ಆದ್ಯ ರಾಮಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು Wikipedia python library
೪ ನೇ ಸಾಲು:
ಇವರ ವಿದ್ವತ್ತಿಗೆ ಮೆಚ್ಚಿ ಪೇಶವೆ ದೊರೆಗಳು ಇವರಿಗೆ ಅಗರಖೇಡ, ಭುಂಯಾರ,ಪಡಗಾನೂರ, ಬಳ್ಳೊಳ್ಳಿ ಹಾಗು ಮಣ್ಣೂರು ಗ್ರಾಮಗಳ ಜಹಗೀರಿಯನ್ನು ಕೊಟ್ಟರು. ರಾಮಾಚಾರ್ಯರು [[೧೯೨೬]]
[[ನವೆಂಬರ್| ನವೆಂಬರ]]ದಲ್ಲಿ, [[ಬಿಜಾಪುರ| ವಿಜಾಪುರ]] ಜಿಲ್ಲೆಯ '''ಇಂಡಿ''' ತಾಲೂಕಿನಲ್ಲಿ, ತಾಯಿಯ ತವರೂರಾದ '''ಲಚ್ಚಾಣ'''ದಲ್ಲಿ ನರಕ ಚತುರ್ದಶಿಯಂದು ಜನಿಸಿದರು. ಇವರ ಪ್ರಾಥಮಿಕ ಶಿಕ್ಷಣ ಲಚ್ಚಾಣ ಹಾಗು ಭುಂಯಾರದಲ್ಲಿ ನಡೆಯಿತು. ಮಾಧ್ಯಮಿಕ ಶಿಕ್ಷಣವು [[ಬಿಜಾಪುರ| ವಿಜಾಪುರ]]ದ '''ದರಬಾರ ಹಾಯ್‍ಸ್ಕೂಲಿ'''ನಲ್ಲಿ ಆಯಿತು. ಮ್ಯಾಟ್ರಿಕ್ ಪರೀಕ್ಷೆಗೆ ಕೂಡುವ ಮೊದಲೆ ರಾಮಾಚಾರ್ಯರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿ ಶಾಲೆಯನ್ನು ಬಿಟ್ಟರು. ಆ ಬಳಿಕ ಸತ್ಯಜ್ಞಾನ ಸ್ವಾಮೀಜಿಯವರ ಒತ್ತಾಸೆಯಿಂದ ಈಗ [[ಮಹಾರಾಷ್ಟ್ರ]] ರಾಜ್ಯದಲ್ಲಿರುವ '''ಸೊಲ್ಲಾಪುರ'''ದಲ್ಲಿ [[ಸಂಸ್ಕೃತ]] ಅಭ್ಯಾಸ ಮಾಡಿದರು.
 
==ಉದ್ಯೋಗ==
ಸೊಲ್ಲಾಪುರದಿಂದ ವಿಜಾಪುರಕ್ಕೆ ಮರಳಿದ ರಾಮಾಚಾರ್ಯರು ವಚನ ಪಿತಾಮಹ [[ಫ.ಗು.ಹಳಕಟ್ಟಿ]]ಯವರ ಮುದ್ರಣಾಲಯದಲ್ಲಿ ಕೆಲಕಾಲ ಕೆಲಸ ಮಾಡಿದರು. ಆ ಸಮಯದಲ್ಲಿ ಇವರ ತಂದೆ ಸೇತುರಾಮಾಚಾರ್ಯರಿಗೆ [[ಮೈಸೂರು]] ಅರಮನೆಯಲ್ಲಿ [[ಭಾಗವತ]] ಪುರಾಣ ಪ್ರವಚನ ಮಾಡಲು ಆಹ್ವಾನ ದೊರೆತಿದ್ದರಿಂದ ರಾಮಾಚಾರ್ಯರೂ ಸಹ ತಂದೆಯೊಡನೆ [[ಮೈಸೂರು|ಮೈಸೂರಿಗೆ]] ತೆರಳಿ ಅಲ್ಲಿ '''ಉಷಾ ಸಾಹಿತ್ಯಮಾಲೆ'''ಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆನಂತರ [[ಬೆಂಗಳೂರು| ಬೆಂಗಳೂರಿನಲ್ಲಿ]] '''[[ಕನ್ನಡ]] ಸಾಹಿತ್ಯ ಪರಿಷತ್ತಿ'''ನಲ್ಲಿ ಕೆಲಸ ಮಾಡತೊಡಗಿದರು.
 
ಆದ್ಯ ರಾಮಾಚಾರ್ಯರು [[೧೯೯೦]]ರ ಸುಮಾರಿನಲ್ಲಿ “'''ವರದರಾಜ ಪ್ರಕಾಶನ'''” ವನ್ನು ಪ್ರಾರಂಭಿಸಿದರು. ತನ್ಮೂಲಕ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
 
==ಕೃತಿಗಳು==
===ಐತಿಹಾಸಿಕ===
Line ೩೮ ⟶ ೩೫:
* ರಚನಾ (ವ್ಯಕ್ತಿ ಪರಿಚಯ)
* ಕರ್ನಾಟಕ ವಿದ್ಯಾವೈಭವ (ಮಾಜಿ ಶಿಕ್ಷಣ ಸಚಿವರಾದ ಶ್ರೀ ಜಿ.ಬಿ.ಶಂಕರರಾಯರ ಅಭಿನಂದನಾ ಗ್ರಂಥ)
 
==ಸಾಮಾಜಿಕ ಕಾರ್ಯ==
ಬಾಲ್ಯದಲ್ಲಿಯೇ ಸ್ವಾತಂತ್ರ್ಯ ಚಳುವಳಿ ಹಾಗು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ರಾಮಾಚಾರ್ಯರು ರಾಷ್ಟ್ರೀಯ ವಿವೇಚನಾ ಆಂದೋಲನ ಹಾಗು ಕರ್ನಾಟಕ ಏಕೀಕರಣ ಹೋರಾಟದಲ್ಲಿಯೂ ಪಾಲ್ಗೊಂಡರು.
Line ೪೯ ⟶ ೪೫:
ಇದಲ್ಲದೆ ಅಖಿಲ ಕರ್ನಾಟಕ ಗಡಿನಾಡು ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ, ಸದಾಶಿವನಗರದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಕಮಿಟಿಯ ಸಹಕಾರ್ಯದರ್ಶಿಯಾಗಿ, [[ಕರ್ನಾಟಕ ಸಾಹಿತ್ಯ ಅಕಾಡೆಮಿ]]ಯ ಸದಸ್ಯರಾಗಿ
ಅನುಪಮ ಸೇವೆ ಸಲ್ಲಿಸಿದ್ದಾರೆ.
 
==ಮಾನ ಸನ್ಮಾನ==
* ಆದ್ಯ ರಾಮಾಚಾರ್ಯರಿಗೆ [[ಕರ್ನಾಟಕ]] ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
Line ೫೭ ⟶ ೫೨:
* ಬೆಂಗಳೂರಿನ ಜ್ಞಾನಜ್ಯೋತಿ ಕಲಾಮಂದಿರದಿಂದ ಸನ್ಮಾನಿತರಾಗಿದ್ದಾರೆ.
* ಆಖಿಲ ಕರ್ನಾಟಕ ಲೇಖಕರಿಂದ ಪಾಂಡವಪುರ ಪ್ರಶಸ್ತಿ ದೊರೆತಿದೆ.
 
 
 
 
"https://kn.wikipedia.org/wiki/ಆದ್ಯ_ರಾಮಾಚಾರ್ಯ" ಇಂದ ಪಡೆಯಲ್ಪಟ್ಟಿದೆ