ಒತ್ತೆಕೋಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
==ಒತ್ತೆಕೋಲ==
[[ದಕ್ಷಿಣ]] ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ 'ಭೂತಕೋಲ" ಅಥವಾ 'ಭೂತನೇಮ' ದಂದು ನಾಲ್ಕೈದು ದೈವಗಳ ಆರಾಧನೆಯಿರುತ್ತದೆ. ಆದರೆ 'ಒತ್ತೆಕೋಲದಲ್ಲಿ ಆರಾಧಿಸಲ್ಪಡುವುದು ವಿಷ್ಣುಮೂರ್ತಿ[[ವಿಷ್ಣು]]ಮೂರ್ತಿ ದೈವ ಮಾತ್ರ. ಆದ್ದರಿಂದಲೇ ಈ ಆರಾಧನೆಗೆ ಒಂದೇ ಕೋಲ([[ಕನ್ನಡ]]) ಅಥವಾ ಒತ್ತೆಕೋಲ([[ತುಳು]]) ಎಂದು ಹೆಸರು ಬಂದಿದೆ.
===ಇತಿಹಾಸ===
ಪಂಜುರ್ಲಿ ದೈವವು ಹಿರಣ್ಯಾಕ್ಷನನ್ನು ಕೊಲ್ಲಲೋಸುಗ ವರಾಹಾವತಾರವಾದರೆ ವಿಷ್ಣುಮೂರ್ತಿ ದೈವವು ಪ್ರಿಯಭಕ್ತ ಪ್ರಹಲ್ಲಾದನನ್ನು ಉಳಿಸಿ, ಹಿರಣ್ಯಕಶಿಪುವನ್ನು ಕೊಲ್ಲಲು ತಾಳಿದ ನರಸಿಂಹಾವತಾರ. ನರಸಿಂಹಾವತಾರದ ರೌದ್ರಮೂರ್ತಿಯೇ ಒತ್ತೆಕೋಲದಲ್ಲಿ ಆರಾಧಿಸಲ್ಪಡುವ ವಿಷ್ಣುಮೂರ್ತಿ.
===ಆಚರಣೆ===
ಒತ್ತೆಕೋಲ ಆಗುವುದಕ್ಕೆ ಕೆಲವು ದಿನಗಳ[[ದಿನ]]ಗಳ ಮುಂಚೆಯೆ ವಿಷ್ಣುಮೂರ್ತಿ ದೈವದ ಪೂಜಾರಿಗೆ ದರ್ಶನ ಬರುತ್ತದೆ. ದರ್ಶನ ಬಂದುಪೂಜಾರಿ ಆದೇಶದ ಮೇರೆಗೆ ಊರಿನವರು [[ಐದು]] ಹಲಸಿನ ಮರದ[[ಮರ]]ದ ಕೊಂಬೆಗಳನ್ನು ಕಡಿದು ವಿಶಾಲವಾದ ಬಯಲಲ್ಲಿ ಹಾಕಿ ಮಹೂರ್ತ ನಿಶ್ಚಯಿಸುತ್ತಾರೆ. ಮಹೂರ್ತ ತಿಳಿಸಿದ ನಂತರ ಭಕ್ತಾದಿಗಳು ಸೇವೆಯ ರೂಪದಲ್ಲಿ ಕೊಳ್ಳಿ(ಸೌದೆ) ತಂದು ಹಾಕಬಹುದು.
ಕೇರಳದ ಮಲಯರು ವಿಷ್ಣಮೂರ್ತಿ ದೈವವನ್ನು ಕಟ್ಟುತ್ತಾರೆ. ಊರ ಜನರು ಕ್ರಿಯಾ ಭಾಗಗಳನ್ನು ನೀಡಿದ ನಂತರ ದೈವವೇಷಧಾರಿಗೆ ದರ್ಶನ(ಆವೇಶ) ಬರುತ್ತದೆ. ಈ ಸಮಯದಲ್ಲಿ ಬಿಲ್ಲವ. ಗಾಣಿಗ, ಬಂಟ, ಗೌಡ ಹಾಗೂ ಮಣಿಯಾಣಿ ಸಮುದಾಯದವರು ವಿಷ್ಣುಮೂರ್ತಿ ಬಳಿಯಿರುವ ಕತ್ತಿ ಹಿಡಿಯುತ್ತಾರೆ. ಈ ವೇಳೆ ವಿವಿಧ ಜಾತಿಯ ಪೂಜಾರರಿಗೆ ದರ್ಶನ ಬಂದು ಆರ್ಭಟ ಮಾಡುತ್ತಾ ಕತ್ತಿಯನ್ನು ಎದೆಗೆ ಬಡಿದುಕೊಳ್ಳುತ್ತಾರೆ. ಅಲ್ಲಿಗೆ ಆ ದಿವಸದ ಕಾರ್ಯಕ್ರಮ ಮುಗಿಯುತ್ತದೆ.
ಒತ್ತೆಕೋಲದಲ್ಲಿ ಹಸಿ ಸೌದೆಯನ್ನು ಬಳಸಲಾಗುತ್ತದೆ. ಒಣಗಿದ ಸೌದೆ ಬೇಗ ಉರಿದು ಬೂದಿಯಾಗುವುದೇ ಕಾರಣ. ಹಸಿಸೌದೆ ರಾತ್ರಿಯೆಲ್ಲಾ ಉರಿದು ಬೆಳಗಿನ ಹೊತ್ತಿಗೆ ದೊಡ್ಡ ಕೆಂಡದ ರಾಶಿ ಸಿದ್ದವಾಗಿರುತ್ತದೆ. ಮಾರನೆಯದಿನ ವಿಷ್ಣು ಮೂರ್ತಿ ವೇಷ ನೂರ ಒಂದು ಬಾರಿ ವಿವಿಧ ಭಂಗಿಗಳಲ್ಲಿ ಕೆಂಡದ ಮೇಲೆ ಬೀಳುತ್ತದೆ. ವಿವಿಧ ಪೂಜಾರಿಗಳು 101 ಸಾರಿಯೂ ಕೆಂಡದ ರಾಶಿಯಿಂದ ಹೊರಗೆಳೆಯುತ್ತಾರೆ.
"https://kn.wikipedia.org/wiki/ಒತ್ತೆಕೋಲ" ಇಂದ ಪಡೆಯಲ್ಪಟ್ಟಿದೆ