Content deleted Content added
ಹೊಸ ಪುಟ: ನನ್ನ ತಂದೆಯ ಹೆಸರು ಸುರೇಶ್,ನನ್ನ ತಾಯಿಯ ಹೆಸರು ಮಹಾಲಕ್ಷ್ಮಿ,ನನ್ನ ತಂದೆ ತಾ...
( ಯಾವುದೇ ವ್ಯತ್ಯಾಸವಿಲ್ಲ )

೧೦:೩೪, ೯ ನವೆಂಬರ್ ೨೦೧೫ ನಂತೆ ಪರಿಷ್ಕರಣೆ

ನನ್ನ ತಂದೆಯ ಹೆಸರು ಸುರೇಶ್,ನನ್ನ ತಾಯಿಯ ಹೆಸರು ಮಹಾಲಕ್ಷ್ಮಿ,ನನ್ನ ತಂದೆ ತಾಯಿಯರಿಗೆ ನಾವು ಇಬ್ಬರು ಮಕ್ಕಳು.ನನ್ನ ಹೆಸರು ಅಂಜಲಿ,ನನ್ನ ತಮ್ಮನ ಹೆಸರು ಅಕ್ಷಿತ್.ನನ್ನ ತಮ್ಮ ಜೈನ್ ಕಾಲೇಜಿನಲ್ಲಿ ಓದುತ್ತಿದ್ದಾನೆ,ಅವನು ಈಗ ತನ್ನ ದ್ವಿತೀಯ ಪಿ.ಯು.ಸಿ ಯನ್ನು ಓದುತ್ತಿದ್ದಾನೆ.ನಾನು ಹಾಗು ನನ್ನ ತಮ್ಮ ಒಂದೇ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಮಾಡಿದೆವು.ಅವನಿಗು ಸಹ ಎಸ್.ಎಸ್.ಎಲ್.ಸಿ ಯಲ್ಲಿ ೯೨% ಅನ್ನು ಪಡೆದಿದ್ದನು. ಅವನಿಗು ಕ್ರೈಸ್ಟ್ ಕಾಲೆಜನ್ನು ಸೇರಲು ತುಂಬ ಇಷ್ಟವಿತ್ತು,ಆದರೆ ಅವನಿಗೆ ಇಲ್ಲಿ ಅವಕಾಶ ಸಿಗಲ್ಲಿಲ್ಲ ಅದ್ದರಿಂದ ಅವನು ಜೈನ್ ಕಾಲೇಜನ್ನು ಸೇರಬೇಕಾಗಿ ಬಂದಿತು.ಇನ್ನು ನನ್ನ ವಿಶಯಕ್ಕೆ ಬಂದರೆ ನಾನು ಕ್ರೈಸ್ಟ್ ಕಾಲೇಜಿನಲ್ಲೆ ಪಿ.ಯು.ಸಿ ಓದಿ,ಇಲ್ಲೇ ಬಿ.ಎಸ್.ಸಿ ಯನ್ನು ಓದುತ್ತಿದ್ದೇನೆ. ನಾನು ಕ್ರೈಸ್ಟ್ ಯುನಿವರ್ಸಿಟಿಯಲ್ಲಿ ಓದುತಿದ್ದೇನೆ.ನಾನು ಮೊದಲನೆಯ ಬಿ.ಎಸ್.ಸಿ ಯನ್ನು ಕಂಪ್ಯೂಟರ್ ಸೈನ್ಸ್ ಮೊದಲನೆ ವರ್ಷದ ಎರಡನೆಯ ಸೆಮಿಸ್ಟರ್ ನಲ್ಲಿ ಓದುತಿದ್ದೇನೆ ನನಗೆ ಇಲ್ಲಿ ಬಹಳ ಒಳ್ಳೆಯ ವಿದ್ಯಾಭ್ಯಾಸ ಸಿಗುತ್ತಿದೆ ಆದ ಕಾರಣ ನನಗೆ ಕನ್ನಡದಲ್ಲಿ ಬಹಳ ಹೆಚ್ಚು ಅಂಖಗಳನ್ನು ದೊರೆತಿವೆ.ಕನ್ನಡದಲ್ಲಿ ಮಾತ್ರ ಅಲ್ಲದೆ ಬೇರೆ ವಿಷಯದಲ್ಲು ಹೆಚ್ಚು ಅಂಖಗಳನ್ನು ಗಳಿಸಿದ್ದೇನೆ.ನನಗೆ ಕನ್ನಡದಲ್ಲಿ ಬಹಳ ಆಸಕ್ತಿ ಆದ್ದರಿಂದ ನಾನು ಮೊದಲಿನಿಂದಲು ಕನ್ನಡವನ್ನು ನನ್ನ ಎರಡನೆಯ ವಿಷಯವಾಗಿ ಆರಿಸಿದ್ದೇನೆ.ಇದರಿಂದ ನನಗೆ ಇನ್ನು ಕನ್ನಡದ ಬಗ್ಗೆ ತುಂಬ ಆಸಕ್ತಿ ಮೂಡುತಿದೆ. ನಾನು ಹುಟ್ಟಿದ್ದು ಕರ್ನಾಟಕದ ಹಾಸನ ಜಿಲ್ಲೆಯಲ್ಲಿ,ಆದರೆ ನಾನು ಬೆಳೆದದ್ದು ಬೆಂಗಳೂರಿನಲ್ಲೆ.ಈಗ ಇರುವುದು ಸಹ ಬೆಂಗಳೂರಿನಲ್ಲೆ,ಆದ ಕಾರಣ ನಾನು ಇಲ್ಲಿಯೆ ವಿದ್ಯಾಭ್ಯಾಸ ಮಾಡುವಂತೆ ಆಯಿತು.ಆದರೆ ನಮ್ಮ ಸಂಭಂದಿಕರು ಇರುವುದು ನಮ್ಮ ಊರು ಹಾಸನದಲ್ಲೆ.ನಮ್ಮ ಸಂಭಂದಿಕರೆಲ್ಲ ಅಲ್ಲಿಯೆ ಇರುವುದರಿಂದ ನಾನು ಹಾಗು ನನ್ನ ತಮ್ಮ ಬೇಸಿಗೆ ರಜೆಗೆ ಅಲ್ಲಿಗೆ ಹೋಗುತ್ತಿದ್ದೆವು.ಎರಡು ತಿಂಗಳ ಕಾಲ ನಾವು ನಮ್ಮ ಅಜ್ಜನ ಮನೆಯಲ್ಲಿ,ನಮ್ಮ ದೊಡ್ಡಪ್ಪ ದೊಡ್ಡಮ್ಮನ ಮನೆಯಲ್ಲಿ,ಹೋಗಿ ನಮ್ಮ ರಜೆಯನ್ನು ಕಳೆಯುತ್ತಿದ್ದೆವು.ನಮ್ಮ ಜೊತೆ ಊರಿಗೆ ಬರುತಿದ್ದ ಅಕ್ಕ ಪಕ್ಕದ ಮನೆಯವರ ಮಕ್ಕಳು ಸೇರುತ್ತಿದ್ದೆವು,ಎಲ್ಲರು ಸೇರಿ ಹಲವು ಬಗೆಯ ಆಟಗಳನ್ನು ಆಡುತ್ತಿದ್ದೆವು.ಹೀಗೆ ನಮ್ಮ ರಜೆಯನ್ನು ಸಂತೋಷದಿಂದ ಕಳೆಯುತ್ತಿದ್ದೆವು.ಹೀಗೆಯೆ ನಮ್ಮ ಬಾಲ್ಯವು ಸಂತೋಷದಿಂದ ಕಳೆದೆವು. ನಾನು ನನ್ನ ಶಾಲೆಯಲ್ಲಿ ಬಹಳ ಚುರುಕು ವಿದ್ಯಾರ್ಥಿನಿ ಆಗಿದ್ದೆನು ಅದ ಕಾರಣ ನನನ್ನು ಕ್ಲಾಸ್ ಲೀಡರ್ ಆಗಿ ಮಾಡಿದ್ದರು.ನನ್ನ ಶಾಲೆಯ ಹೆಸರು "ಜ್ಞಾನ ಭಾರತಿ ಆಂಗ್ಲ ಶಾಲೆ".ನಾನು ನನ್ನ ಶಾಲೆಯಲ್ಲಿ ಬಹಳಷ್ಟು ಬಹುಮಾನಗಳನ್ನು ಗೆದ್ದಿದ್ದೇನೆ.ನನಗೆ ನನ್ನ ಶಾಲೆಯಲ್ಲಿ "ಬೆಸ್ಟ್ ಸ್ಟೂಡೆಂಟ್" ಅವಾರ್ಡ್ ದೊರಕಿತು.ನಾನು ಈ ಶಾಲೆಯಲ್ಲಿ ಎಲ್.ಕೆ.ಜಿ ಯಿಂದ ಏಳನೆಯ ತರಗತಿಯವರೆಗು ಓದಿದೆನು.ನಂತರ ನಾವು ಬೇರೆ ಊರಿಗೆ ಹೋಗಬೇಕಾಗಿ ಬಂದಿತು ಆದಕಾರಣ ನಾನು ಆ ಶಾಲೆಯನ್ನು ಬಿಡಬೇಕಾಗಿ ಬಂದಿತು.ನಾನು ಎಂಟನೆಯ ತರಗತಿಯೆನ್ನು ಬೇರೆ ಶಾಲೆಯಲ್ಲಿ ಮುಂದುವರೆಸಿದೆ.ಆ ಶಾಲೆಯುಲ್ಲಿ ನನಗೆ ಹೊಂದಿಕೊಂಡು ಹೋಗಲು ಸ್ವಲ್ಪ ಕಷ್ಟವಾಯಿತು ಹಾಗು ಆ ಶಾಲೆಯಲ್ಲಿ ವಿದ್ಯಾಭ್ಯಾಸವು ಅಷ್ಟೇನು ಹೇಳಿಕೊಳ್ಳುವಂತಿರಲ್ಲಿಲ್ಲ ಆದ್ದರಿಂದ ನಾನು ಆ ಶಾಲೆಯನ್ನು ಬಿಟ್ಟು ಬೇರೆ ಶಾಲೆಯನ್ನು ಸೇರಿದೆ ಆ ಶಾಲೆಯ ಹೆಸರು "ಶಾಂತಿನಿಕೇತನ ವಿದ್ಯಾ ಸಂಸ್ಥೆ" ನಾನು ಈ ಶಾಲೆಯಲ್ಲಿ ನನ್ನ ಒಂಬತ್ತನೆಯ ತರಗತಿಯನ್ನು ಹಾಗು ನನ್ನ ಹತ್ತನೆಯ ತರಗತಿಯನ್ನು ಮುಗಿಸಿದೆನು.ನಾನು ಒಂಬತ್ತನೆಯ ತರಗತಿಯಲ್ಲಿ ಮೊದಲು ಸೇರಿದ ಕೆಲವು ತಿಂಗಳು ಹೊಂದಿಕೊಂಡು ಹೋಗೂವುದ್ದು ಸ್ವಲ್ಪ ಕಷ್ಟವಾಯಿತು ಆದರೆ ನನ್ನ ಜೊತೆಯೆ ಸೇರಿದ್ದ ಇನ್ನು ಇಬ್ಬರು ಸ್ನೇಹಿತೆಯರು ಇದ್ದಿದ್ದರಿಂದ ನನಗೆ ಅಷ್ಟೇನು ಬೇಸರವಾಗುತಿರಲಿಲ್ಲ ನಾನು ಹಾಗು ಅವರು ಒಟ್ಟಿಗೆ ಇರುತ್ತಿದ್ದೆವು.ನಾವು ಒಳ್ಳೆಯ ಸ್ನೇಹಿತರಾಗಿಯೇ ಎರೆಡು ವರ್ಷ ಜಗಳವಿಲ್ಲದೆ ಸಂತೋಷದಿಂದ ಇದ್ದೆವು.ನಾವು ಎಲ್ಲರು ಹತ್ತನೆಯ ತರಗತಿಯಲ್ಲಿ ಕೇರಳಕ್ಕೆ ಪ್ರವಾಸಕ್ಕೆ ಹೋಗಿದ್ದೆವು.ನಾವು ರೈಲಿನಲ್ಲಿ ಕೇರಳಕ್ಕೆ ಪ್ರಯಾಣ ಮಾಡಿದೆವು.ನಾವು ರೈಲಿನಲ್ಲಿ ಪ್ರಯಾಣ ಮಾಡಿದ್ದರಿಂದ ನಾವು ಹಾಗು ನಮ್ಮ ಪ್ರಾಂಶುಪಾಲರು,ಶಿಕ್ಷಕಿಯರು,ಶಿಕ್ಷಕರು, ಎಲ್ಲರು ಸೇರಿ ತುಂಬಾ ಖುಷಿಯಿಂದ,ಸಂತೋಷವಾಗಿ ಆಟವಾಡಿದೆವು. ನಾವು ಕೇರಳದಲ್ಲಿ ಎಲ್ಲಾ ಸ್ನೇಹಿತರೊಡನೆ ಬಹಳಷ್ಟು ಪೋಟೋಗಳನ್ನು ತೆಗೆದುಕೊಂಡಿದ್ದೆವು.ಅಲ್ಲಿ ನಾವು ಕೊವ್ವಲ್ಲಮ್ ಬೀಚ್ ಗೆ ಹೋಗಿದ್ದೆವು,ನಾವು ಎಲ್ಲರು ಸೇರಿ ಕೇರಳದಲ್ಲಿರುವ ಪದ್ಮನಾಭ ದೇವಸ್ಥಾನಕ್ಕೆ ಹೋಗಿದ್ದೆವು,ನಮ್ಮ ಜೊತೆ ನಮ್ಮ ಶಾಲೆಯ ಶಿಕ್ಷಕಿಯರು,ಪ್ರಾಂಶುಪಾಲರು,ಶಿಕ್ಷಕರು ಎಲ್ಲರು ಬಂದಿದ್ದರು.ನಾವು ಈ ಸ್ಥಳವಲ್ಲದೆ ಕನ್ಯಾಕುಮಾರಿಯಲ್ಲಿರುವ ತಿರುವಳ್ಳುವರ್ ಪ್ರತಿಮೆಯನ್ನು ನೋಡಿದೆವು,ಇದು ನನ್ನ ಕೇರಳ ಪ್ರವಾಸದ ಅನುಭವ.ನಾನು ಹಾಗು ನನ್ನ ಪ್ರಾಣಾ ಸ್ನೇಹಿತೆ ಹತ್ತನೆಯ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಒಂದೇ ತರಗತಿಯಲ್ಲಿ ಇದ್ದೆವು.ಇಬ್ಬರು ಒಳ್ಳೆಯ ಅಂಖಗಳನ್ನು ಪಡೆದು ಇಬ್ಬರು ಒಂದೇ ಕಾಲೇಜಿಗೆ ಪಿ.ಯು.ಸಿ ಓದಲು ಸೇರಿದೆವು,ಇಬ್ಬರು ಒಂದೇ ವಿಷಯವನ್ನು ತೆಗೆದುಕೊಂಡೆವು ,ಆದರೆ ಇಬ್ಬರು ಬೇರೆ ಭಾಗಗಳಲ್ಲಿ ಇದ್ದೆವು.ನಾವು ಎರಡನೆಯ ಪಿ.ಯು.ಸಿ ಯಲ್ಲಿ ಇಬ್ಬರು ಒಂದೆ ಶಿಕೋಣಿಗೆ(ಬೋಧನಾ ಕೇಂದ್ರಕ್ಕೆ) ಸೇರಿದೆವು.ನಂತರ ನಾವು ಎರಡನೆಯ ಪಿ.ಯು.ಸಿಯ ಪರೀಕ್ಷೆಯನ್ನು ಮುಗಿಸಿದೆವು .ನಂತರ ನಾನು ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ನಾನು ಕ್ರೈಸ್ಟ್ ಕಾಲೇಜಿನಲ್ಲಿ ಬಿ.ಎಸ್.ಸಿ ಯನ್ನು ಓದುತ್ತಿದ್ದೇನೆ.ನನ್ನ ಸ್ನೇಹಿತೆ ಅಂಕಿತ ಈಗ ಇಂಜಿನಿಯರಿಂಗ್ ಮಾಡುತ್ತಿದ್ದಾಳೆ. ನಾನು ನನ್ನ ಜೀವನದಲ್ಲಿ ಏನಾದರು ಸಾಧಿಸಬೇಕು ಎಂಬುದು ನನ್ನ ಗುರಿ ಹಾಗು ಧ್ಯೆಯ.ನಾನು ಅದಕ್ಕಾಗಿ ಬಹಳ ಕಷ್ಟಪಡುತ್ತಿದ್ದೇನೆ ನನ್ನ ತಂದೆಯವರಿಗೆ ನಾನು ವೈದ್ಯೆ ಆಗಬೇಕೆನ್ನುವ ಆಸೆ ಇತ್ತು,ಆದರೆ ನಾನಾ ಕಾರಣದಿಂದಾಗಿ ನಾನು ಮೆಡಿಕಲ್ ಓದಲು ಸಾಧ್ಯವಾಗಲ್ಲಿಲ್ಲ,ಆದರೆ ನಾನು ಈಗ ಕಂಪ್ಯೂಟರ್ ಸೈನ್ಸ್ ತೆಗೆದುಕೊಂಡು ತುಂಬ ಚೆನ್ನಾಗಿ ಓದುತ್ತಿದ್ದೆನೆ. ನನ್ನ ತಂದೆಯವರು ಹಾಗು ನಮ್ಮ ಮನೆಯ ಸದಸ್ಯರು ನನಗೆ ಪ್ರೋತ್ಸಾಹ ಮಾಡಿದ್ದರಿಂದ ನಾನು ಇಷ್ಟು ಸಾದನೆಮಾಡಲು ಸಾಧ್ಯವಾಯಿತು