ಮಡಿಕೇರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೯ ನೇ ಸಾಲು:
footnotes = |
}}
'''ಮಡಿಕೇರಿ''' [[ಕೊಡಗು]] ಜಿಲ್ಲೆಯ ಒಂದು ತಾಲೂಕು ಹಾಗೂ ಜಿಲ್ಲಾ ಕೇಂದ್ರ. ಕೊಡಗಿನ ರಾಜಧಾನಿ ಎಂದರೂ ತಪ್ಪಾಗಲಾರದು. ಎಲ್ಲಾ ಪ್ರಮುಖ ವ್ಯವಹಾರಗಳು ನಡೆಯುವ ಸ್ಥಳ. ಎಲ್ಲಾ ಸರ್ಕಾರಿ ಕಛೇರಿಗಳು ಮುಖ್ಯವಾಗಿ ಮಡಿಕೇರಿಯಲ್ಲಿದೆ. ಅಲ್ಲದೆ ಮಡಿಕೇರಿ ಒಂದು ಪ್ರಮುಖ ಪ್ರವಾಸಿ ಕೇಂದ್ರವೂ ಹೌದು, ಮಡಿಕೇರಿಯನ್ನು ಮೊದಲು [[ಲಿಂಗರಾಜ]] ಮಹಾರಾಜನು ತನ್ನ ಕಾಲಾಡಳಿತದಲ್ಲಿ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನು. ಮಡಿಕೇರಿಯಲ್ಲಿರುವ [[ಓಂಕಾರೇಶ್ವರ ದೇವಸ್ಠಾನ]]ವನ್ನು ರಾಜ [[ಲಿಂಗರಾಜ]] ಕಟ್ಟಿಸಿದನು. ಇಂದು ಇದು ಇಲ್ಲಿಯ ಪ್ರಮುಖ ದೇವಾಸ್ಥಾನವೂ, ಪ್ರವಾಸಿ ತಾಣವೂ ಅಗಿದೆ,ಅದೇ ರೀತಿ [[ರಾಜಾಸೀಟ್]] , ಅರಮನೆ,ಗದ್ದಿಗೆಯು ಸಹ ಇಂದಿನ ಪ್ರವಾಸಿ ತಾಣಗಳಲ್ಲಿ ಹೆಸರಾಗಿದೆ.[[ಅಬ್ಬಿ ಜಲಪಾತ]] ವು ಮೈ ನೆರೆತರೆ ಪ್ರವಾಸಿಗರಿಗೆ ಸಂಭ್ರಮ.ಈ ಜಲಪಾತವನ್ನು ನೋಡಲು ರಾಜ್ಯದ ಎಲ್ಲಾ ಭಾಗಗಳಿಂದಲೂ ಜನರ ಅಗಮನ.ಹಾಗೆ ಬಂದ ಪ್ರವಾಸಿಗರ ಮನ ತಣಿಸಿ ಅಬ್ಬಿ ಅವರನ್ನು ಬೀಳ್ಗೊಡುತ್ತದೆ.ಮಡಿಕೇರಿಯ ಮಂಜನ್ನು ಕವಿ ಪಂಜೆ ಮಂಗೆಶ್ವರ ಅವರು ಕವಿತೆಯಾಗಿ ವರ್ಣಿಸಿದ್ದಾರೆ. ಮ್ಯೆಸೂರಿನಲ್ಲಿ ಅತಿ ವಿಜ್ರಂಭಣೆಯಿಂದ ನಡೆಯುವ ದಸರಾ,ಮಡಿಕೇರಿಯಲ್ಲಿಯು ನಡೆಯುತ್ತದೆ.ಮಡಿಕೇರಿಯ ತಲ ಕಾವೇರಿಯಲ್ಲಿ,ಕಾವೇರಿ ನದಿಯು ಹುಟ್ಟಿ ಅಲ್ಲಿಂದ ಸುಮಾರು ೧,೨ ಕಿ ಮಿ ವರೆಗೆ ಭೂಮಿಯಲ್ಲಿ ತನ್ನನ್ನು ಯಾರಿಗು ತೋರಿಸಿಕ್ಕೊಳ್ಳದೆ ಹರಿದು ಮುಂದೆ ಪುನ:ಹ ತನ್ನ ದರ್ಶನವನ್ನು ನೀಡುತ್ತದೆ.ಇದು ಜಿಲ್ಲೆಯ ಮತ್ತು ರಾಜ್ಯದ ಪ್ರಮುಖ ನದಿಯು ಸಹ ಅಗಿದೆ.ತಲ ಕಾವೇರಿಯಲ್ಲಿ ಪ್ರತಿ ವರ್ಷವು ತೀರ್ಥೊದ್ಭವವು ಸಂಭವಿಸುತ್ತದೆ,ಇದರ ದರ್ಶನಕ್ಕೆ ಸಾವಿರರು ಭಕ್ತರು ಅಲ್ಲಿ ಬಂದು ಸೇರುತ್ತಾರೆ,(ಮತ್ತು ಕೆಲವು ಸಂಘ ಸಂಸ್ಥೆಗಳು ತೀರ್ಥವನ್ನು ಜಿಲ್ಲೆಯ ಎಲ್ಲಾ ಭಾಗದ ಜನರಿಗೆ ತಲುಪಿಸಲು ಸಹಕರಿಸುತ್ತಾರೆ.) ಈ ನದಿಯು ಮುಂದೆ ತಮೀಳುನಾಡು ರಾಜ್ಯದ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತದೆ.
 
 
"https://kn.wikipedia.org/wiki/ಮಡಿಕೇರಿ" ಇಂದ ಪಡೆಯಲ್ಪಟ್ಟಿದೆ