ಬೊಮ್ಮಲಮ್ಮಗುಟ್ಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
"కురికియల్" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
ಟ್ಯಾಗ್: ವಿಷಯ ಅನುವಾದ
 
No edit summary
೧ ನೇ ಸಾಲು:
[[ತೆಲಂಗಾಣ]] ರಾಜ್ಯದ [[ಕರೀಮ್ ನಗರ]] ಜಿಲ್ಲೆಯ [[ಗಂಗಾಧರಂ]] ಮಂಡಲದಲ್ಲಿರುವ [[ಕುರಿಕ್ಯಾಲ]] ಗ್ರಾಮದ ಅಂಚಿನಲ್ಲಿರುವುದೇ ಬೊಮ್ಮಲಮ್ಮಗುಟ್ಟ. <ref>http://censusindia.gov.in/PopulationFinder/Sub_Districts_Master.aspx?state_code=28&district_code=03</ref>
'''క్క్క్క్క్ురి''', కరీంనగర్ జిల్లా, గంగాధర మండలానికి చెందిన గ్రామము. పిన్ కోడ్ : 505445.
==ಚಕ್ರೇಶ್ವರಿ==
ಅದು ಹತ್ತನೇ ಶತಮಾನದಲ್ಲಿ [[ವೃಷಭಗಿರಿ]] ಎಂದು ಪ್ರಸಿದ್ಧವಾಗಿತ್ತು. ದೂರದಿಂದ ಎತ್ತಿನ ರೂಪದಲ್ಲಿ ಕಾಣುವ ಈ ಗುಡ್ಡ ಕನ್ನಡ ತೆಲುಗು ಸಾಹಿತ್ಯಚರಿತ್ರೆಗಳಲ್ಲಿ ಬಹುಮುಖ್ಯ ಸ್ಥಾನ ಪಡೆದಿದೆ. ಗುಡ್ಡದ ಮೇಲೆ ೪೦ ಅಡಿ ಎತ್ತರ ೨೫ ಅಡಿ ಅಗಲದ ದೊಡ್ಡ ಬಂಡೆ ಇದೆ. ಈ ಬಂಡೆಯ ಮೇಲೆ ಹದಿನಾಲ್ಕು ಅಡಿಗಳ ವಿಸ್ತಾರದಲ್ಲಿ [[ಜೈನ]] ದೇವತೆ [[ಚಕ್ರೇಶ್ವರಿ]]ಯನ್ನು ಕಂಡರಿಸಲಾಗಿದೆ. ಅದರ ಮೇಲುಗಡೆ ಜೈನರ ಆದಿತೀರ್ಥಂಕರನಾದ [[ವೃಷಭನಾಥ]]ನ ಹಾಗೂ ಕೊನೆಯ ತೀರ್ಥಂಕರನಾದ [[ಮಹಾವೀರ]]ನ ವಿಗ್ರಹಗಳನ್ನೂ ಆಕರ್ಷಣೀಯವಾಗಿ ಕೆತ್ತಲಾಗಿದೆ. ಎಂಟು ಕೈಗಳ ಚಕ್ರೇಶ್ವರೀದೇವಿಯು ವಿವಿಧ ಆಯುಧಗಳು, ಆಭರಣಗಳೊಂದಿಗೆ ಗರುಡವಾಹನದ ಮೇಲೆ ನೆಲೆಸಿದ್ದಾಳೆ. ಅವಳ ಇಕ್ಕೆಲಗಳಲ್ಲಿ ತಲಾ ಮೂವರು [[ಜೈನ ದಿಗಂಬರ]]ರಿದ್ದಾರೆ. ಚಕ್ರೇಶ್ವರಿಯ ಎರಡೂ ಭುಜಗಳ ಬಳಿ ಆಕೆಯ ಸೇವಕಿಯರಂತೆ ಕಾಣುವ ಸ್ತ್ರೀ ಆಕೃತಿಗಳಿವೆ. ಚಕ್ರೇಶ್ವರಿಯನ್ನೂ ಆಕೆಯ ಅಕ್ಕಪಕ್ಕದಲ್ಲಿನ ಇತರ ಮಾನವಾಕೃತಿಗಳನ್ನೂ ಕಂಡ ತೆಲುಗು ಜನಪದರು ಆಕೆಯನ್ನು ಬೊಮ್ಮಲಮ್ಮ (ಗೊಂಬೆಗಳ ಅಮ್ಮ) ಎಂದು ಕರೆದಿದ್ದಾರೆ.
==ಚಾಲುಕ್ಯರು==
[[ವೇಮುಲವಾಡ]] [[ಚಾಲುಕ್ಯರು]] ಕ್ರಿ.ಶ. ೭೫೦ ರಿಂದ ಕ್ರಿ.ಶ. ೯೭೩ ವರೆಗೆ ಅಂದರೆ ಸುಮಾರು ಎರಡು ಶತಮಾನಗಳ ಕಾಲ ಮೊದಲು ಬೋದನ್ ಅನ್ನು ಆನಂತರ ವೇಮುಲವಾಡವನ್ನು ರಾಜಧಾನಿಯಾಗಿ ಮಾಡಿಕೊಂಡು ’ಸಪಾದಲಕ್ಷ’ ರಾಜ್ಯವನ್ನು (ಇಂದಿನ [[ನಿಜಾಮಾಬಾದ್]], [[ಕರೀಂನಗರ]] ಜಿಲ್ಲೆಗಳ ಪ್ರಾಂತ್ಯವನ್ನು) ಆಳುತ್ತಿದ್ದರು. ಇವರು [[ರಾಷ್ಟ್ರಕೂಟ]]ರ ಸಾಮಂತರು. ಇವರಲ್ಲಿ ರಾಜನೀತಿಜ್ಞನೂ, ವಿದ್ಯಾವಿಶಾರದನೂ, ಕವಿಪಂಡಿತಪೋಷಕನೂ ಆಗಿದ್ದ [[ಅರಿಕೇಸರಿ II]], ಕ್ರಿ.ಶ.೯೩೦ರಿಂದ ೯೫೫ರವರೆಗೆ ವೇಮುಲವಾಡ ರಾಜಧಾನಿಯಿಂದ ಆಳುತ್ತಿದ್ದ. ಈತನ ಆಸ್ಥಾನದಲ್ಲಿದ್ದ ಮಹಾಕವಿ [[ಪಂಪ]]ನು ಕನ್ನಡದ ಆದಿಕವಿ. ಪಂಪನು ರಚಿಸಿದ [[ವಿಕ್ರಮಾರ್ಜುನ ವಿಜಯ]] ಹಾಗೂ [[ವೃಷಭನಾಥಚರಿತೆ]]ಗಳು ಕನ್ನಡದ ಪ್ರಸಿದ್ಧ ಕಾವ್ಯಗಳು. ಪಂಪನ ಕಾವ್ಯಕೃಷಿಯನ್ನು ಮೆಚ್ಚಿ ಅರಿಕೇಸರಿಯು ಪಂಪನಿಗೆ ’ಕವಿತಾಗುಣಾರ್ಣವ’ ಎಂಬ ಬಿರುದಿನಿಂದ ಸನ್ಮಾನಿಸಿ ’ಧರ್ಮಪುರ’ ಎಂಬ ಗ್ರಾಮವನ್ನು ಉಂಬಳಿಯಾಗಿ ಕೊಡುತ್ತಾನೆ. ಈ ಧರ್ಮಪುರಕ್ಕೆ ಉತ್ತರ ದಿಕ್ಕಿನಲ್ಲಿರುವುದೇ ಬೊಮ್ಮಲಮ್ಮಗುಟ್ಟ.
==ಜಿನವಲ್ಲಭ==
ಈ ಪಂಪನ ತಮ್ಮನೇ [[ಜಿನವಲ್ಲಭ]]. ಜೈನಮತಾಭಿವೃದ್ಧಿಗಾಗಿ ವಿಶೇಷ ಕೃಷಿ ನಡೆಸಿದ ಈ ಜಿನವಲ್ಲಭ ಬೊಮ್ಮಲಮ್ಮಗುಡ್ಡದ ಮೇಲಿನ ಉಬ್ಬುಶಿಲ್ಪಗಳನ್ನು ಕೆತ್ತಿಸಿ ಅದರ ತಳಭಾಗದಲ್ಲಿ ಕನ್ನಡ ತೆಲುಗು ಸಂಸ್ಕೃತ ನುಡಿಗಳಲ್ಲಿ ಶಾಸನ ಹಾಕಿಸಿದ್ದಾನೆ. ಆ ಕಲ್ಬರಹದಲ್ಲಿ ಓಂ ನಮಃ ಸಿದ್ದೇಭ್ಯ ಎಂದು ಶುರುವಾಗುವ ದೀರ್ಘ ಕನ್ನಡ ಗದ್ಯದೊಂದಿಗೆ ಮೂರು [[ಸಂಸ್ಕೃತ ವೃತ್ತ]]ಗಳೂ, ಆರು ಕನ್ನಡ ವೃತ್ತಗಳೂ, ಮೂರು ತೆಲುಗು [[ಕಂದಪದ್ಯ]]ಗಳೂ ಕೊನೆಯಲ್ಲಿ [[ಕನ್ನಡ ವಚನ]]ಗಳೂ ಇವೆ. ಸಂಸ್ಕೃತ ವೃತ್ತಗಳಲ್ಲಿ ಜಿನವಲ್ಲಭನು ತಾನು ’ವಾಚಕಾಭರಣ’ ಎಂಬ ಬಿರುದಿನಿಂದ ಕೀರ್ತಿತನಾಗಿದ್ದೇನೆಂದು ಹೇಳಿಕೊಳ್ಳುತ್ತಾನೆ.
==ಅಮೂಲ್ಯ ಶಾಶನ==
ಗಂಗಾಧರಂ ಶಾಸನ ಎಂದೇ ಪ್ರಸಿದ್ಧವಾಗಿರುವ ಈ ಶಾಸನದಲ್ಲಿನ ಕನ್ನಡ ಪಠ್ಯದಲ್ಲಿ ಪಂಪನ ಕುರಿತಾದ ಎಷ್ಟೋ ವಿವರಗಳು ದಾಖಲಾಗಿವೆ. ಈ ಶಾಸನ ದೊರೆಯುವವರೆಗೆ ಪಂಪನ ತಾಯ್ತಂದೆಯರು ಹಾಗೂ ಹುಟ್ಟೂರುಗಳ ಕುರಿತಂತೆ ಮಾಹಿತಿ ಏನೂ ಇರಲಿಲ್ಲವಾಗಿ ಗಂಗಾಧರಂ ಶಾಸನ ಕನ್ನಡ ಸಾಹಿತ್ಯಚರಿತ್ರೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಅದೇ ರೀತಿ ತೆಲುಗು ಕಂದ ಪದ್ಯಗಳೂ ಸಹಾ ತೆಲುಗಿನ ಸಾಹಿತ್ಯಚರಿತ್ರೆಯ ದೃಷ್ಟಿಯಿಂದ ಅತ್ಯಂತ ಪ್ರಮುಖ ಸ್ಥಾನ ಪಡೆಯುತ್ತವೆ. ಇದುವರೆಗೆ ನನ್ನಯ (ಕ್ರಿ.ಶ.೧೦೫೧) ಕವಿಯನ್ನೇ ತೆಲುಗಿನ ಆದಿಕವಿ ಎಂದು ಭಾವಿಸಲಾಗಿತ್ತು. ಆದರೆ ನನ್ನಯನಿಗಿಂತ ಮೊದಲೇ ಬರೆಯಲಾಗಿರುವ ಈ ತೆಲುಗು ಕಂದಪದ್ಯಗಳ ಮೂಲಕ ತೆಲುಗಿನ ಪ್ರಾಚೀನತೆ ಕ್ರಿ.ಶ. ೯೪೫ರಷ್ಟು ಹಿಂದಕ್ಕೆ ಹೋಗುತ್ತದೆ. ಇದರ ಆಧಾರದಿಂದ ಇದೀಗ ತೆಲುಗಿಗೆ [[ಶಾಸ್ತ್ರೀಯಭಾಷೆ]] ಸ್ಥಾನ ಪ್ರಾಪ್ತವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
==ಪ್ರಾಚೀನ ತೆಲುಗು ಕಂದ==
ತೆಲುಗು ಕಂದ ಪದ್ಯಗಳು ಈ ರೀತಿ ಇವೆ:
*ಜಿನಭವನಮುನೆತ್ತಿಂಚುಟ
:ಜಿನಪೂಜಲ್ ಸೇಯುಚುನ್ನ ಜಿನಮುನುಲಕು ನ|
:ತ್ತಿನಯುನ್ನ ದಾನಮೀವುಟ
:ಜಿನವಲ್ಲಭು ಬೋಲಗಲರೆ ಜಿನಧರ್ಮಪರುಲ್||
*ದಿನಕರು ಸರಿ ವೆಲ್ಗುದಮನಿ
:ಜಿನವಲ್ಲಭು ನೊಟ್ಟು ನೆತ್ತು ಜಿತಕವಿನನಕುನ್|
:ಮನುಜುಲ್ ಗಲರೇ ಧಾತ್ರಿನ್
:ವಿನುತಿಚ್ಚುದನನಿಯವೃತ್ತ ವಿಭುದ ಕವೀಂದ್ರುಲ್||
*ಒಕ್ಕೊಕ್ಕ ಗುಣಮು ಕಲ್ಗುದು
:ರೊಕ್ಕಟಗಾ ಕೊಕ್ಕಲಕ್ಕಲೇರೆವ್ವರಿಕಿನ್|
:ಲೆಕ್ಕಿಂಪ ನೊಕ್ಕ ಲಕ್ಕಕು
:ಮಿಕ್ಕಿಲಿ ಗುಣಪಕ್ಷಪಾತಿ ಗುಣಮಣಿ ಗಣಮುಲ್||
 
“ಜಿನಭವನಗಳನ್ನು ಕಟ್ಟಿಸುವಲ್ಲಿ, ಜಿನಸಾಧುಗಳನ್ನು ಪೂಜಿಸುವಲ್ಲಿ, ಜಿನಮುನಿಗಳಿಗೆ ಇಷ್ಟವಾದ ದಾನ ಕೊಡುವಲ್ಲಿ ಇತರ ಜೈನರಾರೂ ಜಿನವಲ್ಲಭನಿಗೆ ಹೋಲಿಕೆಯಾಗರು. ಸೂರ್ಯ ಸಮಾನವಾಗಿ ಬೆಳಗುವರು. ಜಿನವಲ್ಲಭನಿಗೆ ಸರಿದೂಗುವ ಬೇರೆ ಕವಿಗಳಾರೂ ಇಲ್ಲ. ಒಬ್ಬೊಬ್ಬರಿಗೆ ಒಂದೊಂದು ಸುಗುಣ ಇರುತ್ತೆ. ಆಲೋಚಿಸಿ ನೋಡಿದರೆ ಜಿನವಲ್ಲಭನೇ ಗುಣಮಣಿ. ಮೇಲಾಗಿ ಆತನು ಗುಣಪಕ್ಷಪಾತಿ” <ref>http://namasthetelangaana.com/Zindagi/article.asp?category=7&subCategory=1&ContentId=309803 (నమస్తే తెలంగాణ 9.12.2013)</ref><ref>http://pvr59ksl.blogspot.in/2010/11/bommalamma-gutta.html</ref>ಎಂಬುದು ಈ ಕಂದಪದ್ಯಗಳ ಅರ್ಥ.
తెలుగు భాషకు ప్రాచీన భాష హోదా కట్టబెట్టిన తొలికందాల్ని తన కడుపులో దాచుకున్న ఒకప్పటి వృషభగిరే నేటి బొమ్మలమ్మ గుట్ట.
ಇಷ್ಟಲ್ಲದೆ ಜಿನವಲ್ಲಭನು ’ತ್ರಿಭುವನತಿಲಕ’ ಎಂಬ ಜೈನಬಸದಿ, ’ಮದನವಿಲಾಸ’ ಎಂಬ ತೋಟವನ್ನು ಆ ಗುಡ್ಡದ ಮೇಲೆ ನಿರ್ಮಿಸಿ ತಪ್ಪಲಿನಲ್ಲಿ ’ಕವಿತಾಗುಣಾರ್ಣವ’ ಎಂಬ ಕೆರೆಯನ್ನು ಕಟ್ಟಿಸುತ್ತಾನೆ. ಆದರೆ ಇವು ಮೂರೂ ಕಾಲಗರ್ಭದಲ್ಲಿ ಕಳೆದುಹೋಗಿವೆ.
కరీంనగర్ జిల్లాలోని గంగాధర మండలం కురిక్యాల గ్రామంలో ఉంది. దూరం నుంచి చూస్తే ఎద్దు ఆకృతిలో కనిపిస్తుంది. ఏకశిలపై ఆది తీర్థంకరుడు వృషభనాథుడి విగ్రహం చెక్కి ఉంటుంది.క్రీ.శ. 10వ శతాబ్దంలో ‘వృషభగిరి’,‘గా ప్రసిద్ధిగాంచింది.
 
==ಹೊರಗಿನ ಸಂಪರ್ಕಗಳು==
"https://kn.wikipedia.org/wiki/ಬೊಮ್ಮಲಮ್ಮಗುಟ್ಟ" ಇಂದ ಪಡೆಯಲ್ಪಟ್ಟಿದೆ