ಮಾನವನಲ್ಲಿ ನಿರ್ನಾಳ ಗ್ರಂಥಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೯ ನೇ ಸಾಲು:
*'''ಭಾವ ಜೀವನ''': ನಿರ್ನಾಳ ಗ್ರಂಥಿಗಳಿಗೂ ಮಾನವನ ಭಾವಜೀವನಕ್ಕೂ ನಿಕಟ ಸಂಬಂಧವಿರುವುದನ್ನು ವಿಜ್ಞಾವಿಗಳು ಕಂಡುಕೊಂಡಿದ್ದಾರೆ. ವಿಶೇಷವಾಗಿ ಭಯ, ಕೋಪ, ನೋವು, ಹಸಿವುಗಳಂಥ ಅಪ್ರಿಯ ಭಾವನೆಗಳಿಗೂ ಈ ನಿರ್ನಾಳ ಗ್ರಂಥಿಗಳಿಗೂ ಹತ್ತಿರದ ಸಂಬಂಧವಿದೆ. ಈ ವಿನಾಳ ಗ್ರಂಥಿಗೆ ಮಿದುಳು ಯಾ ಕಶೇರುಕಗಳಿಂದ ಬರುವ ನರಗಳನ್ನು ಕತ್ತರಿಸಿದರೂ ಅದು ಇಲ್ಲದ ನಾಯಿ, ಬೆಕ್ಕುಗಳು ಸಿಟ್ಟು ಉಗ್ರಸ್ವಭಾವ ತೋರಿಸಿದವು. ಡಾ. ಕೆನನ್ ಎಂಬ ಪ್ರಸಿದ್ಧ ವೈದ್ಯನ ಪ್ರಕಾರ ಭಾವಪ್ರಕಟಣೆಗೆ ಕೇಂದ್ರವಾದ ಮೇಲ್ಮಿದುಳನ್ನು ತೆಗೆದರೂ ಒಂದು ಪ್ರಾಣಿ ಕೋಪತಾಪಗಳನ್ನು ಪ್ರಕಟಿಸಬಲ್ಲದು. ಡಾ.ಕೆನನ್‍ನ ಅಭಿಪ್ರಾಯದಂತೆ ರಸಭಾವಗಳ ಉಗಮ ಮೇಲ್ಮಿದುಳು. ಅದನ್ನು ಪ್ರಕಟಿಸಲು ಕೆಳಮಿದುಳು-ಥಾಲಮಸ್ ಸಹಾಯ ಮಾಡುವುದು. ಮೇಲ್ಮಿದುಳಿಗೂ ಥಾಲಮಸ್ ಅಂಗಕ್ಕೂ ಅದಕ್ಕೆ ಅಂಟಿಕೊಂಡ ಪಿಟ್ಯುಟರಿ ಗ್ರಂಥಿಗೂ ಸಂಬಂಧವಿದ್ದು, ಗ್ರಂಥಿದ್ರವಗಳು ನಮ್ಮನ್ನು ಅಳತೆ ಮೀರಿದ ರಸಭಾವಗಳಿಗೆ ಪ್ರೇರಿಪಿಸುತ್ತವೆ. ಅದನ್ನು ಮಿದುಳು ಉದ್ದೇಶಪಟ್ಟು ನಿಯಂತ್ರಿಸುತ್ತದೆ. ಮೇಲಾಗಿ ಕೋಪತಾಪಗಳನ್ನು ಬುದ್ಧಿಶಕ್ತಿಯಿಂದ ನಿಯಂತ್ರಿಸಲು ಕಲಿಯಬಹುದು. ಸಮಾಜದಲ್ಲಿ ಹೊಂದಿಕೊಂಡು ಬಾಳಲು ಭಾವನೆಗಳನ್ನು ನಿಯಂತ್ರಿಸುವ ಈ ಬುದ್ಧಿಶಕ್ತಿಯ ಅಗತ್ಯವಿದೆ.
===ಸಮಸ್ಯೆ===
*ಈ ವಿನಾಳ ಗ್ರಂಥಿಗಳು ಮಾನವನ ಮೇಲೆ ವಿಶೇಷ ಪ್ರಭಾವ ಬೀರುವುದು ತಿಳಿದಂತೆ ಅದರ ಹೊಸ ಸಮಸ್ಯೆ ಎದುರಾಗುವುದು. ವಿನಾಳ ಗ್ರಂಥಿಗಳ ಚಟುವಟಿಕೆಗೆ ಅನುವಂಶೀಯತೆಯ ಪ್ರಭಾವವೂ ಹೆಚ್ಚಾಗಿದೆ. ಒಬ್ಬನ ಮನೋಧರ್ಮವು ಕೇವಲ ಅವನೊಬ್ಬನದಲ್ಲ. ಬದಲಿಗೆ ಅವನ ತಂದೆ ತಾಯಿ ಯಾ ಅವನ ಹಿಂದಿನ ವಂಶಜರಿಂದ ಬಂದಿರಬಹುದು. ಒಬ್ಬ ವ್ಯಕ್ತಿಯ ಮನೋಧರ್ಮ ಪೂರ್ಣ ಅವನ ಸ್ವಂತದ್ದಲ್ಲ, ಅವನ ವಂಶಜರಿಂದ ಬಂದುದು. '''ಆದರೆ ಈ ರಸ, ಭಾವ, ಮನೋಧರ್ಮಗಳಲ್ಲಿ ಅವನ ಸ್ವಂತದ್ದೆನುವುದು ಎಷ್ಟು ಎನ್ನುವುದು ತಿಳಿಯಲಾರದ ಸಮಸ್ಯೆ!''' ವ್ಯಕ್ತಿಯ ಅಂಕೆಯಿಲ್ಲದ ಕೋಪತಾಪಗಳು, ಲೈಂಗಿಕ ಪ್ರವೃತ್ತಿ ಅವನದೇ ಅಲ್ಲದೆ, ಅವನಿಗೆ ಬಂದ ಪೂರ್ವಜರಿಂದ ಬಂದ ಕೊಡಿಗೆಯಾಗಿರಬಹುದು. ಅಷ್ಟಲ್ಲದೆ ಹೀಗೆ '''ದೇಹಧರ್ಮವು ಮನೋಧರ್ಮವನ್ನೂ ನಿಯಂತ್ರಿಸಬಲ್ಲದು''' ಎಂದಾಯಿತು. ಆದರೆ ಅವನ ನುಡಿ-ನಡೆಗೆ ಅವನೇ ಹೊಣೆಗಾರ.<sup>೧</sup>
 
==ನೋಡಿ==