ಒತ್ತೆಕೋಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Prathiba s (ಚರ್ಚೆ | ಕಾಣಿಕೆಗಳು) ಕೊಂಡಿ ಸೇರ್ಪಡೆ |
ಚುNo edit summary |
||
೨ ನೇ ಸಾಲು:
[[ದಕ್ಷಿಣ]] ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ 'ಭೂತಕೋಲ" ಅಥವಾ 'ಭೂತನೇಮ' ದಂದು ನಾಲ್ಕೈದು ದೈವಗಳ ಆರಾಧನೆಯಿರುತ್ತದೆ. ಆದರೆ 'ಒತ್ತೆಕೋಲದಲ್ಲಿ ಆರಾಧಿಸಲ್ಪಡುವುದು [[ವಿಷ್ಣು]]ಮೂರ್ತಿ ದೈವ ಮಾತ್ರ. ಆದ್ದರಿಂದಲೇ ಈ ಆರಾಧನೆಗೆ ಒಂದೇ ಕೋಲ([[ಕನ್ನಡ]]) ಅಥವಾ ಒತ್ತೆಕೋಲ([[ತುಳು]]) ಎಂದು ಹೆಸರು ಬಂದಿದೆ.
===ಇತಿಹಾಸ===
[[ಪಂಜುರ್ಲಿ]] ದೈವವು ಹಿರಣ್ಯಾಕ್ಷನನ್ನು ಕೊಲ್ಲಲೋಸುಗ ವರಾಹಾವತಾರವಾದರೆ ವಿಷ್ಣುಮೂರ್ತಿ ದೈವವು ಪ್ರಿಯಭಕ್ತ ಪ್ರಹಲ್ಲಾದನನ್ನು ಉಳಿಸಿ, ಹಿರಣ್ಯಕಶಿಪುವನ್ನು ಕೊಲ್ಲಲು ತಾಳಿದ ನರಸಿಂಹಾವತಾರ. ನರಸಿಂಹಾವತಾರದ ರೌದ್ರಮೂರ್ತಿಯೇ ಒತ್ತೆಕೋಲದಲ್ಲಿ ಆರಾಧಿಸಲ್ಪಡುವ ವಿಷ್ಣುಮೂರ್ತಿ.
===ಆಚರಣೆ===
ಒತ್ತೆಕೋಲ ಆಗುವುದಕ್ಕೆ ಕೆಲವು [[ದಿನ]]ಗಳ ಮುಂಚೆಯೆ ವಿಷ್ಣುಮೂರ್ತಿ ದೈವದ ಪೂಜಾರಿಗೆ ದರ್ಶನ ಬರುತ್ತದೆ. ದರ್ಶನ ಬಂದುಪೂಜಾರಿ ಆದೇಶದ ಮೇರೆಗೆ ಊರಿನವರು [[ಐದು]] ಹಲಸಿನ [[ಮರ]]ದ ಕೊಂಬೆಗಳನ್ನು ಕಡಿದು ವಿಶಾಲವಾದ ಬಯಲಲ್ಲಿ ಹಾಕಿ ಮಹೂರ್ತ ನಿಶ್ಚಯಿಸುತ್ತಾರೆ. ಮಹೂರ್ತ ತಿಳಿಸಿದ ನಂತರ ಭಕ್ತಾದಿಗಳು ಸೇವೆಯ ರೂಪದಲ್ಲಿ ಕೊಳ್ಳಿ(ಸೌದೆ) ತಂದು ಹಾಕಬಹುದು.
|