ಅವಿನಾಶ್ ಕಾಮತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
೧ ನೇ ಸಾಲು:
{{unref}}
 
[[ಚಿತ್ರ:Avinash KamathSDC10028.JPG|thumb|right|250px| 'ಅವಿನಾಶ್ ಕಾಮತ್'']]
 
'''ಅವಿನಾಶ್ ಕಾಮತ್''' [[ಮುಂಬೈ|ಮುಂಬೈಯ]] [[ಕನ್ನಡ]] [[ರಂಗಭೂಮಿ|ರಂಗಭೂಮಿಯ]] ಪ್ರತಿಭಾನ್ವಿತ ನಟರು. <br />
==ಜನನ, ವಿದ್ಯಾಭ್ಯಾಸ, ಕುಟುಂಬ==
ಅವಿನಾಶ್ ಕಾಮತ್ ಅವರು ದಿನಾಂಕ: '''[[ಏಪ್ರಿಲ್ ೨೬]], [[೧೯೭೭]]'''ರಂದು ಬೆಳಗಾವಿಯಲ್ಲಿ ಜನಿಸಿದರು. ಇವರ ತಂದೆ ಖ್ಯಾತ ಹಿಂದುಸ್ಥಾನಿ ಗಾಯಕ ಶ್ರೀ. ಎಮ್.ಎಸ್.ಕಾಮತ್ ಅವರು. ತಾಯಿ ಶ್ರೀಮತಿ.ಪದ್ಮಾ ಕಾಮತ್.<br />ಅವಿನಾಶ್ ಕಾಮತ್ ಅವರ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿದ್ಯಾಭ್ಯಾಸ [[ಧಾರವಾಡ|ಧಾರವಾಡದ]] ಕೆ. ಇ. ಬೋರ್ಡ್ಸ್ ಶಾಲೆಯಲ್ಲಾಯಿತು.<br />ನಂತರ ಇವರ ತಂದೆ-ತಾಯಿ ಮುಂಬೈಗೆ ವಲಸೆ ಬಂದ ಕಾರಣ ಹೈಸ್ಕೂಲು ಮತ್ತು ಕಾಲೇಜಿನ ವಿದ್ಯಾಭ್ಯಾಸ ಮುಂಬೈನಲ್ಲಾಯಿತು.<br />‘ಬೆಳೆವ ಪೈರು ಮೊಳಕೆಯಲ್ಲೇ ನೋಡು’ ಎನ್ನುವ ಮಾತನ್ನು ಸಾರ್ಥಕಗೊಳಿಸುವಂತೆ ಅವಿನಾಶ್ ಕಾಮತ್ ಅವರು ತಮ್ಮ ಶಾಲಾದಿನಗಳಲ್ಲೇ, ಅಂದರೆ ಅವರು '''ನಾಲ್ಕನೇ ತರಗತಿಯಲ್ಲಿದ್ದಾಗಲೇ ಅಭಿನಯಕ್ಕಾಗಿ ರಾಜ್ಯಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದವರು'''. ಆಕಾಶವಾಣಿಯ ಬಾಲಕಲಾವಿದರಾಗಿದ್ದವರು. ವಿದ್ಯಾಭಾಸ ಮುಗಿಸಿದ ನಂತರ [[೧೯೯೮|೧೯೯೮ರಲ್ಲಿ]] [[ಮುಂಬೈ|ಮುಂಬೈನ]] [[ಕನ್ನಡ ರಂಗಭೂಮಿ|ಕನ್ನಡ ರಂಗಭೂಮಿಯ]] ಖ್ಯಾತ ನಿರ್ದೇಶಕರಾದ [[ಭರತ್ ಕುಮಾರ್ ಪೊಲಿಪು]] ಅವರ ನಿರ್ದೇಶನದಲ್ಲಿ, ಮಾಟುಂಗ [[ಕರ್ನಾಟಕ ಸಂಘ|ಕರ್ನಾಟಕ ಸಂಘದ]] ಕಲಾಭಾರತಿ ತಂಡದಿಂದ [[ಶ್ರೀರಂಗ|ಶ್ರೀರಂಗರು]] ಬರೆದ ‘ಗುಮ್ಮನೆಲ್ಲಿಹ ತೋರಮ್ಮ’ ನಾಟಕದಲ್ಲಿ ಹಾಡುಗಾರನ ಪಾತ್ರವನ್ನು ಅಭಿನಯಿಸುವುದರ ಮೂಲಕ ಅವಿನಾಶ್ ಮತ್ತೆ ಅಭಿನಯವನ್ನು ಮುಂದುವರೆಸಿದರು.
 
==ಅವಿನಾಶ್ ಕಾಮತ್ ಇಲ್ಲಿಯವರೆಗೆ ಅಭಿನಯಿಸಿದ ಮುಖ್ಯ ನಾಟಕಗಳು ==
*''' ಗುಮ್ಮನೆಲ್ಲಿಹ ತೋರಮ್ಮ''' (ರಚನೆ: [[ಶ್ರೀರಂಗ]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಕೈಗೆ ಬಂದ ತುತ್ತು''' (ರಚನೆ ಮತ್ತು ನಿರ್ದೇಶನ: [[ಬಾಲಕೃಷ್ಣ ನಿಡ್ವಣ್ಣಾಯ]])
* ''' ಗೌರಿ''' (ರಚನೆ ಮತ್ತು ನಿರ್ದೇಶನ: ವಸಂತ ಹೆರಳೆ)
*''' ಆಷಾಢದ ಒಂದು ದಿನ''' ( ರಚನೆ: ಹಿಂದಿ ಮೂಲ-ಮೋಹನ್ ರಾಕೇಶ್, ಕನ್ನಡಕ್ಕೆ- [[ಸಿದ್ಧಲಿಂಗ ಪಟ್ಟಣಶೆಟ್ಟಿ]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ರಾವಿ ನದಿ ದಂಡೆಯಲ್ಲಿ''' (ರಚನೆ:ಮೂಲ-ಅಸ್ಘರ್ ವಜಾಹತ್, ಕನ್ನಡಕ್ಕೆ- ಡಾ.ತಿಪ್ಪೇಸ್ವಾಮಿ, ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ನಟ ಸಾಮ್ರಾಟ''' (ರಚನೆ: ಮರಾಠಿ ಮೂಲ-ವಿ.ವ.ಶಿರ್ವಡ್ಕರ್, ಕನ್ನಡಕ್ಕೆ- ಕೆ.ಜೆ.ರಾವ್, ನಿರ್ದೇಶನ: ಗುಣಪಾಲ ಉಡುಪಿ)
* '''ಆಟ''' (ರಚನೆ ಮತ್ತು ನಿರ್ದೇಶನ: [[ಅವಿನಾಶ್ ಕಾಮತ್]])
* '''ಶಾಂಡಿಲ್ಯ ಪ್ರಹಸನ''' (ರಚನೆ: ಕನ್ನಡಕ್ಕೆ- [[ಕೆ.ವಿ.ಸುಬ್ಬಣ್ಣ]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಪುಷ್ಪರಾಣಿ''' (ರಚನೆ: [[ಚಂದ್ರಶೇಖರ ಕಂಬಾರ]], ನಿರ್ದೇಶನ: ಜಯಲಕ್ಷ್ಮೀ ಪಾಟೀಲ್)
* '''ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ''' (ರಚನೆ: [[ಶ್ರೀರಂಗ]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಅಂಬೆ''' (ರಚನೆ: ಕನ್ನಡಕ್ಕೆ- ಸರಜೂ ಕಾಟ್ಕರ್, ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಮೃಗತೃಷ್ಣ''' (ರಚನೆ:ವಸುಮತಿ ಉಡುಪ, ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಮಣ್ಣದ ಲೆಪ್ಪು''' (ತುಳು ನಾಟಕ) (ರಚನೆ: ಮೂಲ-ವಸುಮತಿ ಉಡುಪ, ತುಳುವಿಗೆ- ಶಿಮುಂಜೆ ಪರಾರಿ, ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಒರಿ ಮಾಸ್ಟ್ರೆನ ಕತೆ''' (ತುಳು ನಾಟಕ) (ಹಿಂದಿ ಮೂಲ: ಡಾ. ಶಂಕರ್ ಶೇಷ್, ತುಳುವಿಗೆ- ಗಂಗಾಧರ ಫಣಿಯೂರು, ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಇನ್ನೊಬ್ಬ ದ್ರೋಣಾಚಾರ್ಯ''' (ಹಿಂದಿ ಮೂಲ: ಡಾ. ಶಂಕರ್ ಶೇಷ್, ಕನ್ನಡಕ್ಕೆ - ಡಾ. ಆರ್.ಲಕ್ಷ್ಮೀನಾರಾಯಣ, ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
* '''ಮಾಯಾವಿ ಸರೋವರ''' (ಹಿಂದಿ ಮೂಲ: ಡಾ. ಶಂಕರ್ ಶೇಷ್, ಕನ್ನಡಕ್ಕೆ - ಡಾ. ಮೈ.ಶ್ರೀ. ನಟರಾಜ್, ನಿರ್ದೇಶನ: [[ಅಹಲ್ಯ ಬಲ್ಲಾಳ್]])
* '''ಆಟಿ ತಿಂಗೊಲ್ದ ಒಂಜಿ ದಿನ''' (ಹಿಂದಿ ಮೂಲ: ಮೋಹನ್ ರಾಕೇಶ್, ಕನ್ನಡಕ್ಕೆ - ಸಿದ್ದಲಿಂಗ ಪಟ್ಟಣಶೆಟ್ಟಿ, ತುಳುವಿಗೆ - [[ಭರತ್ ಕುಮಾರ್ ಪೊಲಿಪು]], ನಿರ್ದೇಶನ: [[ಭರತ್ ಕುಮಾರ್ ಪೊಲಿಪು]])
 
==ಅವಿನಾಶ್ ಕಾಮತ್ ಅವರು ಅಭಿನಯಿಸಿದ ನಾಟಕಗಳ ಕೆಲವು ಭಾವಚಿತ್ರಗಳು==
<gallery>
Line ೩೨ ⟶ ೨೮:
ಚಿತ್ರ:Aata2.jpg
ಚಿತ್ರ:Avi- aaTa 004.jpg
 
ಚಿತ್ರ:Avi- aaTa 005.jpg
ಚಿತ್ರ:Avinash Kamath and Jayalaxmi Patil in "Shandilya Prahasana".jpg
Line ೪೩ ⟶ ೩೮:
ಚಿತ್ರ:Mrugatrushna.jpg
ಚಿತ್ರ:Mannada leppu.jpg
 
ಚಿತ್ರ:Gumma.jpg
ಚಿತ್ರ:Gummanelliha toramma.JPG
Line ೪೯ ⟶ ೪೩:
ಚಿತ್ರ:Ore mastrena kate.jpg
ಚಿತ್ರ:Ore mastrena kate1.jpg
 
ಚಿತ್ರ:Avinash Kamath in Tulu play "'Ori Mastrena Kate".jpg
ಚಿತ್ರ:Avi 0051.jpg
Line ೫೬ ⟶ ೪೯:
ಚಿತ್ರ:ಅವಿ.jpg
</gallery>
 
==ಬಹುಮುಖ ಪ್ರತಿಭೆಗೆ ಸಂದ ಪ್ರಶಸ್ತಿ, ಪುರಸ್ಕಾರ==
ಮುಂಬೈಯಲ್ಲಿ ನೆಲೆಸಿರುವ ಅವಿನಾಶ್ ಕಾಮತ್ ವೃತ್ತಿಯಲ್ಲಿ ಜಾಹೀರಾತುಗಳ ಕಂಠದಾನ ಕಲಾವಿದರೂ, ಚಲನಚಿತ್ರ ಪಠ್ಯ ಹಾಗೂ ಜಾಹಿರಾತುಗಳ ಅನುವಾದಕರೂ ಆಗಿರುವರಲ್ಲದೆ, ಇವರು ಉತ್ತಮ ಕಥೆಗಾರರೂ ಸಹ. ಇವರ ಕೆಲವು ಕಥೆಗಳನ್ನು ಹಾಗೂ ಬರಹಗಳನ್ನು ಇವರದೇ ಬ್ಲಾಗ್ [[http://natakaranga.blogspot.com|http://natakaranga.blogspot.comನಲ್ಲಿ]] ಮತ್ತು [[ಸಂಪದ|ಸಂಪದದಲ್ಲಿ]] [http://sampada.net/user/avikamath77] ನೀವು ಓದಬಹುದು.<br />ಅವಿನಾಶ್ ಕಾಮತ್ ಅವರು [[ಕನ್ನಡ ರಂಗಭೂಮಿ ಕಲಾವಿದರು]] ಮಾತ್ರವಲ್ಲ, ರಂಗ ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರೂ ಹೌದು. <br />ಮಾಟುಂಗ [[ಕರ್ನಾಟಕ ಸಂಘ]] ಆಯೋಜಿಸುವ ರಾಷ್ಟ್ರೀಯ ಮಟ್ಟದ ‘ಕುವೆಂಪು ನಾಟಕ ಸ್ಪರ್ಧೆ’ಯಲ್ಲಿ ಇವರೇ ನಿರ್ದೇಶಿಸಿದ ‘ಆಟ’ ನಾಟಕದಲ್ಲಿನ ಅಭಿನಯಕ್ಕಾಗಿ ಇವರಿಗೆ ಅತ್ಯುತ್ತಮ ನಟ ಪ್ರಶಸ್ತಿ ದೊರಕಿದೆ.<br />[[ಅವಿನಾಶ್ ಕಾಮತ್]] ಅವರು ರಚಿಸಿದ ’ಕಲಿಯುಗ ಬಂದೈತಿ ನೋಡ’ ನಾಟಕವು, [['ಸ್ನೇಹ ಸಂಬಂಧ ಪತ್ರಿಕೆ'|'ಸ್ನೇಹ ಸಂಬಂಧ ಪತ್ರಿಕೆ'ಯು]] ಆಯೋಜಿಸುವ ರಾಷ್ಟ್ರ ಮಟ್ಟದ ಸಾಹಿತ್ಯಸ್ಪರ್ಧೆಯ ನಾಟಕ ವಿಭಾಗದಲ್ಲಿ, ‘ಅತ್ಯುತ್ತಮ ನಾಟಕ ಪ್ರಥಮ’ ಪ್ರಶಸ್ತಿ ಪಡೆದಿದೆ. <br />[[೨೦೧೧|೨೦೧೧ರ]] ಡಿಸೆಂಬರ‍್ನಲ್ಲಿ ಉಡುಪಿಯ ತುಳು ಕೂಟ ಏರ್ಪಡಿಸಿದ ದೊಡ್ಡಣ್ಣ ಶೆಟ್ಟಿ ಸ್ಮಾರಕ ತುಳು ನಾಟಕ ಸ್ಪರ್ಧೆಯಲ್ಲಿ ’'''ಒರಿ ಮಾಸ್ಟ್ರೆನ ಕತೆ''' ನಾಟಕಕ್ಕೆ [[ಅವಿನಾಶ್ ಕಾಮತ್]] ಅವರು ನೀಡಿದ ಸಂಗೀತಕ್ಕೆ ಮೂರನೇ '''ಅತ್ಯುತ್ತಮ ಸಂಗೀತ''' ಪ್ರಶಸ್ತಿ ಲಭಿಸಿದೆ.
[[ಮುಂಬಯಿ]]ನ ನಮನ ಫ್ರೆಂಡ್ಸ್ ಸಂಸ್ಥೆಯವರಿಂದ ದಿನಾಂಕ: '''[[ಜನವರಿ ೨೬]], [[೨೦೧೫]]'''ರಂದು ಅವಿನಾಶ್ ಅವರಿಗೆ ಪ್ರತಿಭಾಪುರಸ್ಕಾರದ ಸನ್ಮಾನಪತ್ರದೊಂದಿಗೆ ಗೌರವಿಸಿದ್ದಾರೆ.
 
[[ವರ್ಗ: ರಂಗಭೂಮಿ ಕಲಾವಿದರು]]
[[ವರ್ಗ:ಮುಂಬಯಿ ಕನ್ನಡಿಗರು]]
"https://kn.wikipedia.org/wiki/ಅವಿನಾಶ್_ಕಾಮತ್" ಇಂದ ಪಡೆಯಲ್ಪಟ್ಟಿದೆ