ಕನ್ನಡ ಚಿತ್ರರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಹಿಂದೀ → ಹಿಂದಿ using AWB
ಚು →‎top: clean up, replaced: ಮುಂಬೈ → ಮುಂಬಯಿ using AWB
೧೧ ನೇ ಸಾಲು:
ಕನ್ನಡ ನೆಲದಲ್ಲಿ ಮೂಕಿ ಚಿತ್ರಗಳು ಯುಗವು ೧೯೨೧ರಿಂದ ಆರಂಭವಾಗಿರುವುದನ್ನು ಚಲನಚಿತ್ರ ಇತಿಹಾಸಕಾರ ಗಂಗಾಧರ ಮೊದಲಿಯಾರ್ ಗುರುತಿಸಿದ್ದಾರೆ. ೧೯೨೧ರಿಂದ ೧೯೩೩ರವರೆಗೆ ಸುಮಾರು ೧೭೫ ಚಿತ್ರಗಳು ತಯಾರಾಗಿರಬಹುದೆಂದು ತರ್ಕಿಸಿ ಲಭ್ಯವಿರುವ ೫೪ ಚಿತ್ರಗಳ ಹೆಸರುಗಳನ್ನು ಪಟ್ಟಿ ಮಾಡಿದ್ದಾರೆ. ಮೈಸೂರಿನ ಅಂದಿನ ಯುವರಾಜರಾದ ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಅವರು ಅರಮನೆಯಲ್ಲಿ ಪ್ರದರ್ಶನವಾದ ಎ.ವಿ. ವರದಾಚಾರ್ಯರು ಅಭಿನಯಿಸಿದ್ದ ರತ್ನಾವಳಿ ಥಿಯೇಟ್ರಿಕಲ್ ಕಂಪನಿಯ ನಾಟಕ ನಿರುಪಮಾ (೧೯೨೧)ವನ್ನು ಕೈಯಲ್ಲಿ ಸುತ್ತುವ ಕ್ಯಾಮೆರಾದಿಂದ (ಕ್ರಾಂಕಿಂಗ್ ಮಿಷಿನ್) ಚಿತ್ರೀಕರಿಸಿದ್ದರಂತೆ. ಹಾಗಾಗಿ ಎ.ವಿ. ವರದಾಚಾರ್ಯರು ಕನ್ನಡ ನೆಲದಲ್ಲಿ ಚಿತ್ರೀಕರಣಗೊಂಡ ಮೂಕಿ ಚಿತ್ರದ ಮೊದಲ ನಾಯಕ. ಕಂಠೀರವ ನರಸಿಂಹರಾಜ ಒಡೆಯರ್ ಮೊದಲ ನಿರ್ಮಾಪಕ. ೧೯೨೫ರಲ್ಲಿ ಗುಬ್ಬಿ ಚನ್ನಬಸವೇಶ್ವರ ಕಂಪನಿಯು ತರೀಕೆರೆಯಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಮಹಾತ್ಮಾ ಕಬೀರ್ ಚಿತ್ರವನ್ನು ಚಿತ್ರೀಕರಿಸಿ ಸಿನಿಮಾ ಮಾಡಿತು. ನಾಯಕ ಕಬೀರನ ಪಾತ್ರವನ್ನು ಅಭಿನವ ಶಿರೋಮಣಿ ಸಿ.ಬಿ. ಮಲ್ಲಪ್ಪನವರು ವಹಿಸಿದ್ದರು.
 
ಮೂಕಿ ಚಿತ್ರಗಳ ತಯಾರಿಕೆಗೆ ಆಗ ಮುಂಬೈಮುಂಬಯಿ ಕೇಂದ್ರವಾಗಿತ್ತು. ಅಲ್ಲಿನ ಶಾರದಾ ಫಿಲಂ ಕಂಪನಿಯ ಪಾಲುದಾರರಲ್ಲೊಬ್ಬರಾದ ಹರಿಭಾಯ್ ಆರ್. ದೇಸಾಯಿ ಅವರು ೧೯೨೮ರಲ್ಲಿ ಬೆಂಗಳೂರಿನ ದಂಡು ಪ್ರದೇಶದಲ್ಲಿ ಸೂರ್ಯ ಫಿಲಂ ಕಂಪನಿ ಸ್ಟುಡಿಯೋಸ್ ಸ್ಥಾಪಿಸಿ ೧೯೩೩ರವರೆಗೆ ಅಂದಾಜು ೪೦ ಚಿತ್ರಗಳನ್ನು ನಿರ್ಮಿಸಿದರೆಂದು ದಾಖಲಾಗಿದೆ. ಕನ್ನಡ ವಾಕ್ಚಿತ್ರದ ಮೊದಲ ನಾಯಕಿ ಲಕ್ಷ್ಮೀಬಾಯಿ ಅವರ ವೃತ್ತಿ ಬದುಕು ಆರಂಭವಾದದ್ದೇ ಸೂರ್ಯ ಫಿಲಂ ಕಂಪನಿಯ ಮೂಕಿ ಚಿತ್ರಗಳ ಮೂಲಕ.ಸಂಸ್ಥೆ ನಿರ್ಮಿಸಿದ ೪೦ ಚಿತ್ರಗಳ ಪೈಕಿ ಲಕ್ಷ್ಮೀಬಾಯಿಯವರು ಹದಿನೈದು ಚಿತ್ರಗಳಲ್ಲಿ ನಾಯಕಿಯಾಗಿ ‘ಸೂರ್ಯಸ್ಟಾರ್ ಎಂದೇ ಪ್ರಸಿದ್ಧರಾಗಿದ್ದರು. ಅವರು ಅಭಿನಯಿಸಿದ ಮೊದಲ ಮೂಕಿ ಚಿತ್ರ ರಾಜ ಹೃದಯ ಅವರಿಗೆ ಹಣ-ಕೀರ್ತಿ ತಂದು ಕೊಟ್ಟಿತು. ಅದರ ಯಶಸ್ಸು ಮುಂದಿನ ಚಿತ್ರಗಳಲ್ಲಿ ನಾಯಕಿಯ ಪಾತ್ರ ವಹಿಸುವಂತೆ ಮಾಡಿತು. ಜೊತೆಗೆ ಅವರ ಸೋದರಿ ಕಮಲಾಬಾಯಿಯವರೂ ಮೂಕಿ ಚಿತ್ರಗಳ ತಾರೆಯಾದರು. ಬಗೆಬಗೆಯ ಪ್ರಚಾರ ತಂತ್ರಗಳಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಸೂರ್ಯ ಕಂಪನಿಯ ನಿರ್ಮಾಣದ ಚಿತ್ರಗಳಿಗೆ ಮಾತಿಲ್ಲದ ಕಾರಣಕ್ಕಾಗಿಯೇ ಭಾರತದಾದ್ಯಂತ ಬೇಡಿಕೆಯಿತ್ತು.
 
ಸೂರ್ಯ ಫಿಲಂ ಕಂಪನಿಯ ಯಶಸ್ಸು ಮತ್ತು ಸಾಹಿತಿ ದೇವುಡು ನರಸಿಂಹಶಾಸ್ತ್ರಿ ಅವರ ಒತ್ತಾಸೆಯಿಂದ ಗುಬ್ಬಿ ವೀರಣ್ಣನವರು ಕರ್ನಾಟಕ ಪಿಕ್ಚರ್ಸ್ ಕಾರ್ಪೊರೇಷನ್ ಸಂಸ್ಥೆಯನ್ನು ಹುಟ್ಟು ಹಾಕಿ ಹಿಸ್ ಲವ್ ಅಫೇರ್ (೧೯೩೬), ಸಾಂಗ್ ಆಫ್ ಲೈಫ್ (೧೯೩೧) ಮತ್ತು ಹರಿಮಾಯ (೧೯೮೦) ಎಂಬ ಮೂರು ಚಿತ್ರಗಳನ್ನು ನಿರ್ಮಿಸಿದರು. ಆದರೆ ವೀರಣ್ಣನವರ ಪಾಲಿಗೆ ಮೂಕಿ ಚಿತ್ರ ನಿರ್ಮಾಣ ಒಂದು ದುಸ್ಸಾಹಸವಾಗಿತ್ತು.
"https://kn.wikipedia.org/wiki/ಕನ್ನಡ_ಚಿತ್ರರಂಗ" ಇಂದ ಪಡೆಯಲ್ಪಟ್ಟಿದೆ