ಜ್ಞಾನೇಶ್ವರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
೫೦ ನೇ ಸಾಲು:
ಇತ್ತ ಅನಾಥ ಮಕ್ಕಳು ಭಿಕ್ಷೆ ಬೇಡುತ್ತಾ , ಕರುಣಾಳುಗಳು ಕೊಟ್ಟದ್ದನ್ನು ಬೇಯಿಸಿ ತಿನ್ನುತ್ತಾ , ಬೆಳೆದರು. ಕಾಲಕ್ರಮೇಣ ಈ ಮಕ್ಕಳೂ , ತಮ್ಮನ್ನು ಬ್ರಾಹ್ಮಣ ಸಮುದಾಯದಲ್ಲಿ ಸೇರಿಸಿಕೊಳ್ಳುವಂತೆಯೂ, ಅದಕ್ಕಾಗಿ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಿದ್ಧರೆಂದೂ , ಪೈಠಣದ ಬ್ರಾಹ್ಮಣ ಸಮುದಾಯಕ್ಕೆ ಬೇಡಿಕೊಂಡರು. ಆದರೆ ಇದನ್ನು ಸಮುದಾಯವು ತಿರಸ್ಕರಿಸಿತು. ಆದರೂ, ಈ ಮಕ್ಕಳ ವಿಧೇಯ ನಡವಳಿಕೆಯಿಂದ ಸಂತುಷ್ಟರಾಗಿಮ ಬಾಕಿ ಬ್ರಾಹ್ಮಣರೊಂದಿಗೆ ಸಹಜೀವನ ಮಾಡಲು, ಮದುವೆಯಾಗಬಾರದು ಮತ್ತು ಮಕ್ಕಳಾಗಬಾರದು ಎಂಬ ಕರಾರಿನ ಮೇಲೆ, ಅನುಮತಿ ನೀಡಿದರು. ಇದು 1287ರಲ್ಲಿ, ಆಗ ಜ್ಞಾನದೇವನಿಗೆ ಹನ್ನೆರಡು ವರ್ಷ ವಯಸ್ಸು.
ಇದೇ ಸಮಯದಲ್ಲಿ ನಿವೃತ್ತಿನಾಥನು ಜ್ಞಾನದೇವನಿಗೆ ನಾಥಸಂಪ್ರದಾಯದ ದೀಕ್ಷಯನ್ನು ಕೊಟ್ಟು, ಅವನಿಗೆ [[ಭಗವದ್ಗೀತೆ]]ಯ ಮೇಲೆ ಭಾಷ್ಯವನ್ನು ಬರೆಯಲು ಸೂಚಿಸಿದನು. ಹದಿನಾಲ್ಕು ವರ್ಷದ ಗುರು ಹನ್ನೆರಡು ವರ್ಷದ ಶಿಷ್ಯನಿಗೆ ದೀಕ್ಷೆ ಕೊಟ್ಟು , ಬರೆಸಿದ ಭಾಷ್ಯ ಮುಂದೆ ಅನೇಕ ಪೀಳಿಗೆಗಳ ಜನರಿಗೆ ದಾರಿದೀಪವಾಯಿತು. ಅಲ್ಲಿಂದ ಮಕ್ಕಳು, ಪ್ರವರಾ ನದಿಯ ದಂಡೆಯ ಮೇಲಿನ , ನಗರ್ ಜಿಲ್ಲೆಯ , ನೆವಾಸೆ ಎಂಬ ಹಳ್ಳಿಗೆ ವಲಸೆ ಹೋದರು. ಅಲ್ಲಿ ಜ್ಞಾನದೇವನು ಭಗವದ್ಗೀತೆಯ ಭಾಷ್ಯವನ್ನು ಬರೆಯುವ ಕಾರ್ಯವನ್ನು ಪ್ರಾರಂಭಿಸಿದನು. ನಾಥ ಪಂಥದ ಹಾಗೂ ಭಕ್ತಿ ಪಂಥದ ಅನುಯಾಯಿಗಳಿಗೆ ಪ್ರವಚನವನ್ನೂ ಕೊಡುತ್ತಿದ್ದ. ಸಚ್ಚಿದಾನಂದಬಾಬಾ ಎಂಬ ಒಬ್ಬ ಭಕ್ತ ಜ್ಞಾನದೇವನ ಪ್ವಚನವನ್ನು ಬರಹರೂಪದಲ್ಲಿ ಇಳಿಸತೊಡಗಿದ. ಅವನ ಶ್ರೋತೃಗಳಲ್ಲಿ [[ಸಂತ ನಾಮದೇವ]]ನೂ ಒಬ್ಬನಾಗಿದ್ದ. ಸಣ್ಣ ವಯಸ್ಸಿನಲ್ಲಿಯೇ, ನಾಮದೇವ ಅರ್ಪಿಸಿದ ನೈವೇದ್ಯವನ್ನು ಪಂಢರಪುರದ ವಿಠೋಬಾ ದೇವರು , ತಿಂದಿದ್ದ ಎಂಬ ಪವಾಡದಿಂದ ನಾಮದೇವ ಪ್ರಸಿದ್ಧನಾಗಿದ್ದ. ಇದಕ್ಕೂ ಮೊದಲು ಪಂಢರಪುರದಲ್ಲಿ ಪರಸ್ಪರ ಭೇಟಿಯಾಗಿ ಅವರಿಬ್ಬರೂ ಗೆಳೆಯರಾಗಿದ್ದರು.
==ಜ್ಷಾನೇಶ್ವರಿ==
|