ವಿಕಿಪೀಡಿಯ:ತಟಸ್ಥ ದೃಷ್ಟಿಕೋನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Vikashegde (ಚರ್ಚೆ | ಕಾಣಿಕೆಗಳು) ವಿಸ್ತರಣೆ |
Vikashegde (ಚರ್ಚೆ | ಕಾಣಿಕೆಗಳು) ವಿಸ್ತರಣೆ |
||
೪೮ ನೇ ಸಾಲು:
ವಿಕಿಪೀಡಿಯ ವಿವಾದಗಳ ಬಗ್ಗೆ ವಿವರಗಳನ್ನು ಕೊಡುತ್ತದೆಯೇ ಹೊರತು ವಿವಾದಗಳಲ್ಲಿ ತೊಡಗಿಕೊಳ್ಳುವುದಿಲ್ಲ. ವಿಕಿಪೀಡಿಯ ಲೇಖನಗಳಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸುತ್ತಾ ವಿವಾದಗಳನ್ನು ವಿವರಿಸುವಾಗಲೂ ಕೂಡ ಒಂದು ತಟಸ್ಥ ದನಿ ಅಗತ್ಯವಾಗಿರುತ್ತದೆ. ಒಂದು ವಿಷಯವನ್ನು ಅಭಿಪ್ರಾಯಗಳ ಆಧಾರಕ್ಕಿಂತ ಸತ್ಯಮಾಹಿತಿಮೂಲಗಳ ಆಧಾರ ಮೇಲೆ ವಿವರಿಸಿದ್ದರೂ ಸಹ ಆ ಮಾಹಿತಿಮೂಲಗಳ ಆಯ್ಕೆ, ವಿಷಯದ ಪ್ರಸ್ತುತಿ ಮುಂತಾದವು ಸರಿಯಲ್ಲದ (ತಟಸ್ಥವಲ್ಲದ) ದನಿಯನ್ನು ಹೊರಡಿಸಬಹುದು. ತಟಸ್ಥ ಲೇಖನಗಳು ಎಂದಿಗೂ ಎಲ್ಲಾ ದೃಷ್ಟಿಯಲ್ಲೂ ನಿಖರವಾದ, ಪಕ್ಷಪಾತವಲ್ಲದ, ಸಮತೋಲಿತ ಮಾಹಿತಿಗಳನ್ನು ಒಳಗೊಂಡಿರಬೇಕು. ಯಾವುದೇ ದೃಷ್ಟಿಕೋನವನ್ನು ಅನುಮೋದಿಸುವ ಅಥವಾ ತಿರಸ್ಕರಿಸುವ ರೀತಿಯಲ್ಲಿ ಇರಬಾರದು. ವಿವಾದಾತ್ಮಕ ಮಾಹಿತಿಮೂಲಗಳಿಂದ ವಿಷಯವನ್ನು ನೇರವಾಗಿ ಉಲ್ಲೇಖಿಸುವುದರ ಬದಲು ಅವುಗಳ ಸಾರಾಂಶವನ್ನು ತಟಸ್ಥ ದನಿಯಲ್ಲಿ ವಿವರಿಸಬೇಕು.
====
ಕಲೆ ಮುಂತಾದ ಸೃಜನಾತ್ಮಕ ವಿಷಯಗಳ (ಉದಾ:ಕಲಾವಿದರು, ಸಂಗೀತಕಾರರು, ಸಾಹಿತ್ಯ ಇತ್ಯಾದಿ) ಬಗೆಗಿನ ವಿಕಿಪೀಡಿಯ ಲೇಖನಗಳು ಭಾವೋದ್ರೇಕತೆ, ಉತ್ಪ್ರೇಕ್ಷೆ ಆಗುವ ಸಾಧ್ಯತೆ ಇರುತ್ತದೆ. ಇದು ವಿಶ್ವಕೋಶಕ್ಕೆ ತಕ್ಕುದಾದುದಲ್ಲ. ಇಂತಹ ವಿಷಯಗಳ ಬಗ್ಗೆ ಅಭಿಪ್ರಯಾಗಳು ವ್ಯಕ್ತಿನಿರ್ದಿಷ್ಟವಾಗಿರುತ್ತವೆ. ಜಗತ್ತಿನ ಶ್ರೇಷ್ಟ ಸಾಹಿತಿ ಯಾರು ಎಂಬುದಕ್ಕೆ ಎಲ್ಲರೂ ಒಪ್ಪುವಂತಹ ಒಂದು ವ್ಯಕ್ತಿ ಇರಲು ಸಾಧ್ಯವಿಲ್ಲ. ಆದರೆ ಒಬ್ಬ ಕಲಾವಿದನಿಗೆ ಅಥವಾ ಕಲಾವಸ್ತುವಿಗೆ ಸಾರ್ವಜನಿಕವಾಗಿ ಮತ್ತು ಪರಿಣಿತ ವರ್ಗದಲ್ಲಿ ಹೇಗೆ ಎಷ್ಟು ಮಾನ್ಯತೆ ಇದೆ, ಮೆಚ್ಚುಗೆ ಇದೆ ಎಂಬುದು ಗಮನಿಸಬೇಕಾದ ಅಂಶ. ಉದಾಹರಣೆಗೆ, "ಶಿವರಾಮ ಕಾರಂತರು ಕನ್ನಡ ಭಾಷೆಯ ಸಾಹಿತಿಗಳಲ್ಲಿ ಒಬ್ಬ ಶ್ರೇಷ್ಟ ಸಾಹಿತಿ ಎಂದು ಗುರುತಿಸಲ್ಪಡುತ್ತಾರೆ" ಎಂದು ಬರೆಯುವುದು ಒಪ್ಪಿತ. ಲೇಖನಗಳು ಸೃಜನಾತ್ಮಕ ಕೆಲಸಗಳ ಬಗ್ಗೆ ಸಾಮಾನ್ಯ ಅರ್ಥವಿವರಣೆಗಳ ಮೇಲ್ನೋಟವನ್ನು ಒಳಗೊಂಡಿರಬೇಕು. ಆ ವಿಷಯದ ಬಗ್ಗೆ ಪರಿಣಿತರ ವ್ಯಾಖ್ಯಾನಗಳನ್ನು ಹೊಂದಿರುವ ಮಾಹಿತಿಮೂಲಗಳನ್ನು ಉಲ್ಲೇಖಿಸುವುದು ಒಳ್ಳೆಯದು. ಸಾರ್ವಜನಿಕ ಹಾಗೂ ವಿದ್ವಾಂಸರ ವಿಮರ್ಶೆ ಅಭಿಪ್ರಾಯಗಳು ಕಲಾತ್ಮಕ/ಸೃಜನಾತ್ಮಕ ಕೆಲಸಗಳ ಬಗ್ಗೆ ಸಹಾಯವಾಗಬಲ್ಲ ನೋಟವನ್ನು ಒದಗಿಸುತ್ತವೆ.
====ಎಚ್ಚರವಹಿಸಬೇಕಾದ ಪದಗಳು====
|