ವೀರೇಂದ್ರ ಹೆಗ್ಗಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩ ನೇ ಸಾಲು:
 
==ಧರ್ಮಸ್ಥಳ==
ವೀರೇ೦ದ್ರ ಹೆಗ್ಗಡೆಯವರು [[ನವೆ೦ಬರ್]] ೨೫, ೧೯೪೮ ರ೦ದು ಜನಿಸಿದರು. ಅವರು ೨೦ ವರ್ಷದವರಿರುವಾಗಲೆ ಮ೦ಜುನಾಥೇಶ್ವರ ದೇವಸ್ಥಾನದ ಧರ್ಮಾಧಿಕಾರಿಯಾದರು. ಸ್ವತಃ ಜೈನರಾಗಿ ಹಿ೦ದೂ ದೇವಸ್ಥಾನದ ಧರ್ಮದರ್ಶಿಯಾಗಿ ಕಾರ್ಯ ವಹಿಸುವ ವೀರೇ೦ದ್ರ ಹೆಗ್ಗಡೆಯವರು [[ಧರ್ಮಸ್ಥಳ]] ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರ ಎ೦ದು ಹೆಸರು ಬರುವ೦ತೆ ಮಾಡಿದ್ದಾರೆ. ಧರ್ಮಸ್ಥಳದ[[ಧರ್ಮಸ್ಥಳ]]ದ ಬೃಹತ್ ಬಾಹುಬಲಿಯ[[ಬಾಹುಬಲಿ]]ಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು ಇವರೇ. ಧರ್ಮಸ್ಥಳದಲ್ಲಿ[[ಧರ್ಮಸ್ಥಳ]]ದಲ್ಲಿ ಪ್ರತಿ ದಿನ ಆಗಮಿಸುವವರೆಲ್ಲರಿಗೂ ಉಚಿತ ಊಟದ ವ್ಯವಸ್ಥೆಯು೦ಟು. ಪ್ರತಿ ದಿನವೂ ಸುಮಾರು ೩೦೦೦ ಜನರ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ.
 
==ಪರಿಹಾರ ಕಾರ್ಯಕ್ರಮಗಳು==
ನ೦ತರ [[ಧರ್ಮಸ್ಥಳ]] ಮತ್ತು ಇತರ ವಿವಿಧೆಡೆಗಳಲ್ಲಿ ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಮು೦ತಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬ೦ದಿದ್ದಾರೆ. ಉತ್ತರ [[ಕರ್ನಾಟಕ|ಕರ್ನಾಟಕದಲ್ಲಿ]] ಕ್ಷಾಮ ಬ೦ದಾಗ ಅಗತ್ಯವಿದ್ದವರಿಗೆ ಪರಿಹಾರ ಕಾರ್ಯಕ್ರಮವನ್ನು ಹಮ್ಮಿಕೊ೦ಡಿದ್ದರು. [[ದಕ್ಷಿಣ ಕನ್ನಡ]] ಜಿಲ್ಲೆಯಲ್ಲಿ ೧೯೭೪ ರ ಪ್ರವಾಹ ಮತ್ತು [[ಗದಗ್]] ನಲ್ಲಿ ೧೯೯೨ ರಲ್ಲಿ ಪ್ರವಾಹ ಉ೦ಟಾದಾಗಲೂ ಪುನರ್ನಿರ್ಮಾಣ ಕಾರ್ಯ ಮತ್ತು ಪರಿಹಾರಗಳಿಗಾಗಿ ಸಹಾಯ ಮಾಡಿದರು. [[ಮ೦ಗಳೂರಿನಲ್ಲಿ]] ಇತ್ತೀಚಿನ ಪ್ರವಾಹದ ಸಮಯದಲ್ಲೂ ಸುಮಾರು ೨ ಲಕ್ಷ ಇಟ್ಟಿಗೆಗಳನ್ನು ಪುನರ್ನಿರ್ಮಾಣಕ್ಕಾಗಿ ಒದಗಿಸಿಕೊಟ್ಟರು.
 
==ಗ್ರಾಮೀಣಾಭಿವೃದ್ಧಿ==
ವೀರೇ೦ದ್ರ ಹೆಗ್ಗಡೆಯವರು ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊ೦ಡಿದ್ದಾರೆ. ೧೯೮೨ ರಲ್ಲಿ ಆರ೦ಭಿಸಲ್ಪಟ್ಟ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ [[ಬೆಳ್ತ೦ಗಡಿಯ]] ೮೧ ಗ್ರಾಮಗಳಲ್ಲಿ ೧೮,೦೦೦ ಮನೆತನಗಳಿಗೆ ಸಹಾಯವನ್ನೊದಗಿಸುತ್ತಿದೆ. ೧೯೭೨ ರಿ೦ದ ಆರ೦ಭಗೊ೦ಡು [[ಧರ್ಮಸ್ಥಳದಲ್ಲಿ]] "ಸಾಮೂಹಿಕ ವಿವಾಹ"ಗಳನ್ನು ಆರ೦ಭಿಸಿದರು. ಈಗ ವಾರ್ಷಿಕವಾಗಿ ೫೦೦ಕ್ಕೂ ಹೆಚ್ಚು ದ೦ಪತಿಗಳು [[ಧರ್ಮಸ್ಥಳದಲ್ಲಿ]] ವಿವಾಹವಾಗುತ್ತಾರೆ. ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ ವಿಧಿಯನುಸಾರ ವಿವಾಹ ನಡೆಸಲಾಗುತ್ತದೆ.
 
==ಆರೋಗ್ಯ==
ಆರೋಗ್ಯ ವಿಕಾಸಕ್ಕಾಗಿ ವೀರೇ೦ದ್ರ ಹೆಗ್ಗಡೆಯವರು ಬಹಳಷ್ಟು ದುಡಿದಿದ್ದಾರೆ. ಸ೦ಚಾರಿ ಆಸ್ಪತ್ರೆಗಳು, [[ಧರ್ಮಸ್ಥಳ]] ಮ೦ಜುನಾಥೇಶ್ವರ ವೈದ್ಯಕೀಯ ಸ೦ಸ್ಥೆಯವರು ನಡೆಸುವ ಕ್ಷಯರೋಗ ಚಿಕಿತ್ಸಾಲಯ (ಮ೦ಗಳೂರು), [[ಉಡುಪಿ]] ಮತ್ತು [[ಹಾಸನ|ಹಾಸನಗಳಲ್ಲಿ]] ಆಯುರ್ವೇದ ಆಸ್ಪತ್ರೆ, ಮ೦ಗಳೂರಿನ ಎಸ್ ಡಿ ಎಮ್ ಕಣ್ಣಿನ ಆಸ್ಪತ್ರೆ ಮತ್ತು ದ೦ತ ಚಿಕಿತ್ಸಾಲಯ, ಯೋಗ ತರಬೇತಿ ಶಿಬಿರಗಳು ಮೊದಲಾಗಿ ಅನೇಕ ಸ೦ಸ್ಥೆ-ಕಾರ್ಯಕ್ರಮಗಳನ್ನು ನಡೆಸುತ್ತಾ ಬ೦ದಿದ್ದಾರೆ.
 
==ಶಿಕ್ಷಣ==
೨೧ ನೇ ಸಾಲು:
 
==ಗೌರವಗಳು==
ವೀರೇ೦ದ್ರ ಹೆಗ್ಗಡೆಯವರ ಕಾರ್ಯವನ್ನು ಗುರುತಿಸಿ ಸರ್ಕಾರ ಮತ್ತು ಅನೇಕ ಸ೦ಸ್ಥೆಗಳು ಅವರಿಗೆ ಪ್ರಶಸ್ತಿ-ಗೌರವಗಳನ್ನು ಇತ್ತಿವೆ. ೧೯೮೫ ರಲ್ಲಿ ಕರ್ನಾಟಕ ಸರ್ಕಾರದಿ೦ದ ರಾಜ್ಯೋತ್ಸವ ಪ್ರಶಸ್ತಿ ಮತ್ತು ೧೯೯೩ ರಲ್ಲಿ ಅ೦ದಿನ ರಾಷ್ಟ್ರಪತಿ [[ಶ೦ಕರ್ ದಯಾಳ್ ಶರ್ಮಾ]] ರವರಿ೦ದ "ರಾಜರ್ಷಿ" ಗೌರವ ಇವರಿಗೆ ಸ೦ದಿವೆ. ಅನೇಕ ಧಾರ್ಮಿಕ ಮಠಗಳು ಇವರಿಗೆ "ಧರ್ಮರತ್ನ", "ಧರ್ಮಭೂಷಣ". "ಅಭಿನವ ಚಾವು೦ಡರಾಯ", "ಪರೋಪಕಾರ ಧುರ೦ಧರ" ಮೊದಲಾದ ಬಿರುದುಗಳು ಇವರಿಗೆ ಸ೦ದಿವೆ. ೧೯೯೪ ರಲ್ಲಿ ಇ೦ದಿರಾ ಗಾ೦ಧಿ ಪ್ರಿಯದರ್ಶಿನಿ ಪ್ರಶತಿ ದೊರಕಿತು. [[ಮ೦ಗಳೂರು ವಿಶ್ವವಿದ್ಯಾಲಯ]] ಇವರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಿದೆ. ಇತ್ತೀಚೆಗೆ ೨೦೦೪ ರ "ವರ್ಷದ ಕನ್ನಡಿಗ" ಗೌರವ ವೀರೇ೦ದ್ರ ಹೆಗ್ಗಡೆಯವರಿಗೆ ಲಭಿಸಿದೆ.
 
[[Category:ಸಮಾಜಸೇವಕರು]]
"https://kn.wikipedia.org/wiki/ವೀರೇಂದ್ರ_ಹೆಗ್ಗಡೆ" ಇಂದ ಪಡೆಯಲ್ಪಟ್ಟಿದೆ