ಹೃಷಿಕೇಶ್ ಮುಖರ್ಜಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩ ನೇ ಸಾಲು:
ಚಿತ್ರದ ಬಗ್ಗೆ ಹೇಳಲೇಬೇಕಾದ ವಿಷಯಗಳಿವೆ. [[ಮನಮುಟ್ಟುವ ಸಂಭಾಷಣೆ]], [[ಪೂರಕವಾದ ಸಂಗೀತ]], ಎಲ್ಲಾ, ಇನ್ನೂ ಹೆಸರು ಗಳಿಸದ ಉದ್ಯೋನ್ಮುಖ ಕಲಾವಿದರು. ರಾಜೇಶ್ ಖನ್ನ, ಮತ್ತು ಜಯ ಬಾಧುರಿ ಜನಪ್ರಿಯತೆಯ ಶಿಖರಕ್ಕೆ ತಲುಪಿದ್ದೂ ಇಲ್ಲಿಂದಲೆ. ಸಿಕ್ಕ ಚಿಕ್ಕ ಪುಟ್ಟ ಸಂದರ್ಭಗಳನ್ನು ಸೊಗಸಾಗಿ ಉಪಯೋಗಿಸಿರುವ ತಂತ್ರ, ಕಲಾತ್ಮಕತೆ ! ಉದಾ: ಪಾತ್ರೆತೊಳೆಯುವ ಕಲ್ಲಿನ, ಅಥವ ಬಟ್ಟೆಒಗೆಯುವ ಕಲ್ಲಿನ ಬಳಿ ಮನೆಮಂದಿಯೆಲ್ಲಾ ಆನಂದದಿಂದ ಹಾಡಿ ಮಾಡಿದ ನೃತ್ಯಕ್ಕೆ ಸರಿಸಾಟಿಯಾದ ಸಾಮ್ಯತೆ ಚಿತ್ರ ಜಗತ್ತಿನಲ್ಲಿ ಕೇವಲ ಹೃಷಿದಾ ಮಾತ್ರ ಮಾಡಬಲ್ಲರು ! " [[ಓ ರಾಹಿ ಗಯ ಅಂಧಿಯಾರಾ]]....ಹಾಡಿನ ಕೊನೆಗೆ [[ಹರೀಂದ್ರನಾಥ ಚಟ್ಟೋಪಾಧ್ಯಾಯ]] ಅಲ್ಲಿಗೆ ಬರುತ್ತಾರೆ. ಅವರು ತಮ್ಮದೇ ಆದ ಶೈಲಿಯಲ್ಲಿ [[ದೇತಾ ಹೈ ಕಿತನಾ]] ....[[ಉತನಾ ಫಲ್ ಪಾತಾ ಹೈ]]....ನಂತರ ಅಸ್ರಾನಿ, ಗಿಟಾರ್ ಬಾರಿಸುತ್ತಾ, [[ಗುಡ್ ಮಾರ್ನಿಂಗ್]], [[ಗುಡ್ ಮಾರ್ನಿಂಗ್ ದಾದಾಜಿ]]...[[ಹ್ಯಾಪಿ ಡೇಸ್ ಆರ್ ಕಾಮಿಂಗ್]]....ಇತ್ಯಾದಿ. ಹಿರಿಯ ಸೊಸೆಯರು ಒಬ್ಬರನ್ನೊಬ್ಬರು ಮುಖ ಕೊಟ್ಟು ಮಾತನಾಡದ ಮನೆಯಲ್ಲಿ ಅವರು ನೃತ್ಯ ಮಾಡುತ್ತಾರೆ. ರಾಜೇಶ್ ಖನ್ನಾ ಅವರ ಹೆಜ್ಜೆಗಳನ್ನು ನಿಯಂತ್ರಿಸುತ್ತಾರೆ. ಒಂದು ಕ್ಷಣದಲ್ಲಿ ಮನೆ [[ಸ್ವರ್ಗ]]ವಾಗುತ್ತದೆ !
 
==ಚಿತ್ರಕೊಡುವ ಸಂದೇಶ, ಬಹಳ ಹೃದಯಂಗಮವಾಗಿದೆ. ==
 
ಒಂದು ಅಂಶ ಹೇಳಬೇಕೆಂದರೆ, ಚಿತ್ರ ನೋಡಿ ಹಲವು ದಿನಗಳ ನಂತರವೂ ನಮ್ಮಮೇಲೆ ಬೀರಿದ ಅದರ ಛಾಪು ! "[[ ಸಬ್ ಲೊಗ್ ಅಪ್ನ ಕಾಮ್ ಕರ್ತೆಹೈ]] ; [[ಲೆಕಿನ್, ದೂಸ್ರೋಂಕ ಕಾಮ್ ಕರ್ನೆಮೆ ಕಿತನ ಮಜಾ ಹೈ]], [[ವಹ್ ಔರ್ ಭಿ ದುಗನಾ ಹೈ]] " ಇಂತಹ ಅನೇಕ ನೀತಿಯುತ ವಾಕ್ಯಗಳು ಯಾರಿಗೂ ಬೇಸರ ತರದೆ, ಮನರಂಜನೆಯ ಪ್ರಮುಖ ವಾಹಿನಿಯಲ್ಲಿ ಸೇರಿ ಹೋಗುತ್ತವೆ ! ಪ್ರಖ್ಯಾತ ನಿರ್ದೇಶಕ ಬಿಮಾಲ್ ದ ಬಳಿ ಸಹಾಯಕರಾಗಿ ಕಲ್ಕತ್ತಾ ದಲ್ಲಿ ಕೆಲಸಮಾಡಿ ನುರಿತು, ಅವರು ಮಾಡಿದ ಮೊದಲ ಚಿತ್ರ 'ಮುಸಾಫಿರ್' ಇದು ಅಷ್ಟೊಂದು ಜನಪ್ರಿಯತೆಗಳಿಸಲಿಲ್ಲ.ರಾಜ್ ಕಪೂರ್ ಅವರಿಗೆ ತಮ್ಮ 'ಅನಾಡಿ' ಚಿತ್ರದ ನಿರ್ದೇಶನವನ್ನು ವಹಿಸಿದರು.(೧೯೫೯) ಅನುರಾಧ (೧೯೬೦) ಅವರ ಚಿತ್ರಗಳಾದ ಆನಂದ್(೧೯೭೦), ಅಭಿಮಾನ್(೧೯೭೩), ಬಾವರ್ಚಿ(೧೯೭೨), ಸತ್ಯಕಾಂ(೧೯೬೯), ನಮಕ್ ಹರಾಮ್(೧೯೭೩), ಚುಪ್ ಕೆ ಚುಪ್ ಕೆ(೧೯೭೫), ಬೇಮಿಸಾಲ್, ಗೋಲ್ ಮಾಲ್ (೧೯೭೯) ಅಪಾರ ಜನಪ್ರಿಯ ತೆಯನ್ನು ಗಳಿಸಿದವು. ಸುಮಾರಾಗಿ ಅವರ ಕೆಲವು ಚಿತ್ರಗಳಿಗೆ ಎಸ್. ಡಿ. ಬರ್ಮನ್ ರ ಸುಶ್ರಾವ್ಯ ಸಂಗೀತ. ೧೯೪೭ ರಿಂದ ಅವರು ಅತ್ಯಂತ ಪ್ರಿತಿಭಾನ್ವಿತ ವ್ಯಕ್ತಿಗಳ ಸಂಪರ್ಕದಲ್ಲಿದ್ದು ಅನೇಕ ಚಿತ್ರಗಳಲ್ಲಿ ನವ ಕಲ್ಪನೆ,ವಿಚಾರಧಾರೆಗಳಿಂದ ವಿಶಿಷ್ಟ ಕಲೋಪಾಸಕರಾಗಿ ಗುರುತಿಸಲ್ಪಟ್ಟಿದ್ದಾರೆ. ಇಂತಹ ಕಿರಿದಾರ್ ಗಳು ಅವರ ಯಶಸ್ಸನ್ನು ಹೆಚ್ಚಿಸಿದವು. ಫಿಲ್ಮ್ಸ್ ಸೆನ್ಸಾರೆ ಬೋರ್ಡಿನ ಛೇರ್ಮನ್ ಆಗಿಯೂ, ಎನ್.ಎಫ್,ಡಿ.ಸಿ.ಛೇರ್ ಮನ್ ಆಗಿಯೂ ಕೆಲಸ ಮಾಡಿದ್ದಾರೆ.
 
ಸ್ವಲ್ಪ ಸಮಯ ಅವರು ತಮ್ಮ ಕೆಲಸ ನಿಲ್ಲಿಸಿದ್ದು ಮತ್ತೆ 'ಝೂಟ್ ಬೋಲೆ ಕವ್ವಾ ಕಾಟೆ' ಎಂಬ ಚಿತ್ರ ತಯಾರಿಸಿದರು. ಅಮೊಲ್ ಪಲೇಕರ್ ಅದರಲ್ಲಿ ಕೆಲಸ ಮಾಡಬೇಕಗಿತ್ತು. ಆದರೆ ಅವರಿಗೆ ಸ್ವಲ್ಪ ವಯಸ್ಸಾದಂತೆ ತೋರಿ, ಆ ಪಾತ್ರಕ್ಕೆ ಅನಿಲ್ ಕಪೂರ್ ನನ್ನು ತೆಗೆದುಕೊಂಡರು. ಮುಖರ್ಜಿಯವರು 'ತಲಾಶ್' ಎಂಬ ಟಿ.ವಿ.ಸೀರಿಯಲ್ ಮಾಡಿದ್ದರು. ನೇಮಿಸಲ್ಪಟ್ಟಿದ್ದರು.ಮೌಲ್ಯಗಳನ್ನು ಪ್ರತಿಪಾದಿಸುವ ಚಿತ್ರಗಳನ್ನು ನಿರ್ಮಿಸಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದಾರೆ.ನಕ್ಕು ನಲಿಸುವ ಚಿತ್ರಗಳಾದ, ಚುಪ್ ಕೆ ಚುಪ್ ಕೆ,ಯಲ್ಲಿ ನಟ ಓಂಪ್ರಕಾಶ್ ನ ಕೇಂದ್ರವಾಗಿ ದ್ದರೆ ಖುಬ್ ಸೂರತ್ ನಲ್ಲಿ (೧೯೮೦) ನಟಿ ದೀನಾಪಾಠಕ್, ಗೋಲ್ ಮಾಲ್ ನಲ್ಲಿ ನಟ ಉತ್ಪಲ್ ದತ್ 'ಕಿರಿದಾರ್' ಗಳು ಅದ್ಭುತವಾಗಿವೆ.
 
ಇನ್ನೊಂದು ವಿಶೇಷವೆಂದರೆ ಅವರ ಎಲ್ಲಾ ಚಿತ್ರಗಳಲ್ಲೂ, ಮನಮೋಹಕ ಮಧುರ ಸಂಗೀತದ ಹೊನಲನ್ನು ಕಾಣಬಹುದು. ಬೊಂಬಾಯಿಗೆ ಬರುವ ಮೊದಲು ಅವರು ಕಲ್ಕತ್ತಾ ಆಕಾಶವಾಣಿ ಕೇಂದ್ರದಲ್ಲಿ [[ಸಿತಾರ್ ವಾದಕರಾಗಿದ್ದರುವಾದಕ]] ರಾಗಿದ್ದರು. ಸಂಗೀತದ ಈ ಪರಿಶ್ರಮವೇ ಅವರ ಚಿತ್ರದಲ್ಲಿನ ಹಾಡುಗಳಲ್ಲಿ ಅವರು ತುಂಬಿದ ಮಧುರ ರಸವನ್ನು ನಾವು ಕಾಣಬಹುದು !
 
==ಹೄಷಿದಾ ಚಿತ್ರಗಳಲ್ಲಿ ಜಾಡುಕಂಡ ಕೆಲವೇ, ಅತಿ ಜನಪ್ರಿಯ ಗೀತೆಗಳು :==
"https://kn.wikipedia.org/wiki/ಹೃಷಿಕೇಶ್_ಮುಖರ್ಜಿ" ಇಂದ ಪಡೆಯಲ್ಪಟ್ಟಿದೆ