ಗಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಚು clean up, replaced: ಅಥವ → ಅಥವಾ (13) using AWB |
||
೨ ನೇ ಸಾಲು:
==ಗಾಯ==
ಅಂಗಾಂಶಗಳ ಅವಿಚ್ಛಿನ್ನತೆಗೆ ಉಂಟಾಗುವ ತಡೆ (ವೂಂಡ್). ಕೆಲವರು ಇದನ್ನು ಸಮರಕ್ಕೆ ಮತ್ತು ಶಾಂತಿಗೆ ಸಂಬಂಧಿಸಿದ ಗಾಯ ಎಂಬ ಎರಡು ಬಗೆಗಳಾಗಿ ವಿಂಗಡಿಸಿ ಇವು ಪರಸ್ಪರ ವಿಭಿನ್ನವಾದವುಗಳೆಂದು ಪರಿಗಣಿಸುವುದುಂಟು. ಆದರೆ ಇವುಗಳ ರೋಗಲಕ್ಷಣಗಳಲ್ಲಿ ಮತ್ತು ಚಿಕಿತ್ಸೆಯಲ್ಲಿ ವ್ಯತ್ಯಾಸವೇನಿಲ್ಲ. ಹೀಗೆ ಇವನ್ನು ಬೇರ್ಪಡಿಸುವುದರಲ್ಲಿ ಯಾವ ಸ್ಪಷ್ಟ ಉದ್ದೇಶವನ್ನೂ ಸಾಧಿಸಿದಂತಾಗುವುದಿಲ್ಲ. ಈ ಕೆಳಗಿನ ವರ್ಗೀಕರಣ ಇವೆರಡನ್ನೂ ಒಳಗೊಳ್ಳುತ್ತದೆ- 1 ಮುಚ್ಚುಗಾಯಗಳು
==ಮುಚ್ಚುಗಾಯಗಳು==
ಮುಚ್ಚುಗಾಯಗಳು [[ಚರ್ಮ]]ದ ಪುರ್ಣ ಪದರವನ್ನು ಭೇದಿಸಿರುವುದಿಲ್ಲ. ಒರಟಾದ ಆಯುಧದಿಂದ ಬಲವಾಗಿ ಹೊಡೆದಾಗ ಜಜ್ಜು ಗಾಯ ಉಂಟಾಗುತ್ತದೆ. ಇದರಿಂದ ರಕ್ತನಾಳಗಳು ಒಡೆದು ಹೋಗುವುದಲ್ಲದೆ ಚರ್ಮದ ಕೆಳಭಾಗದಲ್ಲಿರುವ ಮೃದುವಾದ ಅಂಗಾಂಶಗಳಿಗೆ ಅನೇಕ ಬಗೆಯ ಹಾನಿ ಉಂಟಾಗುತ್ತದೆ. ರಕ್ತನಾಳಗಳಿಂದ ಹೊರಹರಿದ ರಕ್ತ ಚರ್ಮದೊಳಗೆ ಪ್ರವೇಶಿಸಿದಾಗ ಚರ್ಮ ವಿವರ್ಣವಾಗುತ್ತದೆ. ನೋವು, ಊತ, ವಿವರ್ಣತೆಗಳು ಜಜ್ಜುಗಾಯದ ಚಿಹ್ನೆಗಳು. ಹಾನಿಗೆ ಒಳಗಾದ ಅಂಗಾಂಶಕ್ಕೆ ಅನುಗುಣವಾಗಿ ನೋವು ಮತ್ತು ಊತಗಳು ವಿಪರ್ಯಯವಾಗುತ್ತವೆ. ಕಣ್ಣುರೆಪ್ಪೆ ಮತ್ತು ವೃಷಣಕೋಶಗಳಂತಹ ಸಡಿಲಚರ್ಮವುಳ್ಳ ಭಾಗಗಳಿಗೆ ಜಜ್ಜುಗಾಯ ಉಂಟಾದಾಗ ಊತ ಜಾಸ್ತಿಯಾಗಿದ್ದರೂ ನೋವು ಕಡಿಮೆ ಯಿರುತ್ತದೆ. ಇದಕ್ಕೆ ವಿರುದ್ಧವಾಗಿ ಬೆರಳುಗಳಿಗೆ
ಹೆಚ್ಚು ರಕ್ತಸ್ರಾವವಾಗಿ ಅದು ತಂತುರೂಪದ ಅಂಗಾಂಶ ಕೋಶದ ಪದರಗಳ ಮತ್ತು ಮಾಂಸಖಂಡಗಳ ನಡುವೆ ಹೆಪ್ಪುಗಟ್ಟುತ್ತದೆ. ಮೊದಮೊದಲು ಇದು ಗುಂಡಾಗಿ, ಹುಣ್ಣಿನಂತೆ ಮೆತ್ತಗಿದ್ದು ಅನಂತರ ಗಟ್ಟಿಯಾಗುತ್ತದೆ. ಕ್ರಮೇಣ ಗಾಯ ವ್ಯವಸ್ಥಿತವಾಗಿ ಕರಗಿಹೋಗುತ್ತದೆ. ಆದರೆ ಎಲ್ಲ ಹೆಪ್ಪುಗಟ್ಟುಗಳೂ ಇಷ್ಟು ಸರಳವಾಗಿ ಮುಕ್ತಾಯವಾಗುವುದಿಲ್ಲ. ಕೆಲವು ಗಂಟುಗಳಾಗಿ ಮತ್ತೆ ಕೆಲವು ರಸಿಕೆಯ ಕೋಶಗಳಾಗಿ ಉಳಿಯಬಹುದು. ಸಾಮಾನ್ಯವಾಗಿ ಮಿದುಳಿನ ಮೇಲ್ಮೈಯಲ್ಲಿ, ನಡುವಿನ ಭಾಗದಲ್ಲಿ, ತೊಡೆಯ ಪಕ್ಕಗಳಲ್ಲಿ ರಸಿಕೆಯ ಕೋಶಗಳು ಉಂಟಾಗುತ್ತವೆ. ಇವುಗಳ ಸುತ್ತಲೂ ತಂತುದ್ರವ್ಯ (ಫೈಬ್ರಿನ್) ಶೇಖರಗೊಂಡು, ಹೀಮೋಗ್ಲಾಬಿನ್ ಕರಗಿಹೋಗಿ ಮೇಲೆ ನಸುಹಳದಿಬಣ್ಣದ ದ್ರವ ಉಳಿಯುತ್ತದೆ. ಸರಿಯಾದ ಚಿಕಿತ್ಸೆ ನಡೆಸದಿದ್ದಲ್ಲಿ ಈ ಕೋಶದಲ್ಲಿ ಒಳಪೊರೆಯೊಂದು ಬೆಳೆದು ಅನಂತರ ಅದನ್ನು ತೆಗೆಯುವುದು ಕಷ್ಟವಾಗುತ್ತದೆ. ಕ್ರಿಮಿಗಳ ಬೆಳೆವಣಿಗೆಗೆ ರಕ್ತ ಒಳ್ಳೆಯ ಮಾಧ್ಯಮ. ಆದ್ದರಿಂದ ದುರ್ಬಲಶರೀರಿಗಳಲ್ಲಿ ಕೆಲವು ಸಲ ಈ ಹೆಪ್ಪುಗಟ್ಟಿಗೆ ಸೋಂಕು ತಗಲಬಹುದು. ಮಾಂಸಖಂಡ ಮತ್ತು ಇತರ ಮೇಲ್ಮೈಯ ಅಂಗಾಂಶಗಳಂತೆಯೇ ಒಳಾಂಗಗಳಾದ ಮಿದುಳು, ಪಿತ್ತಕೋಶ, ಗುಲ್ಮ, ಮೂತ್ರಜನಕಾಂಗ, ಪುಪ್ಪುಸ ಮತ್ತು ಅನ್ನನಾಳ ಮುಂತಾದವುಗಳಿಗೂ ಜಜ್ಜು ಗಾಯವುಂಟಾಗಿ ರಕ್ತ ಹೆಪ್ಪುಗಟ್ಟಬಹುದು. ಇವುಗಳ ಚಿಕಿತ್ಸೆಗೆ ವಿಶ್ರಾಂತಿ ಆವಶ್ಯಕ. ಆವಿಯಾಗುವ ದ್ರವಗಳ ಲೇಪನ, ಶಾಖ ಕೊಡುವಿಕೆ ಮತ್ತು ಬಿಸಿನೀರಿನ ಸ್ನಾನ ನೋವನ್ನು ಕುಗ್ಗಿಸುತ್ತದೆ. ಬಿಗಿಯಾಗಿ ಒತ್ತುವುದರಿಂದ ರಕ್ತಹೊರಸೋರುವುದು ಕಡಿಮೆಯಾಗುತ್ತದೆ. ಉಜ್ಜುವಿಕೆಯಿಂದ ಹೊರ ಬಂದ ರಕ್ತ ಬೇಗನೆ ಕರಗಿಹೋಗುತ್ತದೆ. ರಕ್ತದ ಹೀರುವಿಕೆ ತಡವಾದಲ್ಲಿ ಅದನ್ನು ಹೊರತೆಗೆದು ಬಿಗಿಯಾದ ಕಟ್ಟುಪಟ್ಟಿಯನ್ನು ಕಟ್ಟುವುದರಿಂದ ರಸಿಕೆಯ ಕೋಶ ಉಂಟಾಗುವುದನ್ನು ತಡೆಯಬಹುದು.
೧೦ ನೇ ಸಾಲು:
ಯಾವುದಾದರೂ ದೇಹದ ಭಾಗ ಒರಟು ಮೇಲ್ಮೈಗೆ ಉಜ್ಜಿದಾಗ ಉಜ್ಜು ಗಾಯ ಉಂಟಾಗುತ್ತದೆ. ಇದರಿಂದ ಚರ್ಮದ ಮೇಲ್ಪದರಗಳು ಕಿತ್ತುಹೋಗಿ, ನರಗಳ ತುದಿಗಳು ಹೊರಕಾಣಿಸಿಕೊಂಡು ತುಂಬ ನೋವುಂಟಾಗುತ್ತದೆ. ಗಾಯದ ಮೂಲಕ ದೂಳು ಪ್ರವೇಶಿಸಿ ಸೋಂಕು ಉಂಟಾಗುತ್ತದೆ. ಗಾಯವನ್ನು ತೊಳೆದು ಮುಲಾಮನ್ನು ಹಚ್ಚುವುದರಿಂದ ಇದನ್ನು ಗುಣಪಡಿಸಬಹುದು.
ಮರದ ತುಂಡು
==2 ಬಿಚ್ಚು
ಬಿಚ್ಚು
ಕಚ್ಚುಗಾಯ ಸಾಮಾನ್ಯವಾಗಿ ಗಾಜಿನಚೂರು, ಚಾಕು ಮೊದಲಾದ ಹರಿತವಾದ ವಸ್ತುಗಳಿಂದ ಉಂಟಾಗುತ್ತದೆ. ಅಪುರ್ವವಾಗಿ ನೆತ್ತಿಯ ಬಿಗಿಗೊಂಡ ಚರ್ಮವಿರುವ ಭಾಗದಲ್ಲಿ ಮೊಂಡು ಆಯುಧ ಸಹ ಕಚ್ಚುಗಾಯವನ್ನು ಉಂಟುಮಾಡಬಲ್ಲದು. ಕಚ್ಚುಗಾಯದಲ್ಲಿ ಬಿರುಕು ಕಾಣಿಸುತ್ತದೆ. ಇದರ ಉದ್ದ ಆಳಕ್ಕಿಂತ ಹೆಚ್ಚು. ಗಾಯದ ಅಂಚುಗಳು ಕ್ರಮವಾಗಿರುತ್ತವೆ. ರಕ್ತಸ್ರಾವ ಹೆಚ್ಚಾಗಿದ್ದು, ಸಂವೇದನ ನರಗಳು ಕತ್ತರಿಸಿಹೋಗುವುದರಿಂದ ನೋವಿರುತ್ತದೆ. ಸೋಂಕು ತಗಲಿರದಿದ್ದಲ್ಲಿ ಗಾಯದ ಅಂಚುಗಳನ್ನು ಸೇರಿಸಿದಾಗ ಅವು ಸರಿಯಾಗಿ ಕೂಡಿಕೊಳ್ಳುತ್ತವೆ.
ರಕ್ತನಾಳಗಳು, ನರಗಳು, ಮಾಂಸಖಂಡಗಳು ಮುಂತಾದ ಮುಖ್ಯ ಅಂಗಗಳಿಗೆ ಆಕಸ್ಮಿಕ ಚುಚ್ಚುಗಾಯದಿಂದ ಉಂಟಾಗುವ ಹಾನಿಯನ್ನು ತಿಳಿಯಲು ಗಾಯದ ಪುರ್ಣ ಹರವನ್ನು ಪರೀಕ್ಷಿಸಬೇಕು. ಸೋಂಕು ತಗುಲದಿದ್ದಲ್ಲಿ ನರ, ಮಾಂಸಖಂಡ ಮತ್ತು ಮೂಳೆಗಳ ಪುನರ್ನಿರ್ಮಾಣ ಚೆನ್ನಾಗಿ ಆಗುತ್ತದೆ. ಕೊಬ್ಬು ಮತ್ತು ಸ್ರಾವಕ ಗ್ರಂಥಿಗಳಲ್ಲಿ ಈ ಪುನರ್ನಿರ್ಮಾಣ ಅಷ್ಟು ಚೆನ್ನಾಗಿ ಆಗುವುದಿಲ್ಲ. ಕೇಂದ್ರ ನರಮಂಡಲದಲ್ಲಂತೂ ಇದು ಸಾಧ್ಯವೇ ಇಲ್ಲ.
ಸೂಜಿ ಮೊದಲಾದ ಹರಿತವಾದ ಮೊನೆಯುಳ್ಳ ವಸ್ತುಗಳಿಂದ ಇರಿತ ಮತ್ತು ಚುಚ್ಚುಗಾಯಗಳು ಉಂಟಾಗುತ್ತವೆ. ಇವು ಹೊರನೋಟಕ್ಕೆ ಸಣ್ಣವಾಗಿದ್ದರೂ ಅನ್ಯವಸ್ತುಗಳು
ಹಾವಿನ ಕಡಿತವೂ ಒಂದು ಬಗೆಯ ಚುಚ್ಚುಗಾಯವೇ. ಊತ, ನೋವು, ವಿವರ್ಣತೆ, ಮೂರ್ಛೆ, ನಾಡಿಮಿಡಿತ ಕ್ಷೀಣವಾಗುವುದು, ಕಣ್ಣುಪಾಪೆ ಅಗಲ ಗೊಳ್ಳುವುದು-ಇವು ಇದರ ಮುಖ್ಯ ಲಕ್ಷಣಗಳು. ಉಗ್ರಪರಿಸ್ಥಿತಿಯಲ್ಲಿ ನರಗಳು ಮತ್ತು ಸ್ನಾಯುಗಳು ನಿಶ್ಚೇತನಗೊಂಡು ಕೆಲವೇ ಗಂಟೆಗಳಲ್ಲಿ ಸಾವು ಸಂಭವಿಸಬಹುದು. ಕಡಿದ ಜಾಗಕ್ಕೆ ತೀವ್ರವಾದ ಚಿಕಿತ್ಸೆ ಮಾಡಬೇಕು. ಗಾಯದಿಂದ ಕೊಂಚ ಮೇಲಕ್ಕೆ ಕಟ್ಟನ್ನು ಕಟ್ಟಿ, ಗಾಯವನ್ನು ಕೊಯ್ದು ರಕ್ತಸ್ರಾವವಾಗಲು ಬಿಡಬೇಕು. ಅನಂತರ ಅಮೋನಿಯ
ಜೇನು, ಕಣಜ, ಸೊಳ್ಳೆ, ಚೇಳು, ಮುಂತಾದವುಗಳ ಕಡಿತದಿಂದ ಸೋಂಕು ರೋಗಗಳು ಹರಡಬಹುದು. ನಾಲಿಗೆ ಮತ್ತು ಗಂಟಲಲ್ಲಿ ಇವು ಕಚ್ಚಿದಾಗ ಊತವುಂಟಾಗಿ ಜೀವಕ್ಕೇ ಅಪಾಯ ಒದಗಬಹುದು. ಕೊಂಡಿ ಸೇರಿದ್ದಲ್ಲಿ ಅದನ್ನು ಹೊರತೆಗೆದು ಕ್ಷಾರವಸ್ತುಗಳಿಂದ ಕಟ್ಟುಪಟ್ಟಿಯನ್ನು ಕಟ್ಟಿದಲ್ಲಿ ಗಾಯ ಗುಣವಾಗುತ್ತದೆ.
ಹರಿಗಾಯಗಳು ಯುದ್ಧರಂಗದಲ್ಲಿ ಆಗಬಹುದು ಇಲ್ಲವೇ ಯಂತ್ರಗಳಿಂದ ಆಗಬಹುದು. ಸಿಡಿಯುವ
ಕೆಲವು ಭೇದಕ ಗಾಯಗಳಿಗೆ ಪ್ರವೇಶದ್ವಾರ ಮಾತ್ರ ಇರುತ್ತದೆ. ಇವು ಕಚ್ಚು, ಚುಚ್ಚು
ತೂತು ಕೊರೆದು ಹೊರಹಾಯುವ ಭೇದಕಗಾಯಗಳಿಗೆ ಪ್ರವೇಶ, ನಿರ್ಗಮನ ಗಳೆರಡೂ ಉಂಟು. ಇಂಥ ಗಾಯಗಳಲ್ಲಿ ಅನ್ಯವಸ್ತುಗಳು ಶರೀರದಲ್ಲಿ ಉಳಿಯುವುದಿಲ್ಲ. ಸಿಡಿತದಿಂದ ಉಂಟಾಗುವ ಗಾಯಗಳಲ್ಲಿ ಸ್ಪಷ್ಟವಾದ ಯಾವುದೇ ಬಾಹ್ಯವಸ್ತು ಅಂಗಾಂಶವನ್ನು ಪ್ರವೇಶಿಸಿರುವುದಿಲ್ಲ.
೩೬ ನೇ ಸಾಲು:
# ಬಿಗಿತವುಂಟಾಗದಿದ್ದಲ್ಲಿ ಹೊಲಿಗೆಯನ್ನು ಹಾಕುವುದು.
# ಕಟ್ಟುಪಟ್ಟಿ ಹಾಕುವುದು.
# ಗಾಯಗೊಂಡ ಭಾಗ ಚಲಿಸದಂತೆ ನೋಡಿಕೊಳ್ಳುವುದು.
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
|