ತಿರುವಾಂಕೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up using AWB
ಚು clean up, replaced: → (32) using AWB
೩೨ ನೇ ಸಾಲು:
{{Travancore}}
'''ಟ್ರಾವಂಕೂರು/ತಿರುವಾಂಕೂರು ಸಾಮ್ರಾಜ್ಯ''' ವು ({{pron-en|ˈtrævəŋkɔər}}; {{indic | lang=ml | indic=തിരുവിതാംകൂര്‍ | trans=tiruvitāṁkūr }} {{IPA-ml|t̪iɾuʋit̪aːɱkuːr|}}) ಟ್ರಾವಂಕೂರು/ತಿರುವಾಂಕೂರು ರಾಜ ಮನೆತನದ ಆಳ್ವಿಕೆಯಲ್ಲಿದ್ದು, ಟ್ರಿವೇಂಡ್ರಮ್‌‌ ಅನ್ನು (ಪ್ರಸ್ತುತ [[ತಿರುವನಂತಪುರಮ್]]‌‌) ತನ್ನ ರಾಜಧಾನಿಯನ್ನಾಗಿ ಹೊಂದಿದ್ದ ಭಾರತೀಯ ಉಪಖಂಡದಲ್ಲಿನ ಒಂದು ರಾಜಾಧಿಪತ್ಯದ ರಾಜ್ಯವಾಗಿತ್ತು. ಆಧುನಿಕ ದಿನಮಾನದ ದಕ್ಷಿಣ [[ಕೇರಳ]]ದ ಬಹುತೇಕ ಭಾಗ, ಕನ್ಯಾಕುಮಾರಿ ಜಿಲ್ಲೆ ಮತ್ತು [[ತಮಿಳುನಾಡು|ತಮಿಳು ನಾಡಿ]]ನ ಬಹುತೇಕ ದಕ್ಷಿಣ ಭಾಗವು ಈ ರಾಜ್ಯಕ್ಕೆ ಸೇರಿದ್ದವು. ಈ ರಾಜ್ಯದ ಅರಸರಿಗೆ [[ಬ್ರಿಟೀಷ್ ಸಾಮ್ರಾಜ್ಯ|ಬ್ರಿಟಿಷ್‌‌ ಸಾಮ್ರಾಜ್ಯ]]ವು 19-ಬಂದೂಕುಗಳ ಗೌರವ ರಕ್ಷೆಯ ಮರ್ಯಾದೆಯನ್ನು ನೀಡಿತ್ತು. ಮಹಾರಾಜಾ ಮಾರ್ತಾಂಡ ವರ್ಮರನ್ನು ಸಾಮಾನ್ಯವಾಗಿ "ಆಧುನಿಕ ಟ್ರಾವಂಕೂರು/ತಿರುವಾಂಕೂರು" ನಗರದ ಸ್ಥಾಪಕರೆಂದು ಪರಿಗಣಿಸಲಾಗುತ್ತದೆ. ಈ ರಾಜ್ಯದ ಧ್ವಜವು ಕೆಂಪು ಬಣ್ಣದ್ದಾಗಿದ್ದು, ಬೆಳ್ಳಿಯ ಬಲಮುಖಿ-ಸುರುಳಿಯಾಕಾರದಲ್ಲಿರುವ, ಪವಿತ್ರ ಶಂಖವನ್ನು (''ಟರ್ಬಿನೆಲ್ಲಾ ಪೈರಮ್'' ‌) ಹೊಂದಿತ್ತು. 1947ರಲ್ಲಿ ಭಾರತಕ್ಕೆ [[ಭಾರತದ ಸ್ವಾತಂತ್ರ್ಯ ದಿನಾಚರಣೆ|ಸ್ವಾತಂತ್ರ್ಯ]] ಲಭಿಸಿದ ನಂತರ ಟ್ರಾವಂಕೂರು/ತಿರುವಾಂಕೂರು ಮತ್ತು ಕೊಚಿನ್‌‌/ಕೊಚ್ಚಿನ್‌‌ನ ರಾಜಾಧಿಪತ್ಯದ ರಾಜ್ಯಗಳನ್ನು 1 ಜುಲೈ 1949ರಂದು ವಿಲೀನಗೊಳಿಸಿ ಟ್ರಾವಂಕೂರು/ತಿರುವಾಂಕೂರು-ಕೊಚಿನ್‌‌/ಕೊಚ್ಚಿನ್‌‌ ಎಂಬ ಹೆಸರಿನ ಭಾರತದ ರಾಜ್ಯವನ್ನು ರೂಪಿಸಲಾಯಿತು. ನಂತರ ಟ್ರಾವಂಕೂರು/ತಿರುವಾಂಕೂರು-ಕೊಚಿನ್‌‌/ಕೊಚ್ಚಿನ್‌‌ ರಾಜ್ಯಕ್ಕೆ (ಆಧುನಿಕ ದಿನಮಾನದ ತಮಿಳು ನಾಡು) ಮದ್ರಾಸು ರಾಜ್ಯದ ಮಲಬಾರ್‌‌ ಜಿಲ್ಲೆಯನ್ನು ಸೇರಿಸಿ 1 ನವೆಂಬರ್‌ 1956ರಂದು, ಕೇರಳ ಎಂಬ ಹೆಸರಿನ ಭಾರತದ ರಾಜ್ಯವನ್ನು ರೂಪಿಸಲಾಯಿತು. ಇಲ್ಲಿನ ಕಡೆಯ ಮಹಾರಾಜರೆಂದರೆ ಚಿತಿರಾ ತಿರುನಾಳ್‌‌/ಲ್‌‌‌‌ ಬಲರಾಮ ವರ್ಮ ಹಾಗೂ ಕಡೆಯ ದಿವಾನರು PGN ಉನ್ನಿಥ/ತನ್‌‌ರವರಾಗಿದ್ದರು.
 
== ಭೌಗೋಳಿಕತೆ ==
{|
Line ೪೦ ⟶ ೩೯:
ಟ್ರಾವಂಕೂರು/ತಿರುವಾಂಕೂರು ರಾಜ್ಯವು ಪ್ರಸ್ತುತ ದಿನಮಾನದ ದಕ್ಷಿಣ ಕೇರಳದಲ್ಲಿತ್ತು. ಈ ರಾಜ್ಯದ ಅರಸರನ್ನು ''ಶ್ರೀ ಪದ್ಮನಾಭದಾಸನ್'' ‌ ಎಂದು ಭಗವಾನ್‌ ವಿಷ್ಣು [[ದೇವರು|ದೇವರ]] ಅವತಾರ/ರೂಪವೊಂದಾದ ''ಪದ್ಮನಾಭ ಸ್ವಾಮಿ'' ಯ ಸೇವಕನೆಂಬರ್ಥದಲ್ಲಿ ಕರೆಯಲಾಗುತ್ತಿತ್ತು.
ಹಿಂದಿನ ಸಾಮ್ರಾಜ್ಯದ ಭೌಗೋಳಿಕ ಮಿತಿಗಳನ್ನು ಮೂರು ನೈಸರ್ಗಿಕ ಭೂಪ್ರದೇಶಗಳು ರೂಪಿಸಿದ್ದವು - ಪಶ್ಚಿಮದಲ್ಲಿರುವ ಕರಾವಳಿ ಪ್ರದೇಶ, ಕೇಂದ್ರದಲ್ಲಿ ನಡುನಾಡು ಹಾಗೂ ಪೂರ್ವಕ್ಕೆ 9,000 ಅಡಿಗಳಷ್ಟು ಎತ್ತರವಿರುವ ಪರ್ವತ ಪಂಕ್ತಿಗಳೇ ಈ ಗಡಿಗಳಾಗಿದ್ದವು.
 
== ಟ್ರಾವಂಕೂರು/ತಿರುವಾಂಕೂರಿನ ತಿಳಿದುಬಂದಿರುವ ಇತಿಹಾಸ ==
=== ಹಿಂದೆಯೇ ದಾಖಲಿಸಲಾಗಿದ್ದ ಇತಿಹಾಸ ===
ಒಂದನೇ ಶತಮಾನ ADಯಲ್ಲಿ ಕೇರಳ ಪ್ರದೇಶಕ್ಕೆ ಭೇಟಿ ನೀಡಿದ್ದ ಪ್ಲಿನಿಯು ಪ್ರಸ್ತಾಪಿಸಿದ್ದ ಪ್ರಕಾರ ಈ ಪ್ರದೇಶವು ತಮಿಳು ಅಯ್‌‌' ರಾಜಸಂತತಿಯವರಿಂದ ಸಂಗಮ್‌‌/ಮ ಅವಧಿಯಲ್ಲಿ (c. 300 BC – 600 AD) ಮಧುರೈ ಪಾಂಡ್ಯನ್‌‌ ರಾಜಸಂತತಿಯ ಸಾರ್ವಭೌಮತ್ವದಡಿಯಲ್ಲಿ ಆಳಲ್ಪಡುತ್ತಿದ್ದು ಈಗಿನ ದಿನಮಾನದ ತಿರುವಲ್ಲಾ ಬಳಿಯಿರುವ ನೆಲ್ಕಿಂದಾ/ಡಾ ಅಥವಾ ನೆಲ್ಸಿಂದಾ/ಡಾವನ್ನು ರಾಜಧಾನಿಯನ್ನಾಗಿ ಹೊಂದಿತ್ತು.<ref>ನ್ಯಾಚುರಲ್‌ ಹಿಸ್ಟರಿ (ಪ್ಲಿನಿ)</ref> ಪಿತೃಪ್ರಧಾನ ವ್ಯವಸ್ಥೆಯ ತಮಿಳು ವೇನಾಡು (ಕೊಲ್ಲಂ) ಅರಸರು ಅಯ್‌‌ ರಾಜಸಂತತಿಯವರೊಂದಿಗೆ ಸುಮಾರು 1100 AD.ಯ ವೇಳೆಗೆ ವಿಲೀನಗೊಂಡುದುದು ವೇನಾಡು ಸಾಮ್ರಾಜ್ಯವು ರೂಪುಗೊಳ್ಳಲು ಕಾರಣವಾಯಿತು. 1310ರಲ್ಲಿ ಮಲಿಕ್‌‌ ಕಾಫರ್‌‌/ಮಲ್ಲಿಕಾಫರನ ಆಕ್ರಮಣದ ನಂತರ ತಮಿಳು ವೇನಾಡು ರಾಜರುಗಳು 1314ರಲ್ಲಿ ಮಾತೃಪ್ರಧಾನ ವ್ಯವಸ್ಥೆಯನ್ನು ಅಂಗೀಕರಿಸುವ ಮೂಲಕ, ಉತ್ತರ ಕೇರಳದ ಕೊಲಾತಿ/ಥಿರಿಸ್‌‌ ಮನೆತನದ ಇಬ್ಬರು ಮಾತೃಪ್ರಧಾನ ವ್ಯವಸ್ಥೆಯ ರಾಜಕುಮಾರಿಯರಿಗೆ ತಮ್ಮ ಅಧಿಕಾರವನ್ನು ಬಿಟ್ಟುಕೊಟ್ಟರು.
 
=== 18ನೇ ಶತಮಾನ ===
ಟ್ರಾವಂಕೂರು/ತಿರುವಾಂಕೂರಿನ ಅರಸರು ಸಮಂತನ್‌ ನಾಯರ್‌‌ ಮತ್ತು ಇಲ್ಲತು ನಾಯರ್‌‌‌ ಜಾತಿಗಳಿಗೆ ಸೇರಿದ ಮಲೆಯಾಳಿ ಕ್ಷತ್ರಿಯರಾಗಿದ್ದರು.<ref name="jstor.org">http://www.jstor.org/stable/3629883 ದ ಇಂಟರ್ನಲ್‌‌ ಸ್ಟ್ರಕ್ಚರ್‌‌ ಆಫ್‌ ದ ನಾಯರ್‌‌ ಕ್ಯಾಸ್ಟ್‌‌, C. J. ಫುಲ್ಲರ್‌‌</ref><ref name="autogenerated1">[http://www.everyculture.com/South-Asia/Nayar-History-and-Cultural-Relations.html ನಾಯರ್‌ ಜನರ ಇತಿಹಾಸ ಹಾಗೂ ಸಾಂಸ್ಕೃತಿಕ ಬಾಂಧವ್ಯಗಳು]</ref> ಇಲ್ಲತು ನಾಯರ್‌‌‌ಗಳು ಸೈನ್ಯದ ಮುಂಚೂಣಿ ಸ್ಥಾನಗಳಲ್ಲಿದ್ದರು. ಸಮಂತನ್‌ ನಾಯರ್‌‌ಗಳು ಕೂಡಾ ಇತರೆ ನಾಯರ್‌‌‌ ಜಾತಿಗಳವರ ಹಾಗೆಯೇ ಮರುಮಕ್ಕಥಾಯಮ್‌‌ ಎಂದು ಹೆಸರಾದ ಮಾತೃಸಂತತಿಯ ಉತ್ತರಾಧಿಕಾರತ್ವದ ವ್ಯವಸ್ಥೆಯನ್ನೇ ಪಾಲಿಸುತ್ತಿದ್ದರು.
 
ಆಧುನಿಕ ಟ್ರಾವಂಕೂರು/ತಿರುವಾಂಕೂರಿನ ಇತಿಹಾಸವು ವೇನಾಡು ಸಾಮ್ರಾಜ್ಯದ ಉತ್ತರಾಧಿಕಾರತ್ವವನ್ನು ಪಡೆದಿದ್ದ ಹಾಗೂ 1729–1758ರ ಅವಧಿಯ ತನ್ನ ಆಳ್ವಿಕೆಯಲ್ಲಿ ಟ್ರಾವಂಕೂರು/ತಿರುವಾಂಕೂರು ರಾಜ್ಯವನ್ನಾಗಿ ವಿಸ್ತರಿಸಿದ್ದ ಮಾರ್ತಾಂಡ ವರ್ಮನೊಂದಿಗೆ ಆರಂಭವಾಗುತ್ತದೆ. ಕನ್ಯಾಕುಮಾರಿ ಜಿಲ್ಲೆಯ ನಾಗರ್‌‌ಕೋಯಿಲ್‌‌ ಸಮೀಪದ ಪದ್ಮನಾಭಪುರಮ್‌‌ ನಂತರ
[[ತಿರುವನಂತಪುರಮ್|ತಿರುವನಂತಪುರಮ್‌‌]]ಗೆ ರಾಜಧಾನಿಯನ್ನು ಸ್ಥಳಾಂತರಿಸುವ ಮೊದಲು ಟ್ರಾವಂಕೂರು/ತಿರುವಾಂಕೂರು ರಾಜ್ಯದ ರಾಜಧಾನಿಯಾಗಿತ್ತು. ಟ್ರಾವಂಕೂರು/ತಿರುವಾಂಕೂರು ಚಕ್ರಾಧಿಪತ್ಯದ ಮತ್ತೂ ಗಮನ ಸೆಳೆವ ವ್ಯಕ್ತಿಗಳಲ್ಲಿ ವೇಲು ತಂ/ಥಂಪಿ ದಲವಾ ಮತ್ತು ಉದಯ ಕುರುಪ್‌‌(ಪದ ಕುರುಪ್‌‌) ಸೇರಿದ್ದರು.
 
==== ಮಾರ್ತಾಂಡ ವರ್ಮ ====
 
ಮಾರ್ತಾಂಡ ವರ್ಮ ದಕ್ಷಿಣದಲ್ಲಿನ ಕನ್ಯಾಕುಮಾರಿಯಿಂದ ಉತ್ತರದಲ್ಲಿರುವ ಇಡ/ದಪ್ಪಳ್ಳಿ/ಲ್ಲಿಯವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದ್ದ ಶಕ್ತಿಶಾಲಿ ಅರಸರಾಗಿದ್ದರು. ಅವರು ಬ್ರಿಟಿಷ್‌‌ ಈಸ್ಟ್‌ ಇಂಡಿಯಾ ಕಂಪೆನಿಯೊಂದಿಗೆ ಒಂದು ಒಪ್ಪಂದಕ್ಕೆ ಸಹಿ ಹಾಕಿದರಲ್ಲದೇ ಅವರ ಸಹಾಯದಿಂದ ಎಂಟು ಮಂದಿ ಊಳಿಗಮಾನ್ಯ ಭೂಮಾಲಿಕ/ಜಮೀನ್ದಾರರ ಅಧಿಕಾರವನ್ನು ಮೊಟಕುಗೊಳಿಸಿ (ಎಟ್ಟುವೀಟಿಲ್‌‌ ಪಿಲ್ಲಾಮರ್‌‌) ಹಿಂದಿನ ಅರಸ ರಾಜಾ ರಾಮ ವರ್ಮರ ಥಂಪಿ ಪುತ್ರರನ್ನು ಬೆಂಬಲಿಸಿದ ಎತ್ತಾರ ಯೋಗಮ್‌‌ನನ್ನು ಸೋಲಿಸಿದರು, ಇದಕ್ಕೆ ಕಾರಣ ಟ್ರಾವಂಕೂರು/ತಿರುವಾಂಕೂರು ರಾಜ ಮನೆತನವು ನಾಯರ್‌‌‌ "ಮರುಮಕ್ಕಥಾಯಮ್‌‌" ವ್ಯವಸ್ಥೆಯನ್ನು ಪಾಲಿಸುತ್ತಿದ್ದುದರಿಂದ ಉತ್ತರಾಧಿಕಾರವು ಅರಸರ ಮಕ್ಕಳ ಬದಲಿಗೆ ಅವರ ಸಹೋದರಿಯ ಮಕ್ಕಳಿಗೆ ಸಿಗುತ್ತಿತ್ತು. ಆಗ ಅವಿಚ್ಛಿನ್ನವಾಗಿ ನಡೆದ ಕದನಗಳಲ್ಲಿ ಅವರು ಅತ್ತಿಂಗಲ್‌‌, ಕೊಲ್ಲಂ, ಕಾಯಮ್‌ಕುಲಮ್‌‌, ಕೊಟ್ಟಾರಾಕಾರ, ಕೊಟ್ಟಾಯಮ್‌‌, ಚಂಗನಾಸ್ಸೆರಿ, ಮೀನಾಚಿಲ್, ಪೂಂಜಾರ್‌‌ ಮತ್ತು ಅಂಬಾಲಾಪುಝಾ/ಳಾಗಳೂ ಸೇರಿದಂತೆ ಕೊಚಿನ್‌‌/ಕೊಚ್ಚಿನ್‌‌ನವರೆಗೆ ಎಲ್ಲಾ ಪ್ರದೇಶಗಳ ರಾಜರುಗಳನ್ನು ಸೋಲಿಸುತ್ತಾ ಸಾಮ್ರಾಜ್ಯಕ್ಕೆ ಸೇರಿಸಿಕೊಳ್ಳುತ್ತಾ ಹೋದರು. ಅವರು ಟ್ರಾವಂಕೂರು/ತಿರುವಾಂಕೂರು–ಡಚ್ಚರುಗಳ ನಡುವೆ ನಡೆದ (1739–1753) ಯುದ್ಧದ ಅವಧಿಯಲ್ಲಿ ಡಚ್‌‌ ಈಸ್ಟ್‌‌ ಇಂಡಿಯಾ ಕಂಪೆನಿಯನ್ನು ಸೋಲಿಸುವಲ್ಲಿ ಯಶಸ್ವಿಯಾದರು, ಇವುಗಳಲ್ಲಿ ಅತಿ ನಿರ್ಣಾಯಕವಾದ ಕದನವೆಂದರೆ ಕೊಲಾಚೆಲ್‌‌ನ ಕದನವಾಗಿದ್ದು (10 ಆಗಸ್ಟ್‌ 1741) ಅದರಲ್ಲಿ ಡಚ್‌‌ ಉನ್ನತ ನೌಕಾಧಿಪತಿ ಯುಸ್ಟಾಚಿಯಸ್‌‌ ಡೆ ಲೆನ್ನಾಯ್‌‌ರನ್ನು ಸೆರೆಹಿಡಿಯಲಾಗಿತ್ತು. 1750 ADಯ ಜನವರಿ 3ರಂದು (ಮಕರಮ್‌‌ 5, 725 M.E.), ಅವರು ತನ್ನ ಸಾಮ್ರಾಜ್ಯವನ್ನು ತಮ್ಮ ರಕ್ಷಕ ಟ್ರಿವೇಂಡ್ರಮ್‌‌ನ ಶ್ರೀ.ಪದ್ಮನಾಭ (ಭಗವಾನ್‌ ವಿಷ್ಣು) ದೇವರಿಗೆ ಸಮರ್ಪಿಸಿದರು (ತ್ರಿಪ್ಪಾದಿದಾನಮ್‌‌) ಇದಾದ ನಂತರದಿಂದ ಟ್ರಾವಂಕೂರು/ತಿರುವಾಂಕೂರಿನ ಅರಸರುಗಳೆಲ್ಲಾ ಸಾಮ್ರಾಜ್ಯವನ್ನು ಶ್ರೀ ಪದ್ಮನಾಭ (ಪದ್ಮನಾಭದಾಸನ್‌‌) ದೇವರ ಸೇವಕರಾಗಿ ಆಳ್ವಿಕೆ ನಡೆಸಿದರು. ಡಚ್‌‌/ಡಚ್ಚರು ಮಹಾರಾಜನೊಂದಿಗೆ ಒಂದು ಶಾಂತಿ ಒಪ್ಪಂದಕ್ಕೆ 1753 ADಯಲ್ಲಿ ಸಹಿ ಹಾಕಿದರು. ಪದಚ್ಯುತಗೊಂಡ ಅರಸರುಗಳ ಒಕ್ಕೂಟ ಮತ್ತು ಕೊಚಿನ್‌‌/ಕೊಚ್ಚಿನ್‌‌ನ ರಾಜರನ್ನು ಸೋಲಿಸಿದ ಅಂಬಾಲಾಪುಝಾ/ಳಾ (3 ಜನವರಿ 1754) ಕದನದ ನಂತರ ಮಾರ್ತಾಂಡ ವರ್ಮರು ತಮ್ಮ ಆಳ್ವಿಕೆಗಿದ್ದ ಎಲ್ಲಾ ವಿರೋಧಗಳನ್ನು ತೊಡೆದುಹಾಕಿದ್ದರು. ಟ್ರಾವಂಕೂರು/ತಿರುವಾಂಕೂರು ಮತ್ತು ಕೊಚಿನ್‌‌/ಕೊಚ್ಚಿನ್‌‌ ರಾಜ್ಯಗಳ ನಡುವೆ ಒಂದು ಉತ್ತರ ಗಡಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಉದ್ದೇಶದ ಒಪ್ಪಂದಕ್ಕೆ 1757 ADಯಲ್ಲಿ ಬರಲಾಯಿತು. ಅವರು ತೆರಿಗೆ ವ್ಯವಸ್ಥೆಯನ್ನು ಸುಸಂಘಟಿಸಿದ್ದರು ಹಾಗೂ ಅನೇಕ ನೀರಾವರಿ ಕಟ್ಟೋಣಗಳನ್ನು ಕಟ್ಟಿಸಿದ್ದರು. ಪ್ರಸಿದ್ಧ ಕೊಲಾಚೆಲ್‌‌ನ ಕದನದಲ್ಲಿ ಯುದ್ಧ ಕೈದಿಯನ್ನಾಗಿ ಸೆರೆಹಿಡಿಯಲಾಗಿದ್ದ ನೌಕಾಧಿಪತಿ ಯುಸ್ಟಾಚಿಯಸ್‌‌ ಡೆ ಲೆನ್ನಾಯ್‌‌ನನ್ನು ಹಿರಿಯ ಉನ್ನತ ನೌಕಾಧಿಪತಿ (ವಲಿಯ ಕಪ್ಪಿತನ್‌‌) ಎಂಬ ಸ್ಥಾನಕ್ಕೆ ನೇಮಿಸಿದರಲ್ಲದೇ ಅವರು ಮದ್ದುಗುಂಡುಗಳನ್ನು ಹಾಗೂ ಫಿರಂಗಿದಳಗಳನ್ನು ಪರಿಚಯಿಸುವ ಮೂಲಕ ಟ್ರಾವಂಕೂರು/ತಿರುವಾಂಕೂರು ಸೇನೆಯನ್ನು ಆಧುನಿಕೀಕರಿಸಿದರು. ಅಯ್ಯಪ್ಪನ್‌‌ ಮಾರ್ತಾಂಡ ಪಿಳ್ಳೈರವರು "ಸರ್ವಾಧಿಕಾರಿಕರ್‌‌" (ನಾಯರ್‌‌‌ ಪಟ್ಟಾಳಮ್‌ ಸೇನೆಯ ಅಧಿನಾಯಕ) ಆಗಿ ಸೇವೆ ಸಲ್ಲಿಸಿದ್ದರು. ಮಾರ್ತಾಂಡ ವರ್ಮರು ''ಚೆಂಪಕ ರಾಮನ್‌‌'' ‌ನಂತಹಾ ಬಿರುದುಗಳನ್ನೂ ಹಾಗೂ ''ಎಟ್ಟಾರಯುಮ್‌‌ ಕೊಪ್ಪುಮ್‌‌'' ನಂತಹಾ ಉಪಾಧಿಗಳನ್ನು ಪರಿಚಯಿಸಿ ಎಟ್ಟುವೀಟಿಲ್‌‌ ಪಿಲ್ಲಾಮರ್‌‌ನೊಂದಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾಗ ತನ್ನ ಮೇಲಿದ್ದ ನಿಷ್ಠೆಯನ್ನು ಸಡಿಲಿಸದೇ ಇದ್ದುದಕ್ಕಾಗಿ ಜಮೀನ್ದಾರರುಗಳು ಹಾಗೂ ಆತನ ಸಂಬಂಧಿಕರುಗಳಿಗೆ ದಯಪಾಲಿಸಿದರು. ಸೇನಾಪಡೆಯ ಆತನ ಸಂಪೂರ್ಣ ಕಾಲಾವಧಿಯಲ್ಲಿ ರಾಮಯ್ಯನ್‌‌ ದಳವಾ ಎಂಬುವವನು ಸಮರ್ಥ ಮಂತ್ರಿಯಾಗಿದ್ದನು.
 
==== ಧರ್ಮ ರಾಜ ====
 
ಧರ್ಮ ರಾಜ ಎಂದೇ ಜನಪ್ರಿಯನಾಗಿದ್ದ ಆತನ ಉತ್ತರಾಧಿಕಾರಿ ಕಾರ್ತಿಕ ತಿರುನಲ್‌‌ ರಾಮ ವರ್ಮಾ 1795ರಲ್ಲಿ ಪದ್ಮನಾಭಪುರಮ್‌‌ನಿಂದ [[ತಿರುವನಂತಪುರಮ್|ತಿರುವನಂತಪುರಮ್‌‌]]ಗೆ ರಾಜಧಾನಿಯನ್ನು ಸ್ಥಳಾಂತರಿಸಿದರು. ರಾಮ ವರ್ಮಾರ ಅವಧಿಯನ್ನು ಟ್ರಾವಂಕೂರು/ತಿರುವಾಂಕೂರಿನ ಇತಿಹಾಸದಲ್ಲಿ ಸುವರ್ಣ ಯುಗ ಎಂದು ಪರಿಗಣಿಸಲಾಗುತ್ತದೆ. ತನ್ನ ಪೂರ್ವಾಧಿಪತಿ/ಪೂರ್ವವರ್ತಿ ಮಾರ್ತಾಂಡ ವರ್ಮರು ಜಯಿಸಿ ಪಡೆದುಕೊಂಡಿದ್ದ ಪ್ರಾಂತ್ಯಗಳನ್ನು ಉಳಿಸಿಕೊಂಡಿದ್ದು ಮಾತ್ರವಲ್ಲದೇ ಸಾಮಾಜಿಕ ಪರಿಸ್ಥಿತಿಯನ್ನು ಸುಧಾರಿಸಿದರು ಮತ್ತು ಅಭಿವೃದ್ಧಿಪರ ಕಾರ್ಯಕ್ರಮಗಳಿಗೆ ಬೆಂಬಲಿಸಿದರು. ಟ್ರಾವಂಕೂರು/ತಿರುವಾಂಕೂರಿನ ದಿವಾನನಾಗಿದ್ದ ರಾಜಾ ಕೇಸ/ಶವದಾಸ ಪಿಳ್ಳೈ ಎಂಬ ಬಹು ದಕ್ಷ ಆಡಳಿತಗಾರನ ಅತ್ಯುತ್ತಮ ಸಹಕಾರ ಆತನಿಗೆ ಒದಗಿತ್ತು.
 
1789ರಲ್ಲಿ ಈತನ ಆಡಳಿತಾವಧಿಯಲ್ಲಿ [[ಮೈಸೂರು|ಮೈಸೂರಿ]]ನ ಅರಸ [[ಟಿಪ್ಪು ಸುಲ್ತಾನ್|ಟೀಪು/ಟಿಪ್ಪು ಸುಲ್ತಾನ್‌‌]] ಟ್ರಾವಂಕೂರು/ತಿರುವಾಂಕೂರಿನ ಮೇಲೆ ದಾಳಿ ಮಾಡಿದ್ದನು.ಧರ್ಮ ರಾಜರು ಟ್ರಾವಂಕೂರು/ತಿರುವಾಂಕೂರಿನಲ್ಲಿ ಆಶ್ರಯವನ್ನು ಪಡೆದಿದ್ದ ಮೈಸೂರು ರಾಜ್ಯದ ಆಕ್ರಮಿತ ಮಲಬಾರ್‌‌ನ ನಿರಾಶ್ರಿತರನ್ನು ಅವರ ವಶಕ್ಕೊಪ್ಪಿಸಲು ನಿರಾಕರಿಸಿದ್ದರು. ಟ್ರಾವಂಕೂರು/ತಿರುವಾಂಕೂರು ಸೇನೆಯು ಸುಲ್ತಾನನನ್ನು ಸಮರ್ಥವಾಗಿ ಎದುರಿಸಿತು ಮಾತ್ರವಲ್ಲದೇ ನಾಯರ್‌‌‌ ಯೋಧರುಗಳು ಆತನನ್ನು ಅಲುವಾದ ಸಮೀಪ ಸೋಲಿಸಲು ಸಾಧ್ಯವಾಯಿತು, ಟಿಪ್ಪು/ಟೀಪು ಕಂದಕವೊಂದರಲ್ಲಿ ಬಿದ್ದು ಶಾಶ್ವತವಾಗಿ ಹೆಳವನಾದನಲ್ಲದೇ ತನ್ನ ಪ್ರಖ್ಯಾತ ಖಡ್ಗವನ್ನು ಕಳೆದುಕೊಂಡನು.
 
==== ಬಲರಾಮ ವರ್ಮ ====
 
1798ರಲ್ಲಿ ಆತನು ಮರಣಿಸಿದ ನಂತರ, ಬಲರಾಮ ವರ್ಮನು ಹದಿನಾರನೇ ವಯಸ್ಸಿನಲ್ಲಿ ರಾಜ್ಯಭಾರವನ್ನು ವಹಿಸಿಕೊಂಡನು. ಜಯಂತನ್‌‌ ಸಂ/ಶಂಕರನ್‌‌ ನಂಬೂದಿ/ತಿರಿಯನ್ನು ವಜಾಗೊಳಿಸಿದ ನಂತರ ''ದಿವಾನ'' ನಾಗಿ ಅಧಿಕಾರ ವಹಿಸಿಕೊಂಡ ವೇಲು ತಂ/ಥಂಪಿಯ ಕಾಲದಿಂದ ''ದಿವಾನ್‌‌‌/ನ'' ರು ಅಥವಾ ಪ್ರಧಾನ ಮಂತ್ರಿಗಳು ಸಾಮ್ರಾಜ್ಯದ ನಿಯಂತ್ರಣವನ್ನು ತಮ್ಮ ಕೈಗೆ ತೆಗೆದುಕೊಳ್ಳತೊಡಗಿದರು. ಮೊದಮೊದಲಿಗೆ, ವೇಲು ಥಂಪಿ ಮತ್ತು ಇಂಗ್ಲಿಷ್‌/ಆಂಗ್ಲ ಈಸ್ಟ್‌‌ ಇಂಡಿಯಾ ಕಂಪೆನಿಯವರು ಉತ್ತಮ ಸ್ನೇಹವನ್ನೇ ಹೊಂದಿದ್ದರು. ಸೇನೆಯು ಒಂದು ಘಟಕವು AD 1805ರಲ್ಲಿ ವೇಲು ಥಂಪಿಯ ವಿರುದ್ಧ ದಂಗೆ ಎದ್ದಿತು, ಆಗ ಥಂಪಿಯು ಬ್ರಿಟಿಷ್‌‌ ರೆಸಿಡೆಂಟ್‌/ಸ್ಥಾನಿಕ ಪ್ರತಿನಿಧಿಯ ಬಳಿ ಆಶ್ರಯವನ್ನು ಪಡೆದುಕೊಂಡನಲ್ಲದೇ, ಸ್ವಲ್ಪ ಕಾಲದ ನಂತರ ಬ್ರಿಟಿಷ್‌‌ ಸೇನಾಪಡೆಯನ್ನು ಬಳಸಿಕೊಂಡು ದಂಗೆಯನ್ನು ಬಗ್ಗುಬಡಿದನು. ಇಂಗ್ಲಿಷ್‌/ಆಂಗ್ಲ ಈಸ್ಟ್‌‌ ಇಂಡಿಯಾ ಕಂಪೆನಿಯೊಂದಿಗೆ ಮತ್ತೊಂದು ಹೊಸ ಒಪ್ಪಂದವನ್ನು ಪರಿಷ್ಕರಿಸಿಕೊಳ್ಳುವ ವಿಚಾರದಲ್ಲಿ ಬಹು ಮುಖ್ಯ ಪಾತ್ರವನ್ನು ಕೂಡಾ ವೇಲು ಥಂಪಿ ವಹಿಸಿದ್ದನು. ಆದಾಗ್ಯೂ ಟ್ರಾವಂಕೂರು/ತಿರುವಾಂಕೂರಿನ ಪರವಾಗಿ ನಡೆಸಿದ 1791ರ ಟ್ರಾವಂಕೂರು/ತಿರುವಾಂಕೂರು-ಮೈಸೂರು ಯುದ್ಧದಲ್ಲಿ ಭಾಗವಹಿಸಿದ್ದುದಕ್ಕಾಗಿ ಕಂಪೆನಿಯ ಪರಿಹಾರದ ಪಾವತಿಯ ಬೇಡಿಕೆಯು ದಿವಾನರು ಮತ್ತು ರೆಸಿಡೆಂಟ್‌/ಸ್ಥಾನಿಕ ಪ್ರತಿನಿಧಿಯ ನಡುವೆ ಘರ್ಷಣೆಗೆ ಕಾರಣವಾಯಿತು. ವೇಲು ಥಂಪಿ ಮತ್ತು ಕೊಚಿನ್‌‌/ಕೊಚ್ಚಿನ್‌‌ನ ದಿವಾನರಾದ ಪಲೈಯತ್‌‌ ಅಚನ್‌‌ ಈರ್ವರೂ ಸೇರಿ ಕಂಪೆನಿಯ ವಿರುದ್ಧ ಯುದ್ಧ ಸಾರಿದರು. ಎರಡೂ ಸಾಮ್ರಾಜ್ಯಗಳ ಮಹಾರಾಜರು ಬಹಿರಂಗವಾಗಿ ಯುದ್ಧಕ್ಕೆ ಬೆಂಬಲವನ್ನು ಘೋಷಿಸಿರಲಿಲ್ಲ. ಮೊದಲಿಗೆ ಈ ಮಿತ್ರರಾಜ್ಯಗಳು ಯುದ್ಧದಲ್ಲಿ ಗೆಲುವನ್ನು ಸಾಧಿಸಿದರಲ್ಲದೇ ಡಿಸೆಂಬರ್‌ 18, 1808ರಂದು ಮಿತ್ರರಾಜ್ಯಗಳ ಸೇನಾಪಡೆಗಳು ಕೊಚಿನ್‌‌/ಕೊಚ್ಚಿನ್‌‌ನಲ್ಲಿದ್ದ ರೆಸಿಡೆಂಟ್‌/ಸ್ಥಾನಿಕ ಪ್ರತಿನಿಧಿಯ ನಿವಾಸದ ಮೇಲೆ ದಾಳಿ ನಡೆಸಿದವು. ಮಹಿಳೆಯರನ್ನು ಕೊಚಿನ್‌‌/ಕೊಚ್ಚಿನ್‌‌ನಲ್ಲಿರುವ ಕಂಪೆನಿಯ ಗುಡಾರಗಳಿಗೆ ಕಳಿಸಲಾಯಿತಾದರೂ ಪುರುಷ ಬ್ರಿಟಿಷ್‌‌ ಯುದ್ಧಕೈದಿಗಳನ್ನು ಮುಳುಗಿಸಿ ಕೊಲ್ಲಲಾಯಿತು. ಕೊಚಿನ್‌‌/ಕೊಚ್ಚಿನ್‌‌ ಮೇಲೆಯೇ ಮಿತ್ರ ರಾಜ್ಯಗಳು ಜನವರಿ 19, 1809ರಂದು ನಡೆಸಿದ ಆಕ್ರಮಣವು ವಿಫಲವಾಗಿ ಮಿತ್ರರಾಜ್ಯಗಳಿಗೆ ಭಾರೀ ನಷ್ಟವುಂಟಾದಾಗ ಪರಿಸ್ಥಿತಿಯು ಬದಲಾಗಿತ್ತು. ಕಂಪೆನಿಯ ಸೈನಿಕರ ಪಡೆಯನ್ನು ಅರಂಬೋಲಿ ಘಾಟ್‌‌ಗಳೆಡೆಗೆ ಮುನ್ನಡೆಸಿದ Col. ಲೆಗೆ/ಗ/ಜೆರನು ಉದಯಗಿರಿ ಮತ್ತು ಪದ್ಮನಾಭಪುರಮ್‌‌ಗಳ ಕೋಟೆಗಳನ್ನು ಫೆಬ್ರವರಿ 19, 1809ರಂದು ಸ್ವಾಧೀನಪಡಿಸಿಕೊಂಡನು. ಈ ಎಲ್ಲಾ ಬೆಳವಣಿಗೆಗಳಾದ ನಂತರ, ಯಾವುದೇ ಹೋರಾಟದಲ್ಲಿ ಬಹಿರಂಗವಾಗಿ ಪಾತ್ರ ವಹಿಸದಿದ್ದ ಟ್ರಾವಂಕೂರು/ತಿರುವಾಂಕೂರಿನ ಮಹಾರಾಜರು ವೇಲು ಥಂಪಿಯ ವಿರುದ್ಧ ತಿರುಗಿಬಿದ್ದರು. ಕಂಪೆನಿಯ ಪಡೆಗಳು ಫೆಬ್ರವರಿ 27, 1809ರಂದು ಕೊಚಿನ್‌‌/ಕೊಚ್ಚಿನ್‌‌ನಲ್ಲಿ ಪಲೈಯತ್‌‌ ಅಚನ್‌‌ನನ್ನು ಸೋಲಿಸಿದವು. ಪಲೈಯತ್‌‌ ಅಚನ್‌‌ ಬ್ರಿಟಿಷರಿಗೆ ಶರಣಾದನು, ತದನಂತರ ಆತನನ್ನು ಮೊದಲಿಗೆ ಮದ್ರಾಸ್‌‌ಗೆ ಹಾಗೂ ನಂತರ ಬನಾರಸ್‌‌ಗೆ ಗಡೀಪಾರುಗೊಳಿಸಲಾಯಿತು. ಕಂಪೆನಿಯು ನಾಗರ್‌‌ಕೋಯಿಲ್‌‌ ಮತ್ತು ಕೊಲ್ಲಂಗಳ ಸಮೀಪ ನಡೆದ ಕದನಗಳಲ್ಲಿ ವೇಲು ಥಂಪಿಯನ್ನು ಸೋಲಿಸಿತಲ್ಲದೇ ಆತನ ಸೇನಾಪಡೆಯ ಮಾರಣಹೋಮ ನಡೆಸಿತಾದ್ದರಿಂದ, ತದನಂತರ ಆತನ ಬೆಂಬಲಿಗರಲ್ಲಿ ಅನೇಕರು ಆತನನ್ನು ತೊರೆದು ತಮ್ಮ ನಿವಾಸಗಳಿಗೆ ವಾಪಸಾದರು. ಕಂಪೆನಿಯ ಸೇನಾಪಡೆ ಮತ್ತು ಮಹಾರಾಜನ ಸೈನಿಕಪಡೆಗಳು ಟ್ರಿವೇಂಡ್ರಮ್‌‌ನ ಹೊರಭಾಗದಿಂದ ಅನತಿದೂರದಲ್ಲಿ ಪಾಪ್ಪಾನಾಂಕೋಡ್‌‌ ಎಂಬಲ್ಲಿ ಮೊಕ್ಕಾಂ ಹೂಡಿದವು. ಕಂಪೆನಿಯ ವಿರುದ್ಧ ವೇಲು ಥಂಪಿಯು ಗೆರಿಲ್ಲಾ ಹೋರಾಟವನ್ನು ಸಂಘಟಿಸಿದನಾದರೂ ವಿಫಲನಾಗಿ ಮಹಾರಾಜನ ಸೈನಿಕರಿಂದ ಸೆರೆಯಾಗುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಆತ್ಮಹತ್ಯೆ ಮಾಡಿಕೊಂಡನು. 1805ರಲ್ಲಿ ವೇಲು ಥಂಪಿಯ ವಿರುದ್ಧ ನಡೆದ ದಂಗೆಯ ನಂತರ ಟ್ರಾವಂಕೂರು/ತಿರುವಾಂಕೂರು ಸೇನೆಯ ಬಹುತೇಕ ನಾಯರ್‌‌‌ ತುಕಡಿಗಳನ್ನು ವಿಸರ್ಜಿಸಲಾಯಿತಲ್ಲದೇ, ವೇಲು ಥಂಪಿಯು ದಂಗೆಯೆದ್ದ ನಂತರ, ಅಳಿದುಳಿದ ಟ್ರಾವಂಕೂರು/ತಿರುವಾಂಕೂರು ಸೇನಾಪಡೆಯಲ್ಲಿನ ತುಕಡಿಗಳನ್ನು ಕೂಡಾ ವಿಸರ್ಜಿಲಾಯಿತು, ಹಾಗೂ ಬಾಹ್ಯ ಅಥವಾ ಆಂತರಿಕ ಆಕ್ರಮಣಗಳ ಸಂದರ್ಭದಲ್ಲಿ ಮಹಾರಾಜರಿಗೆ ಸಹಕಾರ ನೀಡಲು ಕಂಪೆನಿಯು ಸಹಾಯ ಮಾಡುವ ವ್ಯವಸ್ಥೆಯಾಯಿತು.
 
=== 19ನೇ ಶತಮಾನ ಮತ್ತು 20ನೇ ಶತಮಾನದ ಆದಿಭಾಗ ===
 
ಬಲರಾಮ ವರ್ಮರ ಉತ್ತರಾಧಿಕಾರಿಯಾಗಿ 1810–1815ರ ಅವಧಿಯಲ್ಲಿ ರಾಣಿ ಗೌರಿ ಲಕ್ಷ್ಮಿ ಬಾಯಿಯು ಬ್ರಿಟಿಷರ ಸಹಕಾರದೊಂದಿಗೆ ಅಧಿಕಾರವನ್ನು ಪಡೆದುಕೊಂಡಿದ್ದಳು. 1813ರಲ್ಲಿ ಆಕೆಗೆ ಒಬ್ಬ ಪುತ್ರ ಹುಟ್ಟಿದಾಗ, ಆ ಮಗುವನ್ನೇ ರಾಜನನ್ನಾಗಿ ಘೋಷಿಸಲಾಯಿತಾದರೂ, ರಾಜಪ್ರತಿನಿಧಿಯಾಗಿ ರಾಣಿಯು ಆಡಳಿತವನ್ನು ಮುಂದುವರೆಸಿದಳು. ಬ್ರಿಟಿಷ್‌‌ ಸೇನಾಧಿಕಾರಿ/ಕರ್ನಲ್‌‌ ಮುನ್ರೋ ಆಕೆಯ ದಿವಾನರಾಗಿ ಸೇವೆ ಸಲ್ಲಿಸಿದರು. 1815ರಲ್ಲಿ ರಾಣಿ ಗೌರಿ ಲಕ್ಷ್ಮಿ ಬಾಯಿಯು ಸಾವನ್ನಪ್ಪಿದಾಗ, ರಾಜಪ್ರತಿನಿಧಿಯಾಗಿ ಮಹಾರಾಣಿ ಗೌರಿ ಪಾರ್ವತಿ ಬಾಯಿಯು ಆಕೆಯ ಉತ್ತರಾಧಿಕಾರತ್ವವನ್ನು ವಹಿಸಿಕೊಂಡಳು. ಈ ಇಬ್ಬರೂ ರಾಜಪ್ರತಿನಿಧಿಗಳ ಆಡಳಿತಾವಧಿಯಲ್ಲಿ ಸಾಮಾಜಿಕ ವ್ಯವಸ್ಥೆ ಹಾಗೂ ಶಿಕ್ಷಣ ಕ್ಷೇತ್ರಗಳು ಉತ್ತಮ ಅಭಿವೃದ್ಧಿಯನ್ನು ಕಂಡವು. ಸ್ವಾತಿ ತಿರುನಾಳ್‌/ಲ್‌‌‌ ರಾಮ ವರ್ಮಾ 1829ರಲ್ಲಿ ರಾಜ್ಯಭಾರವನ್ನು ವಹಿಸಿಕೊಂಡರು. ಅವರು [[ಕರ್ನಾಟಕ ಸಂಗೀತ]] ಮತ್ತು ಹಿಂದೂಸ್ತಾನಿ ಸಂಗೀತಗಳ ಪ್ರಖ್ಯಾತ ಗಾಯಕರಾಗಿದ್ದರು. ಇವರು ಅನೇಕ ಅನಗತ್ಯ ತೆರಿಗೆಗಳನ್ನು ರದ್ದುಗೊಳಿಸಿದರಲ್ಲದೇ ಆಂಗ್ಲ ಶಾಲೆ ಮತ್ತು ದತ್ತಿಯಿಂದ ನಡೆಯುವ ಆಸ್ಪತ್ರೆಯೊಂದನ್ನು ಟ್ರಿವೇಂಡ್ರಮ್‌‌ನಲ್ಲಿ 1834ರಲ್ಲಿ ಆರಂಭಿಸಿದರು.
 
AD 1847–1860ರ ಅವಧಿಯಲ್ಲಿ ಆಳ್ವಿಕೆ ನಡೆಸಿದ ಮುಂದಿನ ಅರಸ ಮಹಾರಾಜಾ ಉತ್ತರಮ್‌‌ ತಿರುನಾಳ್‌/ಲ್‌‌‌ ಮಾರ್ತಾಂಡ ವರ್ಮರು C.M.S. ಮತ್ತು L.M.S. ಸಂಘಗಳ <ref>Prof. A. ಶ್ರೀಧರ ಮೆನನ್‌‌, ''A ಸರ್ವೆ ಆಫ್‌ ಕೇರಳ ಹಿಸ್ಟರಿ'' , 1996, S. ವಿಶ್ವನಾಥನ್‌‌ ಪ್ರಿಂಟರ್ಸ್‌‌ ಅಂಡ್‌ ಪಬ್ಲಿಷರ್ಸ್‌‌, pp 396.</ref> ಪ್ರೊಟೆಸ್ಟೆಂಟ್‌ ಕ್ರೈಸ್ತ ಪಾದ್ರಿಗಳ ಶಿಫಾರಸುಗಳನ್ನು ಪಾಲಿಸುತ್ತಾ 1855ನೇ ಇಸವಿಯಲ್ಲಿ ಸಾಮ್ರಾಜ್ಯದಲ್ಲಿ ಜೀತಪದ್ಧತಿ/ಗುಲಾಮಗಿರಿಯನ್ನು ನಿಷೇಧಿಸಿದರಲ್ಲದೇ ಕೆಲ ನಿರ್ದಿಷ್ಟ ಜಾತಿಗಳವರ ಮೇಲೆ ಹೇರಿದ್ದ ವಸ್ತ್ರಸಂಹಿತೆಯ ಕಟ್ಟುಪಾಡುಗಳನ್ನು ಕೂಡಾ 1859ರಲ್ಲಿ ನಿಷೇಧಿಸಿದ್ದರು. ಈ ತರಹದ ಸಾಮಾಜಿಕ ವ್ಯವಸ್ಥೆಗಳ ಮೇಲೆ ಆತ ಕೈಗೊಂಡ ಕ್ರಮವು ಮೆಚ್ಚುಗೆಯನ್ನು ಗಳಿಸಿಕೊಟ್ಟಿತಲ್ಲದೇ, ಈ ಮೇಲ್ಪಂಕ್ತಿಯನ್ನು ನೆರೆಯ ಕೊಚಿನ್‌‌/ಕೊಚ್ಚಿನ್‌‌ ರಾಜ್ಯವೂ ಕೂಡಾ ಅನುಸರಿಸಿತು. ಮಹಾರಾಜರು 1857ರಲ್ಲಿ ಅಂಚೆ ವ್ಯವಸ್ಥೆಯನ್ನು ಆರಂಭಿಸಿದರು ಹಾಗೂ 1859ರಲ್ಲಿ ಬಾಲಕಿಯರಿಗೇ ಪ್ರತ್ಯೇಕವಾದ ಶಾಲೆಯನ್ನು ಆರಂಭಿಸಿದರು. 1860–1880ರ ಅವಧಿಯಲ್ಲಿ ಆಡಳಿತ ನಡೆಸಿದ ಅಯಿಲ್ಯಮ್‌‌‌ ತಿರುನಾಳ್‌/ಲ್‌‌‌ರು ಆತನ ಉತ್ತರಾಧಿಕಾರಿಯಾಗಿದ್ದು, ಅವರ ಆಳ್ವಿಕೆಯಡಿಯಲ್ಲಿ ಕೃಷಿ, ನೀರಾವರಿ ಚಟುವಟಿಕೆಗಳು ಮತ್ತು ರಸ್ತೆ ಮಾರ್ಗಗಳ ನಿರ್ಮಾಣಗಳಿಗೆ ಉತ್ತೇಜನವನ್ನು ನೀಡಲಾಗಿತ್ತು. 1861ರಲ್ಲಿ ನಾಗರಿಕರ ಕಾನೂನು ಸಂಹಿತೆಯನ್ನು ಜಾರಿಗೆ ತರಲಾಯಿತಲ್ಲದೇ 1866ರಲ್ಲಿ ಕಾಲೇಜು/ಮಹಾವಿದ್ಯಾಲಯವನ್ನು ಸ್ಥಾಪಿಸಿದರು. ಅವರು ಮನೋರೋಗಿಗಳ ಚಿಕಿತ್ಸಾಲಯವೂ ಸೇರಿದಂತೆ ಅನೇಕ ದತ್ತಿಯಿಂದ ನಡೆಯುವ ಆಸ್ಪತ್ರೆಗಳನ್ನು ಕೂಡಾ ನಿರ್ಮಿಸಿದರು. ಮೇ 18, 1875ರಂದು ಟ್ರಾವಂಕೂರು/ತಿರುವಾಂಕೂರಿನಲ್ಲಿ ಪ್ರಪ್ರಥಮವಾಗಿ ಸುವ್ಯವಸ್ಥಿತ ಜನಗಣತಿಯನ್ನು ಕೈಗೊಳ್ಳಲಾಯಿತು. ಇವರು ತಮ್ಮ ದೇಶದಲ್ಲಿ ಚುಚ್ಚುಮದ್ದು ಹಾಕಿಸುವುದನ್ನು ಕೂಡಾ ಪರಿಚಯಿಸಿದರು. ರಾಮ ವರ್ಮಾ ವಿಸಾಖಮ್‌ ತಿರುನಾಳ್‌/ಲ್‌‌‌‌ರು 1880–1885ರ ಅವಧಿಯಲ್ಲಿ ಆಡಳಿತ ನಡೆಸಿದರು. ಅವರು ವೈಸ್‌ರಾಯ್‌ರ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನವನ್ನು ಗಳಿಸಿಕೊಂಡ ಪ್ರಥಮ ಭಾರತೀಯ ರಾಜಕುಮಾರರೂ ಆದರಲ್ಲದೇ ಅನೇಕ ಗ್ರಂಥಗಳನ್ನು ಹಾಗೂ ಪ್ರಬಂಧಗಳನ್ನು ಕೂಡಾ ರಚಿಸಿದ್ದರು. ಅವರು ಆರಕ್ಷಕ ಪಡೆಯನ್ನು ಮರುಸಂಘಟಿಸಿದರಲ್ಲದೇ, ಅನೇಕ ದುರ್ಭರ ತೆರಿಗೆಗಳನ್ನು ರದ್ದುಗೊಳಿಸಿದರು.
 
1885–1924ರ ಅವಧಿಯಲ್ಲಿ ಆಳ್ವಿಕೆ ನಡೆಸಿದ ಶ್ರೀ ಮೂಲಮ್‌ ತಿರುನಾಳ್‌/ಲ್‌‌ ಸರ್‌ ರಾಮ ವರ್ಮಾರು ಅನೇಕ ಮಹಾವಿದ್ಯಾಲಯಗಳು/ಕಾಲೇಜುಗಳು ಮತ್ತು ಶಾಲೆಗಳನ್ನು ಸ್ಥಾಪಿಸಿದರು. [[ಜವಾಹರಲಾಲ್ ನೆಹರು|ಜವಾಹರ್‌ ಲಾಲ್‌‌ ನೆಹರೂ]]ರವರು 1920ರ ದಶಕದಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿದಾಗ, ಇಲ್ಲಿನ ಶಿಕ್ಷಣ ವ್ಯವಸ್ಥೆಯು ಬ್ರಿಟಿಷ್‌‌ ಆಡಳಿತವಿರುವ ಭಾರತಕ್ಕಿಂತಲೂ ಉತ್ತಮ ಮಟ್ಟದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ವೈದ್ಯಕೀಯ ವ್ಯವಸ್ಥೆಯನ್ನು ಮರುಸಂಘಟಿಸಲಾಯಿತಲ್ಲದೇ ಭಾರತದ ರಾಜ್ಯಗಳಲ್ಲೇ ಈ ರೀತಿಯ ಪ್ರಪ್ರಥಮವೆನಿಸಿದ ಶಾಸನಸಭೆಯನ್ನು 1888ರಲ್ಲಿ ಸ್ಥಾಪಿಸಲಾಯಿತು. ಚುನಾವಣೆಯ ವ್ಯವಸ್ಥೆಯನ್ನು ಸ್ಥಾಪಿಸಲಾಯಿತಲ್ಲದೇ ಮಹಿಳೆಯರಿಗೂ ಮತ ಹಾಕುವ ಅವಕಾಶ ನೀಡಲಾಯಿತು.
[[ಚಿತ್ರ:SethuLakshmiBayi.jpg|left|thumb|ಮಹಾರಾಣಿ ಸೇತು ಲಕ್ಷ್ಮಿ ಬಾಯಿ, ಟ್ರಾವಂಕೂರು/ತಿರುವಾಂಕೂರಿನ ರಾಜಪ್ರತಿನಿಧಿ (1924-1931)]]
1924–1931ರ ಅವಧಿಯಲ್ಲಿ ರಾಜಪ್ರತಿನಿಧಿಯಾಗಿ ಸೇತು ಲಕ್ಷ್ಮಿ ಬಾಯಿ ಆಳ್ವಿಕೆ ನಡೆಸಿದ್ದರು. ಆಕೆಯು ಪ್ರಾಣಿಬಲಿಯನ್ನು ನಿಷೇಧಿಸಿದರಲ್ಲದೇ ಮಾತೃಪ್ರಧಾನ ಉತ್ತರಾಧಿಕಾರಿ ವ್ಯವಸ್ಥೆಯ ಬದಲಿಗೆ ಪಿತೃಪ್ರಧಾನ ಉತ್ತರಾಧಿಕಾರಿ ವ್ಯವಸ್ಥೆಯನ್ನು ಅಳವಡಿಸಿದರು. ಆಕೆಯು ದೇವಸ್ಥಾನಗಳಲ್ಲಿದ್ದ ದೇವದಾಸಿ ಪದ್ಧತಿಯನ್ನು ಕೊನೆಗೊಳಿಸಿದರಲ್ಲದೇ ರಾಜ್ಯದ ಆದಾಯದ ಐದನೇ ಒಂದು ಭಾಗದಷ್ಟನ್ನು ಶಿಕ್ಷಣ ವ್ಯವಸ್ಥೆಗೆ ವ್ಯಯಿಸುತ್ತಿರುವುದಕ್ಕಾಗಿ ಮಹಾತ್ಮಾ ಗಾಂಧಿಯವರಿಂದ ಪ್ರಶಂಸೆಯನ್ನು ಕೂಡಾ ಪಡೆದರು.
 
[[ಚಿತ್ರ:Ayilyam Thirunal and Madhava Rao.JPG|thumbnail|ಟ್ರಾವಂಕೂರು/ತಿರುವಾಂಕೂರಿನ ಮಹಾರಾಜ ಅಯಿಲ್ಯಮ್‌‌‌ ತಿರುನಾಳ್‌‌/ಲ್‌‌ (ಮಧ್ಯದಲ್ಲಿ) ಮೊದಲಿನ ರಾಜಕುಮಾರ (ಎಡಕ್ಕೆ) ಮತ್ತು ದಿವಾನರು ಸಿಟ್‌‌ T. ಮಾಧವ ರಾವ್‌ (ಬಲದಲ್ಲಿರುವವರು)]]
 
AD 1931–1949ರ ಅವಧಿಯಲ್ಲಿ ಆಳ್ವಿಕೆ ನಡೆಸಿದ್ದ ಚಿತ್ತಿರಾ ತಿರುನಾಳ್‌‌/ಲ್‌ ಬಲರಾಮ ವರ್ಮರು ಟ್ರಾವಂಕೂರು/ತಿರುವಾಂಕೂರಿನ ಕಟ್ಟಕಡೆಯ ಅರಸರಾಗಿದ್ದಾರೆ. 12 ನವೆಂಬರ್‌ 1936ರಂದು ಆತ ದೇವಸ್ಥಾನಗಳ ಪ್ರವೇಶ ನೀಡುವ ಬಗ್ಗೆ ಘೋಷಣೆಯೊಂದನ್ನು ಹೊರಡಿಸಿ, ಅದುವರೆಗೆ ಕೇವಲ ಮೇಲು ಜಾತಿಯ ಹಿಂದೂಗಳಿಗೆ ಮಾತ್ರ ಪ್ರವೇಶವನ್ನು ಮೀಸಲಿರಿಸಿದ್ದ ದೇವಸ್ಥಾನ ಪ್ರವೇಶವನ್ನು ಎಲ್ಲಾ ಹಿಂದೂಗಳಿಗೆ (ಕೇರಳದಲ್ಲಿರುವ ಹಿಂದೂ ದೇವಸ್ಥಾನಗಳು) ಟ್ರಾವಂಕೂರು/ತಿರುವಾಂಕೂರಿನಲ್ಲಿರುವ ಎಲ್ಲಾ ಕ್ಷೇತ್ರಗಳನ್ನು ಪ್ರವೇಶಿಸಲು ಮುಕ್ತಗೊಳಿಸಿದರು. ಆತನ ಈ ಒಂದು ನಡೆಯು ಭಾರತದಾದ್ಯಂತ ಅದರಲ್ಲೂ ಗಮನಾರ್ಹವಾಗಿ ಮಹಾತ್ಮಾ ಗಾಂಧಿಯವರಿಂದ ಆತನಿಗೆ ಪ್ರಶಂಸೆ ಗಳಿಸುವಂತೆ ಮಾಡಿತು. ಮೊತ್ತಮೊದಲ ಸಾರ್ವಜನಿಕ ಸಾರಿಗೆ ವ್ಯವಸ್ಥೆ (ಟ್ರಿವೇಂಡ್ರಮ್‌‌ - ಮವೇಲಿಕ್ಕಾರ) ಮತ್ತು ದೂರಸಂಪರ್ಕ ವ್ಯವಸ್ಥೆಗಳನ್ನು (ಟ್ರಿವೇಂಡ್ರಮ್‌‌ ಅರಮನೆ - ಮವೇಲಿಕ್ಕಾರ ಅರಮನೆ) ಶ್ರೀ. ಚಿತ್ತಿರಾ ತಿರುನಾಳ್‌‌/ಲ್‌ರ ಆಳ್ವಿಕೆಯಲ್ಲಿ ಮೊತ್ತಮೊದಲು ಕಾರ್ಯಗತಗೊಳಿಸಲಾಯಿತು. ಅವರು ತಮ್ಮ ರಾಜ್ಯದಲ್ಲಿ ಕೈಗಾರಿಕೀಕರಣವನ್ನು ಕೂಡಾ ಆರಂಭಿಸಿದರು. ಆದಾಗ್ಯೂ, ಆತನ ಆಸ್ಥಾನದ ಪ್ರಧಾನ ಮಂತ್ರಿಗಳಾದ ಸರ್‌‌‌ C. P. ರಾಮಸ್ವಾಮಿ ಅಯ್ಯರ್‌‌ರವರ ಬಗ್ಗೆ ಟ್ರಾವಂಕೂರು/ತಿರುವಾಂಕೂರಿನ ಜನಸಾಮಾನ್ಯರಲ್ಲಿ ಉತ್ತಮ ಭಾವನೆಯಿರಲಿಲ್ಲ. ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಲು ನಿರ್ಧರಿಸಿದಾಗ, ಪ್ರಧಾನಮಂತ್ರಿಯು "ಅಮೇರಿಕನ್‌ ಮಾದರಿಯೊಂದರ" ಮೇಲೆ ಆಧಾರಿತವಾಗಿ ಟ್ರಾವಂಕೂರು/ತಿರುವಾಂಕೂರು ಪ್ರತ್ಯೇಕ ರಾಷ್ಟ್ರವಾಗಿ ಉಳಿಯುತ್ತದೆ ಎಂದು ಘೋಷಿಸಿದರು. [[ಭಾರತೀಯ ರಾಷ್ಟ್ರೀಯ ಕಾಂಗ್ರೆಸ್|ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌‌]] ಮತ್ತು ಕಮ್ಯೂನಿಸ್ಟರ ನೇತೃತ್ವದಲ್ಲಿ ಸ್ಥಳೀಯ ಜನಸಾಮಾನ್ಯರು ಮತ್ತು ಸರ್‌‌. C.P. ರಾಮಸ್ವಾಮಿ ಅಯ್ಯರ್‌‌ರ ನಡುವೆ ಇದ್ದ ಭಿನ್ನಾಭಿಪ್ರಾಯಗಳು ರಾಷ್ಟ್ರದ ಅನೇಕ ಪ್ರದೇಶಗಳಲ್ಲಿ ದಂಗೆಗಳುಂಟಾಗಲು ಕಾರಣವಾದವು. 1946ರಲ್ಲಿ ನಡೆದ ಪುನ್ನಾಪ್ರ-ವಯಲಾರ್‌‌ಗಳಲ್ಲಿ ನಡೆದ ಅಂತಹಾ ದಂಗೆಯೊಂದರಲ್ಲಿ ಕಮ್ಯೂನಿಸ್ಟರು ಈ ಪ್ರದೇಶದಲ್ಲಿ ತಮ್ಮದೇ ಆದ ಸರ್ಕಾರವನ್ನು ಸ್ಥಾಪಿಸಿಕೊಂಡರು. ಈ ಸರ್ಕಾರವನ್ನು ಟ್ರಾವಂಕೂರು/ತಿರುವಾಂಕೂರು ಸೇನಾಪಡೆ ಮತ್ತು ನೌಕಾಪಡೆಗಳು ಧ್ವಂಸಗೊಳಿಸಿ ನೂರಾರು ಸಾವುಗಳಿಗೆ ಕಾರಣವಾದವು. ಈ ಘಟನೆಗಳು ರಾಜ್ಯದಲ್ಲಿ ಮತ್ತಷ್ಟು ಗಲಭೆಗಳುಂಟಾಗಲು ಕಾರಣವಾಗಿ ಮತ್ತಷ್ಟು ಸಾವುನೋವುಗಳು ಉಂಟಾದವು. ಜೂನ್‌ 1947ರಲ್ಲಿ ಪ್ರಧಾನಮಂತ್ರಿಯು ಭಾರತೀಯ ಒಕ್ಕೂಟವನ್ನು ಸೇರುವ ಬದಲಿಗೆ ಪ್ರತ್ಯೇಕ ರಾಷ್ಟ್ರವಾಗಿ ಟ್ರಾವಂಕೂರು/ತಿರುವಾಂಕೂರು ಉಳಿದುಕೊಳ್ಳುತ್ತದೆ ಎಂದು ಘೋಷಣೆಯೊಂದನ್ನು ಹೊರಡಿಸಿದ ತರುವಾಯ ಸರ್‌‌‌ C.P. ರಾಮಸ್ವಾಮಿ ಅಯ್ಯರ್‌‌ರ ಮೇಲೆ ಹತ್ಯಾಪ್ರಯತ್ನಗಳಾದವು, ಇದಾದ ನಂತರ ಅವರು ಹುದ್ದೆಗೆ ರಾಜಿನಾಮೆ ನೀಡಿ ಮದ್ರಾಸ್‌‌ಗೆ ಪರಾರಿಯಾದರು, ಅವರ ಉತ್ತರಾಧಿಕಾರಿಯಾಗಿ ಶ್ರೀ PGN ಉನ್ನಿಥ/ತನ್‌‌ ಅಧಿಕಾರ ವಹಿಸಿಕೊಂಡರು. ಇದೆಲ್ಲಾ ಘಟನೆಗಳು ನಡೆದ ತರುವಾಯ, ಭಾರತವನ್ನು ಸೇರದಿದ್ದರೆ ಟ್ರಾವಂಕೂರು/ತಿರುವಾಂಕೂರಿನ ವಿರುದ್ಧ ಸೇನಾ ಕ್ರಮ ಕೈಗೊಳ್ಳುವುದಾಗಿ ಸರ್ದಾರ್‌ ಪಟೇಲ್‌‌ ಬೆದರಿಸಿದರು, ಆಂತರಿಕ ಪ್ರತಿಭಟನೆ ಮತ್ತು ಬಾಹ್ಯ ಒತ್ತಡಗಳೆರಡನ್ನೂ ಎದುರಿಸುತ್ತಿದ್ದ ಮಹಾರಾಜರು ಕೊನೆಗೆ ಸಮ್ಮತಿಸಿದರು.
 
=== ಮಹಾದಾನ/ನಮ್‌ಗಳನ್ನು ನೀಡುವ ಪದ್ಧತಿಯ ನಿಲುಗಡೆ ===
 
ಟ್ರಾವಂಕೂರು/ತಿರುವಾಂಕೂರಿನ ಮಹಾರಾಜರುಗಳಿಗೆ ಸೋಪಾಧಿಕವಾಗಿ ಕ್ಷತ್ರಿಯತ್ವವನ್ನು ಕಾಪಾಡಿಕೊಳ್ಳುವಂತೆ ಕಾಲಕಾಲಕ್ಕೆ 16 ಮಹಾದಾನಮ್‌‌/ಗಳನ್ನು (ದಾನವಾಗಿ ದೊಡ್ಡ ವಸ್ತುಗಳನ್ನು ನೀಡುವುದು) ಕನಿಷ್ಠ 1 ಖಜಾಂಚ್‌ (78.65 gms) ಚಿನ್ನದ ಜೊತೆಗೆ ಸಾವಿರಾರು ಬ್ರಾಹ್ಮಣರಲ್ಲಿ ಪ್ರತಿಯೊಬ್ಬರಿಗೂ ದುಬಾರಿ ಉಡುಗೊರೆಗಳನ್ನು ಕೊಡುವ ಹಿರಣ್ಯ-ಗರ್ಭ, ಹಿರಣ್ಯ-ಕಾಮಧೇನು, ಹಿರಣ್ಯಸ್ವರಾಟ ಮತ್ತು ತುಲಾಪುರುಷದಾನಮ್‌‌ ಮುಂತಾದ ದಾನಗಳನ್ನು ಮಾಡುತ್ತಿದ್ದರು.<ref name="ASo00">''A ಸೋಷಿಯಲ್‌ ಹಿಸ್ಟರಿ ಆಫ್‌ ಇಂಡಿಯಾ'' – (ಆಶಿಷ್‌ ಪಬ್ಲಿಷಿಂಗ್‌ ಹೌಸ್‌‌ : ISBN 81-7648-170-X / ISBN 81-7648-170-X, Jan 2000).</ref> ಟ್ರಾವಂಕೂರು/ತಿರುವಾಂಕೂರು ರಾಜರುಗಳು ಸಮಾಂತನ್‌‌ ನಾಯರ್‌‌‌ಗಳಾಗಿರುವ ತಮ್ಮ ಘನತೆಯನ್ನು ಉಳಿಸಿಕೊಳ್ಳಬಹುದಾಗಿದ್ದರೂ ಯಾಗಗಳು ಮತ್ತು ಮಹಾದಾನಮ್‌ಗಳ ಮೂಲಕ ಅವರಿಗೆ ನೀಡಲಾದ ಕ್ಷತ್ರಿಯತ್ವವು ಕೇವಲ 6 ವರ್ಷಗಳಿಗೆ ಮಾತ್ರವೇ ಕ್ರಮಬದ್ಧವಾಗಿರುತ್ತದೆ ಆದ್ದರಿಂದ ಕ್ಷತ್ರಿಯತ್ವವನ್ನು ದುಬಾರಿ ಮೊತ್ತದ ವೆಚ್ಚಗಳ ಮೂಲಕ ಕೊಂಡುಕೊಳ್ಳಬೇಕಾಗಿರುತ್ತದೆ ಎಂಬ ಕಟ್ಟುಪಾಡನ್ನು ನಂಬೂದಿರಿ ಬ್ರಾಹ್ಮಣರು ವಿಧಿಸಿದ್ದರು. ಉತ್ಕಟ ಆಕ್ರಮಣವಾದಿಯೂ ಆಗಿದ್ದ ಆಗಿನ ಬ್ರಿಟಿಷ್‌‌ ಭಾರತದ ಗವರ್ನರ್‌ ಜನರಲ್‌/ಮಹಾಮಂಡಲಾಧಿಪತಿಯಾಗಿದ್ದ ಲಾರ್ಡ್‌ ಡಾಲ್‌ಹೌಸಿಯು 1848ರ ಸಮಯದಲ್ಲಿ ಟ್ರಾನವ್‌ಕೋರ್‌/ಟ್ರಾವಂಕೂರಿನ ಆರ್ಥಿಕ ಪರಿಸ್ಥಿತಿಯಲ್ಲಿನ ಸೊರಗಿದ ಸ್ಥಿತಿಯು ದುರಾಡಳಿತಕ್ಕೆ ಹಾಗೂ ಆಳುವ ಉನ್ನತ ವರ್ಗದವರು ತಮ್ಮದೇ ಆದ ಖಜಾನೆಗಳನ್ನು ಇಟ್ಟುಕೊಳ್ಳುವ ಪದ್ಧತಿಗೆ ಕಾರಣವಾಗಿದೆ ಎಂದು ಭಾವಿಸುತ್ತಾನೆ.<ref name="Adm88">''ಅಡ್‌ಮಿನಿಸ್ಟ್ರೇಷನ್‌ ಅಂಡ್‌‌ ಸೋಷಿಯಲ್‌ ಡೆವೆಲಪ್‌ಮೆಂಟ್‌ ಇನ್‌‌‌ ಕೇರಳ : A ಸ್ಟಡಿ ಇನ್‌ ಅಡ್‌ಮಿನಿಸ್ಟ್ರೇಟಿವ್‌ ಸೋಷಿಯಾಲಜಿ'' , ಸದಾಶಿವನ್‌, S.N. ರಚಿತ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಅಡ್‌ಮಿನಿಷ್ಟ್ರೇಷನ್‌ (ನವದೆಹಲಿ)ರಿಂದ ಪ್ರಕಟಿತ, 1988.</ref> ಟ್ರಾವಂಕೂರು/ತಿರುವಾಂಕೂರು ರಾಜ್ಯದ ಬೊಕ್ಕಸದಿಂದ ಮಹಾದಾನಮ್‌ಗಳೂ ಸೇರಿದಂತೆ ಇನ್ನಿತರ ಕಾರಣಗಳಿಂದ ಅಗಾಧ ಪ್ರಮಾಣದ ವ್ಯರ್ಥ ವೆಚ್ಚವಾಗುತ್ತಿರುವುದನ್ನು ಕಂಡು ಕ್ರುದ್ಧನಾದ ಲಾರ್ಡ್‌ ಡಾಲ್‌ಹೌಸಿ ಮದ್ರಾಸ್‌ನ ರಾಜ್ಯಪಾಲ/ಗವರ್ನರ್‌‌ ಲಾರ್ಡ್‌ ಹ್ಯಾರಿಸ್‌‌‌‌ನಿಗೆ, 1805ರ ಒಪ್ಪಂದದ ಒಂಬತ್ತನೇ ಅನುಚ್ಛೇದದಡಿಯಲ್ಲಿ ರಾಜನಿಗೆ ಎಚ್ಚರಿಕೆ ನೀಡಲು ಆದೇಶಿಸುತ್ತಾನೆ. 21 ನವೆಂಬರ್‌ 1855ರಂದು, ಲಾರ್ಡ್‌ ಹ್ಯಾರಿಸ್‌‌‌ ಆಗಿನ ಟ್ರಾವಂಕೂರು/ತಿರುವಾಂಕೂರಿನ ರಾಜ ''ಅಲಿಯಾಸ್'' ‌‌ ಮಾರ್ತಾಂಡ ವರ್ಮ (ಉತ್ತರಮ್‌‌ ತಿರುನಾಳ್‌‌/ಲ್‌‌ 1847–1860 AD)ರಿಗೆ ಆತನು ತೆರಿಗೆದಾರರ ಹಣದ ಬೃಹತ್‌ ಭಾಗವನ್ನು ಕ್ಷತ್ರಿಯತ್ವವನ್ನು ಪಡೆದುಕೊಳ್ಳುವ ತನ್ನ ಆವರ್ತಕ ಪುನರಾವತಾರದ ಚಟುವಟಿಕೆಗಳನ್ನು ನಡೆಸಲು ಹಾಗೂ ಇತರೆ ವೆಚ್ಚಗಳ ಮೂಲಕ ಪೋಲು ಮಾಡುವುದನ್ನು ನಿಲ್ಲಿಸದಿದ್ದಲ್ಲಿ ಆತನ ರಾಜ್ಯದ ಆಡಳಿತಾಧಿಕಾರವನ್ನು ಮದ್ರಾಸ್‌‌ ಸರ್ಕಾರವು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ ಎಂದೆಚ್ಚರಿಸುವ ಕಟುವಾದ ಪದಪುಂಜಗಳುಳ್ಳ ಸಂದೇಶವೊಂದನ್ನು ಕಳುಹಿಸುತ್ತಾರೆ. ಇದು ಮಹಾದಾನಮ್‌ಗಳನ್ನು ನೀಡುವ ಪದ್ಧತಿಗೆ ಮಂಗಳ ಹಾಡಲು ಕಾರಣವಾಗುತ್ತದಲ್ಲದೇ ಟ್ರಾವಂಕೂರು/ತಿರುವಾಂಕೂರಿನ ರಾಜರು ಆನಂತರ ಕ್ಷತ್ರಿಯತ್ವವನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.
 
=== 1947ರ ನಂತರ ಟ್ರಾವಂಕೂರು/ತಿರುವಾಂಕೂರು ===
[[ಚಿತ್ರ:Madras Prov 1859.gif|thumb|right|1859ರಲ್ಲಿ ಮದ್ರಾಸ್‌‌ ಪ್ರೆಸಿಡೆನ್ಸಿಯಲ್ಲಿನ ಟ್ರಾವಂಕೂರು/ತಿರುವಾಂಕೂರು]]
ಏಪ್ರಿಲ್‌ 1928ರಲ್ಲಿ ಎರ್ನಾಕುಲಮ್‌‌‌ನಲ್ಲಿ ಹಮ್ಮಿಕೊಳ್ಳಲಾದ ರಾಜ್ಯದ ಜನಸಮುದಾಯದ ಸಮಾವೇಶದಲ್ಲಿ [[ಮಲಯಾಳಂ|ಮಲಯಾಳಂ ಭಾಷೆ]]ಯನ್ನು ಮಾತೃಭಾಷೆಯಾಗಿ ಹೊಂದಿರುವ ಪ್ರದೇಶಗಳನ್ನು ಏಕೀಕರಿಸುವ ಚಳುವಳಿಯು ಒಂದು ನಿರ್ದಿಷ್ಟ ಸ್ವರೂಪ ಪಡೆದುಕೊಂಡಿತು ಮಾತ್ರವಲ್ಲದೇ ''ಐಕ್ಯ ಕೇರಳ'' ಕ್ಕಾಗಿ ("ಏಕೀಕೃತ ಕೇರಳ") ಹೋರಾಟವನ್ನು ನಡೆಸುವ ಗೊತ್ತುವಳಿಯನ್ನು ಕೂಡಾ ಅಂಗೀಕರಿಸಲಾಯಿತು. ಟ್ರಾವಂಕೂರು/ತಿರುವಾಂಕೂರು-ಕೊಚಿನ್‌‌/ಕೊಚ್ಚಿನ್‌‌ ರಾಜ್ಯವನ್ನು ಜುಲೈ 1, 1949ರಂದು ಸ್ಥಾಪಿಸಲಾಯಿತಲ್ಲದೇ ಟ್ರಾವಂಕೂರು/ತಿರುವಾಂಕೂರಿನ ಮಹಾರಾಜರನ್ನು ನವೀನ ರಾಜ್ಯದ ರಾಜಪ್ರಮುಖರನ್ನಾಗಿ ನೇಮಿಸಲಾಯಿತು. ಅನೇಕ ಜನಪ್ರಿಯ ಮಂತ್ರಿಮಂಡಲಗಳು ಆಯ್ಕೆಯಾದವು ಹಾಗೂ ಬಿದ್ದುಹೋದವು ಮತ್ತು 1954ರಲ್ಲಿ, ಟ್ರಾವಂಕೂರು/ತಿರುವಾಂಕೂರಿನ ತಮಿಳು ನಾಡು ಕಾಂಗ್ರೆಸ್‌‌ ದಕ್ಷಿಣ ಟ್ರಾವಂಕೂರು/ತಿರುವಾಂಕೂರಿನ ತಮಿಳು ಭಾಷಿಕ ಪ್ರದೇಶಗಳನ್ನು ನೆರೆಯ ಮದ್ರಾಸ್‌‌ ರಾಜ್ಯದಲ್ಲಿ ವಿಲೀನಗೊಳಿಸಲು ಚಳುವಳಿಯನ್ನು ಹಮ್ಮಿಕೊಂಡಿತು. ಈ ಪ್ರತಿಭಟನೆಯು ಹಿಂಸಾ ರೂಪ ತಾಳಿದ್ದರಿಂದಾಗಿ ಕೆಲ ಆರಕ್ಷಕರು/ಪೋಲೀಸರು ಹಾಗೂ ಸ್ಥಳೀಯ ಜನರು ಮಾರ್ತಾಂಡಮ್‌‌ ಮತ್ತು ಪುತ್ತುಕ್ಕಾಡಗಳಲ್ಲಿ ಕೊಲ್ಲಲ್ಪಟ್ಟರು, ಇದು ಇಡೀ ತಮಿಳು ಭಾಷಿಕ ಜನಸಮೂಹವು ಕೇರಳದಲ್ಲಿ ವಿಲೀನವಾಗುವ ಯೋಚನೆಯನ್ನು ಮತ್ತೆಂದೂ ಮಾಡದಷ್ಟು ವಿಮುಖರಾಗುವಂತೆ ಮಾಡಿತು. 1956ರ ರಾಜ್ಯಗಳ ಪುನರ್‌ಸಂಘಟನಾ ಕಾಯಿದೆಯಡಿಯಲ್ಲಿ, ತೋವಲೈ, ಅಗಸ್ಟೀ/ಸ್ತೀಶ್ವರಮ್‌, ಕಾಕುಳಮ್‌‌ ಮತ್ತು ವಿಲಾವಾನ್‌ಕೋಡ್‌‌ ಎಂಬ ಟ್ರಾವಂಕೂರು/ತಿರುವಾಂಕೂರಿನ ದಕ್ಷಿಣದ ನಾಲ್ಕು ತಾಲ್ಲೂಕುಗಳನ್ನು ಮತ್ತು ಚೆನ್‌ಕೊಟ್ಟಾ ತಾಲ್ಲೂಕಿನ ಭಾಗವೊಂದನ್ನು ಮದ್ರಾಸು ರಾಜ್ಯದಲ್ಲಿ ವಿಲೀನಗೊಳಿಸಲಾಯಿತು. ನವೆಂಬರ್‌ 1, 1956ರಂದು ಮಹಾರಾಜರ ಬದಲಿಗೆ ಭಾರತದ ರಾಷ್ಟ್ರಪತಿಯಿಂದ ನಿಯುಕ್ತರಾದ ರಾಜ್ಯಪಾಲರನ್ನು ರಾಜ್ಯದ ಅಧಿಪತಿಯನ್ನಾಗಿಸಿ ಕೇರಳ ರಾಜ್ಯವು ಅಸ್ತಿತ್ವಕ್ಕೆ ಬಂದಿತು.
 
ಮಹಾರಾಜರಿಗೆ ನೀಡಲಾಗಿದ್ದ ಎಲ್ಲಾ ಪದವಿಗಳನ್ನು ಹಾಗೂ ಸೌಲಭ್ಯಗಳನ್ನು ಜುಲೈ 31, 1971<ref>.[http://indiacode.nic.in/coiweb/amend/amend26.htm THE CONSTITUTION (TWENTY-SIXTH AMENDMENT) ACT, 1971]</ref> ರ ಭಾರತೀಯ ಸಂವಿಧಾನದ ಕಾಯಿದೆಯ ಇಪ್ಪತ್ತಾರನೆಯ ತಿದ್ದುಪಡಿಯನುಸಾರ ಹಿಂತೆಗೆದುಕೊಳ್ಳಲಾಯಿತು. ಅವರು ಜುಲೈ 19, 1991ರಂದು ನಿಧನ ಹೊಂದಿದರು.
 
=== ಕುಲಸೇ/ಶೇಖರ ರಾಜಸಂತತಿ (1721ರ ನಂತರ) ===
{{main|Maharaja of Travancore}}
Line ೧೦೫ ⟶ ೮೩:
# ಚಿತ್ತಿರಾ ತಿರುನಾಳ್‌‌/ಲ್‌ ಬಲರಾಮ ವರ್ಮ 1931–1991
# ಉತ್ರಾಡಮ್‌‌ ತಿರುನಾಳ್‌/ಲ್‌‌‌‌‌ ಮಾರ್ತಾಂಡ ವರ್ಮ 1991–ಪ್ರಸ್ತುತ
 
STYLES & TITLES/ನಾಮಾಂಕಿತಗಳು & ಬಿರುದು/ಪ್ರಶಸ್ತಿಸೂಚಕಗಳು:
ಆಳ್ವಿಕೆಯಲ್ಲಿರುವ ಪ್ರಭು : ಮಹಾರಾಜಾ ರಾಜಾ ರಾಮರಾಜ ಶ್ರೀ ಪತ್ಮ/ದ್ಮನಾಭ ದಾಸ ವಾಂಚಿ ಪಾಲ (ವೈಯಕ್ತಿಕ ಹೆಸರು) ವರ್ಮ, ಕುಲಸೇ/ಶೇಖರ ಕಿರೀಟಪತಿ ಮನ್ನೆ ಸುಲ್ತಾನ್‌ ಬಹಾದ್ದೂರ್‌, ಷಂಷೇರ್‌ ಜಂಗ್‌‌, ಟ್ರಾವಂಕೂರು/ತಿರುವಾಂಕೂರಿನ ಮಹಾರಾಜ, ಮಹಾರಾಜನದೇ ಆದ ನಾಮಾಂಕಿತಗಳೂ ಸೇರಿದಂತೆ.
Line ೧೧೪ ⟶ ೯೧:
ಆಳ್ವಿಕೆಯಲ್ಲಿರುವ ಪ್ರಭುವಿನ ಪುತ್ರರು : ಶ್ರೀ (ತಾಯಿಯ ಕುಲನಾಮ) (ವೈಯಕ್ತಿಕ ಹೆಸರು) ತಂ/ಥಂಪಿ.
ಆಳ್ವಿಕೆಯಲ್ಲಿರುವ ಪ್ರಭುವಿನ ಪುತ್ರಿಯರು: (ತಾಯಿಯ ಕುಲನಾಮ) ಅಮ್ಮವೀಟಿಲ್‌ ಶ್ರೀಮತಿ (ವೈಯಕ್ತಿಕ ಹೆಸರು) ಪಿಲ್ಲಾ ಕೊಚಮ್ಮಾ.
 
NB: ರಾಜ ಮನೆತನದ ಎಲ್ಲಾ ಸದಸ್ಯರೂ ಎರಡು ಹೆಸರುಗಳನ್ನು ಹೊಂದಿರುತ್ತಾರೆ, ಒಂದು ಅಧಿಕೃತ ವೈಯಕ್ತಿಕ ಹೆಸರು ಮತ್ತು ಅವರು ಜನ್ಮನಕ್ಷತ್ರಕ್ಕೆ ಸಂಬಂಧಿಸಿದ ಹೆಸರು. ಎರಡನೆಯ ಹೆಸರು ಸಾಮಾನ್ಯವಾಗಿ ತಿರುನಾಳ್‌/ಲ್‌‌‌ ಎಂಬ ಅಂತ್ಯಪ್ರತ್ಯಯದಿಂದ ಕೊನೆಗೊಳ್ಳುತ್ತದೆ.
 
== ಅಪೂರ್ವ/ಅನನ್ಯ ಗುಣಲಕ್ಷಣಗಳು ==
[[ಚಿತ್ರ:Prince Ashwathi Thirunal Rama Varma.jpg|thumbnail|250px|left|ಟ್ರಾವಂಕೂರು/ತಿರುವಾಂಕೂರು ರಾಜ ಮನೆತನದ ಅಸ್ವಾತಿ ತಿರುನಾಳ್‌‌/ಲ್‌‌ ರಾಮ ವರ್ಮಾ]]
Line ೧೨೨ ⟶ ೯೭:
[[ಚಿತ್ರ:Palace of Trivandrum.jpg|thumb|300px|right|ಕೌಡಿಯರ್‌‌ ಅರಮನೆ, ಟ್ರಿವೇಂಡ್ರಮ್‌‌]]
ಟ್ರಾವಂಕೂರು/ತಿರುವಾಂಕೂರು ತನ್ನ ಅರಸರುಗಳ ಜನಪ್ರಿಯತೆಗಾಗಿ ಕೂಡಾ ಹೆಸರು ಗಳಿಸಿತ್ತು. ಟ್ರಾವಂಕೂರು/ತಿರುವಾಂಕೂರಿನ ಅರಸರು ತಮ್ಮನ್ನು ಭಗವಾನ್‌ ವಿಷ್ಣುವಿನ ಸೇವಕರೆಂದು ಕರೆದುಕೊಂಡು ದೇವರ ರಾಜ್ಯವನ್ನು ದೇವರ ಇಚ್ಛೆಯಂತೆಯೇ ಆಳುತ್ತಿದ್ದೇವೆಂದು ಹೇಳುತ್ತಿದ್ದುದು ಕೇವಲ ಬಾಯಿಮಾತಿನ ಹೇಳಿಕೆಯಾಗಿರಲಿಲ್ಲ. ಟ್ರಾವಂಕೂರು/ತಿರುವಾಂಕೂರಿನ ಅರಸರು, ಭಾರತದ ಇತರೆ ರಾಜಾಧಿಪತ್ಯದ ರಾಜ್ಯಗಳ ತಮ್ಮ ಸಹವರ್ತಿಗಳ ಹಾಗಲ್ಲದೇ, ರಾಜ್ಯಾದಾಯದ ಅಲ್ಪ ಮಾತ್ರದ ಸಂಪನ್ಮೂಲಗಳನ್ನು ಮಾತ್ರವೇ ತಮ್ಮ ಖಾಸಗೀ ಬಳಕೆಗಾಗಿ ಬಳಸಿಕೊಳ್ಳುತ್ತಿದ್ದರು. ಇದು ಉತ್ತರ ಭಾರತದ ಕೆಲ ರಾಜರುಗಳಿಗೆ ತೀವ್ರ ಮಟ್ಟದಲ್ಲಿ ತದ್ವಿರುದ್ಧವಾಗಿತ್ತು. ರಾಜ್ಯಾದಾಯದ ಅರ್ಧಕ್ಕಿಂತಲೂ ಹೆಚ್ಚಿನ ಪ್ರಮಾಣವನ್ನು ತಮ್ಮ ಖಾಸಗೀ ಬಳಕೆಗಾಗಿ ವ್ಯಯಿಸುತ್ತಿದ್ದ ವಾಯುವ್ಯ ಭಾರತದ ಅರಸರುಗಳ ಉದಾಹರಣೆಗಳಿಗೆ ತದ್ವಿರುದ್ಧವಾಗಿ ಟ್ರಾವಂಕೂರು/ತಿರುವಾಂಕೂರಿನ ಅರಸರುಗಳ ಸರಳತೆ ಹಾಗೂ ಮಿತವ್ಯಯದ ಜೀವನ ಹಾಗೂ ತಮ್ಮ ಪ್ರಜೆಗಳ ಮೇಲಿನ ಅವರ ನಿಸ್ಪೃಹ ಶ್ರದ್ಧೆ/ಕಾಳಜಿಯು ಎದ್ದು ಕಾಣುತ್ತದೆ. ಅವರು ರಾಜ್ಯಾದಾಯದ ಬಹುಪಾಲನ್ನು ಜನತೆಯ ಹಿತಾಸಕ್ತಿಗಾಗಿ ವ್ಯಯಿಸುತ್ತಿದ್ದುದರಿಂದ, ಸಹಜವಾಗಿ ಅವರು ತಮ್ಮ ಪ್ರಜೆಗಳ ಪ್ರೀತಿಯನ್ನು ಗಳಿಸಿಕೊಂಡಿದ್ದರು. ಈ ಅರಸರುಗಳ ಕೆಲ ಧಾರಾಳಿ ದಿವಾನರುಗಳ ಪ್ರಸಂಗದಲ್ಲಿಯೂ ಕೂಡಾ ಇದೇ ವಿಚಾರವು ಅನ್ವಯಿಸುತ್ತದೆ.
 
== ಟ್ರಾವಂಕೂರು/ತಿರುವಾಂಕೂರಿನ ದಿವಾನರುಗಳು (ಪ್ರಧಾನ ಮಂತ್ರಿಗಳು) ==
{{main|List of Diwans of Travancore}}
Line ೧೭೨ ⟶ ೧೪೬:
* C. P. ರಾಮಸ್ವಾಮಿ ಅಯ್ಯರ್‌‌ 1936-1947
* P. G. N. ಉನ್ನಿತ/ಥನ್‌ 1947-1948
 
== ಇವನ್ನೂ ಗಮನಿಸಿ ==
* ಬಂಟರು (ಸಮುದಾಯ)
Line ೧೮೦ ⟶ ೧೫೩:
* ವೈಕೋಮ್‌ ಸತ್ಯಾಗ್ರಹ
* ದೇವಸ್ಥಾನದ ಪ್ರವೇಶದ ಬಗೆಗಿನ ಘೋಷಣೆ
 
== ಹೆಚ್ಚಿನ ಓದಿಗಾಗಿ ==
* {{cite book|last=Menon|first= P. Shungoonny |title=A History of Travancore from the Earliest Times|url=http://www.archive.org/stream/ahistorytravanc00menogoog#page/n6/mode/2up|year=1879|publisher=Higginbotham & Co., Madras}}
 
== ಉಲ್ಲೇಖಗಳು ==
[[ಚಿತ್ರ:Emblm sang1.jpg|right]]
{{reflist}}
 
== ಬಾಹ್ಯ ಕೊಂಡಿಗಳು ==
{{commons category}}
Line ೧೯೯ ⟶ ೧೬೯:
* [http://www.hindu.com/thehindu/fr/2007/01/19/stories/2007011900280300.htm ಸ್ವಾತಿ ಸಂಗೀತೋತ್ಸವಮ್‌ 2007]
* [http://www.hindu.com/mag/2006/02/05/stories/2006020500210400.htm ಮಹಾರಾಣಿ ಸೇತು ಲಕ್ಷ್ಮಿ ಬಾಯಿಯವರ ಮೇಲೆ ಬರೆದ ಲೇಖನ ಶ್ರೀಕುಮಾರ್‌‌ ವರ್ಮರಿಂದ]
 
{{Kerala}}
{{Northern Travancore}}
{{Central Travancore}}
{{Princely states of India}}
 
[[ವರ್ಗ:1949ರ ವಿಸಂಘಟನೆ/ಪದಚ್ಯುತಗೊಳಿಸುವಿಕೆಗಳು]]
[[ವರ್ಗ:1821/1102ರಲ್ಲಿ ಸ್ಥಾಪಿತವಾದ ರಾಜ್ಯಗಳು ಮತ್ತು ಪ್ರಾಂತ್ಯಗಳು]]
"https://kn.wikipedia.org/wiki/ತಿರುವಾಂಕೂರು" ಇಂದ ಪಡೆಯಲ್ಪಟ್ಟಿದೆ