ಬಾಗಲಕೋಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೩ ನೇ ಸಾಲು:
 
ಜಮಖಂಡಿ ಓಲೆಮಠದ ಡಾ. ಚನ್ನಬಸವ ಮಹಾಸ್ವಾಮಿಗಳ ‘ಮೊಗ್ಗೆಯ ಮಾಯಿದೇವ ಒಂದು ಅಧ್ಯಯನ’, ಗುಳೇದಗುಡ್ಡದ ಡಾ. ರಾಜಶೇಖರ ಬಸುಪಟ್ಟದ ಅವರ ‘ಚಿತ್ತರಗಿ ಇಲಕಲ್ಲ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ ಒಂದು ಅಧ್ಯಯನ’, ಡಾ. ವಿಜಯಕುಮಾರ ಕಟಗಿಹಳ್ಳಿಮಠ ಅವರ ‘ಬಸವೋತ್ತರ ಯುಗದ ವಚನ ಸಾಹಿತ್ಯ ಒಂದು ಅಧ್ಯಯನ’ ಸಂಶೋಧನಾ ಪ್ರಬಂಧವು ವಚನಕಾರರ ಅಭಿವ್ಯಕ್ತಿ ವಿಧಾನವನ್ನು ಸಂಪ್ರದಾಯ ಮತ್ತು ಅನ್ವಯಿಕ ಹಿನ್ನೆಲೆಯಲ್ಲಿ ವಿಸ್ತøತವಾಗಿ ರೂಪಿಸಲಾಗಿದೆ.ಡಾ. ಬಸವರಾಜ ಹದ್ಲಿ ಅವರ ‘ಬಾಲಲೀಲಾ ಮಹಾಂತ ಶಿವಯೋಗಿಗಳು ಒಂದು ಅಧ್ಯಯನ’, ಡಾ. ಡಿ.ಎಸ್. ಬಾಗಲಕೋಟ ಅವರ ‘ಪ್ರಭುಲಿಂಗ ಲೀಲೆ ಒಂದು ಯೋಗಿಕ ಅಧ್ಯಯನ’, ಡಾ. ಬಿ.ಎಸ್. ಬಿರಾದಾರ ಅವರ ‘ವಚನ ಸಾಹಿತ್ಯ ಪ್ರಕಟಣೆ ಮತ್ತು ಅಧ್ಯಯನ ಪರಂಪರೆ’, ಡಾ. ಜಿ.ಆಯ್. ನಂದಿಕೋಲಮಠ ಅವರ ‘ಕರಸ್ಥಲ ಪರಂಪರೆ ಒಂದು ಅಧ್ಯಯನ ಹಾಗೂ ಡಾ. ಎಂ.ಎಸ್. ಮದಭಾವಿ ಅವರ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಮತ್ತು ಕೃತಿ ಸಮೀಕ್ಷೆ ಈ ಮೊದಲಾದ ಸಂಶೋಧನಾ ಪ್ರಬಂಧಗಳು ಕನ್ನಡ ವಚನ ಪರಂಪರೆ, ಧಾರ್ಮಿಕ ನೆಲೆ ಹಾಗೂ ಸಾಧಕರ ಮೇಲೆ ಹೊಸ ಬೆಳಕು ಚೆಲ್ಲಿವೆ. ಬಾದಾಮಿ ತಾಲ್ಲೂಕು ನೀರಬೂದಿಹಾಳ ಗ್ರಾಮದವರಾಗಿರುವ ಡಾ. ಯ.ಮಾ.ಯಕೊಳ್ಳಿ ಹಾಗೂ ಅವರ ಪತ್ನಿ ಡಾ. ಪ್ರೇಮಾ ಯಾಕೊಳ್ಳಿ ಜಿಲ್ಲೆಯ ಅಪರೂಪದ ಡಾಕ್ಟರೇಟ ಪಡೆದ ದಂಪತಿಗಳಾಗಿದ್ದಾರೆ. ಡಾ. ಯ.ಮಾ.ಯಾಕೊಳ್ಳಿ ‘ಪ್ರಾಚೀನ ಕನ್ನಡ ಸಂಕಲನ ಕಾವ್ಯಗಳು’ ಕುರಿತು ಡಾ. ಪ್ರೇಮಾ ಯಾಕೊಳ್ಳಿ ‘ಕನ್ನಡದಲ್ಲಿ ಯುದ್ದೋತ್ತರ ಭಾರತ ಕಥೆ’ ಕುರಿತು ಜಿಲ್ಲೆಯ ಹಿರಿಯ ಸಂಶೋಧಕರಾದ ಡಾ. ಬಿ.ಆರ್. ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಕೊಂಡು ಪದವಿ ಪಡೆದಿದ್ದಾರೆ. ಡಾ. ಸತ್ಯಾನಂದ ಪಾತ್ರೋಟ ಅವರ ‘ಬರಗೂರು ರಾಮಚಂದ್ರ ಸಾಹಿತ್ಯ ಮತ್ತು ಸಾಂಸ್ಕøತಿಕ ಸಂದರ್ಭ’ ಕುರಿತ ಸಂಶೋಧನಾ ಪ್ರಬಂಧವು ‘ಭೂಮಿತತ್ವದ ಸೂತ್ರ’ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಡಾ. ಶಂಭು ಬಳಿಗಾರ ಅವರ ‘ಜೋಳದ ರಾಶಿ ದೊಡ್ಡನಗೌಡರು ಒಂದು ಅಧ್ಯಯನ’, ಡಾ. ಮೈನುದ್ದೀನ ರೇವಡಿಗಾರ ಅವರ ‘ಎನ್ಕೆ ಬದುಕು ಮತ್ತು ಸಾಹಿತ್ಯ ಒಂದು ಅಧ್ಯಯನ, ಡಾ|| ಸದಾನಂದ ಬಿಳ್ಳೂರ ಅವರ ‘ಕೆ.ಜಿ.ಕುಂದಣಗಾರ ಒಂದು ಅಧ್ಯಯನ’, ಡಾ. ಸಂಗಮೇಶ ಮಾಟೋಳ್ಳಿ ಅವರ ‘ದು.ನಿಂ.ಬೆಳಗಲಿ ಅವರ ಬದುಕು ಬರಹ ಒಂದು ಅಧ್ಯಯನ’, ಡಾ. ಮಹಾಂತೇಶ ಹೂಗಾರ ಅವರ ‘ಶಿವಕವಿ ಸಂಗಮೇಶ ಹೊಸಮನಿ ಒಂದು ಅಧ್ಯಯನ’, ಡಾ. ಎಸ್.ಜಿ.ಸಜ್ಜಲಗುಡ್ಡ ಅವರ ‘ಮುದೇನೂರ ಸಂಗಣ್ಣವರ ಬದುಕು ಬರಹ’ ಡಾ. ಸಣ್ಣ ಸಕ್ಕರಗೌಡರ ಅವರ ‘ಡಾ. ಬಿ.ವಿ.ಶಿರೂರ ಅವರ ಬದುಕು-ಬರಹ’ ಡಾ. ಮನೋಹರ ಪೂಜಾರ ಅವರ ‘ಈಶ್ವರ ಸಣಕಲ್ಲರ ಬದುಕು ಬರಹ’, ಡಾ. ಜಿ.ಕೆ. ಹಿರೇಮಠರ ‘ಮಹಾಜಂಗಮ’, ಸಂಶೋಧನಾ ಪ್ರಬಂಧಗಳು ನಾಡಿನ ಸಾಧಕರ ಬದುಕಿನ ವಿಸ್ತøತ ಅನಾವರಣ ಮಾಡಿವೆ. ಜಿಲ್ಲೆಯ ಹಿರಿಯ ಸಂಶೋಧಕರಲ್ಲಿ ಡಾ. ಸಂಗಮೇಶ ಬಿರಾದಾರ ಮುಖ್ಯರು. ‘ವೈಯಾಕರಣ ಎರಡನೆಯ ನಾಗವರ್ಮ’ ಇವರ ಸಂಶೋಧನಾ ಮಹಾಪ್ರಬಂಧ. ಕನ್ನಡ ವ್ಯಾಕರಣ ಮತ್ತು ಛಂದಸ್ಸು ಪ್ರಕಾರದಲ್ಲಿ ಈ ಪ್ರಬಂಧಕ್ಕೆ ಬಹುದೊಡ್ಡದಾದ ಸ್ಥಾನವಿದೆ. ಡಾ. ಬಿ.ಆರ್. ಹಿರೇಮಠ ಡಾ. ಎಂ.ಎಸ್.ಸುಂಕಾಪುರ, ಡಾ. ರಾ.ಯ. ಧಾರವಾಡಕರ, ಡಾ. ಸ.ಸ.ಮಾಳವಾಡ ಈ ಜಿಲ್ಲೆಯಿಂದ ಉದಯಿಸಿದ ಕನ್ನಡದ ಬಹುದೊಡ್ಡ ಸಂಶೋಧಕರು. ಡಾ. ಬಿ.ಕೆ. ಹಿರೇಮಠ ಅವರ ಹಸ್ತಪ್ರತಿಗಳಲ್ಲಿ ಚಿತ್ರಕಲೆ, ಡಾ. ಯಾದಪ್ಪ ಪರದೇಶಿ ಅವರ ಉತ್ತರ ಕರ್ನಾಟಕದಲ್ಲಿ ಭಿತ್ತಿ ಚಿತ್ರಕಲೆ ಡಾ. ಎಸ್.ಸಿ.ಪಾಟೀಲ ಅವರ ‘ಕರ್ನಾಟಕ ಜನಪದ ಚಿತ್ರಕಲೆ’, ಡಾ. ಶೀಲಾಕಾಂತ ಪತ್ತಾರ ಅವರ ‘ಬಾದಾಮಿ ಸಾಂಸ್ಕøತಿಕ ಪರಂಪರೆ’, ಡಾ. ಸಂಗಮೇಶ ಕಲ್ಯಾಣಿ ಅವರ ‘ಬಾಗಲಕೋಟ ಜಿಲ್ಲೆಯ ದೇಶಗತಿ ಮನೆತನಗಳು, ಡಾ. ಶಶಿಕಲಾ ಮೊರಬದ ಅವರ ‘ಜನಪ್ರಿಯ ಮಹಿಳಾ ಕಾದಂಬರಿಗಳು’, ಡಾ. ಸರೋಜಿನಿ ಪಾವಟೆ ಅವರ ‘ಬಾಗಲಕೋಟ ತಾಲೂಕು ಸಾಹಿತ್ಯ, ಸಾಂಸ್ಕøತಿಕ ಅಧ್ಯಯನ, ಡಾ. ಡಿ.ಎಸ್. ದೊಡಮನಿ ಅವರ ‘ಬಾಗಲಕೋಟ ಜಿಲ್ಲಾ ಸಾಹಿತ್ಯ ದರ್ಶನ’ ಡಾ. ಭೀಮನಗೌಡ ಪಾಟೀಲ ಅವರ ‘ಬಾಗಲಕೋಟ ಜಿಲ್ಲೆಯ ರಂಗಭೂಮಿ’ ಡಾ. ಆನಂದ ಪೂಜಾರ ಅವರ ‘ಕರಾವಳಿ ಕರ್ನಾಟಕದ ಕಾವಿ ಚಿತ್ರಕಲೆ, ಡಾ. ಸುರೇಶ ಇಂಗಳಗಿ ಅವರ ಪತ್ರಿಕೋದ್ಯಮಿಯಾಗಿ ಡಾ. ಫ.ಗು. ಹಳಿಕಟ್ಟಿ, ಡಾ. ನಂಜುಂಡಸ್ವಾಮಿ ಅವರ ‘ಮೈಸೂರು ಒಡೆಯರು ಒಂದು ಅಧ್ಯಯನ, ಡಾ. ಡಿ.ಜಿ.ಹಾಜವಗೋಳ ಹಾಗೂ ಡಾ. ಪಿ.ಕೆ. ಖಂಡೋಬಾ ಅವರ ಜನಾಂಗೀಯ ಅಧ್ಯಯನಗಳು, ಡಾ. ಆಶಾರಾಣಿ ಚಿನಗುಂಡಿ ಅವರ ‘ಪಾರಿಜಾತದ ಕೌಜಲಗಿ ನಿಂಗಮ್ಮ’ ಒಂದು ಅಧ್ಯಯನ, ಈ ಮೊದಲಾದವು ಜಿಲ್ಲೆಯ ಸಂಶೋಧನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಡಾ. ಎಚ್.ಎಂ.ಕೈಲಾಸಲಿಂಗಂ, ಡಾ. ಜಿ. ವೀರಭದ್ರಗೌಡ, ಡಾ. ಸಂತೋಷಕುಮಾರಿ ಅಮೀನಗಡ, ಡಾ. ಪಿ.ಎಸ್.ಕಂದಗಲ್ಲ, ಡಾ. ಅನಸೂಯಾ ಕಾಂಬಳೆ, ಡಾ. ಅನಿತಾ ಗುಡಿ, ಡಾ. ಬಿ.ಬಿ.ಕಡ್ಲಿ, ಡಾ. ಎಂ.ಬಿ.ಒಂಟಿ, ಡಾ. ನಿಂಗಯ್ಯಾ ಒಡೆಯರ, ಡಾ. ಸವಿತಾ ಒಡೆಯರ ಈ ಮೊದಲಾದವರು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ. ಜಿಲ್ಲೆಯ ಸಂಶೋಧನಾ ಕ್ಷೇತ್ರದ ಅಧ್ಯಯನ ಪ್ರಗತಿಯಲ್ಲಿದೆ, ಸಾಹಿತ್ಯ, ಸಾಂಸ್ಕøತಿಕ ಲೋಕದ ತಿಳುವಳಿಕೆಯನ್ನು ತಮ್ಮ ಅಪಾರ ಪರಿಶ್ರಮ, ಶ್ರದ್ಧೆ, ತಪಸ್ಸು ಹಾಗೂ ಶ್ರಮ ಸಂಸ್ಕøತಿಯಿಂದ ಕಟ್ಟಿಕೊಟ್ಟ ವಿದ್ವತ್ ವಲಯವನ್ನು ಈ ಮೂಲಕ ಅಭಿನಂದಿಸುತ್ತೇನೆ.
ವಿನೋದ ಸಾಹಿತ್ಯ: ವಿನೋದ ಸಾಹಿತ್ಯಕ್ಕೆ ಬಾಗಲಕೋಟ ಜಿಲ್ಲೆಯ ಕೊಡುಗೆ ಅಪಾರ ರಾವ್ ಬಹಾದ್ದೂರ ಅವರ ಹಾಸ್ಯ ಲೇಖನಗಳು ಇಂದೂ ಕೂಡ ಓದುಗರನ್ನು ಸೆಳೆಯುತ್ತವೆ. ಹಿರಿಯ ಸಾಹಿತಿ ಕತೆಗಾರ ದು.ನಿಂ.ಬೆಳಗಲಿ ಕೂಡ ಹಾಸ್ಯ ಸಾಹಿತ್ಯ ರಚಿಸಿದ್ದಾರೆ. ರಾಮಪುರದ ಜಿ.ಎಸ್.ವಡಗಾಂವಿ ಹಾಸ್ಯದ ಹರಿಗೋಲು ಎಂಬ ಹಾಸ್ಯ ಸಂಕಲನ ಹೊರ ತಂದಿದ್ದಾರೆ. ಬನಹಟ್ಟಿಯ ಮಲ್ಲಿಕಾರ್ಜುನ ಹುಲಗಬಾಳಿ "ಟೊಂಯ್ ಟೊಂಯ್ ಮಾತುಗಳು" ಚಸ್ಮಾ ಚರಿಸ್ಮಾ, ಮುಂತಾದ ಹಾಸ್ಯ ಸಂಕಲನಗಳನ್ನು ಹೊರ ತಂದಿದ್ದಾರೆ. ಆಂಗ್ಲ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಈಗ ನಿವ್ರತ್ತರಾಗಿದ್ದಾರೆ. ಹಾಸ್ಯ ಸಾಹಿತ್ಯಕ್ಕೆ ಹೆಸರಾದವರೆಂದರೆ ರಬಕವಿಯ ಯಶವಂತ ವಾಜಂತ್ರಿ, ಇವರ ಮೊದಲ ಕಥಾ ಸಂಕಲನ 'ಯಾವ ಜನ್ಮದ ಮೈತ್ರಿ' 1990 ರಲ್ಲಿ ಮುದ್ರಣವಾಯಿತು. 1993 ರಲ್ಲಿ" ಮದುವೆಯಾಗಿದೆ ಎಚ್ಚರಿಕೆ" 1995 ರಲ್ಲಿ ಬೋಳು ಸಲಹೆಗಳು, 2003 ರಲ್ಲಿ ಕೂದಲು ಮತ್ತು ಮರ್ಯಾದೆ, 2010ರಲ್ಲಿ "ಕನ್ಯಾನ್ವೇಷಣೆ" ಪ್ರಕಟವಾದ ಪುಸ್ತಕಗಳಾಗಿವೆ. ಧಾರವಾಡ ಆಕಾಶವಾಣಿ ಕೇಂದ್ರದಿಂದ 30 ಕ್ಕೂ ಹೆಚ್ಚು ಹಾಸ್ಯ(ಲಘು)ಭಾಷಣಗಳನ್ನು ಮಾಡಿದ್ದಾರೆ. ಬೆಂಗಳೂರು ದೂರ ದರ್ಶನ ಕೆಂದ್ರದಿಂದ ಇವರು ಬರೆದ ಕಥೆ "ಕೂದಲು ಮತ್ತು ಮರ್ಯಾದೆ" ಟೇಲಿ ಫಿಲ್ಮ ಆಗಿ ಟೇಲಿಕಾಸ್ಟ ಆಗಿದೆ.ಬೆಳಗು ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಉತ್ತಮ ಹಾಸ್ಯ ಭಾಷಣಕಾರರೂ ಆಗಿರುವ ಇವರು ಪತ್ರಕರ್ತರಾಗಿ, ಶಿಕ್ಷಕರಾಗಿ, ಜಮಖಂಡಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಜಾಗ್ರತಿ ಸಮೀತಿಯ ಸದಸ್ಯರಾಗಿ, ರಬಕವಿ ಬನಹಟ್ಟಿ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ,ಬಾಗಲಕೋಟ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರಾಗಿ ಸಾಕಷ್ಟು ಕೆಲಸ ಮಾಡಿದ್ದರೆ.ಬಾಗಲಕೋಟ ಜಿಲ್ಲೆ ಎರಡು ದಶಕಗಳ ಸಾಹಿತ್ಯ ಮತ್ತು ಸಾಂಸ್ಕೃತಿಕ ನೋಟ.
 
ಡಾ.ಪ್ರಕಾಶ ಗ.ಖಾಡೆ
 
(ಇದೇ ಅಗಸ್ಟ್ 15,2017 .
 
ಬಾಗಲಕೋಟ ಜಿಲ್ಲೆ ರಚನೆಯಾಗಿ 20 ವರ್ಷಗಳು ತುಂಬುತ್ತಿವೆ.)
 
ಬಾದಾಮಿ ಚಾಲುಕ್ಯರ ಸಾಂಸ್ಕೃತಿಕ ಈ ಬೀಡು ,ರನ್ನ,ಬಸವಣ್ಣವರು ಓಡಾಡಿಕೊಂಡಿದ್ದ ಈ ನೆಲ ಹೊಸ ಜಿಲ್ಲೆಯಾದರೂ ಸಾಂಸ್ಕೃತಿಕ ಅಸಾರತೆಯಿಂದ ಬಳಲುವಂತಾಯಿತು. ಇಲ್ಲಿ ನಿಯಮಿತವಾಗಿ ಚಾಲುಕ್ಯ ಉತ್ಸವ,ಸಾಹಿತ್ಯ ಸಮ್ಮೇಳನಗಳು ಜರುಗದೇ ಹೋಗಿದ್ದು ಈ ಜಿಲ್ಲೆಯ ಪ್ರಜ್ಞಾವಂತ ಸಾಹಿತಿ,ಕಲಾವಿದರು ಪರಿತಪಿಸುವಂತಾಗಿದೆ.ಅರ್ಹತೆ ಇದ್ದಾಗಲೂ ಅಖಿಲ ಭಾರತ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಬೇಕಿದ್ದ ರಾವಬಹದ್ದೂರ,ಸತ್ಯಕಾಮ,ಪಿ.ವಿ.ವಜ್ರಮಟ್ಟಿ,ದು,ನಿಂ,ಬೆಳಗಲಿ,ಬ.ಗಿ.ಯಲ್ಲಟ್ಟಿ,ಜೀವಣ್ಣ ಮಸಳಿ,ಎಸ್.ಎಸ್.ಬಸುಪಟ್ಟದ ಅಂಥ ಹಿರಿಯ ಸಾಹಿತಿಗಳು ಕೊನೆಗೆ ಜಿಲ್ಲಾ ಸಾಹಿತ್ಯ ಸಮ್ಮೆಳನಗಳ ಅಧ್ಯಕ್ಷರಾಗುವುದು ಸಾಧ್ಯವಾಗಲಿಲ್ಲ.ಇದಕ್ಕೆ ಪ್ರಧಾನ ಕಾರಣ ಇಲ್ಲಿ ನಿಯಮಿತವಾಗಿ ಸಾಹಿತ್ಯ ಸಮ್ಮೇಳನಗಳು ನಡೆಯದೇ ಇರುವುದು.ಈಗಲೂ ನಮ್ಮ ನಡುವೆ ಇರುವ ಡಾ.ಶ್ರೀರಾಮ ಇಟ್ಟಣ್ಣವರ,ಬಿ.ಆರ್.ಪೊಲೀಸಪಾಟೀಲ, ಡಾ.ಶಿಲಾಕಾಂತ ಪತ್ತಾರ,ರೇಖಾ ಕಾಖಂಡಕಿ,ಜಯವಂತ ಕಾಡದೇವರ,ಜಿ,ಬಿ,ಖಾಡೆ,ಜಿ.ಎಸ್.ವಡಗಾವಿ,ಮಲ್ಲಿಕಾರ್ಜುನ ಹುಲಗಬಾಳಿ,ಅರ್ಜುನ ಕೊರಟಕರ,ಅಣ್ಣಾಜಿ ಪಡತಾರೆ,ಡಾ.ಬಿ.ಕೆ.ಹಿರೇಮಠ,ಅಬ್ಬಾಸ ಮೇಲಿನಮನಿ ಅವರಂಥ ಹಿರಿಯ ಸಾಹಿತಿಗಳನ್ನು ಒಂದೆಡೆ ಕೂಡಿಸಿ ಅವರಿಂದ ಕಿರಿಯ ಸಾಹಿತಿಗಳಿಗೆ ಮಾರ್ಗದರ್ಶನವಾಗುವ,ಅವರ ಸಾಹಿತ್ಯವನ್ನು ಅವಲೋಕಿಸುವ,ರಾಜ್ಯ ಮಟ್ಟದಲ್ಲಿ ಅವರಿಗೆ ಅವಕಾಶಗಳನ್ನು ಕೊಡುವ ಯಾವ ಕೆಲಸಗಳೂ ಜಿಲ್ಲೆಯಲ್ಲಿ ನಡೆಯುತ್ತಿಲ್ಲ.ಈ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಜೀವನದಿ ಕೃಷ್ಣೆ,ಉಪನದಿಗಳಾದ ಘಟಪ್ರಭೆ,ಮಲಪ್ರಭೆಗಳಲ್ಲಿ ನೀರು ಹರಿದು,ನಿಂತು,ತುಂಬಿ,ಖಾಲಿಯಾಗಿ ಹೋಗಿದೆ.ಹಾಗೆಯೇ ಈ ಜಿಲ್ಲೆಯ ಸಾಹಿತ್ಯದ ಒಡಲು ಖಾಲಿಯಾಗುತ್ತಾ ನಡೆದಿದೆ.
 
ಜಿಲ್ಲೆ ರಚನೆಯಾದ ಹೊಸದರಲ್ಲಿ 2000 ದಲ್ಲಿ ಬಾಗಲಕೋಟೆಯಲ್ಲಿ 68 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುವ ಮೂಲಕ ಮುಳುಗಡೆ ಜಿಲ್ಲೆಯಲ್ಲಿ ಹೊಸದೊಂದು ಸಾಹಿತ್ಯ ವಾತಾವರಣಕ್ಕೆ ನಾಂದಿ ಹಾಡಲಾಯಿತು.ಆದರೆ ಮುಂದೆ ನಡೆದ ಬೆಳವಣಿಗೆಗಳೇ ಬೇರೆ.ಭೌತಿಕವಾಗಿ ರಾಜ್ಯದಲ್ಲಿಯೇ ಗುರುತಿಸುವಂತೆ ನವನಗರದಲ್ಲಿ ನಿರ್ಮಾಣವಾದ ಕಲಾಭವನ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನಗಳು ಸಾಂಸ್ಕøತಿಕ ಕಾರ್ಯಕ್ರಮಗಳಿಲ್ಲದೇ,ಸಾಹಿತ್ಯಾಸಕ್ತರ ಶಕ್ತಿ ಕೇಂದ್ರಗಳಾಗದೇ ಧೂಳು ತಿನ್ನಲು ಬಿಟ್ಟಿರುವುದು ಒಂದು ಪ್ರದೇಶÀದ ಸಾಂಸ್ಕøತಿಕ ಬರಗಾಲವನ್ನು ಸಾರುತ್ತದೆ.
 
ಇಂಥ ಕೊರತೆಗಳ ನಡುವೆಯೂ ಮರಳುಗಾಡಿನಲ್ಲಿ ಓಯಾಸಿಸ್ ಸಿಕ್ಕಂತೆ ಅಲ್ಲಲ್ಲಿ ಖಾಸಗಿ ಸಂಘ ಸಂಸ್ಥೆಗಳವರು ಸಾಹಿತ್ಯ ,ರಂಗಭೂಮಿ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಜಿಲ್ಲಾ ರಚನೆಯ ಆರಂಭದಲ್ಲಿ ನಮ್ಮನ್ನಗಲಿದ ಗೌರಿ ಕ್ರಿಯೇಶನ್ ಸಂಸ್ಥೆ ಮೂಲಕ ಪ್ರಕಾಶ ಕುಲಕುರ್ಣಿ,ದೃವರಂಗ ಸಂಸ್ಥೆ ಮೂಲಕ ಧೃವರಾಜ ದೇಶಪಾಂಡೆ,ನಟೇಶ್ವರ ಕಲಾ ಬಳಗದ ಮೂಲಕ ಬಸವರಾಜ ಹೊಸಮನಿ,ಗ್ರಾಮೀಣ ರಂಗತರಂಗ ಮೂಲಕ ಹೊಳಿಬಸು ಯೆಂಡಿಗೇರಿ ಜಿಲ್ಲೆ ಸಾಂಸ್ಕøತಿಕ ಲೋಕವನ್ನು ಜೀವಂತವಾಗಿಟ್ಟಿದ್ದರು.ಇಂದೂ ಇಳಕಲ್ಲದ ಸ್ನೇಹ ರಂಗ,ಹುನಗುಂದದ ದೃವ ರಂಗ,ಬಾದಾಮಿಯ ವಿಶ್ವಚೇತನ,ಮುಧೋಳದ ಮಧುರ ಮುಧೋಳ,ಬನಹಟ್ಟಿಯ ಮಕ್ಕಳ ಸಂಗಮ,ಜಮಖಂಡಿಯ ಕನ್ನಡ ಸಂಘ,ಬಾಗಲಕೋಟೆಯ ಜಲಜಮಿತ್ರ ರಂಗ ವೇದಿಕೆ,ರಂಗಕೋಟೆ ಬಾಗಿಲುಕೋಟೆ,ಸಹೃದಯ ಸಾಹಿತ್ಯ ವೇದಿಕೆÉ,ಮಕ್ಕಳ ಸಾಹಿತ್ಯ ಸಮಾಗಮ,ಶಿರೂರಿನ ಗ್ರಾಮೀಣ ಸಾಹಿತ್ಯ ವೇದಿಕೆ,ಇಳಕಲ್ಲದ ವಿಜಯ ಚಿತ್ರಕಲಾ ವಿದ್ಯಾಲಯ,ಮಹಾಲಿಂಗಪುರದ ರನ್ನ ವೇದಿಕೆ,ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು,ಗುಳೇದಗುಡ್ಡದ ರಂಗ ಚಿಂತನ ವೇದಿಕೆ,ಲೋಕಾಪುರದ ನಟರಾಜ ಹವ್ಯಾಸಿ ಕಲಾ ತಂಡ ಮೊದಲಾದವು ಸಂಘಟನೆಗಳ ಮೂಲಕ ಇಷ್ಟಲಿಂಗ ಸಿರ್ಸಿ,ಮಹಾಂತೇಶ ಗಜೇಂದ್ರಗಡ.ಡಾ.ಬಸವರಾಜ ಗವಿಮಠ,ಎಸ್ಕೆ ಕೊನೆಸಾಗರ,ಸಂಗಮೇಶ ಕೋಟಿ,ಮಹಾಂತೇಶ ಆವಾರಿ, ಜಲಜಮಿತ್ರ ಬಸವರಾಜ ಮಠ,ಡಾ.ಪ್ರಕಾಶ ಖಾಡೆ,ಉಮೇಶ ತಿಮ್ಮಾಪುರ,ಜಯವಂತ ಕಾಡದೇವರ,ಎಸ್.ಎಸ್.ಹಳ್ಳೂರ,ಮ.ಕೃ.ಮೇಗಾಡಿ,ಶಿವಾನಂದ ಶೆಲ್ಲಿಕೇರಿ,ಡಾ.ನಾಗರಾಜ ನಾಡಗೌಡ,ಚಂದ್ರಕಾಂತ ರಂಗಣ್ಣವರ,ಶಂಕರ ಹೂಗಾರ,ನಾಡೋಜ ಯಲ್ಲವ್ವ ರೊಡ್ಡಪ್ಪನವರ,ಶಾಂತಮ್ಮಾ ಪತ್ತಾರ,ಪ್ರೇಮಾ ಬಾದಾಮಿ,ಉಮಾರಾಣಿ ಬಾರಿಗಿಡದ,ಪ್ರೇಮಾ ಗುಳೇದಗುಡ್ಡ,ಭೀಮನಗೌಡ ಪಾಟೀಲ ಮೊದಲಾದವರು ಜಿಲ್ಲೆಯಲ್ಲಿ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಜರುಗಿಸುವ ಮೂಲಕ ಸಾಹಿತ್ಯ ಮತ್ತು ಸಾಂಸ್ಕøತಿಕವಾಗಿ ಜಿಲ್ಲೆಯನ್ನು ನಾಡಿನಲ್ಲಿಯೇ ಗುರುತಿಸುವಂತೆ ಮಾಡಿದ್ದಾರೆ. ರಾಜ್ಯ ಸರಕಾರ ಜಿಲ್ಲೆಯ ಇಬ್ಬರು ಧೀಮಂತ ಸಾಹಿತಿಗಳ ಹೆಸರಿನಲ್ಲಿ ರನ್ನ ಪ್ರತಿಷ್ಠಾನ ಮತ್ತು ಪಿ.ಬಿ.ದುತ್ತರಗಿ ಪ್ರತಿಷ್ಠಾನಗಳನ್ನು ಸ್ಥಾಪಿಸಿ ಧಾರಾಳವಾಗಿ ಹಣಕಾಸಿನ ನೆರವು ನೀಡಿದೆ.ರನ್ನ ಪ್ರತಿಷ್ಠಾನದಿಂದ ರನ್ನನ ಸಮಗ್ರ ಕೃತಿ ಹಾಗೂ ವಿಚಾರ ಸಂಕಿರಣ ಕೃತಿಗಳು ಪ್ರಕಟವಾಗಿವೆ,ದುತ್ತರಗಿ ಪ್ರತಿಷ್ಠಾನದ ಕೆಲಸ ಮಂದಗತಿಯಿಂದ ನಡೆದಿದ್ದು ಖ್ಯಾತ ನಾಟಕಕಾರ ದುತ್ತರಗಿ ಅವರ ಸಮಗ್ರ ನಾಟಕಗಳ ಮುದ್ರಣ ಕಾರ್ಯ ಆರಂಭವಾಗಬೇಕಿದೆ.
 
ಜಿಲ್ಲಾ ಸಾಹಿತ್ಯ ಪರಿಷತ್ತು ಹೊಸ ಮತ್ತು ಹಳೆ ತಲೆಮಾರಿನ ಸಾಹಿತಿಗಳಿಗೆ ತವರು ಮನೆ ಇದ್ದಂತೆ.ನಾಡಿನಲ್ಲಿ ಸಾಹಿತ್ಯ ಪರಿಷತ್ತಿನ ಕಾರ್ಯ ಚಟುವಟಿಕೆಗಳು ನಡೆದಷ್ಟು ಜಿಲ್ಲೆಯಲ್ಲಿ ನಡೆಯುತ್ತಿಲ್ಲ.ಜಿಲ್ಲೆ ರಚನೆಯಾದ ಆರಂಭದಲ್ಲಿ ಬಿ.ಆರ್.ಪೊಲೀಸಪಾಟೀಲರು ಅಧ್ಯಕ್ಷರಾಗಿದ್ದರು.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜರುಗಿಸುವ ಮೂಲಕ ಒಂದು ಸಾರ್ಥಕ ಕಾರ್ಯ ಮಾಡಿದರು.ನಂತರ ಬಂದ ಅನ್ನದಾನಿ ಹಿರೇಮಠರು ಜಿಲ್ಲಾ ಕ.ಸಾ.ಪ.ಭವನಕ್ಕೆ ಅಡಿಪಾಯ ಹಾಕಿದರು.ಸದಸ್ಯರ ಸಂಖ್ಯೆ,ದತ್ತಿದಾನಿಗಳ ಸಂಖ್ಯೆ ಹೆಚ್ಚಿಸಿದರು.ಡಾ.ವಿಶ್ವನಾಥ ವಂಶಕೃತಮಠರು ಜಿಲ್ಲಾ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಜರುಗಿಸುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದರು.ಎಸ್.ಜಿ.ಕೋಟಿ ಅವರ ಕಾಲಕ್ಕೆ ನಿಂತೇ ಹೋಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಚಾಲನೆ ನೀಡಿದರು.ಲೋಕಾಪುರ,ಬಾದಾಮಿಗಳÀಲ್ಲಿ ಜಿಲ್ಲಾ ಸಮ್ಮೇಳನಗಳು,ಬೀಳಗಿ,ಶಿರೂರ,ನಿಂಗಾಪುರ,ಸಾವಳಗಿ ಗ್ರಾಮಗಳಲ್ಲಿ ತಾಲೂಕು ಸಮ್ಮೇಳನಗಳನ್ನು ಜರುಗಿಸಿ ಪರಿಷತ್ತನ್ನು ಜನಮುಖಿಗೊಳಿಸಿದರು.ಆ ಹೊತ್ತಿಗೆ ಆಕರ ಕೃತಿಗಳಲ್ಲದೇ ಸ್ಮರಣ ಸಂಚಿಕೆಗಳು ಸೇರಿ ಮೂರು ವರ್ಷದ ಅವಧಿಯಲ್ಲಿ ಹದಿನಾಲ್ಕು ಕೃತಿಗಳನ್ನು ಕಸಾಪದಿಂದ ಪ್ರಕಟಿಸಿದರು.ಸಾಹಿತ್ಯ ಮತ್ತು ವಿದ್ವತ್ ಪರಂಪರೆ,ಗ್ರಾಮಸಿರಿ,ಹಳಗನ್ನಡ ಸಾಹಿತ್ಯದ ಓದು,ಸಂಶೋಧನಾ ಕಮ್ಮಟ,ನಿಯಮಿತವಾಗಿ ಜಿಲ್ಲೆಯಾದ್ಯಂತ ದತ್ತಿ ಕಾರ್ಯಕ್ರಮಗಳನ್ನು ಜರುಗಿಸಿದ ಕೋಟಿ ಅವರ ಅಧ್ಯಕ್ಷತೆಯ ಕಸಾಪದ ಕಲಾವಧಿ ಒಂದು ಸುವರ್ಣ ಯುಗವಾಗಿತ್ತು.ಮುಂದೆ ಬಂದ ಡಾ.ವಿಜಯಕುಮಾರ ಕಟಗಿಹಳ್ಳಿಮಠರು ಈ ನಪರಂಪರೆ ಮುಂದುವರೆಸಿದರು.ಡಾ.ಕಟಗಿಹಳ್ಳಿಮಠರು ಸಾಹಿತ್ಯ ಪರಿಷತ್ತು ಮತ್ತು ಚಾಲುಕ್ಯ ಉತ್ಸವಗಳ ಸಂದರ್ಭಗಳಲ್ಲಿ ಹೊರತಂದ ಆಕರ ಕೃತಿಗಳು ಅಧ್ಯಯನಪೂರ್ಣವಾಗಿವೆ.ಅವರ ಕಾಲಾವಧಿಯೂ ಒಂದು ಸಾರ್ಥಕ ಸಂದರ್ಭ
 
ಹೊಸ ಜಿಲ್ಲೆ ರಚನೆಯಾಗಿ ಎರಡು ದಶಕಗಳು ಸಂದರೂ ಇಲ್ಲಿ ಸಾಹಿತ್ಯಿಕವಾಗಿ ಇನ್ನೂ ನಡೆಯಬೇಕಾದ ಕೆಲಸಗಳು ಸಾಕಷ್ಟಿವೆ.ಜಿಲ್ಲೆಯಲ್ಲಿ ಹುಟ್ಟಿ ನಾಡಿನಲ್ಲಿಯೇ ಹೆಸರಾಗಿದ್ದ ರಾ.ಯ.ಧಾರವಾಡಕರ,ಕೃಷ್ಣಮೂರ್ತಿ ಪುರಾಣಿಕ,ಡಾ.ಬಿ.ಎಸ್.ಗದ್ದಗಿಮಠ,ಬಿಂದು ಮಾಧವ ಕುಲಕರ್ಣಿ,ಶ್ಯಾಮ ಹುದ್ದಾರ,ಶಂಕರ ಕಟಗಿ ಅವರಂಥ ಗಣ್ಯ ಸಾಹಿತಿಗಳನ್ನು ಸ್ಮರಿಸುವ ಕೆಲಸಗಳಾಗಬೇಕು, ಹನಮಂತ ಹಾಲಿಗೇರಿ,ತಿರುಪತಿ ಭಂಗಿ,ಲಕ್ಷ್ಮಣ ಬದಾಮಿ,ಉಮೇಶ ತಿಮ್ಮಾಪುರ,ಕಲ್ಲೇಶ ಕುಂಬಾರ,ಸುರೇಖಾ ಕುಲಕರ್ಣಿ ಅವರಂಥ ಪ್ರಖರ ಯುವ ಕಥೆಗಾರರ ಕಥೆಗಳನ್ನು ಚಿತ್ರ,ಕಿರುಚಿತ್ರವಾಗಿ ರೂಪಿಸಬೇಕಾಗಿದೆ.ಜಿಲ್ಲೆಯ ಬೆಳಕಿಗೆ ಬಾರದ ತಳಸಮುದಾಯಗಳ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿಕೊಡಬೇಕಾಗಿದೆ,ಅಂತರ್ಜಾಲ ಮಾಧ್ಯಮದ ಮೂಲಕ ಜಿಲ್ಲೆಯ ಹಿರಿಯ ಮತ್ತು ಯುವ ಲೇಖಕರ ಸಾಹಿತ್ಯವನ್ನು ದಾಖಲಿಸಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕಾಗಿದೆ.ಈ ಕೆಲಸಗಳೂ ನಡೆದಷ್ಟೂ ಜಿಲ್ಲೆ ನಾಡಿನಲ್ಲಿಯೇ ಸಾಂಸ್ಕೃತಿಕವಾಗಿ ಗುರುತಿಸಿಕೊಳ್ಳಲು ಸಾಧ್ಯ.
 
-ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ. 9845500890
 
=='''ಇದನ್ನೂ ನೋಡಿ'''==
"https://kn.wikipedia.org/wiki/ಬಾಗಲಕೋಟೆ" ಇಂದ ಪಡೆಯಲ್ಪಟ್ಟಿದೆ