ರೇಡಿಯೋ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
csb
೨೮ ನೇ ಸಾಲು:
1945ರಲ್ಲಿ ಈ ಲೇಖನ ರಾಮರಾಯರ ಹೆಸರು ಹುದ್ದೆಗಳೊಂದಿಗೆ (ಹೊಸಬೆಟ್ಟು ರಾಮರಾಯರು, ಜಿಲ್ಲಾ ಶಿಕ್ಷಣಾಧಿಕಾರಿ) ಕನ್ನಡದ ಸಾಹಿತ್ಯ ಕೃತಿಗಳು ಎಂಬ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರಿಸಲು ಮದ್ರಾಸಿನ ಪಠ್ಯಪುಸ್ತಕ ಸಮಿತಿಯಿಂದ ಶಿಫಾರಸು ದೊರಕಿತು. ಹೊಸಬೆಟ್ಟು ರಾಮರಾಯರಿಂದ ಸೃಷ್ಟಿಗೊಂಡ ಈ ಹೆಸರು ರೇಡಿಯೊದ ಜೊತೆಗೆ ಖಾಯಂ ಆಗಿ ಉಪಯೋಗ ವಾಗಲು ತೊಡಗಿದ್ದಲ್ಲದೇ ಸರ್ವರಿಗೂ ಈ ಹೊಸ ಹೆಸರು ಪರಿಚಯವಾಯಿತು. ಮುಂದೆ ಇದೇ ಪದವನ್ನು ಮೈಸೂರಿನಲ್ಲಿ ಗೋಪಾಲಸ್ವಾಮಿಯವರ ರೇಡಿಯೊ ಕೇಂದ್ರಕ್ಕೆ ೧೯೪೩ ರಲ್ಲಿ ನಾ.ಕಸ್ತೂರಿಯವರು ಸೂಚಿಸಿದರು.೧೯೩೨ ರಲ್ಲಿ ಜನಿಸಿದ ಆಕಾಶವಾಣಿ ಪದವನ್ನು ೧೧ ವರ್ಷದ ಬಳಿಕ ಮೈಸೂರಿನ ಓರ್ವರು ಪುಸ್ತಕದ ಮರು ಮುದ್ರಣ ಮಾಡಿದರು. ಈ ಪುಸ್ತಕದ ಹಿಂಭಾಗ ಅಥವಾ ಮುಂಭಾಗದಲ್ಲಿ ರಾಮರಾಯರ ಹೆಸರು ಇತ್ತು. ಈ ಮೂಲಕ ೧೯೪೧ -೧೯೪೩ ರ ವರ್ಷಗಳ ನಂತರ ೧೯೩೨ ರ ಅಜ್ಞಾತ ಜನಕ ಯಾರೆಂಬ ಸತ್ಯವು ಹೊರಗೆ ಬಿತ್ತು. ೧೯೩೨ ರ ಕಿರುಪುಸ್ತಕದ ಮುಖಪುಟವನ್ನು ಆಕರ್ಷಕವಾಗಿ ಮುದ್ರಿಸಲಾಗಿತ್ತು. ನಾಲ್ಕು ಕಡೆಗಳ ಬದಿಯಲ್ಲಿ ಕಪ್ಪುರೇಖೆಗಳು. ಮೇಲ್ಬಾಗದಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ , ಅರ್ಧಚಂದ್ರಾಕೃತಿಯಲ್ಲಿ ಆಕಾಶವಾಣಿ ಎಂದು ‘ಆ ’ಮತ್ತು ‘ಣಿ’ ದೊಡ್ಡದಾಗಿ ಒಳಗಿನ ಅಕ್ಷರಗಳು ಕಿರಿದಾಗುತ್ತಾ ಬಲ ಭಾಗದಲ್ಲಿ ಕೆಳಗಿನಿಂದ ಒಂದು ರೇಡಿಯೊದ ಚಿತ್ರಣವನ್ನು ಕೈಯಲ್ಲಿ ಬಿಡಿಸಲಾಗಿತ್ತು."ನಮನ"
==ನೋಡಿ==
ರೇಡಿಯೋ ಕಲಾವಿದರು:ಡಾ. ಕೆ. ವಾಗೀಶ್‌ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರು.:1980ರಲ್ಲಿ ದೆಹಲಿ ಆಕಾಶವಾಣಿ ಸೇರಿದೆ. ಅಲ್ಲಿ 22 ವರ್ಷ ಕೆಲಸ ಮಾಡಿದೆ. ಬಳಿಕ 1980ರಿಂದ 2002ರವರೆಗೆ ತಿರುಚ್ಚಿ ಆಕಾಶವಾಣಿ ನಿಲಯ ನಿರ್ದೇಶಕನಾದೆ. ಅಲ್ಲಿಂದ ಮತ್ತೆ ದೆಹಲಿಗೆ ವರ್ಗವಾಗಿ ಆಕಾಶವಾಣಿಯ ಉಪ ಮಹಾನಿರ್ದೇಶಕ (ಡೆಪ್ಯುಟಿ ಡೈರೆಕ್ಟರ್‌ ಜನರಲ್‌) ನಾದೆ. ಸುಮಾರು 34 ವರ್ಷ ಸೇವೆ ಸಲ್ಲಿಸಿದೆ. ಸದ್ಯ ಆಕಾಶವಾಣಿಯ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ.:

[[http://www.prajavani.net/news/article/2016/10/09/443930.html]dismiss]
 
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.
 
ರೇಡಿಯೋ https://kn.wikipedia.org/s/bnj
 
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
 
ಪರಿವಿಡಿ [ಅಡಗಿಸು] ೧ ಮೈಸೂರು ಆಕಾಶವಾಣಿಯ ಇತಿಹಾಸ ೧.೧ ದೇಶದ ಮೊದಲ ಬಾನುಲಿ ರೇಡಿಯೋ ೧.೨ ಆಕಾಶವಾಣಿ ರಾಮರಾಯರು.
 
೨ ನೋಡಿ ೩ ಉಲ್ಲೇಖ
 
ಮೈಸೂರು ಆಕಾಶವಾಣಿಯ ಇತಿಹಾಸ[ಬದಲಾಯಿಸಿ] ಆಕಾಶವಾಣಿ
 
ನಿಕೊಲಾ ಟೆಸ್ಲಾ ೧೮೯೧ರಲ್ಲಿ ತಮ್ಮ ರೇಡಿಯೊ ತಂತ್ರಜ್ಞಾನ ಪ್ರದರ್ಶಿಸುತ್ತಿರುವುದು. ರೇಡಿಯೋ ದೃಷ್ಟಿ ಮಟ್ಟದ ಬೆಳಕಿಗಿಂತ ಹೆಚ್ಚಿನ ತರಂಗಾಂತರದ ವಿದ್ಯುತ್ ಕಾಂತೀಯ ತರಂಗಗಳಲ್ಲಿ ಸಂಜ್ಞೆಗಳನ್ನು ಪ್ರಸರಿಸುವ ತಂತ್ರಜ್ಞಾನ. ಈ ತರಂಗಗಳು ಬಹಳ ದೂರದವರೆಗೆ ಪ್ರಸಾರವಾಗುವುದರಿಂದ ದೂರಪ್ರಸರಣಗಳಿಗೆ ಈ ತಂತ್ರಜ್ಞಾನ ಅತ್ಯಂತ ಸಹಾಯಕಾರಿ.
 
ಭಾರತದಲ್ಲಿ ಸರಕಾರದ ರೇಡಿಯೋ ವ್ಯವಸ್ಥೆಗೆ ಆಕಾಶವಾಣಿ ಎಂಬ ಹೆಸರು ಇದೆ. ಸಂಸ್ಕೃತದ ಈ ಶಬ್ದಕ್ಕೆ ಆಕಾಶದಿಂದ ಬರುವ ದನಿ ಎಂದರ್ಥ. ಕೆಲವರು ರವೀಂದ್ರನಾಥ ಠಾಗೋರ್ ಅವರು ೧೯೩೦ ರಲ್ಲಿ ರೇಡಿಯೋ ಪದಕ್ಕೆ ಆಕಾಶವಾಣಿ ಎಂಬ ಪದವನ್ನು ಚಲಾವಣೆಗೆ ತಂದರು ಎಂದು ಹೇಳುತ್ತಾರೆ. ಇನ್ನೂ ಕೆಲವರು ೧೯೨೦ ರಲ್ಲಿ ಕನ್ನಡದ ಬರಹಗಾರರಾದ ನಾ. ಕಸ್ತೂರಿಯವರು ಈ ಪದವನ್ನು ಸೂಚಿಸಿದರು ಎನ್ನುತ್ತಾರೆ.
 
ದೇಶದ ಮೊದಲ ಬಾನುಲಿ ರೇಡಿಯೋ[ಬದಲಾಯಿಸಿ]
 
ದೇಶದ ಮೊದಲ ಬಾನುಲಿ ರೇಡಿಯೋ ಕೇ೦ದ್ರ ಸ್ಥಾಪನೆಯಾಗಿದ್ದು ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಡಾ.ಎಂ.ವಿ.ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ರೇಡಿಯೋ ಕೇ೦ದ್ರವೊಂದನ್ನು ಸ್ಥಾಪಿಸಿದರು. ಆಗ ೧೯೩೫ ರ ಸಮಯ. ಕಾಲೇಜಿನ ಕಾರ್ಯಗಳನ್ನು ಮುಗಿಸಿದ ನಂತರದ ಸಮಯವನ್ನು ಸದುಪಯೋಗ ಮಾಡಲು ಗೋಪಾಲಸ್ವಾಮಿಯವರಿಗೆ ಹೊಸತನ್ನೇನಾದರೂ ಮಾಡಬೇಕು ಎ೦ಬ ಆಸೆ ಹುಟ್ಟಿತು. ಡಾ.ಎಂ.ವಿ.ಗೋಪಾಲಸ್ವಾಮಿಯವರು ಲಂಡನ್ ಗೆ ಹೋಗಿದ್ದ ಸಮಯದಲ್ಲಿ ಕಡಿಮೆ ವಿದ್ಯುತ್ ಬಳಕೆಯ ಟಾಲ್ ಎಂಬ ಟ್ರಾನ್ಸ್ ಮೀಟರ್ ತಂದು ಕೆಆರ್ಎಸ್ ರಸ್ತೆಯಲ್ಲಿರುವ ತಮ್ಮ ಮನೆ ವಿಠಲ ವಿಹಾರದಲ್ಲಿ ಸ್ಥಾಪಿಸುತ್ತಾರೆ. ಈ ಪ್ರೇಷಕದಿಂದ ೧೯೩೫ ಸೆಪ್ಟೆಂಬರ್ ೧೦ ರಂದು ರೇಡಿಯೋದ ಮೊದಲ ಅಲೆ ಪ್ರಸಾರವಾಗುತ್ತದೆ. ಇದನ್ನು ಕೇಳಲು ಸ್ವತ: ಮೈಸೂರಿನ ಮಹಾರಾಜರು ಕಾಲೇಜಿನ ಅಸೆಂಬ್ಲಿ ಹಾಲಿನಲ್ಲಿ ಹಾಜರಿದ್ದರು, ರಾಷ್ಟ್ರ ಕವಿ ಕುವೆಂಪು ಅವರಿಂದ ಕವನ ವಾಚನದ ಮೂಲಕ ಕಾರ್ಯಕ್ರಮ ಆರಂಭಗೊಂಡಿತ್ತು. ಹೀಗೆ ಏಕ ವ್ಯಕ್ತಿಯೊಬ್ಬರಿಂದ ಆರಂಭವಾದ ದೇಶದ ಮೊದಲ ರೇಡಿಯೋ ಸ್ಟೇಶನ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ೧೯೪೧ರವರೆಗೆ ಇವರ ಮನೆಯಿಂದಲೇ ಬಾನುಲಿ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಇಲ್ಲಿ ರೇಡಿಯೋ ೪೯.೪೬ ಮೀಟರ್ ಶಾರ್ಟ್ ವೇವ್ ನಲ್ಲಿ ಹಾಗೂ ೩೧೦ ಮೀಟರ್ ಮೀಡಿಯಂ ವೇವ್ ತರಂಗಾತರಗಳಲ್ಲಿ ಇಲ್ಲಿನ ಪ್ರಸಾರ ಕಾರ್ಯ ನಡೆಯುತ್ತಿತ್ತು..
ಡಾ.ಎಂ.ವಿ.ಗೋಪಾಲಸ್ವಾಮಿ
ಮನೆಯಲ್ಲಿ ೩೦ ವ್ಯಾಟ್ ನಷ್ಟು ಕಿರು ಸಾಮರ್ಥ್ಯದ ಪ್ರೇಷಕ (ಟ್ರಾನ್ಸ್ ಮೀಟರ್ )ವೊಂದನ್ನು ಸ್ಥಾಪಿಸಿ, ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಪ್ರತಿ ದಿನ ಸಂಜೆ ೬ ರಿಂದ ೮.೩೦ರವರೆಗೆ ಶಾಸ್ತ್ರೀಯ ಸಂಗೀತ ಹಾಗೂ ಬಾನುಲಿ ಭಾಷಣಗಳನ್ನು ಪ್ರಸಾರ ಮಾಡುತ್ತಿದ್ದರು. ನಂತರ ಇದನ್ನು ೨೫೦ ವ್ಯಾಟ್ ಸಾಮರ್ಥ್ಯದ ಪ್ರೇಷಕವಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಇದರಿಂದ ಮೈಸೂರಿನ ಸುತ್ತಮುತ್ತ ೨೫ ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಕ್ರಮಗಳನ್ನು ಕೇಳಲು ಸಾಧ್ಯವಾಗುತ್ತಿತ್ತು. ಶಾರ್ಟ್ ವೇವ್ ನಲ್ಲಿನ ಪ್ರಸಾರವನ್ನು ವಾತಾವರಣ ಉತ್ತಮವಿರುವ ಸಮಯದಲ್ಲಿ ಶ್ರೀಲಂಕಾದಲ್ಲಿ, ಹಾಗೆಯೇ ಉತ್ತರ ಭಾರತದಲ್ಲಿಯೂ ಕೇಳಲಾಗುತ್ತಿತ್ತಂತೆ. ಈ ಬಾನುಲಿ ಕೇಂದ್ರವು ಪ್ರಸಾರ ಪ್ರಕ್ರಿಯೆಯನ್ನು ಜನಪ್ರಿಯಗೊಳಿಸುವುದರ ಜೊತೆಗೆ ‘ಆಕಾಶವಾಣಿ’ ಎಂಬ ಪದವನ್ನು ಮೊಟ್ಟಮೊದಲಿಗೆ ಪ್ರಯೋಗಿಸಿತು. ಕರ್ನಾಟಕದ ಹೆಮ್ಮೆಯೆನಿಸಿರುವ ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ಸ್ಥಾಪಕ ನಿರ್ದೇಶಕರೂ ಗೋಪಾಲಸ್ವಾಮಿಯವರು ಇದನ್ನು ಜನಪ್ರಿಯಗೊಳಿಸಿದರು ಎಂಬುದು ಬಹುಮಂದಿಗೆ ಗೊತ್ತೇ ಇರದ ಸತ್ಯ.
 
ಮಂಗಳೂರಿನ "ವಿದ್ವಾನ್ ಹೊಸಬೆಟ್ಟು ರಾಮರಾವ್‌"ರವರು ೧೯೩೨ ರಲ್ಲಿ ಬರೆದ ‘ಆಕಾಶವಾಣಿ ’ಎಂಬ ಹೆಸರಿನಿಂದ ಬರೆದ ಪುಸ್ತಕದಿಂದ ಪ್ರೆರಿತವಾದ ಹೆಸರು.ಮುಂದೆ ಇದೇ ಪದವನ್ನು ಮೈಸೂರಿನ ಆಕಾಶವಾಣಿ ಸಹಾಯಕ ನಿರ್ದೇಶಕ ಸಾಹಿತಿ ನಾ.ಕಸ್ತೂರಿಯವರು ಸೂಚಿಸಿದರು. ಮೈಸೂರು ನಗರಪಾಲಿಕೆಯಿಂದ ಸಣ್ಣ ಪ್ರಮಾಣದಲ್ಲಿ ಅನುದಾನ ಡಪೆದು ಕಾರ್ಯ ನಿರ್ವಹಿಸುತ್ತಿದ್ದ ಮೈಸೂರು ಆಕಾಶವಾಣಿ ಕೇಂದ್ರವನ್ನು ೧೯೪೨ ಜನವರಿ ಒಂದರಂದು ಅಂದಿನ ಮೈಸೂರು ಮಹಾರಾಜರು ತಮ್ಮ ವಶಕ್ಕೆ ತೆಗೆದುಕೊಂಡರು. ನಂತರ 'ವಿಠಲವಿಹಾರ' ದಿಂದ ನಿಲಯವನ್ನು ಇಂದಿನ ಹಳೆಯ ವಸ್ತು ಪ್ರದರ್ಶನದ ಪ್ರಾಧಿಕಾರದ ಕಟ್ಟಡದ ಮೊದಲನೆಯ ಮಹಡಿಗೆ ಸ್ಥಳಾಂತರ ಮಾಡುತ್ತಾರೆ.ನಂತರ ವಾಣಿ ವಿಲಾಸಮೊಹಲ್ಲಾ ದ ಹೊಸ ಸುಸಜ್ಜಿತ ಕಟ್ಟಡಕ್ಕೆ ಆಕಾಶವಾಣಿಯನ್ನು ವರ್ಗಾಯಿಸಲಾಯಿತು. ಸ್ವಾತಂತ್ರ್ಯ ನಂತರ ೧೯೫೦ರಲ್ಲಿ ಸಂವಿಧಾನ ಅಳವಡಿಕೆಯೊಂದಿಗೆ ದೇಶದ ಎಲ್ಲ ಪ್ರಸಾರ ಸೇವೆಗಳನ್ನು ಕೇಂದ್ರ ಸರ್ಕಾರದ ಒಳಪಡಿಸಲಾಯಿತು. ಆಲ್ ಇಂಡಿಯಾ ರೇಡಿಯೊ ದೇಶದ ಏಕೈಕ ಪ್ರಸಾರ ವ್ಯವಸ್ಥೆಯಾಗಿ ಹೊರಹೊಮ್ಮಿತು. ಆಕಾಶವಾಣಿ ಮೈಸೂರು ಹಾಗೂ ಇನ್ನಿತರ ಖಾಸಗಿ ಕೇಂದ್ರಗಳನ್ನು ಆಲ್ ಇಂಡಿಯಾ ರೇಡಿಯೊನೊಂದಿಗೆ ವಿಲೀನಗೊಳಿಸಲಾಯಿತು.೧೯೫೦ರ ದಶಕದ ಪ್ರಾರಂಭದಲ್ಲಿ ಕರ್ನಾಟಕದಲ್ಲಿದ್ದ ಏಕೈಕ ಬಾನುಲಿ ಪ್ರಸಾರ ಕೇಂದ್ರವೆಂದರೆ ಆಕಾಶವಾಣಿ ಮೈಸೂರು ಮಾತ್ರ.
 
ಆಕಾಶವಾಣಿಯಲ್ಲಿ ತಮ್ಮದೇ ಕಾರ್ಯಕ್ರಮ ಕೇಳಿದ ಕುವೆಂಪು ಅವರು 'ಇದು ಆಕಾಶವಾಣಿಯಲ್ಲ, ಪಿಶಾಚವಾಣಿ' ಎಂದು ಹೇಳಿ ಎಲ್ಲರನ್ನೂ ನಗಿಸಿದ್ದರಂತೆ.ಹೀಗೆ ವಿದ್ವಾನ್ ಹೊಸಬೆಟ್ಟು ರಾಮರಾವ್‌ ಅವರ ೧೯೩೨ ರಲ್ಲಿ ಹೆಸರಿಲ್ಲದೆ ಪ್ರಕಟವಾದ ಪುಸ್ತಕದ ಹೆಸರಾದ " ಆಕಾಶವಾಣಿ" ಪದವನ್ನು ಮೈಸೂರು ಆಕಾಶವಾಣಿ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಲೇಖಕರೂ ಆಗಿದ್ದ ನಾ,ಕಸ್ತೂರಿ ಅವರು ಸೂಚಿಸಿದರು,ಇದನ್ನು ಡಾ.ಎಂ.ವಿ.ಗೋಪಾಲಸ್ವಾಮಿಯವರು ಅನುಮೋದಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿದರು.ಕೇಂದ್ರ ಸರಕಾರವು ಇದನ್ನು ೧೯೪೩ ರಲ್ಲಿ ಮಾನ್ಯ ಮಾಡಿ "ಮೈಸೂರು ಆಕಾಶವಾಣಿ "ಎಂದು ನಾಮಕರಣ ಮಾಡಿತು.ಮುಂದೆ "ಆಲ್ ಇಂಡಿಯಾ ರೇಡಿಯೋ"ಗೆ ಕೂಡ ೧೯೫೬ರಲ್ಲಿ ಅಧಿಕೃತವಾಗಿ ಆಕಾಶವಾಣಿ ಎಂದು ಹೆಸರಿಡಲಾಯಿತು. ನಮನ
ವಿಠಲ ವಿಹಾರ
ಆಕಾಶವಾಣಿ ರಾಮರಾಯರು.[ಬದಲಾಯಿಸಿ]
 
ರೇಡಿಯೊ ಎಂಬ ಒಂದು ಅದ್ಭುತವು ಜನತೆಯ ಮುಂದೆ ಬಂದಾಗ ಅದಕ್ಕೆ ‘ಆಕಾಶದಿಂದ ಬರುವ ವಾಣಿ’, ‘ಆಕಾಶವಾಣಿ ’ಎಂಬ ಹೆಸರಿನಿಂದ ಕರೆದು ಪೂರ್ತಿ ವಿವರಗಳನ್ನೊಳಗೊಂಡ ಪುಸ್ತಕವೊಂದು ೧೯೩೨ ಅಚ್ಚಾದಾಗ ವಿಸ್ಮಯ ಹಾಗೂ ಬೆರಗಿನಿಂದ ಜನತೆ ಅದನ್ನು ಸ್ವೀಕರಿಸಿದರು. ಇದನ್ನು ಬರೆದವರು "ಆಕಾಶವಾಣಿ ರಾಮರಾಯರು" ಎಂದೇ ಜನರಿಂದ ಕರೆಯಲ್ಪಡುತ್ತಿದ್ದ ಮಂಗಳೂರಿನ "ವಿದ್ವಾನ್ ಹೊಸಬೆಟ್ಟು ರಾಮರಾವ್‌"ರವರು.
 
ಆದರೆ ಪುಸ್ತಕದಲ್ಲಿ ಲೇಖನದಲ್ಲಿ ತಮ್ಮ ಹೆಸರನ್ನು ಬಯಲು ಮಾಡಲಿಲ್ಲ. ಕಾರಣ, ಸರಕಾರಿ ನೌಕರರಾಗಿದ್ದುಕೊಂಡು ಬ್ರಿಟಿಷ್ ಸರಕಾರದ ಮೇಲಿನ ಅಂಜಿಕೆ ಕಾರಣವಾಗಿತ್ತು. 1932ರಲ್ಲಿ ರಾಮರಾಯರು ಬರೆದ ಆಕಾಶವಾಣಿ ಪುಸ್ತಕ ೧೫ -೨೦ ಪುಟಗಳನ್ನೊಳಗೊಂಡಿದೆ. ಮುಖಪುಟದಲ್ಲಿ ಅರ್ಧಚಂದ್ರಾಕೃತಿಯಲ್ಲಿ ಆಕಾಶವಾಣಿ ಎಂದು ಮೇಲಿನ ಭಾಗದಲ್ಲಿ ಬರೆಯಲಾಗಿದೆ. ಸುತ್ತಲೂ ಕಪ್ಪು ಗೆರೆಗಳ ಬಾರ್ಡರ್ ನಾಲ್ಕೂ ಬದಿಗಳಲ್ಲದೇ "ಆಲ್ ಕೋಪಿರೈಟ್ ರಿಸರ್ವ್" ಎಂದು ಬರೆದಿದೆ.
 
೧೯೩೨ ರಲ್ಲಿ ರಾಮರಾಯರ ಪುಸ್ತಕ ಅಚ್ಚಾಗಿ ೧೯೪೩ ರ ಹೊತ್ತಿಗೆ ಬಹಳ ಸಮಯವೇ ಸಂದು ಹೋಗಿತ್ತು.ಪ್ರತಿಷ್ಠಿತ ಇಂಗ್ಲೀಷ್ ಪತ್ರಿಕೆಯೊಂದು ಹೀಗೆ ಹೇಳುತ್ತದೆ. the name akashavani was taken from an article by can unknown writer ಹೆಸರು ಹಾಕದೆ ಬರೆದ ರಾಮರಾಯರೇ ಆಕಾಶವಾಣಿ ಪದದ ಜನಕ ಎಂದು ಸ್ಪಷ್ಟವಾಗಿ ಹೇಳಿತು. ೧೯೪೧ ಹಾಗೂ ೧೯೪೫ ರಲ್ಲಿ ಮದ್ರಾಸು ವಿಶ್ವವಿದ್ಯಾಲಯದ ಪಠ್ಯಪುಸ್ತಕ ಸಮಿತಿಯು ಇದೇ ಆಕಾಶವಾಣಿ ಲೇಖನವನ್ನು ಕನ್ನಡ ಸಾಹಿತ್ಯ ಕೃತಿಗಳು ಎಂಬ ಶಾಲಾ ಪಠ್ಯಪುಸ್ತಕದಲ್ಲಿ ರಾಮರಾಯರ ಹೆಸರು ಹುದ್ದೆಗಳೊಂದಿಗೆ ಪ್ರಕಟಿಸಿತು. ಇದರ ಪ್ರತಿಯು ಅವಗಾಹನೆಗೆ ಲಭ್ಯವಿರುತ್ತದೆ.
 
1945ರಲ್ಲಿ ಈ ಲೇಖನ ರಾಮರಾಯರ ಹೆಸರು ಹುದ್ದೆಗಳೊಂದಿಗೆ (ಹೊಸಬೆಟ್ಟು ರಾಮರಾಯರು, ಜಿಲ್ಲಾ ಶಿಕ್ಷಣಾಧಿಕಾರಿ) ಕನ್ನಡದ ಸಾಹಿತ್ಯ ಕೃತಿಗಳು ಎಂಬ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರಿಸಲು ಮದ್ರಾಸಿನ ಪಠ್ಯಪುಸ್ತಕ ಸಮಿತಿಯಿಂದ ಶಿಫಾರಸು ದೊರಕಿತು. ಹೊಸಬೆಟ್ಟು ರಾಮರಾಯರಿಂದ ಸೃಷ್ಟಿಗೊಂಡ ಈ ಹೆಸರು ರೇಡಿಯೊದ ಜೊತೆಗೆ ಖಾಯಂ ಆಗಿ ಉಪಯೋಗ ವಾಗಲು ತೊಡಗಿದ್ದಲ್ಲದೇ ಸರ್ವರಿಗೂ ಈ ಹೊಸ ಹೆಸರು ಪರಿಚಯವಾಯಿತು. ಮುಂದೆ ಇದೇ ಪದವನ್ನು ಮೈಸೂರಿನಲ್ಲಿ ಗೋಪಾಲಸ್ವಾಮಿಯವರ ರೇಡಿಯೊ ಕೇಂದ್ರಕ್ಕೆ ೧೯೪೩ ರಲ್ಲಿ ನಾ.ಕಸ್ತೂರಿಯವರು ಸೂಚಿಸಿದರು.೧೯೩೨ ರಲ್ಲಿ ಜನಿಸಿದ ಆಕಾಶವಾಣಿ ಪದವನ್ನು ೧೧ ವರ್ಷದ ಬಳಿಕ ಮೈಸೂರಿನ ಓರ್ವರು ಪುಸ್ತಕದ ಮರು ಮುದ್ರಣ ಮಾಡಿದರು. ಈ ಪುಸ್ತಕದ ಹಿಂಭಾಗ ಅಥವಾ ಮುಂಭಾಗದಲ್ಲಿ ರಾಮರಾಯರ ಹೆಸರು ಇತ್ತು. ಈ ಮೂಲಕ ೧೯೪೧ -೧೯೪೩ ರ ವರ್ಷಗಳ ನಂತರ ೧೯೩೨ ರ ಅಜ್ಞಾತ ಜನಕ ಯಾರೆಂಬ ಸತ್ಯವು ಹೊರಗೆ ಬಿತ್ತು. ೧೯೩೨ ರ ಕಿರುಪುಸ್ತಕದ ಮುಖಪುಟವನ್ನು ಆಕರ್ಷಕವಾಗಿ ಮುದ್ರಿಸಲಾಗಿತ್ತು. ನಾಲ್ಕು ಕಡೆಗಳ ಬದಿಯಲ್ಲಿ ಕಪ್ಪುರೇಖೆಗಳು. ಮೇಲ್ಬಾಗದಲ್ಲಿ ದೊಡ್ಡ ದೊಡ್ಡ ಅಕ್ಷರಗಳಲ್ಲಿ , ಅರ್ಧಚಂದ್ರಾಕೃತಿಯಲ್ಲಿ ಆಕಾಶವಾಣಿ ಎಂದು ‘ಆ ’ಮತ್ತು ‘ಣಿ’ ದೊಡ್ಡದಾಗಿ ಒಳಗಿನ ಅಕ್ಷರಗಳು ಕಿರಿದಾಗುತ್ತಾ ಬಲ ಭಾಗದಲ್ಲಿ ಕೆಳಗಿನಿಂದ ಒಂದು ರೇಡಿಯೊದ ಚಿತ್ರಣವನ್ನು ಕೈಯಲ್ಲಿ ಬಿಡಿಸಲಾಗಿತ್ತು."ನಮನ"
 
ನೋಡಿ[ಬದಲಾಯಿಸಿ]
 
ರೇಡಿಯೋ ಕಲಾವಿದರು:ಡಾ. ಕೆ. ವಾಗೀಶ್‌ ಹಿರಿಯ ಸಂಗೀತ ವಿದ್ವಾಂಸರ ಸಮ್ಮೇಳನದ ಅಧ್ಯಕ್ಷರು.:1980ರಲ್ಲಿ ದೆಹಲಿ ಆಕಾಶವಾಣಿ ಸೇರಿದೆ. ಅಲ್ಲಿ 22 ವರ್ಷ ಕೆಲಸ ಮಾಡಿದೆ. ಬಳಿಕ 1980ರಿಂದ 2002ರವರೆಗೆ ತಿರುಚ್ಚಿ ಆಕಾಶವಾಣಿ ನಿಲಯ ನಿರ್ದೇಶಕನಾದೆ. ಅಲ್ಲಿಂದ ಮತ್ತೆ ದೆಹಲಿಗೆ ವರ್ಗವಾಗಿ ಆಕಾಶವಾಣಿಯ ಉಪ ಮಹಾನಿರ್ದೇಶಕ (ಡೆಪ್ಯುಟಿ ಡೈರೆಕ್ಟರ್‌ ಜನರಲ್‌) ನಾದೆ. ಸುಮಾರು 34 ವರ್ಷ ಸೇವೆ ಸಲ್ಲಿಸಿದೆ. ಸದ್ಯ ಆಕಾಶವಾಣಿಯ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ.:[[೧]]
 
ಉಲ್ಲೇಖ[ಬದಲಾಯಿಸಿ]
 
ವರ್ಗಗಳು: ರೇಡಿಯೋ ದೂರಸಂಪರ್ಕ
 
ಸಂಚರಣೆ ಪಟ್ಟಿ
 
ಲಾಗಿನ್ ಆಗಿಲ್ಲ ಈ ಐ.ಪಿ ಗೆ ಮಾತನಾಡಿ ಕಾಣಿಕೆಗಳು ಹೊಸ ಖಾತೆ ತೆರೆಯಿರಿ ಲಾಗ್ ಇನ್
 
ಲೇಖನ
 
ಚರ್ಚೆ
 
ಓದು
 
ಸಂಪಾದಿಸಿ
 
ಇತಿಹಾಸವನ್ನು ನೋಡಿ
 
ಹುಡುಕು
 
ಮುಖ್ಯ ಪುಟ ಸಮುದಾಯ ಪುಟ ಪ್ರಚಲಿತ ಇತ್ತೀಚೆಗಿನ ಬದಲಾವಣೆಗಳು ಯಾವುದೋ ಒಂದು ಪುಟ ಸಹಾಯ ಅರಳಿ ಕಟ್ಟೆ ಕೊಡು
 
ಮುದ್ರಿಸು/ರಫ್ತು ಮಾಡು
 
ಪುಸ್ತಕವನ್ನು ಸೃಷ್ಟಿಸಿ PDF ಎಂದು ನಕಲಿಳಿಸಿ ಪ್ರಿಂಟ್ ಆವೃತ್ತಿ
 
ಇತರೆ ಯೋಜನೆಗಳಲ್ಲಿ
 
Wikimedia Commons
 
ಉಪಕರಣ
 
ಇಲ್ಲಿಗೆ ಯಾವ ಸಂಪರ್ಕ ಕೂಡುತ್ತದೆ ಸಂಬಂಧಪಟ್ಟ ಬದಲಾವಣೆಗಳು ಫೈಲ್ ಮೇಲಕ್ಕೆರಿಸಿ ವಿಶೇಷ ಪುಟಗಳು ಸ್ಥಿರ ಕೊಂಡಿ ಪುಟದ ಮಾಹಿತಿ Wikidata ವಸ್ತು ಈ ಪುಟವನ್ನು ಉಲ್ಲೇಖಿಸಿ Short URL
 
ಇತರ ಭಾಷೆಗಳು
 
বাংলা English हिन्दी മലയാളം नेपाली ਪੰਜਾਬੀ தமிழ் తెలుగు اردو ೧೨೦ more ಕೊಂಡಿಗಳನ್ನು ಸಂಪಾದಿಸಿ
 
ಈ ಪುಟವನ್ನು ಕೊನೆಯಾಗಿ ೧೧:೫೯, ೯ ಅಕ್ಟೋಬರ್ ೨೦೧೬ ರಂದು ಬದಲಾಯಿಸಲಾಗಿತ್ತು. ಪಠ್ಯವು Creative Commons Attribution-ShareAlike License ನಡಿ ಲಭ್ಯವಿದೆ; ಮತ್ತಷ್ಟು ಷರತ್ತುಗಳು ಅನ್ವಯಿಸಬಹುದು. ಹೆಚ್ಚಿನ ವಿವರಗಳಿಗೆ ಬಳಕೆಯ ಷರತ್ತುಗಳು ನೋಡಿ. ಖಾಸಗಿ ಮಾಹಿತಿಯ ಬಗ್ಗೆ ನಿಲುವು ಕನ್ನಡ ವಿಕಿಪೀಡಿಯ ಬಗ್ಗೆ ಹಕ್ಕು ನಿರಾಕರಣೆಗಳು ಡೆವೆಲಪರ್‌ಗಳು Cookie statement ಮೊಬೈಲ್ ವೀಕ್ಷಣೆ Wikimedia Foundation Powered by MediaWiki
 
[[http://www.prajavani.net/news/article/2016/10/09/443930.html]]
==ಉಲ್ಲೇಖ==
 
"https://kn.wikipedia.org/wiki/ರೇಡಿಯೋ" ಇಂದ ಪಡೆಯಲ್ಪಟ್ಟಿದೆ