ವೈಶೇಷಿಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
ವೈಶೇಷಿಕ ದರ್ಶನ-ಒಂದು ವೈಜ್ಞಾನಿಕ ಮುನ್ನೋಟ:
ಪ್ರಾಚೀನ ಭಾರತದ ವೈಜ್ಞಾನಿಕ ಮತ್ತು ತಾತ್ವಿಕ ಸಂಪ್ರದಾಯಗಳಲ್ಲಿ ವೈಶೇಷಿಕವೆಂಬುದು ಕೂಡ ಒಂದು ದರ್ಶನವಾಗಿದೆ'ವೈಶೇಷಿಕ ಸೂತ್ರ'ಗಳು ಋಷಿ ಕಾನಡರವರು ಸೃಷ್ಟಿಸಿದ್ದಾರೆ,ಇದು ಭೌತಿಕ ಶಾಸ್ತ್ರದ ಒಂದು ಗ್ರಂಧವಾಗಿದೆ.ಈ ಸೂತ್ರಗಳು ಪ್ರಕೃತಿನಲ್ಲಿನ ವಸ್ತುಪ್ರಪಂಚದ ಬಗ್ಗೆ,ಅದರ ಸಂಯೋಜನೆಯ ಬಗ್ಗೆ ವಿವರಿಸಿದವು; ಮತ್ತು ವಸ್ತುಗಳಲ್ಲಿ ಇರುವ ಅಣು ಎಂಬ ಪದಾರ್ಥದ ಬಗ್ಗೆ ಮೊದಲ ಬಾರಿ ಪರಿಕಲ್ಪನೆ ಮಡಿದವು, ವಸ್ತುವಿನ ಪ್ರಪಂಚಕ್ಕೆ ಅಣು ಮೂಲಭೂತ ಕಾರಣವೆಂಬುದನ್ನು ತೀರ್ಮಾನಿಸಿದವು.ನೈಸರ್ಗಿಕ ಚಟುವಟಿಕೆಗಳನ್ನು ಒಂದು ತಾರ್ಕಿಕ,ವೈಜ್ಞಾನಿಕ ಮತ್ತು ತಾತ್ವಿಕ ರೂಪದಲ್ಲಿ, ಮತ್ತು ಅಕಾಶದ ನಿಗೂಢತೆಯನ್ನು ಸಂಕ್ಷಿಪ್ತವಾಗಿ ಒಂದು ಸೈದ್ಧಂತಿಕ ನೆಲಮಟ್ಟಿನಲ್ಲಿ ಚರ್ಚಿಸಿದವು,ಇದರಿಂದ ಇದು ಒಂದು ದರ್ಶನವಾಗಿದೆ.ದೃಷ್ಟಿ-ಸೃಷ್ಟಿಯ ನಡುವುನ ಆಂತರಂಗಿಕ ಸಂಬಂಧವನ್ನು ಈ ಸೂತ್ರಗಳಲ್ಲಿ
ಮನಸ್ಸಿನ ಮತ್ತು ಇಂದ್ರಿಯಗಳ ಮೂಲಕ ಪ್ರಕೃತಿಯ ವಿವಿಧ ಘಟಕಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ವೀಕ್ಷಕನು ಈ ವಿಶ್ವದಲ್ಲಿ ಕೇಂದ್ರ ಪಾತ್ರ ವಹಿಸುತ್ತನೆ; ಮತ್ತು ಈ ಗುಣಗಳನ್ನು ಅರ್ಥಮಾಡಿಕೊಳ್ಳಲು ೯ ದ್ರವ್ಯಗಳೆಂಬ ಪದಾರ್ಥಗಳ ಪರಿಕಲ್ಪನೆಯ ಅವಶ್ಯಕತೆ ಇದೆ ಎಂದು ಈ ಸೂತ್ರಗಳು ತಿಳಿಸುತ್ತದೆ.ಈ ೯ ದ್ರವ್ಯಗಳಲ್ಲಿ ಮೂಖ್ಯವಾದ ಆಕಾಶಕ್ಕೆ ಸಹ ಒಂದು ಗುಣ ಮತ್ತು ಅದರ ಚಲನಕ್ಕೆ ಬೇಕಾದ ಉಗಮದ ಬಗೆಗಿನ ವಿಚಾರ, ಮತ್ತು ಈ ಆಕಾಶಕ್ಕೆ ಒಂದು ಖಚಿತವಾದ,ಸ್ವಾತಂತ್ರ್ಯವಾದ ಇರುವಿಕೆ ಇದೆ ಎಂಬ ಸಂಗತಿ ಇಲ್ಲಿ ಪ್ರತಿಬಿಂಬಿಸುತ್ತದೆ.ಪ್ರತಿಯೊಂದು ದ್ರವ್ಯಕ್ಕೂ ಸಹ ಒಂದು ಲಿಂಗ,ಅಂದರೆ ವಿಶ್ವದ ಗುಣಗಳನ್ನು ತಾದಾತ್ಮ್ಯಗೊಳಿಸಲು ಒಂದು ಗುರುತು,ಇದೆ.ಈ ಲಿಂಗಗಳಿಗೆ ಅಥವಾ ಗುರುತುಗಳಿಗೆ, ಕೆಲವು ಅನನ್ಯವಾದ ಗಣಗಳಿರುತ್ತೆ ಎಂದು ಋಷಿ ಕಾನಡರವರು ಹೀಳಿದ್ದಾರೆ.ಈ ೯ ದ್ರವ್ಯಗಳ ವಿವರಣೆ ಹೀಗೆ ಇದೆ, ಅವು ಪೃಥ್ವಿ,ಆಪಸ್ಸ್,ತೇಜಸ್ಸ್,ವಾಯು,ಆಕಾಶ,ಕಾಲ,ದಿಕ್ಕು,ಆತ್ಮ ಮತ್ತು ಮನಸ್ಸು. ಹೀಗೆ ಇಡೀ ಸೃಷ್ಟಿಯ ಗುಣಲಕ್ಷಣಗಳು ಸಂಶೋಧಿಸಲು ಒಂದು ಚೌಕಟ್ಟನ್ನು ಕಾನಡರವರು ನಿರ್ಮಿಸಿದರು.ಈ ವಿಂಗಡನೆಯನ್ನು ಒಂದು ಪ್ರಾಯೋಗಿಕ ಮತ್ತು ಭೌತವಾದ ದೃಷ್ಟಿಯಿಂದ ಮಾತ್ರ ನೋಡುವುದಲ್ಲದೆ,ಒಂದು ರೂಪಕ,ತಾರ್ಕಿಕ,ಅನುಭವಪೂರ್ವಕ ಮತ್ತು ತುಲನಾತ್ಮಕ ದೃಷ್ಟಿಕೋಣದಿಂದ ನೋಡಬೇಕಾಗುತ್ತದೆ.ಈ ದ್ರವ್ಯಗಳಲ್ಲಿ ಮೊದಲ ೪ ದ್ರವ್ಯಗಳು ಅಶಾಶ್ವತವಾಗಿದ್ದು, ಮನಸ್ಸು ಶಾಶ್ವತವಗಿರುವುದು ಮತ್ತು ನಿರಾಕಾರವಗಿರುತ್ತದೆ,ಮಿಕ್ಕಿದ ೪ ದ್ರವ್ಯಗಳು ಶಾಶ್ವತವಗಿತ್ತು ಚಲಿಸಲು ಅಸಮರ್ಥವಾಗಿರುತ್ತದೆ. ಮಾನವನ ಮನಸ್ಸು, ಒಂದು ವಸ್ತು ಇನ್ನೊಂದು ವಸ್ತುವಿನ ಸಂಬಂಧಿತವಾಗಿ ಚಲಿಸಿದರೆ ಮಾತ್ರ ಆಕಾಶವನ್ನು ಗುರಿತುಸುತ್ತದೆ ಎಂಬ ಸತ್ಯವನ್ನು ಇಂಥಹ ದ್ರವ್ಯಗಳ ಮೂಲಕ ವರ್ಗೀಕರಣ ಮಾಡುವುದರಿಂದ ಋಷಿ ಕಾನಡರವರು ತಿಳಿಸಿದ್ದಾರೆ.ಒಂದು ಅಣು ಇನ್ನುಂದು ಅಣುವಿನ ಜೊತೆ ಸೇರಿದಾಗ ಉಂತಾಗುವ ರಾಸಾಯನಿಕ ಚರ್ಯೆಗಳ ಬಗ್ಗೆ, ಮತ್ತು ಹೀಗೆ ಸೇರಿದ ಅಣುಗಳ ರೂಪ,ಭೌತಿಕ ಗುಣಲಕ್ಷಣಗಳು,ವಿವಿಧ ಸಂಯೂಜನೆಯ ಮಾಧರಿಗಳನ್ನು ಸೂಕ್ತಗಳ ಮೂಲಕ ತಿಳಿಸಲಾಗಿದೆ.
೧೫ನೇ ಶತಮಾನದ ಶಂಕರ ಮಿಶ್ರ ಎಂಬ ವಿದ್ವಾಂಸರು ಈ ಸೂತ್ರಗಳಿಗೆ ಒಂದು ವ್ಯಾಖ್ಯಾನವನ್ನು ಬರೆದರು.ಮತ್ತು ೪ನೇ ಶತಮಾನದ ಪ್ರಾಶಷ್ತಪಾದ ಎಂಬ ತಾತ್ವಿಕ-ವಿಜ್ಞಾನಿ 'ಪ್ರಾಶಷ್ತಪಾದ ಭಾಷ್ಯ'ವಂಬ ಕ್ರುತಿಯನ್ನು ಋಷಿ ಕಾನಡರವರ ವೈಶೇಷಿಕ ಸೂತ್ರಗಳಿಗೆ ವ್ಯಾಖ್ಯಾನವಗಿ ರಚಿಸಿದರು.
|