ಭಕ್ತ ಕುಂಬಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೬ ನೇ ಸಾಲು:
 
|----}}
 
==ಭಕ್ತ ಕುಂಬಾರ==
 
ಭಕ್ತ ಕುಂಬಾರ ಭಾರತೀಯ ಭಕ್ತಿ ಪರಂಪರೆಯನ್ನು ಅದರಲ್ಲೂ ಪಂಡರಾಪುರ ವಿಟ್ಠಲನ ಭಕ್ತ ಪ್ರೇಮವನ್ನು ಮತ್ತು ಭಕ್ತರ ಪರಮಾತ್ಮನ ಸಂಬಂಧಗಳನ್ನು ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟಿರುವ ಚಿತ್ರ. 1974 ರಲ್ಲಿ ಕನ್ನಡ ಭಾಷೆಯಲ್ಲಿ ತೆರೆ ಕಂಡ ಈ ಚಿತ್ರ ನಿರ್ದೇಶಿಸಿದ್ದು ಹುಣಸೂರು ಕೃಷ್ಣಮೂರ್ತಿ. ತಾರಾ ಬಳಗದಲ್ಲಿ ಡಾ||ರಾಜ್ ಕುಮಾರ್ ಮತ್ತು ಲೀಲಾವತಿ ಕಾಣಿಸಿಕೊಂಡಿದ್ದಾರೆ.
 
ಭಕ್ತ ಘೋರನ ಭಕ್ತಿಯ ಉನ್ಮತ್ತತೆ ಯನ್ನು ಡಾ||ರಾಜ್ ಕುಮಾರ್ ತಮ್ಮ ಅಮೋಘ ಅಭಿನಯದ ಮುಖಾಂತರ ಕಟ್ಟಿ ಕೊಟ್ಟಿದ್ದಾರೆ. ಭಕ್ತ ಘೋರ ಒಬ್ಬ ಸಾಮಾನ್ಯ ಮಡಿಕೆ ಮಾಡುವ ಕುಂಬಾರ, ಕಡು ಬಡತನದಲ್ಲಿ ಬಿದ್ದು ಬೇಯುತ್ತಿದ್ದಂತಹ ಹಿನ್ನೆಲೆಯುಳ್ಳವನು . ಅವನು ದೇವರ ನಾಮಗಳನ್ನು, ಭಜನೆಗಳನ್ನು ತಾನು ಕೆಲಸ ಮಾಡುವುದರ ಜೊತೆಗೆ ಹಾಡುತ್ತಿರುತ್ತಾನೆ. ಒಮ್ಮೆ ಮಡಿಕೆ ಮಾಡಲು ಮಣ್ಣು ತುಳಿದು ಹಸನು ಮಾಡುತ್ತಿರಬೇಕಾದರೆ ಪರಮಾತ್ಮನ ಗೀತೆಗಳನ್ನು ಹಾಡುತ್ತ ಮೈ ಮರೆಯುತ್ತಾನೆ. ಅವನು ಎಷ್ಟು ಭಕ್ತಿ ಪರವಶನಾಗುತ್ತಾನೆಂದರೆ, ಏನೂ ಅರಿಯದ ತನ್ನ ಪುಟ್ಟ ಕಂದ ಅಚಾನಕ್ ಆಗಿ ಮಡಿಕೆಯ ಕೆಸರಿಗೆ ಬಿದ್ದರೂ ಅದೂ ಅವನ ಅರಿವಿಗೆ ಬಾರದೆ ಅದನ್ನು ತುಳಿದು ಜೀವಂತ ಸಮಾಧಿ ಮಾಡಿಬಿಡುತ್ತಾನೆ. ಕೊನೆಗೆ ತನ್ನ ತಪ್ಪಿನ ಅರಿವಾಗಿ ಪರಮಾತ್ಮನಲ್ಲಿ ಮೊರೆ ಇಟ್ಟಾಗ ಪಂಡರಾಪುರ ವಿಟ್ಠಲನೇ ಸತ್ತ ಮಗುವನ್ನು ಬದುಕಿಸುತ್ತಾನೆ ಮತ್ತು ಘೋರನನ್ನು ಹರಸುತ್ತಾನೆ.
 
[[Category:ವರ್ಷ-೧೯೭೪ ಕನ್ನಡಚಿತ್ರಗಳು]]
"https://kn.wikipedia.org/wiki/ಭಕ್ತ_ಕುಂಬಾರ" ಇಂದ ಪಡೆಯಲ್ಪಟ್ಟಿದೆ