ಡಾ. ಡಿ.ಎಸ್. ದೊಡಮನಿ ಅವರ ‘ಬಾಗಲಕೋಟ ಜಿಲ್ಲಾ ಸಾಹಿತ್ಯ ದರ್ಶನ’ ಡಾ. ಭೀಮನಗೌಡ ಪಾಟೀಲ ಅವರ ‘ಬಾಗಲಕೋಟ ಜಿಲ್ಲೆಯ ರಂಗಭೂಮಿ’ ಡಾ. ಆನಂದ ಪೂಜಾರ ಅವರ ‘ಕರಾವಳಿ ಕರ್ನಾಟಕದ ಕಾವಿ ಚಿತ್ರಕಲೆ, ಡಾ. ಸುರೇಶ ಇಂಗಳಗಿ ಅವರ ಪತ್ರಿಕೋದ್ಯಮಿಯಾಗಿ ಡಾ. ಫ.ಗು. ಹಳಿಕಟ್ಟಿ, ಡಾ. ನಂಜುಂಡಸ್ವಾಮಿ ಅವರ ‘ಮೈಸೂರು ಒಡೆಯರು ಒಂದು ಅಧ್ಯಯನ, ಡಾ. ಡಿ.ಜಿ.ಹಾಜವಗೋಳ ಹಾಗೂ ಡಾ. ಪಿ.ಕೆ. ಖಂಡೋಬಾ ಅವರ ಜನಾಂಗೀಯ ಅಧ್ಯಯನಗಳು, ಡಾ. ಆಶಾರಾಣಿ ಚಿನಗುಂಡಿ ಅವರ ‘ಪಾರಿಜಾತದ ಕೌಜಲಗಿ ನಿಂಗಮ್ಮ’ ಒಂದು ಅಧ್ಯಯನ, ಈ ಮೊದಲಾದವು ಜಿಲ್ಲೆಯ ಸಂಶೋಧನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಡಾ. ಎಚ್.ಎಂ.ಕೈಲಾಸಲಿಂಗಂ, ಡಾ. ಜಿ. ವೀರಭದ್ರಗೌಡ, ಡಾ. ಸಂತೋಷಕುಮಾರಿ ಅಮೀನಗಡ, ಡಾ. ಪಿ.ಎಸ್.ಕಂದಗಲ್ಲ, ಡಾ. ಅನಸೂಯಾ ಕಾಂಬಳೆ, ಡಾ. ಅನಿತಾ ಗುಡಿ, ಡಾ. ಬಿ.ಬಿ.ಕಡ್ಲಿ, ಡಾ. ಎಂ.ಬಿ.ಒಂಟಿ, ಡಾ. ನಿಂಗಯ್ಯಾ ಒಡೆಯರ, ಡಾ. ಸವಿತಾ ಒಡೆಯರ ಈ ಮೊದಲಾದವರು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಜಿಲ್ಲೆಯ ಸಂಶೋಧನಾ ಕ್ಷೇತ್ರದ ಅಧ್ಯಯನ ಪ್ರಗತಿಯಲ್ಲಿದೆ, ಸಾಹಿತ್ಯ, ಸಾಂಸ್ಕøತಿಕ ಲೋಕದ ತಿಳುವಳಿಕೆಯನ್ನು ತಮ್ಮ ಅಪಾರ ಪರಿಶ್ರಮ, ಶ್ರದ್ಧೆ, ತಪಸ್ಸು ಹಾಗೂ ಶ್ರಮ ಸಂಸ್ಕøತಿಯಿಂದ ಕಟ್ಟಿಕೊಟ್ಟ ವಿದ್ವತ್ ವಲಯವನ್ನು ಈ ಮೂಲಕ ಅಭಿನಂದಿಸುತ್ತೇನೆ.-ಡಾ.ಪ್ರಕಾಶ ಗ.ಖಾಡೆ
Line ೮೦ ⟶ ೭೬:
ಹೊಸ ಜಿಲ್ಲೆ ರಚನೆಯಾಗಿ ಎರಡು ದಶಕಗಳು ಸಂದರೂ ಇಲ್ಲಿ ಸಾಹಿತ್ಯಿಕವಾಗಿ ಇನ್ನೂ ನಡೆಯಬೇಕಾದ ಕೆಲಸಗಳು ಸಾಕಷ್ಟಿವೆ.ಜಿಲ್ಲೆಯಲ್ಲಿ ಹುಟ್ಟಿ ನಾಡಿನಲ್ಲಿಯೇ ಹೆಸರಾಗಿದ್ದ ರಾ.ಯ.ಧಾರವಾಡಕರ,ಕೃಷ್ಣಮೂರ್ತಿ ಪುರಾಣಿಕ,ಡಾ.ಬಿ.ಎಸ್.ಗದ್ದಗಿಮಠ,ಬಿಂದು ಮಾಧವ ಕುಲಕರ್ಣಿ,ಶ್ಯಾಮ ಹುದ್ದಾರ,ಶಂಕರ ಕಟಗಿ ಅವರಂಥ ಗಣ್ಯ ಸಾಹಿತಿಗಳನ್ನು ಸ್ಮರಿಸುವ ಕೆಲಸಗಳಾಗಬೇಕು, ಹನಮಂತ ಹಾಲಿಗೇರಿ,ತಿರುಪತಿ ಭಂಗಿ,ಲಕ್ಷ್ಮಣ ಬದಾಮಿ,ಉಮೇಶ ತಿಮ್ಮಾಪುರ,ಕಲ್ಲೇಶ ಕುಂಬಾರ,ಸುರೇಖಾ ಕುಲಕರ್ಣಿ ಅವರಂಥ ಪ್ರಖರ ಯುವ ಕಥೆಗಾರರ ಕಥೆಗಳನ್ನು ಚಿತ್ರ,ಕಿರುಚಿತ್ರವಾಗಿ ರೂಪಿಸಬೇಕಾಗಿದೆ.ಜಿಲ್ಲೆಯ ಬೆಳಕಿಗೆ ಬಾರದ ತಳಸಮುದಾಯಗಳ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಡಬೇಕಾಗಿದೆ,ಅಂತರ್ಜಾಲ ಮಾಧ್ಯಮದ ಮೂಲಕ ಜಿಲ್ಲೆಯ ಹಿರಿಯ ಮತ್ತು ಯುವ ಲೇಖಕರ ಸಾಹಿತ್ಯವನ್ನು ದಾಖಲಿಸಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕಾಗಿದೆ.ಈ ಕೆಲಸಗಳೂ ನಡೆದಷ್ಟೂ ಜಿಲ್ಲೆ ನಾಡಿನಲ್ಲಿಯೇ ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳಲು ಸಾಧ್ಯ.
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ. 9845500890
<nowiki>*</nowiki> ವಿನೋದ ಸಾಹಿತ್ಯ
Line ೮೯ ⟶ ೮೫:
*[[ಬಾಗಲಕೋಟ (ಲೋಕ ಸಭೆ ಚುನಾವಣಾ ಕ್ಷೇತ್ರ)]]
=='''ಹೊರಗಿನ ಸಂಪರ್ಕ'''==
Line ೯೬ ⟶ ೯೧:
* [http://www.bagalkot.nic.in ಬಾಗಲಕೋಟ ಜಿಲ್ಲೆಯ ಅಧಿಕೃತ ಸರ್ಕಾರಿ ತಾಣ]
{{ಕರ್ನಾಟಕದ ಜಿಲ್ಲೆಗಳು}}
[[ವರ್ಗ:ಬಾಗಲಕೋಟ ಜಿಲ್ಲೆ|*]]
[[ವರ್ಗ:ಕರ್ನಾಟಕದ ಜಿಲ್ಲೆಗಳು]]
{{ಕರ್ನಾಟಕದ_ಜಿಲ್ಲೆಗಳು}}
|