ಬೊಮ್ಮಲಮ್ಮಗುಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
[[ತೆಲಂಗಾಣ]] ರಾಜ್ಯದ [[ಕರೀಮ್ ನಗರ]] ಜಿಲ್ಲೆಯ [[ಗಂಗಾಧರಂ]] ಮಂಡಲದಲ್ಲಿರುವ [[ಕುರಿಕ್ಯಾಲ]] ಗ್ರಾಮದ ಅಂಚಿನಲ್ಲಿರುವುದೇ ಬೊಮ್ಮಲಮ್ಮಗುಟ್ಟ. <ref>http://censusindia.gov.in/PopulationFinder/Sub_Districts_Master.aspx?state_code=28&district_code=03</ref>
==ಚಕ್ರೇಶ್ವರಿ==
ಅದು ಹತ್ತನೇ ಶತಮಾನದಲ್ಲಿ [[ವೃಷಭಗಿರಿ]] ಎಂದು ಪ್ರಸಿದ್ಧವಾಗಿತ್ತು. ದೂರದಿಂದ ಎತ್ತಿನ ರೂಪದಲ್ಲಿ ಕಾಣುವ ಈ ಗುಡ್ಡ ಕನ್ನಡ ತೆಲುಗು ಸಾಹಿತ್ಯಚರಿತ್ರೆಗಳಲ್ಲಿ ಬಹುಮುಖ್ಯ ಸ್ಥಾನ ಪಡೆದಿದೆ. ಗುಡ್ಡದ ಮೇಲೆ ೪೦ ಅಡಿ ಎತ್ತರ ೨೫ ಅಡಿ ಅಗಲದ ದೊಡ್ಡ ಬಂಡೆ ಇದೆ. ಈ ಬಂಡೆಯ ಮೇಲೆ ಹದಿನಾಲ್ಕು ಅಡಿಗಳ ವಿಸ್ತಾರದಲ್ಲಿ [[ಜೈನ]] ದೇವತೆ [[ಚಕ್ರೇಶ್ವರಿ]]ಯನ್ನು ಕಂಡರಿಸಲಾಗಿದೆ. ಅದರ ಮೇಲುಗಡೆ ಜೈನರ ಆದಿತೀರ್ಥಂಕರನಾದ [[ವೃಷಭನಾಥ]]ನ ಹಾಗೂ ಕೊನೆಯ ತೀರ್ಥಂಕರನಾದ [[ಮಹಾವೀರ]]ನ ವಿಗ್ರಹಗಳನ್ನೂ ಆಕರ್ಷಣೀಯವಾಗಿ ಕೆತ್ತಲಾಗಿದೆ. ಎಂಟು ಕೈಗಳ ಚಕ್ರೇಶ್ವರೀದೇವಿಯು ವಿವಿಧ ಆಯುಧಗಳು, ಆಭರಣಗಳೊಂದಿಗೆ ಗರುಡವಾಹನದ ಮೇಲೆ ನೆಲೆಸಿದ್ದಾಳೆ. ಅವಳ ಇಕ್ಕೆಲಗಳಲ್ಲಿ ತಲಾ ಮೂವರು [[ಜೈನ ದಿಗಂಬರ]]ರಿದ್ದಾರೆ. ಚಕ್ರೇಶ್ವರಿಯ ಎರಡೂ ಭುಜಗಳ ಬಳಿ ಆಕೆಯ ಸೇವಕಿಯರಂತೆ ಕಾಣುವ ಸ್ತ್ರೀ ಆಕೃತಿಗಳಿವೆ. ಚಕ್ರೇಶ್ವರಿಯನ್ನೂ ಆಕೆಯ ಅಕ್ಕಪಕ್ಕದಲ್ಲಿನ ಇತರ ಮಾನವಾಕೃತಿಗಳನ್ನೂ ಕಂಡ ತೆಲುಗು ಜನಪದರು ಆಕೆಯನ್ನು ಬೊಮ್ಮಲಮ್ಮ (ಗೊಂಬೆಗಳ ಅಮ್ಮ) ಎಂದು ಕರೆದಿದ್ದಾರೆ.
 
==ಚಾಲುಕ್ಯರು==
[[ವೇಮುಲವಾಡ]] [[ಚಾಲುಕ್ಯರು]] ಕ್ರಿ.ಶ. ೭೫೦ ರಿಂದ ಕ್ರಿ.ಶ. ೯೭೩ ವರೆಗೆ ಅಂದರೆ ಸುಮಾರು ಎರಡು ಶತಮಾನಗಳ ಕಾಲ ಮೊದಲು ಬೋದನ್ ಅನ್ನು ಆನಂತರ ವೇಮುಲವಾಡವನ್ನು ರಾಜಧಾನಿಯಾಗಿ ಮಾಡಿಕೊಂಡು ’ಸಪಾದಲಕ್ಷ’ ರಾಜ್ಯವನ್ನು (ಇಂದಿನ [[ನಿಜಾಮಾಬಾದ್]], [[ಕರೀಂನಗರ]] ಜಿಲ್ಲೆಗಳ ಪ್ರಾಂತ್ಯವನ್ನು) ಆಳುತ್ತಿದ್ದರು. ಇವರು [[ರಾಷ್ಟ್ರಕೂಟ]]ರ ಸಾಮಂತರು. ಇವರಲ್ಲಿ ರಾಜನೀತಿಜ್ಞನೂ, ವಿದ್ಯಾವಿಶಾರದನೂ, ಕವಿಪಂಡಿತಪೋಷಕನೂ ಆಗಿದ್ದ [[ಅರಿಕೇಸರಿ II]], ಕ್ರಿ.ಶ.೯೩೦ರಿಂದ ೯೫೫ರವರೆಗೆ ವೇಮುಲವಾಡ ರಾಜಧಾನಿಯಿಂದ ಆಳುತ್ತಿದ್ದ. ಈತನ ಆಸ್ಥಾನದಲ್ಲಿದ್ದ ಮಹಾಕವಿ [[ಪಂಪ]]ನು ಕನ್ನಡದ ಆದಿಕವಿ. ಪಂಪನು ರಚಿಸಿದ [[ವಿಕ್ರಮಾರ್ಜುನ ವಿಜಯ]] ಹಾಗೂ [[ವೃಷಭನಾಥಚರಿತೆ]]ಗಳು ಕನ್ನಡದ ಪ್ರಸಿದ್ಧ ಕಾವ್ಯಗಳು. ಪಂಪನ ಕಾವ್ಯಕೃಷಿಯನ್ನು ಮೆಚ್ಚಿ ಅರಿಕೇಸರಿಯು ಪಂಪನಿಗೆ ’ಕವಿತಾಗುಣಾರ್ಣವ’ ಎಂಬ ಬಿರುದಿನಿಂದ ಸನ್ಮಾನಿಸಿ ’ಧರ್ಮಪುರ’ ಎಂಬ ಗ್ರಾಮವನ್ನು ಉಂಬಳಿಯಾಗಿ ಕೊಡುತ್ತಾನೆ. ಈ ಧರ್ಮಪುರಕ್ಕೆ ಉತ್ತರ ದಿಕ್ಕಿನಲ್ಲಿರುವುದೇ ಬೊಮ್ಮಲಮ್ಮಗುಟ್ಟ.
"https://kn.wikipedia.org/wiki/ಬೊಮ್ಮಲಮ್ಮಗುಟ್ಟ" ಇಂದ ಪಡೆಯಲ್ಪಟ್ಟಿದೆ