ಪಾಂಡವರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು {{commons category|Pandavas}}
No edit summary
೩ ನೇ ಸಾಲು:
 
'''ಪಾಂಡವರು''' [[ಮಹಾಭಾರತ|ಮಹಾಭಾರತದಲ್ಲಿ]] ಕಂಡುಬರುವ ಪಾತ್ರಗಳು - [[ಪಾಂಡು]] ಹಾಗೂ [[ಕುಂತಿ]]-[[ಮಾದ್ರಿ]]ಯರ ಮಕ್ಕಳು.ಪಾಂಡುವಿನ ಮಕ್ಕಳಾದ್ದರಿಂದ ಪಾಂಡವರೆಂದು ಕರೆಯಲ್ಪಟ್ಟರು.ಪಾಂಡವರು ಐದು ಜನ.ಐದು ಜನಕ್ಕೂ ಒಬ್ಬಳೇ ಪತ್ನಿ ದ್ರೌಪದಿ.
 
[[ಕುಂತಿ]]ಯ ಮಕ್ಕಳು:
 
Line ೧೮ ⟶ ೧೭:
 
[[ಮಹಾಭಾರತ]]ದ ಕಥೆಯಂತೆ, ಪಾಂಡವರು ಮತ್ತು ಅವರ ದಾಯಾದಿಗಳಾದ [[ಕೌರವ|ಕೌರವರ]] ನಡುವೆ [[ಹಸ್ತಿನಾಪುರ]]ದ [[ಸಿಂಹಾಸನ]]ದ ಬಗೆಗಿನ ವಿವಾದ ಏಳುತ್ತದೆ. ಪಗಡೆಯಾಟವೊಂದರಲ್ಲಿ ಸೋತ ನಂತರ ಪಾಂಡವರು ಹನ್ನೆರಡು ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತವಾಸ ಅನುಭವಿಸುತ್ತಾರೆ.ಇದರ ನಂತರ ರಾಜ್ಯದ ತಮ್ಮ ಹಕ್ಕನ್ನು ಪಡೆಯಲು [[ಕುರುಕ್ಷೇತ್ರ]] ಯುದ್ಧ ಆರಂಭವಾಗಿ ಕೊನೆಗೆ [[ಕೃಷ್ಣ]]ನ ಸಹಾಯದಿಂದ ಪಾಂಡವರು ಗೆಲ್ಲುತ್ತಾರೆ.
==ಬಾಲ್ಯ==
 
ಪಾಂಡವರು ಚಂದ್ರವಂಶದ ರಾಜ ಪಾಂಡುವಿನ ಪುತ್ರರೇ ಪಾಂಡವರೆಂದು ಪ್ರಖ್ಯಾತರು. ಇವರು ಐವರು. ಅಜಾತಶತ್ರುವೆಂದು ಹೆಸರುಗಳಿಸಿದ ಧರ್ಮರಾಜ (ಯುಧಿಷ್ಠಿರ) ಮಹಾಸಾಹಸಿಯಾದ ಭೀಮ, ಅಪ್ರತಿಮ ಬಿಲ್ಗಾರನಾದ ಅರ್ಜುನ ಈ ಮೂವರು ಅನುಕ್ರಮವಾಗಿ ಯಮಧರ್ಮ, ವಾಯುದೇವ, ದೇವೇಂದ್ರ ಈ ದೇವತೆಗಳ ವರದಿಂದ ಹಿರಿಯರಾಣಿ ಕುಂತಿಗೆ ಕುಮಾರರಾಗಿ ಜನಿಸಿದರೆ, ನಕುಲ ಮತ್ತು ದಿವ್ಯಜ್ಞಾನಿ ಸಹದೇವರು ಅಶ್ವಿನಿದೇವತೆಗಳ ಕೃಪೆಯಿಂದ ಕಿರಿಯರಾಣಿ [[ಮಾದ್ರಿ]]ಯ ಪುತ್ರರಾಗಿ ಹುಟ್ಟಿದರು. ತಂದೆ ಪಾಂಡುರಾಜ, ಶತಶೃಂಗ ಪರ್ವತದಲ್ಲಿ ವಿರಕ್ತ ಜೀವನ ಸಾಗಿಸುತ್ತಿದ್ದಾಗಲೇ ಇವರು ಶುಕ್ರಮುನಿಯ ಶಿಷ್ಯರಾಗಿ ಧನುರ್ವಿದ್ಯೆಯ ಅಧ್ಯಯನ ನಡೆಸಿದರು. ತಂದೆ ಮರಣ ಹೊಂದಿದ ಮೇಲೆ ಹಸ್ತಿನಾಪುರಕ್ಕೆ ಬಂದು ಭೀಷ್ಮಾಚಾರ್ಯರ ಆಳ್ವಿಕೆಗೆ ಒಳಗಾಗಿ, [[ದ್ರೋಣಾಚಾರ್ಯ]]ರಲ್ಲಿ ಅಸ್ತ್ರವಿದ್ಯೆಯ ವ್ಯಾಸಂಗ ನಡೆಸಿ ಪಾರಂಗತರಾದರು.
==ಯೌವನ==
ಪಾಂಡವರ ತಂದೆ ಪಾಂಡು [[ವಿಚಿತ್ರವೀರ್ಯ]]ನ ಹಿರಿಯ ಮಗನಲ್ಲ. ಆತನಿಗೂ ಹಿರಿಯನಾಗಿದ್ದ [[ಧೃತರಾಷ್ಟ್ರ]] ಹುಟ್ಟು ಕುರುಡನಾಗಿದ್ದರಿಂದ, ಆತನಿಗೆ ಸಿಕ್ಕಬೇಕಿದ್ದ ರಾಜ್ಯಾಧಿಕಾರ ಪಾಂಡುವಿಗೆ ದಕ್ಕಿತು. ಆದರೆ ಕುರುವಿನ ಹಿರಿಯ ವಂಶ ಶಾಖೆಯಲ್ಲಿ ಕೌರವನೆನಿಸಿದ ಧೃತರಾಷ್ಟ್ರನ ದುರ್ಯೋಧನಾದಿ ನೂರುಜನ ಮಕ್ಕಳಲ್ಲಿ ದಾಯಾದಿತನದ ದ್ವೇಷ-ಮಾತ್ಸರ್ಯಗಳು ಕಿಡಿಗೊಂಡುವು. ಪಾಂಡವರ ಅಸೀಮ ಶಕ್ತಿ-ಸಾಹಸಗಳನ್ನು ಕಂಡು ಧೃತರಾಷ್ಟ್ರನಿಗೂ ಹೆದರಿಕೆ ಉಂಟಾಯಿತು. ಪರಿಣಾಮವಾಗಿ ಧೃತರಾಷ್ಟ್ರ ರಾಜ್ಯವನ್ನು ಎರಡಾಗಿ ವಿಭಜಿಸಿ ತನ್ನ ಮಕ್ಕಳನ್ನು ಹಸ್ತಿನಾವತಿಯಲ್ಲಿಯೇ ಇರಿಸಿಕೊಂಡು ಪಾಂಡವರನ್ನು ವಾರಾಣಾವತಕ್ಕೆ ಕಳುಹಿಸಿದ. ಪಾಂಡವರ ಹಿರಿಯಣ್ಣ ಧರ್ಮರಾಜ ಇಂದ್ರಪ್ರಸ್ಥವನ್ನು ತನ್ನ ರಾಜಧಾನಿಯನ್ನಾಗಿಸಿಕೊಂಡು, ತನ್ನ ಶಾಸನವನ್ನು ಮುಂದುವರಿಸಿ, ಸಂಪದಭಿವೃದ್ಧಿಯನ್ನು ಸಾದಿಸಿದ. ಇದನ್ನು ಕಂಡು ಕರುಬಿದ ದುರ್ಯೋಧನ ಇವರನ್ನು ನಾಶಪಡಿಸಲು ಅನೇಕ ಹೊಂಚು-ಸಂಚುಗಳನ್ನು ಮಾಡಿದನಾದರೂ ಪಾಂಡವರೂ ತಮ್ಮ ಶಕ್ತಿ ಸಾಹಸಗಳಿಂದಲೂ ದೈವೀಕೃಪೆಯಿಂದಲೂ ಅವುಗಳಿಂದ ಪಾರಾಗುತ್ತಲೇ ಹೋದರು.
==ವನವಾಸ==
ಈ ಮಧ್ಯೆ ಧರ್ಮರಾಜ ರಾಜಸೂಯ ಯಜ್ಞ ಮಾಡಲನುವಾದ. ಆ ಸಂದರ್ಭದಲ್ಲಿ ಕೃಷ್ಣನಿಗೆ ಸಂದ ಪ್ರಮುಖರೂಪದ ಮಹಾಮನ್ನಣೆಯನ್ನು ನೋಡಿ ದುರ್ಯೋಧನನಿಗೆ ಸಹಿಸಲಾಗಲಿಲ್ಲ. ಪಾಂಡವರ ಸಭೆಯನ್ನು ಕಂಡ ಮೇಲಂತೂ ಆತನ ದ್ವೇಷಾಸೂಯೆ ಇನ್ನೂ ಹೆಚ್ಚು ಉಲ್ಬಣಿಸಿತು. ಕೇಡಾಳಿತನ ಮಸೆದಿತು. ಹೇಗಾದರೂ ಸರಿಯೇ ಪಾಂಡವರನ್ನು ಮುಗಿಸಿಯೇ ಬಿಡಬೇಕೆಂದು ಆತ ಮನಸ್ಸುಮಾಡಿದ. ತನ್ನ ಮಾವ [[ಶಕುನಿ]]ಯ ಸಲಹೆಯಂತೆ ದ್ಯೂತದಲ್ಲಿ ಧರ್ಮರಾಜನನ್ನು ಎರಡು ಬಾರಿ ಸೋಲಿಸಿದ. ಮೊದಲ ಸೋಲಿನ ಪರಿಣಾಮವಾಗಿ ಪಾಂಡವರ ಪತ್ನಿ ದ್ರೌಪದಿ ದುರ್ಯೋಧನನ ರಾಜಸಭೆಯಲ್ಲಿ ಅನ್ಯಾಯದ ಅಪಮಾನಕ್ಕೀಡಾದಳು. ಅದನ್ನು ಕಂಡು ಕ್ರುದ್ಧನಾದ ಭೀಮ ದುರ್ಯೋಧನನ ತೊಡೆಮುರಿವ, ದುಶ್ಯಾಸನನ ನೆತ್ತರು ಕುಡಿಯುವ ಭೀಕರ ಪ್ರತಿಜ್ಞೆ ಮಾಡಿ ಮುಂಬರುವ [[ಮಹಾಭಾರತ]]ದ ಮಾರಣಹೋಮಕ್ಕೆ ನಾಂದಿ ಹಾಡಿದ. ಜೂಜಾಟದಲ್ಲಿಯ ಎರಡನೆಯ ಸೋಲಿನ ಫಲಸ್ವರೂಪವಾಗಿ ಪಾಂಡವರು ಪತ್ನಿ ದ್ರೌಪದಿಯೊಂದಿಗೆ ಹನ್ನೆರಡು ವರ್ಷ ವನವಾಸ ಅನುಭವಿಸಿದ ಮೇಲೆ, ಒಂದು ವರ್ಷ ಅಜ್ಞಾತವಾಸವನ್ನೂ ವಿರಾಟನ ರಾಜಧಾನಿಯಲ್ಲಿ ಕಳೆದರು. ಆಗ ಧರ್ಮರಾಜ ಕಂಕಭಟ್ಟನಾದರೆ, [[ಭೀಮ]] ಬಾಣಸಿಗ, ವಲಲನಾದ ಅರ್ಜುನ [[ಬೃಹನ್ನಳೆ]]ಯಾಗಿ ನೃತ್ಯ ಶಿಕ್ಷಕನಾದರೆ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ [[ಸೈರಂಧ್ರಿ]]ಯಾಗಿ ವಿರಾಟಪತ್ನಿಯ ಸೇವೆಯಲ್ಲಿ ನಿಂತಳು.
==ಮಹಾ ಭಾರತ ಕದನ==
ಹೀಗೆ ವಚನ ಪರಿಪಾಲನೆಗಾಗಿ ಪಾಂಡವರು ಅಜ್ಞಾತವಾಸದ ಅಗ್ನಿಪರೀಕ್ಷೆಯಲ್ಲಿ ತೇರ್ಗಡೆಯಾಗಿ, ತಮ್ಮ ರಾಜ್ಯವನ್ನು ತಮಗೆ ಹಿಂದಿರುಗಿಸಬೇಕೆಂದು ದುರ್ಯೋಧನನಿಗೆ ಹೇಳಿಕಳಿಸಿದರು. ಆದರೆ ದುರ್ಯೋಧನ ಯುದ್ಧವಿಲ್ಲದೆಯೆ ಒಂದು ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡೆನೆಂದು ಉತ್ತರಿಸಿದ. ಇದರ ಫಲವಾಗಿ ಭೀಕರವಾದ ಮಹಾಭಾರತಸಮರ ಹದಿನೆಂಟು ದಿನಗಳ ಕಾಲ ಕುರುಕ್ಷೇತ್ರದಲ್ಲಿ ನಡೆಯಿತು. ಸಮಕಾಲೀನ ಭರತವರ್ಷದ ಅರಸರೆಲ್ಲರೂ ಬಹುಶಃ ಆ ಯುದ್ಧದಲ್ಲಿ ಒಂದಿಲ್ಲೊಂದು ಪಕ್ಷದ ಪರವಾಗಿ ಪಾಲ್ಗೊಂಡಿದ್ದರು. ಅದರಲ್ಲಿ ಕೌರವರೆಲ್ಲ ಸತ್ತು, ಪಾಂಡವರು ಗೆದ್ದರು. ಆಮೇಲೆ ಪಾಂಡವರ ಹಿರಿಯಣ್ಣ ಧರ್ಮರಾಜ ಹಸ್ತಿನಾವತಿಯ ಗದ್ದುಗೆ ಏರಿ ಅಶ್ವಮೇಧ ಯಾಗಮಾಡಿ ಮೂವತ್ತಾರು ವರ್ಷ ರಾಜ್ಯಭಾರ ನಡೆಸಿದ. ಕೊನೆಗೆ ರಾಜ್ಯಾಧಿಕಾರವನ್ನು ಮೊಮ್ಮಗನಾದ ಪರೀಕ್ಷಿತನಿಗೆ ಒಪ್ಪಿಸಿ, ತಮ್ಮಂದಿರೊಡನೆ ಮಹಾಪ್ರಸ್ಥಾನ ಕೈಗೊಂಡು, ಸ್ವರ್ಗಕ್ಕೆ ಹೋದ.
{{commons category|Pandavas}}
 
{{ಮಹಾಭಾರತ}}
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪಾಂಡವರು}}
{{ಚುಟುಕು}}
 
[[ವರ್ಗ:ಪುರಾಣ]]
"https://kn.wikipedia.org/wiki/ಪಾಂಡವರು" ಇಂದ ಪಡೆಯಲ್ಪಟ್ಟಿದೆ