ಗಂಗೂಬಾಯಿ ಹಾನಗಲ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧೯ ನೇ ಸಾಲು:
(೧೯೧೩, ಮಾರ್ಚ್, ೫-೨೦೦೯, ಜುಲೈ, ೨೧)
 
'''ಗಂಗೂಬಾಯಿ ಹಾನಗಲ್''' ಅವರು ಹುಟ್ಟಿದ್ದು [[ಹಾನಗಲ್|ಹಾನಗಲ್ಲಿನಲ್ಲಿ]], [[೧೯೧೩]]ರ [[ಮಾರ್ಚ್ ೫]]ರಂದು. ಆದರೆ ಬಾಲ್ಯದಿಂದಲೆ ಬೆಳೆದಿದ್ದೆಲ್ಲಬೆಳೆದಿದ್ದ [[ಧಾರವಾಡ]]ದಲ್ಲಿ. ಇವರ ತಂದೆ ಚಿಕ್ಕೂರಾವ್ ನಾಡಗೀರ, ತಾಯಿ ಅಂಬಾಬಾಯಿ. [[ನರಗುಂದ]]ದಲ್ಲಿ ವಾಸವಾಗಿದ್ದ ಇವರ ಅಜ್ಜಿಯ ಅಜ್ಜ, ನರಗುಂದ ಬಾಬಾಸಾಹೇಬರ ಆಳ್ವಿಕೆಯಲ್ಲಿ ಕೋರ್ಟಿನ [[ಮುನ್ಸೀಫ]]ರಾಗಿದ್ದರು. [[ಬ್ರಿಟಿಷ್ ಸಾಮ್ರಾಜ್ಯ|ಬ್ರಿಟಿಷರ]] ವಿರುದ್ಧ ಬಾಬಾಸಾಹೇಬ ಸಮರ ಸಾರಿದಾಗ, ಗಂಗೂಬಾಯಿಯವರ ಅಜ್ಜಿಯ ಅಜ್ಜಿ ಬ್ರಿಟಿಷ್ ಸೈನಿಕರ ಕೈಸೆರೆಯಿಂದ ತಪ್ಪಿಸಿಕೊಂಡು, ಹಾನಗಲ್ಲಿಗೆ ಓಡಿ ಬಂದು ನೆಲೆಸಿದರು. ಅಲ್ಲಿಂದ ಇವರ ಮನೆ ಹೆಸರು ಹಾನಗಲ್ ಆಯಿತು.
 
'ಗಂಗೂಬಾಯಿ ಹಾನಗಲ್, ತಮ್ಮ ಬದುಕಿನಲ್ಲಿ ಎರಡುಬಾರಿ ಹೆಸರನ್ನು ಬದಲಾಯಿಸಿಕೊಂಡರು. ಮೂಲ ಮೂಲಹೆಸರುಹೆಸರು, 'ಗಾಂಧಾರಿ ಹಾನಗಲ್,' ಎಂದಿತ್ತು. ಸಂಗೀತವಲಯದಲ್ಲಿ ಪ್ರಸಿದ್ಧರಾದಂತೆ, ಅವರ ಪರಿಚಯ 'ಗಂಗೂಬಾಯಿ ಹುಬ್ಳೀಕರ,' ಎಂದಾಯಿತು. ೧೯೩೬ ರಲ್ಲಿ ಅವರ ಸಂಗೀತ ಜೀವನದಲ್ಲಿ ಅತ್ಯಮೂಲ್ಯವಾದ ಸಮಯವಾಗಿದ್ದು ಅವರನ್ನು ಕೀರ್ತಿ ಶಿಖರಕ್ಕೆ ಕೊಂಡೊಯ್ಯುವ ಮಾರ್ಗವಾಯಿತು. ಅದೇ ವರ್ಷದಲ್ಲಿ 'ಮಿಯಾ ಕೀ ಮಲ್ಹಾರ್, ' ರಾಗವನ್ನು ಹಾಡಿದಾಗ, ಆಕಾಶವಾಣಿಯಲ್ಲಿ ಅದನ್ನು ಪ್ರಸಾರಮಾಡುವಸಮಯದಲ್ಲಿಪ್ರಸಾರಮಾಡುವ ಸಮಯದಲ್ಲಿ ಬಾಯಿಯವರ ಸೋದರಮಾವ ಕೃಷ್ಣಪ್ಪನವರ ಇಚ್ಛೆಯಂತೆ, 'ಗಂಗೂಬಾಯಿ ಹಾನಗಲ್,' ಎಂದು ಘೋಶಿಸಲಾಯಿತು. 'ಹಾನಗಲ್' ಎನ್ನುವುದು ಬಾಯಿಯವರ ಪೂರ್ವಜರ ಊರು, ಅದನ್ನು ಖ್ಯಾತಿಗೊಳಿಸುವ ಸದಭಿಲಾಷೆಯಿಂದ ತಮ್ಮ ಸಮ್ಮತಿಯನ್ನು ನೀಡಿದರು.
 
'ಗಂಗೂಬಾಯಿ ಹಾನಗಲ್, ತಮ್ಮ ಬದುಕಿನಲ್ಲಿ ಎರಡುಬಾರಿ ಹೆಸರನ್ನು ಬದಲಾಯಿಸಿಕೊಂಡರು. ಮೂಲಹೆಸರು, 'ಗಾಂಧಾರಿ ಹಾನಗಲ್,' ಎಂದಿತ್ತು. ಸಂಗೀತವಲಯದಲ್ಲಿ ಪ್ರಸಿದ್ಧರಾದಂತೆ, ಅವರ ಪರಿಚಯ 'ಗಂಗೂಬಾಯಿ ಹುಬ್ಳೀಕರ,' ಎಂದಾಯಿತು. ೧೯೩೬ ರಲ್ಲಿ ಅವರ ಸಂಗೀತ ಜೀವನದಲ್ಲಿ ಅತ್ಯಮೂಲ್ಯವಾದ ಸಮಯವಾಗಿದ್ದು ಅವರನ್ನು ಕೀರ್ತಿ ಶಿಖರಕ್ಕೆ ಕೊಂಡೊಯ್ಯುವ ಮಾರ್ಗವಾಯಿತು. ಅದೇ ವರ್ಷದಲ್ಲಿ 'ಮಿಯಾ ಕೀ ಮಲ್ಹಾರ್, ' ರಾಗವನ್ನು ಹಾಡಿದಾಗ, ಆಕಾಶವಾಣಿಯಲ್ಲಿ ಅದನ್ನು ಪ್ರಸಾರಮಾಡುವಸಮಯದಲ್ಲಿ ಬಾಯಿಯವರ ಸೋದರಮಾವ ಕೃಷ್ಣಪ್ಪನವರ ಇಚ್ಛೆಯಂತೆ, 'ಗಂಗೂಬಾಯಿ ಹಾನಗಲ್,' ಎಂದು ಘೋಶಿಸಲಾಯಿತು. 'ಹಾನಗಲ್' ಎನ್ನುವುದು ಬಾಯಿಯವರ ಪೂರ್ವಜರ ಊರು, ಅದನ್ನು ಖ್ಯಾತಿಗೊಳಿಸುವ ಸದಭಿಲಾಷೆಯಿಂದ ತಮ್ಮ ಸಮ್ಮತಿಯನ್ನು ನೀಡಿದರು.
== ಬಾಲ್ಯ, ಶಿಕ್ಷಣ ==
ಗಂಗೂಬಾಯಿಯವರ ಪ್ರಾಥಮಿಕ ಶಿಕ್ಷಣ [[ಧಾರವಾಡ]]ದಲ್ಲಿ [[ಆಲೂರು ವೆಂಕಟರಾಯರು]] ಸ್ಥಾಪಿಸಿದ ರಾಷ್ಟ್ರೀಯ ಶಾಲೆಯಲ್ಲಿ ಐದನೆಯ ಇಯತ್ತೆಯವರೆಗೆ ಆಯಿತು. ಹೀಗಾಗಿ ಸರಕಾರಿ ಶಾಲೆಗಳಲ್ಲಿಯ ವಿದ್ಯಾರ್ಥಿಗಳು “ದೇವಾರೂ ನಮ್ಮ ಈ ಧೀರೋದಾತ್ತಾವರಾದ ರಕ್ಷಿಸಲಿ ದೊರೆಗಳನು” ಎನ್ನುವ ಪ್ರಾರ್ಥನೆ ಹೇಳುವಾಗ ರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳಾದ ತಾವು “ಮಾತೃಭೂಮಿ ನಿನ್ನ ಚರಣಸೇವೆಯನ್ನು ಮಾಡುವಾ” ಹಾಗುಹಾಗೂ “ವಂದೇ ಮಾತರಂ” ಹಾಡುತ್ತಿದ್ದೆವೆಂದು ಗಂಗೂಬಾಯಿಯವರು ಹೇಳುತ್ತಿರುತ್ತಾರೆ. [[೧೯೨೪]]ರಲ್ಲಿ [[ಬೆಳಗಾವಿ]]ಯಲ್ಲಿ [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಕಾಂಗ್ರೆಸ್]] ಅಧಿವೇಶನ ನಡೆದಾಗ, ಗಂಗೂಬಾಯಿಯವರು [[ಮಹಾತ್ಮ ಗಾಂಧಿ|ಮಹಾತ್ಮಾ ಗಾಂಧೀಜಿ]]ಯವರೆದುರಿಗೆ “ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ” ಎಂದು ಸ್ವಾಗತಗೀತೆಯನ್ನು ಹಾಡಿ ಗಾಂಧೀಜಿಯವರ ಹಾಗೂ ಸಭಿಕರ ಮೆಚ್ಚುಗೆ ಗಳಿಸಿದ್ದರು.
 
== ಸಂಗೀತ ಶಿಕ್ಷಣ ==
ಗಂಗೂಬಾಯಿಯವರ ತಾಯಿ ಅಂಬಾಬಾಯಿಯವರು ಸ್ವತಃ [[ಕರ್ನಾಟಕ ಸಂಗೀತ]]ದ ಗಾಯಕಿ. [[ಹಿಂದುಸ್ತಾನಿ ಸಂಗೀತ]] ಗಾಯಕರಾದ ಹೀರಾಬಾಯಿ ಬಡೋದೆಕರ, [[ಅಬ್ದುಲ್ ಕರೀಮ ಖಾನ]]ರು [[ಧಾರವಾಡ]], [[ಹುಬ್ಬಳ್ಳಿ]]ಗಳಿಗೆ ಬಂದಾಗಲೊಮ್ಮೆ ಅಂಬಾಬಾಯಿಯವರ ಮನೆಗೆ ಹೋಗಿ ಅವರ ಹಾಡುಗಾರಿಕೆ ಕೇಳುತ್ತಿದ್ದರು. ಬಾಲಿಕೆ ಗಂಗೂಬಾಯಿಯ ಹಾಡುಗಾರಿಕೆಯನ್ನೂ ಅವರು ಮೆಚ್ಚಿದ್ದರು. ಇವೆಲ್ಲ ಕಾರಣವಾಗಿ ಅಂಬಾಬಾಯಿಯವರಿಗೆ ತಮ್ಮ ಮಗಳಿಗೆ [[ಹಿಂದುಸ್ತಾನಿ ಸಂಗೀತ]][ [http://en.wikipedia.org/wiki/Hindustani_classical_music] ಕಲಿಸುವ ಆಸೆಯಿತ್ತು. ಈ ಕಾರಣದಿಂದ ಮನೆಯನ್ನು [[ಧಾರವಾಡ]]ದಿಂದ [[ಹುಬ್ಬಳ್ಳಿ]]ಗೆ ಸ್ಥಳಾಂತರಿಸಿದರು. ಮೊದಲಲ್ಲಿ ದತ್ತೋಪಂತ ದೇಸಾಯಿ, ಕೃಷ್ಣಾಚಾರ್ಯ ಹುಲಗೂರ ಇವರಿಂದ ಸಂಗೀತ ಶಿಕ್ಷಣ ಪಡೆದ ಗಂಗೂಬಾಯಿ, ಬಳಿಕ ಸುಪ್ರಸಿದ್ಧ ಕಿರಾನಾ ಘರಾನಾ ಗಾಯಕರಾದ [[ಸವಾಯಿ ಗಂಧರ್ವ]] ಯಾನೆ ರಾಮಭಾವು ಕುಂದಗೋಳಕರ ಅವರ ಶಿಷ್ಯೆಯಾದರು. ತನ್ನ ಕರ್ನಾಟಕ ಸಂಗೀತ ಪದ್ಧತಿಯು ಮಗಳ ಮೇಲೆ ವಿಪರೀತ ಪರಿಣಾಮ ಬೀರಬಾರದೆನ್ನುವ ಉದ್ದೇಶದಿಂದ ಅಂಬಾಬಾಯಿಯವರು ಹಾಡುವದನ್ನೇ ನಿಲ್ಲಿಸಿಬಿಟ್ಟರು! ಇಂತಹ ತ್ಯಾಗಮಯಿ ತಾಯಿ [[೧೯೩೨]]ರಲ್ಲಿ ತೀರಿಕೊಂಡದ್ದು ಗಂಗೂಬಾಯಿಯವರಿಗೆ ತೀವ್ರ ಆಘಾತದ ಘಟನೆಯಾಯಿತು. ವರ್ಷಾರು ತಿಂಗಳಲ್ಲಿ ತಂದೆ ಚಿಕ್ಕೂರಾಯರೂ ಸಹ ನಿಧನರಾದರು.
'''== ಸಂಗೀತ ಯಾತ್ರೆ ==
[[೧೯೨೯]]ರಲ್ಲಿ [[ಹುಬ್ಬಳ್ಳಿ]]ಯ ಗುರುನಾಥ ಕೌಲಗಿ ಎನ್ನುವ ವಕೀಲರು ಗಂಗೂಬಾಯಿಯವರ ಕೈ ಹಿಡಿದರು. [[೧೯೩೨]]ರಲ್ಲಿ ಎಚ್.ಎಮ್.ವಿ. ಗ್ರಾಮಾಫೋನ ಕಂಪನಿಯವರ ಆಹ್ವಾನದ ಮೇರೆಗೆ ಗಂಗೂಬಾಯಿಯವರು
[[ಮುಂಬಯಿ]]ಗೆ ತೆರಳಿದರು. ಅಲ್ಲಿಂದ ಗಂಗೂಬಾಯಿಯವರ ಸಂಗೀತ ದಿಗ್ವಿಜಯ ಪ್ರಾರಂಭವಾಯಿತು. [[ಮುಂಬಯಿ]]ಯಲ್ಲಿ ಕಚೇರಿಗಳನ್ನು ನೀಡಿದ ಗಂಗೂಬಾಯಿಯವರು [[ಮುಂಬಯಿ]] ಆಕಾಶವಾಣಿಯಲ್ಲಿ ಸಹ ಹಾಡತೊಡಗಿದರು. ಎಚ್.ಎಮ್.ವಿ. ಕಂಪನಿಯವರು ಗಂಗೂಬಾಯಿಯವರ ಮೊದಲ ಗಾನಮುದ್ರಿಕೆಯಲ್ಲಿ ಅವರ ಹೆಸರನ್ನು ಗಂಗೂಬಾಯಿ ಹುಬಳೀಕರ ಎಂದು ಪ್ರಕಟಿಸಿದ್ದರು. ಅದಕ್ಕೆ ಆಕ್ಷೇಪಿಸಿದಾಗ ಆ ಬಳಿಕ ಗಾಂಧಾರಿ ಹಾನಗಲ್ ಎಂದು ಹೆಸರು ನೀಡಿದ್ದರು. ಆದರೆ [[ಮುಂಬಯಿ]] ಆಕಾಶವಾಣಿಯಲ್ಲಿ ಮಾತ್ರ ಗಂಗೂಬಾಯಿ ಹಾನಗಲ್ ಎಂದು ಸರಿಯಾಗಿ ಉದ್ಘೋಷಿಸಲಾಯಿತು.
 
ಗಂಗೂಬಾಯಿಯವರ ಹಾಡುಗಾರಿಕೆಯನ್ನು ಆ ಕಾಲದ ಎಲ್ಲಾ ಉದ್ದಾಮ ಸಂಗೀತಕಾರರಾದ [[ಬಡೆ ಗುಲಾಮ ಅಲಿ ಖಾನ]], ಉಸ್ತಾದ ಫಯಾಜ ಖಾನ, ಪಂಡಿತ ಓಂಕಾರನಾಥ, ಶಹನಾಯಿ ಮಾಂತ್ರಿಕ [[ಉಸ್ತಾದ್ ಬಿಸ್ಮಿಲ್ಲಾ ಖಾನ್|ಬಿಸ್ಮಿಲ್ಲಾ ಖಾನ]] ಮೊದಲಾದವರು ಮೆಚ್ಚಿಕೊಂಡರು. ಖ್ಯಾತ ಚಿತ್ರನಟಿ ನರ್ಗೀಸಳ ತಾಯಿಯಾದ ಜದ್ದನಬಾಯಿಯವರ ಪ್ರೋತ್ಸಾಹದಿಂದಲೇ ಗಂಗೂಬಾಯಿಯವರು [[ಕೊಲಕತ್ತಾ]]ದಲ್ಲಿಯ ಅಖಿಲ ಭಾರತ ಸಂಗೀತ ಸಮ್ಮೇಲನಕ್ಕೆ ಹೋಗಿ ಬಂದರು. ಗಾನಮುದ್ರಿಕೆ ಹಾಗುಹಾಗೂ ಆಕಾಶವಾಣಿ ಕಾರ್ಯಕ್ರಮಗಳಲ್ಲದೆ, ಗಂಗೂಬಾಯಿಯವರು [[ಮುಂಬಯಿ]]ಯಲ್ಲಿಯ ಅನೇಕ ಸಂಗೀತ ಕಚೇರಿಗಳಲ್ಲಿ ಸಹ ಭಾಗವಹಿಸತೊಡಗಿದರು.
'''
 
== ಜೀವನ ಯಾತ್ರೆ ==
ಸಂಗೀತಯಾತ್ರೆ ಉತ್ಸಾಹದಿಂದಲೆಉತ್ಸಾಹದಿಂದಲೇ ಸಾಗಿತಾದರೂ, ಜೀವನಯಾತ್ರೆಯಲ್ಲಿ ಅನೇಕ ಎಡರು ತೊಡರುಗಳು ಎದುರಾದವು. ಗಂಗೂಬಾಯಿಯವರ ಮೂವರು ಮಕ್ಕಳಾದ ಕೃಷ್ಣಾ, ಬಾಬೂ, ನಾರಾಯಣ ಇವರು ಬೆಳೆಯತೊಡಗಿದ್ದರು. ಈ ನಡುವೆ ಗಂಗೂಬಾಯಿಯವರ ಪತಿ ಶ್ರೀ ಗುರುನಾಥ ಕೌಲಗಿಯವರು ವ್ಯವಹಾರದಲ್ಲಿ ನಷ್ಟ ಮಾಡಿಕೊಂಡಿದ್ದರಿಂದ [[ಹುಬ್ಬಳ್ಳಿ]]ಯಲ್ಲಿ ತೆಗೆದುಕೊಂಡ ಮನೆಯನ್ನು ಒತ್ತೆ ಹಾಕಿದ್ದು, ಸಾಲ ಮರಳಿಸಲಾಗದೆ ಮನೆಯು ಲಿಲಾವಿಗೆ ಬಂದಿತು. ಸುದೈವದಿಂದ ಲಿಲಾವಿನಲ್ಲಿ ಮನೆಯನ್ನು ತೆಗೆದುಕೊಂಡ ಉಪೇಂದ್ರ ನಾಯಕ ಎನ್ನುವ ಸದ್ಗೃಹಸ್ಥರು ಇವರಿಗೇ ಅದನ್ನು ಮರಳಿಸಿ, ಲಿಲಾವಿನ ಹಣವನ್ನು ಅನುಕೂಲತೆಯ ಮೇರೆಗೆ ಕೊಡಲು ಹೇಳಿದರು. ಇದೇ ಸಮಯದಲ್ಲಿ ಗುರುನಾಥ ಕೌಲಗಿಯವರಿಗೆ ತೀವ್ರ ಅಸ್ವಾಸ್ಥ್ಯವಾಯಿತು. ಗಂಗೂಬಾಯಿಯವರು ಒಂದು ಸಂಗೀತ ಕಾರ್ಯಕ್ರಮಕ್ಕಾಗಿ [[ದಿಲ್ಲಿ]]ಗೆ ಹೋದಾಗಲೆಹೋದಾಗಲೇ, ಶ್ರೀ ಗುರುನಾಥ ಕೌಲಗಿಯವರು [[೧೯೬೬]] [[ಮಾರ್ಚ್|ಮಾರ್ಚ]] ೬ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
 
== ಜೈತ್ರಯಾತ್ರೆ ==
ಗಂಗೂಬಾಯಿಯವರು ಸಂಗೀತಕಚೇರಿಗಳಿಗಾಗಿಸಂಗೀತ ಕಚೇರಿಗಳಿಗಾಗಿ ಭಾರತದ ಉದ್ದಗಲದಲ್ಲೆಲ್ಲ ಸುತ್ತಿದ್ದಾರೆ. ಎಲ್ಲೆಡೆಗೂ ಶ್ರೋತೃಗಳ ಮನಸ್ಸನ್ನು ಗೆದ್ದಿದ್ದಾರೆ. ಅಲ್ಲದೆ [[೧೯೫೮]]ರಲ್ಲಿ [[ನೇಪಾಳ]],[[೧೯೬೧]]ರಲ್ಲಿ [[ಪಾಕಿಸ್ತಾನ]], [[೧೯೭೯]]ರಲ್ಲಿ [[ಅಮೆರಿಕ|ಅಮೇರಿಕಾ]] ಮತ್ತು [[ಕೆನಡಾ]] ಹಾಗು [[೧೯೮೪]]ರಲ್ಲಿ [[ಜರ್ಮನಿ]] ಮತ್ತು [[ಫ್ರಾನ್ಸ್]] ದೇಶಗಳಿಗೂ ಪ್ರಯಾಣಿಸಿ ಭಾರತೀಯ ಸಂಗೀತದ ಸವಿಯನ್ನು ಅಲ್ಲೆಲ್ಲ ಉಣಬಡಿಸಿದ್ದಾರೆ.ಗುರುಗಳಾದ [[ಸವಾಯಿ ಗಂಧರ್ವ]]ರ ಹೆಸರಿನಲ್ಲಿ ಕುಂದಗೋಳದಲ್ಲಿ ಪ್ರತಿವರ್ಷ "ಸಂಗೀತೋತ್ಸವ" ನಡೆಸುತ್ತಿದ್ದಾರೆ.
== ಶಿಷ್ಯವೃಂದ ==
ಗಂಗೂಬಾಯಿಯವರು ತಮ್ಮ ಸಂಗೀತವನ್ನು ಶಿಷ್ಯರಿಗೆ ಧಾರೆ ಎರೆದು ಬೆಳೆಸಿದ್ದಾರೆ. ಅವರಲ್ಲಿ ಅವರ ಮಗಳೆ ಆದ ಕೃಷ್ಣಾಳನ್ನು ಹಾಗು ಸೀತಾ ಹಿರೆಬೆಟ್ಟ, ಸುಲಭಾ ನೀರಲಗಿ ಮತ್ತು ನಾಗನಾಥ ಒಡೆಯರ ಇವರನ್ನು ಹೆಸರಿಸಬಹುದು.
Line ೮೪ ⟶ ೮೬:
ಗಂಗೂಬಾಯಿಯವರು ಕರ್ನಾಟಕ ವಿಧಾನ ಪರಿಷತ್ತಿಗೆ ನಾಮಕರಣಗೊಂಡ ಸದಸ್ಯೆಯಾಗಿದ್ದರು.
== ಜೀವನ ದರ್ಶನ ==
ಗಂಗೂಬಾಯಿಯವರು ರಾಷ್ಟ್ರೀಯ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ವರಕವಿ [[ದ ರಾ ಬೇಂದ್ರೆ|ದ.ರಾ.ಬೇಂದ್ರೆ]]ಯವರು ಇವರ ಗುರುಗಳಾಗಿದ್ದರು. ಈ ಗುರು ಶಿಷ್ಯ ಸಂಬಂಧ ಬೇಂದ್ರೆಯವರ ಜೀವಿತದ ಕೊನೆಯವರೆಗೂ ಮುಂದುವರಿದಿತ್ತು. ಬೇಂದ್ರೆಯವರ ಒಂದು ಗೀತವನ್ನೆ ಗಂಗೂಬಾಯಿ ಹಾನಗಲ್ ಅವರ ಜೀವನ ದರ್ಶನವೆಂದು ಹೇಳಬಹುದು:
 
“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ ನೀಡುವೆನು ರಸಿಕ ನಿನಗೆ
Line ೯೭ ⟶ ೯೯:
 
=='ಸಂಗೀತ ವಿದ್ಯಾಲಯ ಸ್ಥಾಪನೆಯ ಆಸೆ'==
ಪ್ರಾಥಮಿಕ ಶಿಕ್ಷಣದ ಪಠ್ಯಪುಸ್ತಕಗಳಲ್ಲಿ ಶಾಸ್ತ್ರೀಯ ಸಂಗೀತದ ಪಾಠಕ್ರಮವನ್ನು ಆಳವಡಿಸಿ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುವ ಆಸೆಯಿಂದ ಸಮಾರಂಭಗಳಲ್ಲಿ ಮುಖ್ಯಮಂತ್ರಿ, ಶಿಕ್ಷಣ ಸಚಿವರು, ಮತ್ತಿತರ ಅಧಿಕಾರಿಗಳಮೇಲೆ ಒತ್ತಡ ಹೇರುತ್ತಿದ್ದರು, ಹಾಗೂ,ತಮ್ಮ ನಿಲವನ್ನು ಪ್ರತಿಪಾದಿಸುತ್ತಿದ್ದರು. ಅದರಂತೆ ಕರ್ನಾಟಕ ಸರ್ಕಾರ ವಚನನೀಡಿದ್ದು,' 'ಉಣಕಲ್' ಹತ್ತಿರ, ಗುರುಕುಲದ ಮಾದರಿಯ ಸಂಗೀತ ವಿದ್ಯಾಲಯವನ್ನು ನಿರ್ಮಿಸುವ ಕಾರ್ಯ ಆರಂಭವಾಗಿದೆ. ಆದರೆ, ತಮ್ಮ ಹೆಸರಿನಲ್ಲಿ ಕಟ್ಟಲಾಗುತ್ತಿರುವ ಶಾಲೆಯ ವಿದ್ಯಾರ್ಥಿಗಳನ್ನು ತಾವು ತಮ್ಮ ಕಣ್ಣೆದುರಿಗೇ ಆಶೀರ್ವದಿಸುವ ಮಹದಾಶೆ, ಅವರ ಜೀವಿತಸಮಯದಲ್ಲಿ ಕನಸಾಗಿಯೇ ಉಳಿಯಿತು.
 
{{commons category|Gangubai Hangal}}
"https://kn.wikipedia.org/wiki/ಗಂಗೂಬಾಯಿ_ಹಾನಗಲ್" ಇಂದ ಪಡೆಯಲ್ಪಟ್ಟಿದೆ