ನುವಾಖಾಯ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು clean up, replaced: ಮುಂಬೈ → ಮುಂಬಯಿ (2) using AWB |
ಚು clean up, replaced: ಒರಿಸ್ಸಾ → ಒಡಿಶಾ (13) using AWB |
||
೧೭ ನೇ ಸಾಲು:
}}
'''ನುವಾಖಾಯ್''' (ನಬನ್ನ ಎಂದು ಸಹ ಗುರುತಿಸಲ್ಪಡುವ) ಅನ್ನುವುದು ಒಂದು ಕೃಷಿ ಸಂಬಂಧಿ ಹಬ್ಬವಾಗಿದ್ದು, [[ಭಾರತ]]ದಲ್ಲಿ ಇದನ್ನು ಪ್ರಮುಖವಾಗಿ ಪಶ್ಚಿಮ
==ಹಬ್ಬವನ್ನು ಕುರಿತು==
ನುವಾಖಾಯ್ ಹಬ್ಬವನ್ನು ''ನುವಾಖಾಯ್ ಪರಬ್'' ಅಥವಾ ''ನುವಾಖಾಯ್ ವೆಟ್ಘಟ್'' ಎಂದು ಸಹ ಕರೆಯಲಾಗುತ್ತದೆ. ''ನವ್'' ಪದದ ಅರ್ಥ ಹೊಸದು ಮತ್ತು ''ಕಾಯ್'' ಅಂದರೆ ಆಹಾರ, ಆದ್ದರಿಂದ ಈ ಹೆಸರು ರೈತರು ಹೊಸಾ ಫಸಲಿನ ಅಕ್ಕಿಯ ಅನುಭೋಗದಲ್ಲಿದ್ದಾರೆ ಎಂಬ ಅರ್ಥವನ್ನು ಹೊಂದಿದೆ. ಹಬ್ಬವನ್ನು ಭರವಸೆಯ ಹೊಸಾ ಕಿರಣವನ್ನಾಗಿ ಕಾಣಲಾಗಿದ್ದು, ಗಣೇಷ್ ಚತುರ್ಥಿ ಹಬ್ಬದ ಮರುದಿನ ಇದನ್ನು ಆಚರಿಸಲಾಗುತ್ತದೆ. ರೈತ ಮತ್ತು ಕೃಷಿಕ ಸಮುದಾಯಕ್ಕೆ ಇದು ಅತ್ಯಂತ ಪ್ರಾಧಾನ್ಯತೆಯನ್ನು ಹೊಂದಿದೆ. ಈ ಹಬ್ಬವನ್ನು ದಿನದ ವಿಶಿಷ್ಟ ಸಮಯದಲ್ಲಿ ಆಚರಿಸಲಾಗುತ್ತದೆ, ಮತ್ತು ಆ ಸಮಯವನ್ನು ''ಲಗಾನ್'' ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಮನೆಯು ''ಅರ್ಸ ಪಿಥ'' (ಅಕ್ಕಿಯಿಂದ ಮಾಡಿದ ಆಹಾರ)ದಿಂದ ತುಂಬಿರುತ್ತದೆ, ಇದು
ನುವಾಖಾಯ್ ಅನ್ನುವುದು ಆದಿವಾಸಿ ಜನಾಂಗ ಹಾಗು ಹಿಂದು-ಜಾತಿ ಎರಡು ಪಂಗಡ ಜನರ ಕೃಷಿಕ ಹಬ್ಬವಾಗಿದೆ. ಈ ಹಬ್ಬವನ್ನು [[
==ಪ್ರಾಚೀನ ಮೂಲಸ್ಥಾನ==
೨೮ ನೇ ಸಾಲು:
==ಪ್ರಸ್ತುತ ಮಾದರಿಯ ಮೂಲ==
ಸಮಯ ಕಳೆದಂತೆ ಹಬ್ಬದ ಮೂಲ ಅಳಿದುಹೋದರೂ, ಮೌಖಿಕ ಸಂಪ್ರದಾಯವು ಇದು 12ನೆಯ ಶತಮಾನ ಎಡಿ ಕಾಲದ್ದೆಂಬುದನ್ನು ಸೂಚಿಸುತ್ತದೆ, ಅದು ಮೊದಲ ಚೌಹಾನ್ ರಾಜ ರಮೈ ಡಿಯೊರ ಕಾಲವಾಗಿತ್ತು, ಇವರು ಪಾಟ್ನಾ<ref>[http://www.almanach.be/search/i/index.htm ಪಟ್ನಾ ಮಹಾರಾಜ ರಾಮಯ್ ಸಿಂಗ್ ಡಿಯೊ]</ref> ಭವ್ಯ ರಾಜ್ಯದ ಸ್ಥಾಪಕರಾಗಿದ್ದರು, ಈ ಪಾಟ್ನಾ ಪ್ರಸ್ತುತ ಪಾಶ್ಚಿಮ
==ಹಿಂದಿನ ಕಾಲದಿಂದ ಇಲ್ಲಿಯವರೆಗಿನ ಪಯಣ==
೫೪ ನೇ ಸಾಲು:
''ಬೆಹೆರನ್'' ತುತ್ತೂರಿ ಊದುವುದರ ಮೂಲಕ ಗ್ರಾಮಸ್ತರನ್ನು ಕರೆದ ನಂತರ ಗ್ರಾಮದ ಹಿರಿಯ ಜನರು ಒಟ್ಟಾಗಿ ಪವಿತ್ರ ಸ್ಥಳದಲ್ಲಿ ಕುಳಿತುಕೊಳ್ಳುವುದರೊಂದಿಗೆ ಹಬ್ಬದ ದಿನಾಂಕಕ್ಕೆ 15 ದಿನಗಳು ಮುಂಚಿತವಾಗಿಯೇ ತಯಾರಿಯನ್ನು ಪ್ರಾರಂಭಿಸಲಾಗುವುದು. ಜನರು ಒಟ್ಟುಗೂಡಿ ಅರ್ಚಕರೊಂದಿಗೆ ನುವಾಖಾಯ್ ಆಚರಣೆಯ ''ತಿಥಿ'' ಮತ್ತು ''ಲಗ್ನ'' (ಪವಿತ್ರವಾದ ದಿನ ಮತ್ತು ಸಮಯ)ಗಳನ್ನು ಕುರಿತು ಚರ್ಚಿಸುವರು. ಅರ್ಚಕರು ''ಪಂಜಿಕ'' (ಜ್ಯೋತಿಶಾಸ್ತ್ರದ ಪಂಚಾಂಗ)ವನ್ನು ನೋಡಿ ನುವವನ್ನು ಸ್ವೀಕರಿಸಬಹುದಾದ ಪವಿತ್ರವಾದ ''ಮುಹೂರ್ತ'' (ಸುಮಾರು 48 ನಿಮಿಷಗಳಿಗೆ ಸಮನಾದ ಸಮಯವನ್ನು) ಪ್ರಕಟಿಸುವರು. ತಯಾರಿಯ ಈ ಭಾಗವು ಮೂಲ ಆದಿವಾಸಿಗಳ ಹಬ್ಬದ ಮೂಲಾಂಶಗಳು ಮತ್ತು ಹಿಂದು ಧರ್ಮದ ಮೂಲಾಂಶಗಳು ಎರಡನ್ನೂ ತೋರಿಸುತ್ತದೆ. ಹಿಂದು-ಜಾತಿಯವರು ಪ್ರದೇಶಕ್ಕೆ ಒಲಸೆ ಬಂದಾಗ ಸ್ಥಳೀಯ ಆದಿವಾಸಿ ಜನರು, ಜ್ಯೋತಿಶಾಸ್ತ್ರವನ್ನು ಆಧರಿಸಿ ನುವಾಖಾಯ್ ಹಬ್ಬಕ್ಕೆ ''ತಿಥಿ'' ಮತ್ತು ''ಲಗ್ನ'' ವನ್ನು ಲೆಕ್ಕಹಾಕುವ ಯೋಜನೆಯನ್ನು ಅಳವಡಿಸಿಕೊಂಡಿದ್ದರು. ಅದೇ ರೀತಿಯಲ್ಲಿ, ಹಿಂದು-ಜಾತಿಯವರು ಆದಿವಾಸಿ ಜನರಿಂದ ನುವಾಖಾಯ್ ಅನ್ನು ಅಳವಡಿಸಿಕೊಂಡಾಗ, ಅವರು ಕೆಲವು ಸಂಸ್ಕೃತ ಮೂಲಾಂಶಗಳನ್ನು ಪರಿಚಯಿಸಿ ಹಿಂದು-ಧರ್ಮದವರು ಇದನ್ನು ಹೆಚ್ಚು ಮನಃಪೂರ್ವಕವಾಗಿ ಅಂಗೀಕರಿಸುವಂತೆ ಮಾಡಿದರು.
1960ರ ದಶಕದ ಸಮಯದಲ್ಲಿ ಕೋಸಲ್ ಪ್ರಾಂತದಾದ್ಯಂತ ನುವಾಖಾಯ್ ಹಬ್ಬಕ್ಕೆ ಒಂದೇ ''ತಿಥಿ'' ಯನ್ನು ನಿಗದಿಪಡಿಸುವ ಪ್ರಯತ್ನವನ್ನು ಮಾಡಲಾಯಿತು. ಆದರೆ ಇದು ಆಗುವಂತಹ ಕಲ್ಪನೆ ಅಲ್ಲ ಎಂದು ನಿರ್ಧರಿಸಲಾಗಿತ್ತು. ಭಾದ್ರಬ ಶುಕ್ಲ ಪಂಚಮಿ ತಿಥಿಯನ್ನು ನುವಾಖಾಯ್ ಹಬ್ಬದ ಆಚರಣೆಯ ದಿನವನ್ನಾಗಿ ನಿಶ್ಚಯಿಸಲು, 1991ರಲ್ಲಿ ಈ ಕಲ್ಪನೆಯನ್ನು ಮರು ಪರಿಚಯಿಸಲಾಯಿತು. ಈ ಪ್ರಯತ್ನದಲ್ಲಿ ಅವರು ಸಫಲರಾದರು ಮತ್ತು ಅಂದಿನಿಂದ, ಆ ದಿನದಂದೇ ಹಬ್ಬವನ್ನು ಆಚರಿಸಲಾಗುತ್ತಿತ್ತು, ಮತ್ತು
ನುವಾಖಾಯ್ ಹಬ್ಬವನ್ನು ಸಮುದಾಯ ಮತ್ತು ಸ್ವದೇಶಿ ಮಟ್ಟ ಎರಡರಲ್ಲೂ ಆಚರಿಸಲಾಗುತ್ತದೆ. ವಿಧಿವತ್ತಾದ ನಡವಳಿಕೆಗಳನ್ನು ಮೊದಲು ಆ ಪ್ರದೇಶದ ಪ್ರಾಂತೀಯ ದೇವತೆ ಅಥವಾ ಗ್ರಾಮ ದೇವತೆಯ ದೇವಸ್ಥಾನದಲ್ಲಿ ಗಮನಿಸಲಾಗುತ್ತದೆ. ನಂತರ, ಜನರು ತಮ್ಮ ತಮ್ಮ ಮನೆಗಳಿಗೆ ತೆರಳಿ ಆರಾಧನೆಯನ್ನು ನಡೆಸುವರು ಮತ್ತು ವಿಧಿವತ್ತಾದ ನಡವಳಿಕೆಗಳನ್ನು ಅವರ ಸ್ವದೇಶಿ ದೇವತೆಗೆ ಮತ್ತು ಹಿಂದು ಸಂಪ್ರದಾಯದಲ್ಲಿ ಧನದ ದೇವತೆಯಾದ, [[ಲಕ್ಷ್ಮಿ]]ಗೆ ಅರ್ಪಿಸುವರು. ಈ ಹಬ್ಬಕ್ಕೆ ಜನರು ಹೊಸಾ ಉಡುಪುಗಳನ್ನು ಧರಿಸುವರು. ಮೊದಲು ನುವವನ್ನು ಸ್ಥಳೀಯ ದೇವತೆಗೆ ಅರ್ಪಿಸಿದ ನಂತರ, ಆ ಕುಟುಂಬದ ಹಿರಿಯರು ಮನೆಯ ಸದಸ್ಯರೆಲ್ಲರಿಗೂ ನುವ ಹಂಚುವುದು ಒಂದು ಸಂಪ್ರದಾಯ. ನುವ ಸ್ವೀಕರಿಸಿದ ನಂತರ, ಆ ಕುಟುಂಬದ ಕಿರಿಯರೆಲ್ಲರೂ ತಮ್ಮ ಹಿರಿಯರಿಗೆ ಗೌರವವನ್ನು ಸಲ್ಲಿಸುವರು. ಆ ನಂತರ, ಸ್ನೇಹಿತರು, ಹಿತೈಷಿಗಳು, ಮತ್ತು ಸಂಬಂಧಿಕರೊಂದಿಗೆ ಶುಭಾಷಯಗಳನ್ನು ವಿನಿಮಯ ಮಾಡಿಕೊಳ್ಳುವ, ''ನುವಾಖಾಯ್ ಜುಹಾರ್'' ಮುಂದುವರಿಯುತ್ತದೆ. ಇದು ಐಕಮತ್ಯದ ಸಂಕೇತವಾಗಿದೆ. ಜನರು ತಮ್ಮ ತಮ್ಮ ತಾರತಮ್ಯಗಳನ್ನು ಬದಿಗಿಟ್ಟು ಹೊಸಾ ಸಂಬಂಧಗಳನ್ನು ಬೆಳೆಸಲು ಇದು ಒಂದು ಒಳ್ಳೆಯ ಸಂದರ್ಭವಾಗಿದೆ. ಸಾಯಂಕಾಲದ ವರೆಗೂ ಜನರು ಒಬ್ಬರನ್ನೊಬ್ಬರು ಬೇಟಿಯಾಗಿ ಶುಭಾಷಯಗಳನ್ನು ವಿನಿಮಯಮಾಡಿಕೊಳ್ಳುವರು. ಎಲ್ಲಾ ಭೇದ ಭಾವಗಳನ್ನು ಬಿಟ್ಟುಬಿಡಲಾಗುತ್ತದೆ ಮತ್ತು ಹಿರಿಯರು ''ನುವಾಖಾಯ್ ಜುಹಾರ್'' ಎಂದು ಹಾರೈಸುವರು. ಹಿರಿಯರು ತಮ್ಮ ಕಿರಿಯರನ್ನು ಆಶೀರ್ವದಿಸುವರು ಮತ್ತು ಅವರಿಗೆ ದೀರ್ಘ ಆಯಿಷು, ಸಂತೋಷ, ಮತ್ತು ಶ್ರೇಯಸ್ಸು ಅಭಿಸಲೆಂದು ಹಾರೈಸುವರು. ಬೇರೆ ಯಾಗಿದ್ದ ಅಣ್ಣ-ತಮ್ಮಂದಿರು ಸಹ ಈ ಹಬ್ಬವನ್ನು ಒಟ್ಟಾಗಿ ಒಂದೇ ಮನೆಯಲ್ಲಿ ಆಚರಿಸುವರು. ಸಾಯಂಕಾಲದಲ್ಲಿ, ''ನುವಖಾಯ್ ಭೆಟ್ಘಟ್'' ಎಂದು ಕರೆಯಲಾಗುವ ಜಾನಪದ ನೃತ್ಯ ಮತ್ತು ಹಾಡುಗಳನ್ನು ಏರ್ಪಡಿಸಲಾಗುವುದು. ಜನರು ''ರಸರ್ಕೆಲಿ, ದಲ್ಖೈ, ಮಯಲಜಡ, ಚಿಟ್ಕುಚುಟ, ಸಜನಿ, ನಾಚ್ನಿಯಾ'' , ಮತ್ತು ''ಬಜ್ನಿಯಾ'' ಬೀಟ್ಗಳಿಗೆ ಮತ್ತು ಇತ್ತೀಚಿನ ಸಂಬಲ್ಪೂರಿ ಜನಪ್ರಿಯ ಹಾಡುಗಳ ರಾಗಗಳಿಗೆ ನೃತ್ಯಮಾಡುವರು.
==ನುವಾಖಾಯ್ ಹಬ್ಬವನ್ನು ಆಚರಿಸುವ ಭಾರತದ ಇತರ ಜನಾಂಗಗಳು==
ಪಡೆಯಬಹುದಾದ (1982:75, ರಿಂದ)<ref>ಸಿಂಘ್, ಎ.ಕೆ. (1982). ''ಟ್ರೈಬಲ್ ಫೆಸ್ಟಿವಲ್ಸ್ ಆಫ್ ಬಿಹಾರ್: ಎ ಫಂಕ್ಷನಲ್ ಅನಲಿಸಿಸ್.'' ನವ ದೆಹಲಿ: ಕಾನ್ಸೆಪ್ಟ್ ಪಬ್ಲಿಷಿಂಗ್ ಕಂಪನಿ</ref> ಆಧಾರಗಳ ಪ್ರಕಾರ, ಅಭಿಧಾನದಲ್ಲಿ ಅಲ್ಪ ವ್ಯತ್ಯಾಸಗಳೊಂದಿಗೆ, ನುವಾಖಾಯ್ ಹಬ್ಬವನ್ನು ಮಧ್ಯದ ಮತ್ತು ಪಶ್ಚಿಮ ಭಾರತದಲ್ಲಿನ ಎಲ್ಲಾ ಪ್ರಮುಖ ಜನಾಂಗದವರಿಂದ ಆಚರಿಸಲಾಗುತ್ತದೆ. ''ಜೆಥ್ ನುವಾಖಾಯ್'' ಇದನ್ನು ಡುದ್ ಖರಿಯ ಮತ್ತು ಪಹರಿ ಖರಿಯ ಜನರು ಆಚರಿಸುವರು, ''ನವಾಖಾನಿ'' ಓರಯನ್ ಮತ್ತು ಬಿರ್ಜಿಯಾಗಳ ನಡುವೆ, ''ಜೋನ್ ನವಾ'' ಮುಂಡಾ ಮತ್ತು ಬಿರ್ಜಿಯಾಗಳ ನಡುವೆ, ''ಜಂಥೆರ್'' ಅಥವಾ ''ಬೈಹಾರ್-ಹೊರೊ ನವಾಯ್'' ಸಾಂತಲ್ ಜನರಿಂದ, ''ಗೋಂಡ್ಲಿ ನವಾಖಾನಿ'' ಇದನ್ನು ರಾಂಚಿ ಜಿಲ್ಲೆಯ ಆದಿವಾಸಿ ಜನರಿಂದ, ''ನವಾ'' ಬಿರ್ಜಿಯಾ ನರಿಂದ, ''ನವಾ-ಜೋಮ್'' ಬಿರ್ಹೋರ್ ಜನರಿಂದ, ''ಧಾನ್ ನವಾಖಾನ್'' ಕೋರ್ವಾ ಜನರಿಂದ, ಮತ್ತು ಮುಂತಾದವರಿಂದ ಆಚರಿಸಲಾಗುತ್ತದೆ. ಬಾಸ್ಟರ್ ಪ್ರಾಂತ ಮತ್ತು
</ref> ಗಮನಿಸಿದ್ದಾನೆ, ಅದನ್ನು ಅವರು''ಜೋಮ್ ನವಾ'' ಎಂದು ಕರೆಯುತ್ತಾರೆ. ದಾಸ್ ಗುಪ್ತ (1978)<ref>ದಾಸ್ ಗುಪ್ತಾ, ಎಸ್.ಬಿ. (1978). ''ಬಿರ್ಝಿಯಾ: ಎ ಸೆಕ್ಷನ್ ಆಫ್ ದಿ ಅಸುರಾ ಆಫ್ ಚೋಟಾ ನಾಗಪುರ್.'' ಕಲ್ಕತ್ತಾ: ಕೆ.ಪಿ.ಬಾಗ್ಚಿ & ಕೊ.</ref>, ಚೋತನಾಂಗ್ಪುರದ ಅಸುರ ಜನಾಂಗದ ಭಾಗವಾದ, ಬಿರಿಜಿಯರ ''ನವಾ'' ಆಚರಣೆಯನ್ನು ಗುರುತಿಸಿದ್ದಾನೆ. ಭಾದುರಿ (1944:149-50)<ref>ಭಾದುರಿ, ಎಂ.ಬಿ. (1944). "ಮುಂದಾ ಧಾರ್ಮಿಕ ಆಚರಣೆಗಳು ಮತ್ತು ಅವರ ಸಮಯವನ್ನು ಕಳೆಯುವ ಮಾರ್ಗಗಳು." ''ಮ್ಯಾನ್ ಇನ್ ಇಂಡಿಯಾ'' , ಸಂಪುಟ.24, ಪುಟಗಳು.148-153.</ref> ''ಮಿಕತಲ್'' ಎಂದು ಗುರುತಿಸುವ ಟ್ರಿಪುರರ ಹಬ್ಬದ ಆಚರಣೆಯನ್ನು ಕುರಿತು ಒಂದು ಚಿಕ್ಕ ಟಿಪ್ಪಣಿಯನ್ನು ಪ್ರಸ್ತುತ ಪಡಿಸಿದ್ದಾನೆ, ಇಲ್ಲಿ ''ಮಿ'' ಅಂದರೆ ಅಕ್ಕಿ ಮತ್ತು ''ಕತಲ್'' ಅಂದರೆ ಹೊಸದು ಅಂತ ಅರ್ಥ. ಇದನ್ನು ಅಶ್ವಿನಿ ತಿಂಗಳು (ಸೆಪ್ಟೆಂಬರ್-ಅಕ್ಟೋಬರ್) ನಲ್ಲಿ ಆಚರಿಸಲಾಗುತ್ತದೆ. ಪಶ್ಚಿಮ ಬೆಂಗಾಲ್ ಮತ್ತು
==ನುವಾಖಾಯ್ ಹಬ್ಬವನ್ನು ಭಾರತದುದ್ದಕ್ಕೂ ಆಚರಿಸಲಾಗುತ್ತದೆ==
[[ದೆಹಲಿ]]ಯಲ್ಲಿ ವಾಸಿಸುವ ಕೋಸಲ ಪ್ರದೇಶದ ಜನರ ಮಧ್ಯೆ ಉತ್ತಮ ಭಾಂದವ್ಯವನ್ನು ನುವಾಖಾಯ್ ರೂಪಿಸುತ್ತದೆ, ಅವರೆಲ್ಲರೂ ನುವಾಖಾಯ್ ಸಂದರ್ಭದಲ್ಲಿ ಒಟ್ಟಿಗೆ ಸೇರಿ ಆಚರಣೆ ಮಾಡುತ್ತಾರೆ. ಕೋಸಲ ಪ್ರದೇಶದಿಂದ ವಲಸೆ ಬಂದ ಜನರು [[ಬೆಂಗಳೂರು]], [[ಗೋವ|ಗೋವಾ]], [[ಮುಂಬಯಿ]], [[ಚೆನ್ನೈ]], ಹೈದರಾಬಾದ್, ಕೊಲ್ಕತಾ, ಹಾಗೂ ವಿಶಾಖಪಟ್ಟಣಂ ನಗರಗಳಲ್ಲಿ ನೆಲೆಸಿದ್ದು ಕೆಲ ದಶಕಗಳಿಂದ ಅಲ್ಲಿಯೇ ನುವಾಖಾಯ್ ಆಚರಿಸುತ್ತಿದ್ದಾರೆ. ಆಧುನಿಕ ನುವಾಖಾಯ್ ಹಬ್ಬವು ಈಗ ಭಾದ್ರವ ಮಾಸದ ಎರಡನೆ ಪಕ್ಷದ ಐದನೆಯ ದಿನದಂದು ಗಮನಿಸಲಾಗುತ್ತಿದ್ದು, ವಿವಿಧ ಸಾಮಜಿಕ ಸಂಸ್ಥೆಗಳಿಂದ ಮತ್ತು 1991ರಲ್ಲಿ
==ಇವನ್ನೂ ಗಮನಿಸಿ==
೭೧ ನೇ ಸಾಲು:
! ಸಂಬಲ್ಪುರ್ ಚಲನಚಿತ್ರ
! ಕೋಸಲ
! ಪಶ್ಚಿಮ
! ಸೀತಾಲಸಶ್ತಿ ಕಾರ್ನಿವಾಲ್
! ಸಂಬಲ್ಪುರ್ ಭಾಷೆ
೧೨೩ ನೇ ಸಾಲು:
| ನುವ್ಕಾಯ್
| ಹಿರಾಕುಡ್ ಆಣೆಕಟ್ಟು
| ಪಶ್ಚಿಮ
|-
| ಕಂಸಬಹಲ್
೧೪೬ ನೇ ಸಾಲು:
| ಬಿರಾಮಿತ್ರಪುರ್
| ವೀರ ಸುರೇಂದ್ರ ಸಾಯಿ ಮೆಡಿಕಲ್ ಕಾಲೇಜು
| ಪಶ್ಚಿಮ
|
|-
|