೧೯೫೩: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೭ ನೇ ಸಾಲು:
ಭಾರತ ಸರಕಾರ ಮೊದಲ ಬಾರಿಗೆ ೧೯೫೩ರಲ್ಲಿ ಹಿಂದುಳಿದ ವರ್ಗ‌ಕ್ಕಾಗಿ ಒಂದು ಸಮಿತಿಯನ್ನು ಸ್ಥಾಪಿಸಿ,[[ಆಚಾರ್ಯ ಕಾಲೇಕರ್]] ಅವರನ್ನು ಈ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿತು ಹಾಗೂ ಮೊದಲ ಬಾರಿಗೆ ೨೯ ಮೇ, ೧೯೫೩ರಲ್ಲಿ ಎವರೆಸ್ಟ್ ಶಿಖರ ಏರಿದ [[ಎಡ್ಮಂಡ್ ಹಿಲರಿ]] ಮತ್ತು ತೇನ್‍ಸಿಂಗ್ ನೋರ್ಗೆರವರ ಸಾಧನೆಯನ್ನು ಮೆಚ್ಚಿ [[ಭಾರತೀಯ ಅಂಚೆ ಸೇವೆ]]ಯು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದ್ದರು ಹಾಗೂ ಭಾರತೀಯ ಅಂಚೆ ಸೇವೆಯು ೧೦೦ ವರ್ಷಗಳ ಸೇವೆಯ ನೆನಪಿಗೆ ಅನನ್ಯವಾದ ಒಂದು ಅಂಚೆ ಚೀಟಿಯನ್ನು ಸಹಾ ಬಿಡುಗಡೆ ಮಾಡಿತ್ತು.
[[ಚಿತ್ರ:307-Railway-Centenary-India-Stamp-1953.jpg|thumb|ರೈವೇ ಶತಮಾನೋತ್ಸವದ ಅಂಚೆ ಚೀಟಿ ೧೯೫೩]]
ಸ್ವಾತಂತ್ರ್ಯ ಪಡೆದ ನಂತರ ಭಾರತದಾಚೆ ಪಾಕಿಸ್ತಾನದಲ್ಲಿ ಮೊದಲ ವಿಜ್ಞಾನದ ಸಂಸ್ಥೆಯೊಂದನ್ನು ೧೯೫೩ ಉದ್ಘಾಟಿಸಲಾಯಿತು,ಈಜಿಪ್ಟ್ ರಾಷ್ಟ್ರವು ಗಣರಾಜ್ಯವಾಗಿ ಘೋಷಿತವಾಯಿತು,ಫಿಲಿಪ್ಪೀನ್ಸ್ ರಾಷ್ಟ್ರದ ೭ನೇ ಅಧ್ಯಕ್ಷರಾಗಿ ರಾಮನ್ ಮ್ಯಾಗ್ಸೆಸೆ ಆಯ್ಕೆಯಾದರು, ಜುಲೈ ೨೭ರಂದು ಕೊರಿಯ ರಾಷ್ಟ್ರವು ಉತ್ತರ ಮತ್ತು ದಕ್ಷಿಣ ಕೊರಿಯವಾಗಿ ವಿಭಾಗಗೊಳ್ಳುವ ಮೂಲಕ ಕೊರಿಯ ಯುದ್ಧ ಮುಕ್ತಾಯವಾಯಿತು,ಜಗತ್ತಿನ ೯ನೇ ಶಿಖರ ನಂಗಾ ಪರ್ವತವನ್ನು ಆಸ್ಟ್ರೇಲಿಯದ ಹರ್ಮನ್ನ್ ಬುಹ್ಲ್ ಒಬ್ಬನೇ ಹತ್ತಿ ಜುಲೈ ೩ರಂದು ಪೂರೈಸಿದ, ರಷ್ಯಾ ರಾಷ್ಟ್ರವು ತಮ್ಮಲ್ಲಿ ಹೈಡ್ರೋಜನ್ ಬಾಂಬ್ ಇದೆಯೆಂದು ಘೋಷಿಸಿತು. ಈ ನಡುವೆ ಭಾರತದಲ್ಲಿ ಮದ್ರಾಸ್ ರಾಜ್ಯದ ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಪೊಟ್ಟಿ ಶ್ರೀರಾಮುಲುರವರು ಉಪವಾಸ ಆರಂಭಿಸಿದರು, ಹಾಗೆಯೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹೋರಾಟ ಮತ್ತು ನಾಗರಿಕ ಕ್ರೋಧಕ್ಕೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್‌ ೧ ರಂದು [[ಆಂಧ್ರ ಪ್ರದೇಶ|ಆಂಧ್ರ]]ಕ್ಕೆ ರಾಜ್ಯದ ಸ್ಥಾನವು ದಕ್ಕಿ, ಕರ್ನೂಲ್ ಅದರ ರಾಜಧಾನಿಯಾಯಿತು.
==ಚಲನಚಿತ್ರ==
'ದೊ ಬಿಘ ಜ಼ಮೀನ್' ಚಲನಚಿತ್ರಕ್ಕೆ ೧೯೫೩ರ ಫಿಲ್ಮ‍ಫೇರ್ ಅತ್ಯುತ್ತಮ ಚಲಚಿತ್ರ ಪ್ರಶಸ್ತಿಯನ್ನು ಪಡೆಯಿತು ಹಾಗೂ ಈ ಚಲನಚಿತ್ರದ ನಿರೂಪಕ ಬಿಮಲ್ ರಾಯ್‍ಗೆ ಫಿಲ್ಮ‍ಫೇರ್ ಅತ್ಯುತ್ತಮ ನಿರೂಪಕ ಪ್ರಶಸ್ತಿ ದೊರಕಿತು. ಆ ವರ್ಷ ಬಿಡುಗಡೆಯಾದ ಐತಿಹಾಸಿಕ ಚಲಚಿತ್ರ 'ಅನಾರ್ಕಲಿ' ಆ ವರ್ಷದ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿ ದಾಖಲೆ ನಿರ್ಮಿಸಿತು.
"https://kn.wikipedia.org/wiki/೧೯೫೩" ಇಂದ ಪಡೆಯಲ್ಪಟ್ಟಿದೆ