ಜಯದೇವ್ ಪ್ರಸಾದ್ ಮೊಳೆಯಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಜಯದೇವ್ ಪ್ರಸಾದ್ ಮೊಳೆಯಾರ್
( ಯಾವುದೇ ವ್ಯತ್ಯಾಸವಿಲ್ಲ )

೧೯:೨೮, ೨ ಫೆಬ್ರವರಿ ೨೦೧೫ ನಂತೆ ಪರಿಷ್ಕರಣೆ

ಜಯದೇವ್ ಪ್ರಸಾದ್ ಮೊಳೆಯಾರ್ : ಸಾಹಿತಿ ದಿ| ಗಣಪತಿ ಮೊಳೆಯಾರರ ಪುತ್ರರಾದ ಇವರು "ಐ ಐ ಎಂ -ಅಹಮದಾಬಾದ್" ಪದವಿಧರರು."ಹಿಂದೂಸ್ತಾನ್ ಯುನಿಲಿವರ್"ನಲ್ಲಿ ಸಾಗರೋತ್ಪ್ಪನ್ನ ರಫ್ತು ಉದ್ಯಮದಲ್ಲಿ ಬಿಸಿನೆಸ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಸದ್ಯ ಉಡುಪಿಯಲ್ಲಿ ಬಿಸಿನೆಸ್ ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದಾರೆ . ೧೯೬೪ರಲ್ಲಿ ವಿಟ್ಲ (ದಕ್ಷಿಣ ಕನ್ನಡ)ದಲ್ಲಿ ಜನಿಸಿದ ಇವರು ವಿಟ್ಲ ,ಪುತ್ತೂರುಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದು ಮಂಗಳೂರಿನ ಮೀನುಗಾರಿಕ ಮಹಾವಿದ್ಯಾಲಯದಲ್ಲಿ ಮೀನುಗಾರಿಕ ವಿಜ್ಞಾನದಲ್ಲಿ ಚಿನ್ನದ ಪದಕದೊಂದಿಗೆ ಡಿಗ್ರಿ ಪಡೆದವರು.

ಪತ್ರಿಕೆ ನಿಯತಕಾಲಿಕೆಗಳಿಗೆ ಕತೆ ,ಕವನ,ಹಾಸ್ಯ,ಪ್ರಬಂಧಗಳನ್ನು ಬರೆಯುವ ಇವರು ಹಲವು ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.ಉದಯವಾಣಿಯಲ್ಲಿ "ಕಾಸು-ಕುಡಿಕೆ" ಶೀರ್ಷಿಕೆಯಡಿಯಲ್ಲಿ ವಾಣಿಜ್ಯ ಲೇಖನಗಳನ್ನು ಬರೆಯುತ್ತಿರುವ ಇವರು "ಕನ್ನಡ ಪ್ರಭ" ದಲ್ಲೂ ವಾಣಿಜ್ಯ ಕಲಂ ಬರೆದಿದ್ದಾರೆ.

ನಿರ್ವಹಣ ವಿಜ್ಞಾನಗಳ ಉನ್ನತ ಕಲಿಕೆ,ಸ್ವತಃ ಅಂತರ್ ರಾಷ್ಟೀಯ ಉದ್ಯಮಗಳಲ್ಲಿ ತೊಡಗಿದ ಅನುಭವ ಇರುವುದರಿಂದ ಜಯದೇವ್ ಪ್ರಸಾದ್ ರವರ ಈ ಬರಹಕ್ಕೆ ಅಧಿಕೃತತೆ ಇದೆ."ಕನ್ನಡ ಪ್ರಭ"ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಪ್ರಕಟಗೊಂಡು ಅಪಾರ ಓದುಗರನ್ನು ತಲುಪಿದ ಲೇಖನವಿದು.

ಉದ್ಯಮ,ಹಣಕಾಸು ಮತ್ತು ವಾಣಿಜ್ಯ ಕ್ಷೇತ್ರಗಳ ಅನುಭವವನ್ನು ಕನ್ನಡದ ಬರವಣಿಗೆಯಾಗಿ ಬದಲಾಯಿಸುವುದರಲ್ಲಿ ಇವರು ನುರಿತವರು.