ಕುಶಾನರ ಅರಸ ಕಾನಿಷ್ಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಕಾನಿಷ್ಕನು ಕುಶಾನರ ಅರಸರಲ್ಲಿ ಅತ್ಯಂತ ಪ್ರಸಿದ್ದನಾಗಿದ್ದಾನೆ. ವೇರ ಯೋಧನಾ...
( ಯಾವುದೇ ವ್ಯತ್ಯಾಸವಿಲ್ಲ )

೦೯:೪೧, ೨೫ ಆಗಸ್ಟ್ ೨೦೧೫ ನಂತೆ ಪರಿಷ್ಕರಣೆ

ಕಾನಿಷ್ಕನು ಕುಶಾನರ ಅರಸರಲ್ಲಿ ಅತ್ಯಂತ ಪ್ರಸಿದ್ದನಾಗಿದ್ದಾನೆ. ವೇರ ಯೋಧನಾಗಿ, ಸಮ್ರಾಜ್ಯ ನಿರ್ಮಾಪಕನಾಗಿ, ಧರ್ಮ ಸಾಹಿತ್ಯ ಕಲೆಗಳ ಮಹಾಪೋಷಕನಾಗಿ ಭಾರತದ ಇತಿಹಾಸದಲ್ಲಿ ಇವನ ಹೆಸರು ಮಾನ್ಯತೆ ಗಳಿಸಿವದೆ. ಇವನ ಆ ಳ್ವಿಕೆ ಕ್ರಿ.ಶ.೭೮ರಿಂದ ೧೨೦ರವರೆಗೆ ಜರುಗಿತೆಂದು ನಂಬಲಾಗಿದೆ. ಕ್ರಿ.ಶ. ೭೮ರಲ್ಲಿ ಪ್ರಾರಂಬವಾದ ಶಕ ಕಾಲಗಣನೆಯನ್ನು ಕಾನಿಷ್ಕನೇಪ್ರಾರಂಭಿಸಿದನೆಂದು ಹಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಕಾನಿಷ್ಕನು ಸ್ಥಾಪಿಸಿದ ಹಸ ಯುಗವನ್ನು 'ಶಕಸಂವತ್ಸ'ರವೆಂದೂ ಹೆಸರಾಯಿತು. ಇದು ವಾಯುವ್ಯ ಭಾರತದ ಶಕ ದೊರೆಗಳಲ್ಲಿ ಬಹಳ ಕಾಲ ಬಳಕೆಯಲ್ಲಿದ್ದಿತು.

ಕಾನಿಷ್ಕನು ವಿಮಾಕಾಡ್ ಪೈಸಸ್‌ನ ಉತ್ತರಾಥಿಕಾರಿಯಾಗಿ ಅಥಿಕಾರಕ್ಕೆ ಬಂದನು. ಕಾನಿಷ್ಕನ ಆಳ್ವಿಕೆಯ ಪ್ರಾರಂಭದಲ್ಲಿ ಕುಶಾನ ರಾಜ್ಯ ಬ್ಯಾಕ್ಟ್ಯೀಯಾ,ಆಫ್ಘಾನಿಸ್ತಾನ ಮತ್ತು ಭಾರತದ ಪಂಜಾಬ್ ಪ್ರದೇಶಗಳಲ್ಲಿ ಸೀಮಿತವಾಗಿತ್ತು. ಕಾನಿಷ್ಕನು ಯುದ್ಥ ಪ್ರಿಯನಾಗಿದ್ದು, ತನ್ನ ಪರಾಕ್ರಮದಿಂದ ವಿಶಾಲವಾದ ಸಮ್ರಾಜ್ಯವನ್ನು ಕಟ್ಟಿದನು. ಕಾನಿಷ್ಕನ ಮೊದಲ ಆಕ್ರಮಣ ಕಾಶ್ಮೀರ, ಆಲ್ಲಿಯ ನಿಸರ್ಗ ಸೌಂದರ್ಯ ಕಾನಿಷ್ಕನನ್ನು ಆಕರ್ಷಿಸಿತೆಂದು ಹೇಳಲಾಗಿದೆ. ಅಲ್ಲಿ ಅವನು ಅನೇಕ ಸ್ಮಾರಕಗಳನ್ನು ನಿರ್ಮಾಣ ಮಾಡಿದನು. ತನ್ನ ಹೆಸರಿನಲ್ಲಿ 'ಕಾನಿಷ್ಕಪುರ'ವೆಂಬ ನವನಗರವನ್ನು ನಿರ್ಮಾಣ ಮಾಎಇದನು.

ಕಾನಿಷ್ಕ ಪಾಟಲಿಪುತ್ರದವರೆಗೂ ದಂಡೆತ್ತಿ ಹೋಗಿ ಆ ಪ್ರದೇಶಗಳನ್ನು ಗೆದ್ದು ತನ್ನ ಸಾಮ್ರಾಜ್ಯಕ್ಕೆ ಸೇರಿಸಿಕೊಂಡನು.ಕಾನಿಷ್ಕನಿಗೆ ಪಾಟಲಿಪುತ್ರದ ಆಕ್ರಮಣದ ಸಂದರ್ಭದಲ್ಲಿ ಆಶ್ವಘೋಷನ ಪರಿಚಯವಾಗಿ ಅವನನ್ನು ತನ್ನ ಆಸ್ಥಾನಕ್ಕೆ ಕರೆದುಕೊಂಡು ಬಂದನೆಂದು ಬೌದ್ಥ ಗ್ರಂಥಗಳು ತಿಳಿಸುತ್ತದೆ.

ಬಿರುದು

  • ದೇವಪುತ್ರ

ಸಾಮ್ರಾಜ್ಯಗಳು

  • ಪಂಜಾಬ್
  • ಸಿಂಧ್
  • ಕಾಶ್ಮೀರ
  • ಬಿಹಾರ್
  • ಉತ್ತರ ಪ್ರದೇಶ

ಭಾರತದ ಹೋರಗೆ

  • ಅಫ್ಘಾನಿಸ್ತಾನ
  • ಬ್ಯಾಕ್ಟೀಯ
  • ಕಾಷ್ಗ್‌ರ್
  • ಖೋಟಾನ್‍
  • ಯಾರ್ಕಂಡ್

ಈ ವಿಸ್ತಾರವಾದ ಆಮ್ರಾಜ್ಯವನ್ನು ರಾಜಧಾನಿಯಾದ ಪುರಷಪುರ ಅಥವಾ ಪೇಷಾವರ್‌ನಿಂದ ಆಳುfತ್ತಿದ್ದನು.