ಜಂಗಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೪ ನೇ ಸಾಲು:
ಈ ಜಂಗಮ ಸಮಾಜವು ಇಂದಿನವರೆಗೆ ಸರ್ಕಾರದ ಯಾವುದೇ ಸೌಲಭ್ಯ ಪಡಿಯದೆ ನಾವು ಪರಾವಲಂಬಿಯಾಗಿ ಬದಕು ನಡೆಸುತ್ತಿದ್ದೇವೆ ಮತ್ತು ಗುರು ಮತ್ತು ಸ್ವಾಮಿಗಳಂತ ನಡೆದಿದ್ದೇವೆ ಇದರಿಂದ ನಮ್ಮ ಸಮಾಜಕ್ಕೆ ಯಾವುದೇ ರೀತಿಯ ಸಹಾಯ ದುರತಿರುವುದಿಲ್ಲ.
ಈ ಸಮಾಜವು ಸಂಘಟನೆಗೊಂಡು ಸ್ವಾವಲಂಬಿ ಜೀವನವನ್ನು ನಡೆಸುವ ಉದ್ದೇಶ ಹೊಂದಿದೆ. ಆದರೂ ಈ ಜನಾಂಗವು ಸರ್ಕಾರದ ಸಹಾಯವಿಲ್ಲದೇ ಪರದಾಡುತ್ತಿದೆ. ಅತ್ತ ಹಳ್ಳನೂ ಇಲ್ಲ: ಇತ್ತ ಮನೆಯೂ ಇಲ್ಲ. ಅಗಸರ ಕತ್ತೆ ಎನ್ನುವಂತೆ ಆಗಿದೆ.
ಜಂಗಮನ ಬದುಕು. "ಬೇಡ ಜಂಗಮ" ಪರಿಶಿಷ್ಟ ಜಾತಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಸಂವಿಧಾನಾತ್ಮಕವಾಗಿ ಸರಿಯಷ್ಟೆ. ಆದರೆ ರಾಜ್ಯ ಸರಕಾರಗಳು ನಮಗೆ ಮಲತಾಯಿ ಧೋರಣೆ ತೋರುತ್ತಿವೆ ದೇವರು ವರಕೊಟ್ಟರೂ ಪೂಜಾರಿ ವರವನ್ನು ಕೊಡಲಾರ ಎನ್ನುವಂತೆ ಕೇಂದ್ರ ಸರಕಾರ ಮತ್ತು ಸುಪ್ರೀಂಕೋರ್ಟ ಉಲ್ಲೇಖಿಸಿರುವಂತೆ ಬೇಡಜಂಗಮ ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ.
ಆ ಸೌಲಭ್ಯ ಪಡೆಯುವಲ್ಲಿ ವಿಫಲರಾಗಿದ್ದೇವೆ.ನಮ್ಮಲ್ಲಿ ಕಾನೂನು ಬದ್ಧ ಹೋರಾಟವಿಲ್ಲ. ನಾವು ಎಲ್ಲರಿಗೂ ಬೇಕು: ನಮಗೆ ಯಾವುದೂ ಇಲ್ಲ. ಯಾಕೆ ನಾವುಗಳು ಈ ರಾಜ್ಯದವರಲ್ಲವೇದೇಶದವರಲ್ಲವೇ. ಬೇರೆ ದೇಶದಿಂದ ಬಂದವರಿಗೆಲ್ಲಾ ಏನೆಲ್ಲಾ ಸೌಲಭ್ಯವಿದೆ. ಇಲ್ಲೇ ನಾವು ಶತ ಶತಮಾನಗಳಿಂದ ಹುಟ್ಟಿ ಬೆಳೆದ ಇದೆಂತಾ ದೇಶ: ಇದೆಂತಾ ನಾಡು. ಹೀಗೆ ಮುಂದುವರೆದಲ್ಲಿ ಮುಂದೊಂದು ದಿನ ನಮ್ಮ ಮುಂದಿನ ಪೀಳಿಗೆ ಪ್ರತ್ಯೇಕ ರಾಜ್ಯ ಅಥವಾ ದೇಶ ಕೇಳಿದರೂ ಆಶ್ಚರ್ಯವಿಲ್ಲ. ಸರ್ಕಾರಗಳು ನಮ್ಮತ್ತ ಸ್ವಲ್ಪ ತಿರುಗಿ ನೋಡಿ, ನಾವು ಬೇರೆ ದೇಶದವರಲ್ಲ, ನಾವು ಇಲ್ಲಿಯವರೇ. ನಮಗೂ ಕೋಪ ತಾಪ ಎಲ್ಲಾ ಇದೆ. ಶಾಂತಿಯುತ ಹೋರಾಟ ನಮ್ಮದಾಗಿರಲಿ ಎಂದು ಸುಮ್ಮನಿದ್ದೇವೆ, ಜಂಗಮನ ನಿಟ್ಟುಸಿರು ಎಂದಾದರೊಂದು ದಿನ ನಿಮ್ಮನ್ನು ಕಾಡದೇ ಬಿಡಲಾರದು ಎಚ್ಚರವಿರಲಿ.
ನಾವು ಉಚ್ಛ ಕುಲದವರು ಎನ್ನುವ ಪಟ್ಟ ಇದೆ.ಇದ್ದರೆ ಏನು ಬಂತು. ಆರ್ಥಿಕವಾಗಿ ಹಿಂದುಳಿದಿದ್ದೇವೆ. ಅನಕ್ಷರತೆ
ನಮ್ಮ ಜನಾಂಗವನ್ನು ಕಿತ್ತು ತಿನ್ನುತ್ತಿದೆ. ಇಂಥ ಸಮಯದಲ್ಲಿ ಸರ್ಕಾರವು ನಮಗೆ ಖಂಡಿತವಾಗಿ ಸಹಾಯ ಮಾಡಬೇಕು.
ತಾಳ್ಮೆ ಪರೀಕ್ಷೆ ಮಾಡುತ್ತೀರಾ! ಮಾಡಿ, ನಮ್ಮ ಜೀವ ಕೊಡುತ್ತೇವೆ. ಆದರೆ ಇನ್ನೊಬ್ಬರ ಪ್ರಾಣ ತೆಗೆಯುವದಿಲ್ಲ.
ಇದು ಆ ಶಿವನು ನೀಡಿದ ಅತ್ಯಂತ ಮಹತ್ತರವಾದ ಕಾಣಿಕೆ. ನೀವು ಬದುಕಿ, ನಮಗೂ ಬದುಕಲೂ
ಅವಕಾಶ ಮಾಡಿ ಕೊಡಿ.
 
==ಪತ್ರಿಕೆಗಳು==
"https://kn.wikipedia.org/wiki/ಜಂಗಮ" ಇಂದ ಪಡೆಯಲ್ಪಟ್ಟಿದೆ