ಬುದ್ಧ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಲೇಖನವನ್ನು ಮುಂದುವರಿಸಲಾಗುತ್ತಿದೆ. |
ಲೇಖನವನ್ನು ಮುಂದುವರಿಸಲಾಗುತ್ತಿದೆ. |
||
೨೪ ನೇ ಸಾಲು:
[[File:Maya dream of the Birth of Gautama Siddharta.jpg|thumb|Maya dream of the Birth of Gautama Siddharta]]
▲ಬುದ್ದ ಸಂದೇಶ: ಸಂಶೋದನೆ, ತಿಳುವಳಿಕೆ, ಅನುಭವಿಸುವಿಕೆ ಮತ್ತು ಅದನ್ನು ಮತ್ತೆ ಮನನ ಮಾಡಿಕೊಳ್ಳುವುದು. ಇದುವೇ ಬುದ್ಧ ಧಮ್ಮ.
==ಜನನ==
ಕಪಿಲ ವಸ್ತುವಿನ ಸಿಂಹಹನುವಿನ ಮಗ ಶುದ್ಧೋದನ. ಶುದ್ಧೋದನನಿಗೆ ತಂದೆ ಸಿಂಹಹನು ತನ್ನನೆರೆಯ ರಾಜ್ಯದ ದೊರೆ ಸುಪ್ರಬುದ್ಧನ ಮಕ್ಕಳಾದ ಪ್ರಜಾಪತಿದೇವಿ ಮತ್ತು ಮಾಯಾದೇವಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ತಂದು ಮದುವೆ ಮಾಡಿದರು. ಶುದ್ಧೋದನನ ಪಟ್ಟ ಮಹಿಷಿ ಮಾಯಾದೇವಿ. ಬುದ್ಧ ಲುಂಬಿನಿ ವನದಲ್ಲಿ, ವೈಶಾಖಶುದ್ಧ ಪೌರ್ಣಮಿಯಂದು ಶುದ್ಧೋದನ ಮತ್ತು ಮಾಯಾದೇವಿಯ ಮಗನಾಗಿ ಜನಿಸುತ್ತಾನೆ. ಮಗುವಿಗೆ ಏಳು ದಿನವಾದಾಗ, ತಾಯಿ ಮಾಯಾದೇವಿ ಅಸುನೀಗಿದಳು. ನಂತರ ಮಗುವನ್ನು ಎರಡನೆ ತಾಯಿ ಪ್ರಜಾಪತಿದೇವಿ ಸಾಕಿ ಸಲಹುತ್ತಾಳೆ. (ಸಿದ್ದಾರ್ಥ ಕ್ರಿ.ಪೂ.೫೪೪ರಲ್ಲಿ, ಕ್ರಿ.ಪೂ.೫೫೦ರಲ್ಲಿ, ಕ್ರಿ.ಪೂ.೫೬೦ರಲ್ಲಿ ಜನಿಸಿದನೆಂದು ಭಿನ್ನಾಭಿಪ್ರಾಯಗಳಿವೆ. ಕ್ರಿ.ಪೂ.೬೨೩ನೇ ವೈಶಾಖ ಮಾಸದ ಹುಣ್ಣಿಮೆಯದಿನ ಬುದ್ಧ ಜನಿಸಿದನೆಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.)
==ಹೆಸರಿನ ವಿಶೇಷತೆ==
ಮೊದಲ ಹೆಸರು ಸಿದ್ದಾರ್ಥ. ಪ್ರಜಾಪತಿದೇವಿ ಸಾಕಿದ್ದರಿಂದ ಪ್ರಜಾಪತಿ ಗೌತಮನೆಂದೂ, ಜ್ಞಾನ ಸಂಪಾದನೆಯಾದ ಮೇಲೆ ಬುದ್ಧನೆಂದು ಕರೆಯಲಾಗಿದೆ. [[ಬೌದ್ಧಧರ್ಮ|ಬೌದ್ಧಧರ್ಮದಲ್ಲಿ]] ಕೋಪ, ಲೋಭ, ಮೌಢ್ಯಗಳನ್ನು ಸಂಪೂರ್ಣವಾಗಿ ಜಯಿಸಿದವನನ್ನು '''ಬುದ್ಧ'''ನೆಂದು ಕರೆಯುತ್ತಾರೆ.
==ಮಾಯಾದೇವಿಯ ಕನಸು==
Line ೩೫ ⟶ ೩೭:
==ಜ್ಯೋತಿಷ್ಯಫಲ==
ಸ್ವಪ್ನದ ಸಂಕೇತವನ್ನು ಕುರಿತು ಜ್ಯೋತಿಷ್ಯರು ಮಾಯಾದೇವಿ ಗಂಡು ಮಗುವಿಗೆ ಜನ್ಮವೀಯುವಳು. ಶಿಶುವು ರಾಜ್ಯಾಭಿಷಕ್ತನಾದರೆ, ಚಕ್ರಾಧೀಶ್ವರನೂ, ಸಂಪದ್ಫರಿತನೂ ಆಗುವನು, ರಾಜ್ಯಕೋಶಗಳ ಅಧಿಕಾರ ತೊರೆದು ಯೋಗಿಯಾದರೇ, ಮಹಾಯೋಗಿಯೆನಿಸಿ ಜಗದ್ವಿಖ್ಯಾತ ವ್ಯಕ್ತಿಯಾಗುವನು ಎಂದು ತಿಳಿಸಿದರು.
==ಶಿಕ್ಷಣ==
|