ಧೊಂಡೊ ಕೇಶವ ಕರ್ವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ using AWB
ಚು →‎ಪ್ರಶಸ್ತಿಗಳು: clean up, replaced: ಬೊಂಬಾಯಿ → ಮುಂಬಯಿ using AWB
೧೫ ನೇ ಸಾಲು:
ತಾರುಣ್ಯದಿಂದಲೂ ಶಾಲಾ ಅಧ್ಯಾಪಕವೃತ್ತಿಯಲ್ಲಿ ದುಡಿದ ಕರ್ವೆಯವರಿಗೆ ಪುಣೆಯ ಫರ್ಗುಸನ್ ಕಾಲೇಜಿನಲ್ಲಿ ಅಧ್ಯಾಪಕ ಹುದ್ದೆ ಸ್ವೀಕರಿಸಬೇಕೆಂದು, ಸಹಪಾಠಿ ಗೋಪಾಲಕೃಷ್ಣ ಗೋಖಲೆಯವರಿಂದ ಆಮಂತ್ರಣ ಬಂತು. ೧೮೯೧ ರಿಂದ ೧೯೧೪ರ ವರೆಗೆ ಅಲ್ಲಿದ್ದ ಮೇಲೆ ಕರ್ವೆಯ ಬಾಳು ಸಮಾಜಸೇವೆಗೆ ಮುಡಿಪಾಯಿತು. ೧೪ನೆಯ ವರ್ಷದಲ್ಲೇ ವಿವಾಹವಾಗಿದ್ದ ಕರ್ವೆಯವರಿಗೆ ತಾರುಣ್ಯದಲ್ಲೇ ವಿಧುರತ್ವ ಸಂಭವಿಸಿತು. ಇದೇ ಕಾಲದಲ್ಲಿ ಮುಂಬಯಿ ಪ್ರಾಂತ್ಯದಲ್ಲಿ ಬಲವಾಗಿದ್ದ [[ಆರ್ಯಸಮಾಜ]], [[ಬ್ರಹ್ಮಸಮಾಜ]] ಮುಂತಾದ ಚಳವಳಿಗಳಿಂದ ಕರ್ವೆಯವರ ಮೇಲೆ ತುಂಬ ಪ್ರಭಾವ ಉಂಟಾಗಿತ್ತು. ಬಾಲ್ಯದಲ್ಲೆ ವಿಧವೆಯಾಗಿದ್ದ ಗೋದುಬಾಯಿಯನ್ನು ಅವರು ಮದುವೆಯಾದರು (೧೮೯೩). ಅದೇ ವರ್ಷ ಅವರು ವಿಧವಾಪುನರ್ವಿವಾಹ ಸಂಸ್ಥೆಯನ್ನು ಸ್ಥಾಪಿಸಿದರು. ಅನಾಥ ಬಾಲಿಕಾಶ್ರಮ ಸಂಘ (೧೮೯೬), ಪುಣೆಯ ಮಹಿಳಾ ವಿದ್ಯಾಲಯ (೧೯೦೭) ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿದವರೂ ಅವರೇ. ಈ ಮಹಿಳಾ ವಿದ್ಯಾಲಯ ಬೆಳೆದು ಮುಂದೆ ಮುಂಬಯಿಯಲ್ಲಿ ಶ್ರೀಮತಿ ಸಾಥಿಬಾಯಿ ದಾಮೋದರ ಥ್ಯಾಕರ್ಸಿ ಮಹಿಳಾ ವಿದ್ಯಾ ಪೀಠದ ಸ್ಥಾಪನೆಗೆ (೧೯೧೬) ಹಾದಿಮಾಡಿಕೊಟ್ಟಿತು. ಈ ವಿದ್ಯಾಪೀಠಕ್ಕೆ ಹಣ ಸಂಗ್ರಹಿಸುವ ಉದ್ದೇಶದಿಂದಲೇ ಕರ್ವೆ ೧೯೨೭ರಲ್ಲಿ ಫ್ರಾನ್ಸ್‌, [[ಇಂಗ್ಲೆಂಡ್]], [[ಹಾಲೆಂಡ್]], [[ಅಮೆರಿಕ]], [[ಜಪಾನ್]], ಚೀನ, ಮಲಯ ಮುಂತಾದ ದೇಶಗಳನ್ನೂ ಮುಂದೆ [[ದಕ್ಷಿಣ ಆಫ್ರಿಕ]]ವನ್ನೂ ಸಂದರ್ಶಿಸಿದರು. ೧೯೧೫ರಲ್ಲಿ ಮುಂಬಯಿಯಲ್ಲಿ ನಡೆದ ಸಮಾಜಸುಧಾರಣ ಸಮ್ಮೇಳನದ ಅಧ್ಯಕ್ಷತೆ ವಹಿಸಿದರು. ಇವರು ಮಹಾರಾಷ್ಟ್ರ ಪ್ರಾಥಮಿಕ ಶಿಕ್ಷಣ ಸಂಸ್ಥೆಯ ಸ್ಥಾಪನೆಮಾಡಿದ್ದು ೧೯೩೬ರಲ್ಲಿ. ಮಾನವರಲ್ಲಿ ಸಮಾನತೆ ಇರಬೇಕೆಂಬ ತತ್ತ್ವವನ್ನು ಎತ್ತಿಹಿಡಿಯಲು ೧೯೪೪ರಲ್ಲಿ ಸಮತಾಸಂಘದ ಸ್ಥಾಪನೆಯಾಯಿತು. ಫ್ರೆಡರಿಕ್ ಜೆ. ಗೌಲ್ಡ್‌ ೧೯೩೪ರಲ್ಲಿ ಲಂಡನಿನಲ್ಲಿ ಸ್ಥಾಪಿಸಿದ ಸೊಸೈಟಿ ಫಾರ್ ದಿ ಪ್ರಮೋಶನ್ ಆಫ್ ಹ್ಯೂಮನ್ ಈಕ್ವ್ಯಾಲಿಟಿ ಸಂಸ್ಥೆಯೇ ಇದಕ್ಕೆ ಪ್ರೇರಣೆ. ಜಾತಿ ನಿರ್ಮೂಲನ ಸಂಸ್ಥೆಯನ್ನು ೧೯೪೮ರಲ್ಲಿ ಅವರು ಪ್ರಾರಂಭಿಸಿದರು.
==ಪ್ರಶಸ್ತಿಗಳು==
೧೯೪೨ರಲ್ಲಿ [[ಬನಾರಸ್ ಹಿಂದೂ ವಿಶ್ವವಿದ್ಯಾಲಯ]]ದಿಂದ ಕರ್ವೆಯವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಾಪ್ತವಾಯಿತು. ಪುಣೆ (೧೯೫೩), ಮಹಿಳಾ ವಿದ್ಯಾಪೀಠ (೧೯೫೪) ಹಾಗೂ ಬೊಂಬಾಯಿಮುಂಬಯಿ (೧೯೫೮) ವಿಶ್ವವಿದ್ಯಾಲಯಗಳೂ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದುವು. ಸ್ತ್ರೀಶಿಕ್ಷಣ, ಸಮಾಜ ಸುಧಾರಣೆಗಳ ಕ್ಷೇತ್ರಗಳಿಗೆ ಸಲ್ಲಿಸಿದ ಅವಿಶ್ರಾಂತ ಸೇವೆಗಾಗಿ ೧೯೫೫ರಲ್ಲಿ ಇವರಿಗೆ [[ಪದ್ಮವಿಭೂಷಣ]] ಪ್ರಶಸ್ತಿಯೂ ೧೯೫೮ರಲ್ಲಿ (ಇವರಿಗೆ ೧೦೦ ವರ್ಷ ತುಂಬಿದಾಗ) [[ಭಾರತರತ್ನ]] ಪ್ರಶಸ್ತಿಯೂ ಸಂದವು.
==ನಿಧನ==
೧೯೬೨ರ ನವೆಂಬರ್ ೯ ರಂದು, ೧೦೫ನೆಯ ಮಯಸ್ಸಿನಲ್ಲಿ ಕರ್ವೆ ನಿಧನ ಹೊಂದಿದರು. ಕರ್ವೆಯವರು ಮರಾಠಿಯಲ್ಲಿ ಬರೆದ ಆತ್ಮಚರಿತ್ರೆ ಆತ್ಮವೃತ್ತ ಎಂಬ ಹೆಸರಿನಿಂದ ೧೯೧೫ರಲ್ಲಿ ಪ್ರಕಟವಾಯಿತು. ಲುಕಿಂಗ್ ಬ್ಯಾಕ್ ಎಂಬ ಹೆಸರಿನಿಂದ ಇಂಗ್ಲಿಷಿನಲ್ಲೂ (೧೯೩೬) ಸಿಂಹಾವಲೋಕನ ಎಂದು ಕನ್ನಡದಲ್ಲೂ (೧೯೪೪) ಈ ಕೃತಿ ಪ್ರಕಟವಾಗಿದೆ.
"https://kn.wikipedia.org/wiki/ಧೊಂಡೊ_ಕೇಶವ_ಕರ್ವೆ" ಇಂದ ಪಡೆಯಲ್ಪಟ್ಟಿದೆ