ಚದರವಳ್ಳಿ [[ಕರ್ನಾಟಕ]]ದರಾಜ್ಯದ, [[ಶಿವಮೊಗ್ಗ]] ಜಿಲ್ಲೆಯ [[ಸಾಗರ]] ತಾಲ್ಲೂಕಿನ ಹಳ್ಳಿ. ಸಾಗರದಿಂದ[[ಸಾಗರ]]ದಿಂದ ಸುಮಾರು ೩೦ ಕಿಲೋಮೀಟರು ದೂರದಲ್ಲಿದೆ. ಇಲ್ಲಿ ಶ್ರೀ ಹರೀಶ ಶರ್ಮಾ ಶ್ರೀಮತಿ ವಿಜಯಲಕ್ಷ್ಮೀ ಮತ್ತು ಶ್ರೀನಿವಾಸ ಭಟ್ಟರು ದಂಪತಿಗಳ ಮಗನಾಗಿ ಜನಿಸಿದ್ದರು. ಇವರೇ ಮುಂದೆ ಸಂನ್ಯಾಸ ಸ್ವೀಕರಿಸಿ [[ರಾಮಚಂದ್ರಾಪುರ ಮಠ]]ದ ಪೀಠಾಧ್ಯಕ್ಷರಾದರು.
ಸಾಗರದಿಂದ[[ಸಾಗರ]]ದಿಂದ ಚದರವಳ್ಳಿಗೆ ಹೋಗುವ ದಾರಿಯಲ್ಲಿ [[ಶರಾವತಿ]] ನದಿ ಹರಿಯುತ್ತಿದೆ. [[ಲಿಂಗನಮಕ್ಕಿ]] ಅಣಿಕಟ್ಟೆಯಿಂದಾಗಿ ಈ ದಾರಿಗೆ ಅಡ್ಡಲಾಗಿ ಹಿನ್ನೀರು ನಿಂತಿದ್ದು ಲಾಂಚಿನ ಮೂಲಕ ದಾಟಿ ಸಾಗಬೇಕು. ಹೀಗೆ ಸಾಗುವಾಗ ಪ್ರಕೃತಿ ಸೌಂದರ್ಯವನ್ನು ಆರಾಧಿಸುವವು ವಿಶೇಷವಾದ ಆನಂದವನ್ನು ಅನುಭವಿಸುತ್ತಾರೆ. ಈ ಆನಂದವನ್ನು ಸವಿಯಲೋಸ್ಕರವೇ ಅನೇಕರು ಈ ದಾರಿಯಲ್ಲಿ ಪ್ರಯಾಣ ಮಾಡುತ್ತಾರೆ.