ಬಂಕಿಮ ಚಂದ್ರ ಚಟ್ಟೋಪಾಧ್ಯಾಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
ಪರಿಷ್ಕರಣೆ |
||
೧ ನೇ ಸಾಲು:
{{Infobox
| name = Bankim Chandra
| image = Bankim chandra
| image_size =
| caption = Bankim Chandra
| pseudonym =
|
|
|
| occupation =
|
| genre =
| movement = [[
| subject =
| alma_mater = [[
| notableworks = Author of [[
|
| ethnicity = [[Bengali people|Bengali]]
| influenced = ▼
| signature = ▼
▲| influenced =
| awards =▼
▲| signature =
▲| awards =
|
}}
Line ೪೧ ⟶ ೪೩:
''ಕಪಾಲಕುಂಡಲ'' (೧೮೬೬) ಎಂಬುದು ಚಟರ್ಜಿಯವರ ಮೊದಲ ಪ್ರಮುಖ ಪ್ರಕಟಣೆಯಾಗಿದೆ. ಈ ಕಾದಂಬರಿಯ ಕಥಾನಾಯಕಿಗೆ ಭವಭೂತಿಯ ''ಮಾಲತಿ ಮಾಧವ'' ಕೃತಿಯಲ್ಲಿ ಬರುವ ಭಿಕ್ಷೆಬೇಡುವ ಹೆಂಗಸಿನ ಹೆಸರನ್ನು ಇರಿಸಲಾಗಿದೆ. ಈ ಪಾತ್ರವು ಆಂಶಿಕವಾಗಿ ಕಾಳಿದಾಸನ ಶಾಕುಂತಲಾ ಮತ್ತು ಆಂಶಿಕವಾಗಿ ಷೇಕ್ಸ್ಪಿಯರ್ನ ''ಮಿರಾಂಡ'' ಳ ಮಾದರಿಯಲ್ಲಿದೆ. ಆದಾಗ್ಯೂ, ಸದರಿ ಆಂಶಿಕ ಹೋಲಿಕೆಗಳು ವಿಮರ್ಶಕರಿಂದ ಮಾಡಲ್ಪಟ್ಟಿರುವ ತಾರ್ಕಿಕ ನಿರ್ಣಯದ ವಿಶ್ಲೇಷಣೆಯಷ್ಟೇ ಆಗಿದ್ದು, ಚಟರ್ಜಿಯವರ ಕಥಾನಾಯಕಿಯು ಸಂಪೂರ್ಣವಾಗಿ ಅವರದ್ದೇ ಮೂಲಸೃಷ್ಟಿಯಾಗಿರಬಹುದಾಗಿದೆ. ಕೊಂಟಾಯ್ ಉಪವಿಭಾಗದಲ್ಲಿರುವ ದರಿಯಾಪುರ್ನ್ನು ಈ ಪ್ರಸಿದ್ಧ ಕಾದಂಬರಿಯ ಹಿನ್ನೆಲೆಯಾಗಿ ಅವರು ಆರಿಸಿಕೊಂಡಿದ್ದರು.
''ಮೃಣಾಲಿನಿ'' (೧೮೬೯) ಎಂಬ ಅವರ ಮುಂದಿನ ರಮ್ಯ-ಸಾಹಿತ್ಯ ಕೃತಿಯು ಒಂದು ಬೃಹತ್ತಾದ ಐತಿಹಾಸಿಕ ಸಂದರ್ಭಕ್ಕೆ ಪ್ರತಿಯಾಗಿ ತಮ್ಮ ಕಥೆಯನ್ನು ಸಜ್ಜುಗೊಳಿಸುವಲ್ಲಿನ ಅವರ ಮೊದಲ ಪ್ರಯತ್ನವನ್ನು ಎತ್ತಿ ತೋರಿಸುತ್ತದೆ. ಕಟ್ಟುನಿಟ್ಟಾಗಿ ಎಂದು ಹೇಳಬಹುದಾದ ರೀತಿಯಲ್ಲಿ ರಮ್ಯ-ಸಾಹಿತ್ಯ ಕೃತಿಗಳ ಓರ್ವ ಬರಹಗಾರರಾಗಿದ್ದ ಚಟರ್ಜಿಯವರ ಆರಂಭಿಕ ವೃತ್ತಿಜೀವನವು ತುಳಿದ ಹೊರಳುದಾರಿ ಅಥವಾ ಬದಲಾವಣೆಯನ್ನು ಈ ಪುಸ್ತಕವು ಗುರುತುಮಾಡುತ್ತದೆ; ಪಥ ಬದಲಿಸಿದ ಚಟರ್ಜಿಯವರು ನಂತರದ ಅವಧಿಯಲ್ಲಿ, ಬಂಗಾಳಿ ಭಾಷೆಯನ್ನು ಮಾತನಾಡುವ ಜನರ ವಿಚಾರಶಕ್ತಿಯನ್ನು ಉತ್ತೇಜಿಸುವ ಸಾಹಿತ್ಯ ಸೃಷ್ಟಿಯೆಡೆಗೆ ಮತ್ತು ಬಂಗಾಳಿ ಸಾಹಿತ್ಯದಲ್ಲಿ ಒಂದು ಸಾಂಸ್ಕೃತಿಕ ಪುನರುದಯವನ್ನು ಉಂಟುಮಾಡುವ ಕಡೆಗೆ ಗುರಿಯಿರಿಸಿದರು. ''ಬಂಗೋದರ್ಶನ್'' ಎಂಬ ಒಂದು ಸಾಹಿತ್ಯಿಕ ಮಾಸಪತ್ರಿಕೆಯ ಪ್ರಕಟಣೆಯನ್ನು ೧೮೭೨ರ ಏಪ್ರಿಲ್ನಲ್ಲಿ ಅವರು ಆರಂಭಿಸಿದರು; ಇದರ ಮೊದಲ ಆವೃತ್ತಿಯಲ್ಲಿ ಹೆಚ್ಚೂಕಮ್ಮಿ ಅವರದೇ ಸ್ವಂತ ಕೃತಿಯು ಸಂಪೂರ್ಣವಾಗಿ ತುಂಬಿಕೊಂಡಿತ್ತು. ಧಾರಾವಾಹಿ ರೂಪದ ಕಾದಂಬರಿಗಳು, ಕಥೆಗಳು, ಹಾಸ್ಯಭರಿತ ಚಿತ್ರಗಳು, ಐತಿಹಾಸಿಕ ಮತ್ತು ನಾನಾ ಬಗೆಯ ಪ್ರಬಂಧಗಳು, ಮಾಹಿತಿಪೂರ್ಣ ಲೇಖನಗಳು, ಧಾರ್ಮಿಕ ಉಪದೇಶಗಳು, ಸಾಹಿತ್ಯಿಕ ಟೀಕೆಗಳು ಮತ್ತು ಅವಲೋಕನಗಳನ್ನು ಈ ನಿಯತಕಾಲಿಕವು ಒಳಗೊಂಡಿತ್ತು. ''ವಿಷಬೃಕ್ಷ'' (ದಿ ಪಾಯ್ಸನ್ ಟ್ರೀ, ೧೮೭೩) ಕಾದಂಬರಿಯು ''ಬಂಗೋದರ್ಶನ್'' ನಿಯತಕಾಲಿಕದಲ್ಲಿ ಧಾರಾವಾಹಿಯಾಗಿ ಕಾಣಿಸಿಕೊಂಡ ಚಟರ್ಜಿಯವರ ಮೊದಲ ಕಾದಂಬರಿ ಎಂಬ ಕೀರ್ತಿಗೆ ಪಾತ್ರವಾಯಿತು.೪ ವರ್ಷಗಳ ನಂತರ ''ಬಂಗೋದರ್ಶನ್'' ನಿಯತಕಾಲಿಕದ ಪ್ರಸರಣವು ಚಾಲ್ತಿಯಲ್ಲಿಲ್ಲದ ಸ್ಥಿತಿಯನ್ನು ತಲುಪಿತು. ನಂತರದಲ್ಲಿ ಅವರ ಸೋದರ ಸಂಜೀಬ್ ಚಂದ್ರ ಚಟರ್ಜಿಯವರು ಇದನ್ನು ಪುನರುಜ್ಜೀವನಗೊಳಿಸಿದರು.
''ಚಂದ್ರಶೇಖರ್'' (೧೮೭೭) ಎಂಬುದು ಚಟರ್ಜಿಯವರ ಮುಂದಿನ ಪ್ರಮುಖ ಕಾದಂಬರಿಯಾಗಿದ್ದು, ಬಹುಮಟ್ಟಿಗೆ ಸಂಬಂಧವಿಲ್ಲದ ಎರಡು ಸಮಾನಾಂತರ ಕಥಾವಸ್ತುಗಳನ್ನು ಇದು ಒಳಗೊಂಡಿದೆ. ಇದರಲ್ಲಿ ಬಿಂಬಿತವಾಗಿರುವ ಕಾಲಘಟ್ಟ ಅಥವಾ ಪರಿಸರವು ಒಮ್ಮೆ ಹದಿನೆಂಟನೇ ಶತಮಾನಕ್ಕೆ ವರ್ಗಾಯಿಸಲ್ಪಡುತ್ತದೆಯಾದರೂ, ಇದು ಐತಿಹಾಸಿಕ ಕಾದಂಬರಿಯಲ್ಲ. ಅವರ ಮುಂದಿನ ಕಾದಂಬರಿಯಾದ ''ರಜನಿ'' ಯು (೧೮೭೭) ಆತ್ಮಚರಿತ್ರೆಗೆ ಸಂಬಂಧಿಸಿದ ಒಂದು ಕಥಾವಸ್ತುವನ್ನು ಹೊಂದಿದ್ದು, ಓರ್ವ ಕುರುಡು ಹುಡುಗಿಯು ಅದರ ಶೀರ್ಷಿಕೆ ಪಾತ್ರದಲ್ಲಿದ್ದಳು. ಆತ್ಮಚರಿತ್ರೆಗೆ ಸಂಬಂಧಿಸಿದ ಕಥಾವಸ್ತುಗಳು ವಿಲ್ಕೀ ಕಾಲಿನ್ಸ್ ಎಂಬಾತನ "ಎ ವುಮನ್ ಇನ್ ವೈಟ್" ಎಂಬ ಕೃತಿಯಲ್ಲಿನ ಪ್ರಯೋಗ-ಕೌಶಲಗಳಲ್ಲಿ ಚಾಲ್ತಿಯಲ್ಲಿದ್ದವು. ಅಷ್ಟೇ ಅಲ್ಲ, ಕುರುಡು ಹುಡುಗಿಯೋರ್ವಳು ಪ್ರಧಾನ ಪಾತ್ರವೊಂದರಲ್ಲಿ ಇರುವ ನಿದರ್ಶನವು ಎಡ್ವರ್ಡ್ ಬುಲ್ವರ್-ಲಿಟ್ಟಾನ್ ಎಂಬಾತನ "ದಿ ಲಾಸ್ಟ್ ಡೇಸ್ ಆಫ್ ಪಾಂಪೇಯಿ" ಕೃತಿಯಲ್ಲಿರುವ ನಿಡಿಯಾ ಪಾತ್ರಕ್ಕೆ ಹೋಲುವಂತಿದ್ದರೂ, ಸದರಿ ಪ್ರಕಟಣೆಗಳೊಂದಿಗಿನ ''ರಜನಿ'' ಕಾದಂಬರಿಯ ಈ ಹೋಲಿಕೆಗಳು ಅಲ್ಲಿಗೇ ಕೊನೆಗೊಳ್ಳುತ್ತವೆ.
೧೧೬ ನೇ ಸಾಲು:
* [http://www.pustak.org/bs/home.php?author_name=Bankim%20Chandra%20Chattopadhyay भारतीय साहित्य संग्रह में बंकिम चन्द्र]
{{DEFAULTSORT:Chattopadhyay, Bankim Chandra}}
[[Category:1838ರಲ್ಲಿ ಜನಿಸಿದವರು]]
|