[[ಕೋಲಾರ]] ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ನಂಗಲಿಯಲ್ಲಿ ೨೪-೧೯-೧೯೫೬ ರಂದು ಜನಿಸಿದ ಶ್ರೀ ಚಂದ್ರಶೇಖರ ನಂಗಲಿಯವರು ಪ್ರಸಕ್ತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾನಗಲ್ ನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಂಗಲಿಯವರು ಕೋಲಾರದ ಕನ್ನಡ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಕಾಲೇಜು ಶಿಕ್ಷಣ ನಿರ್ದೇಶನಾಲಯದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸಗಳನ್ನು ನಿರ್ವಹಿಸಿದ ಆನೂಭವ ಹೊಂದಿದ್ದಾರೆ. ಕನ್ನಡದಲ್ಲಿ ಚಾರಣ ಸಾಹಿತ್ಯ ಒಂದು ಸಾಂಸ್ಕೃತಿಕ ಅಧ್ಯಯನ ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಬೆಂಗಳೂರು ವಿಶ್ವವಿದ್ಯಾಲಯದಿಂದ ೨೦೦೫ರಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಪ್ರಸಿದ್ಧರಾಗಿರುವ ನಂಗಲಿಯವರು ನಿರ್ಬೀಜೀಕರಣದ ವಿರಾಟ ಸ್ವರೂಪ ಕಾಡು ಮಾತ್ತು ತೋಪು (೨೦೦೦) ಹೆಸರು ಪಿರಮಿಡ್ (೨೦೦೭) ಎಂಬ ಕೃತಿಗಳನ್ನು ನೀಡಿದ್ದಾರೆ . ಸಾಹಿತ್ಯ ಚಿಂತನೆಗೆ ಪರಿಸರದ ಆಯಾಮವೊಂದನ್ನು ಗಟ್ಟಿಯಾಗಿ ರೂಪಿಸುತ್ತಿರುವ ನ೦ಗಲಿಯವರು ಪ್ರಾಚೀನ ಸಾಹಿತ್ಯದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ ಆಳವಾದ
ಆಧ್ಯಯನ ನಡೆಸಿ ಬರಹಕ್ಕೆ ಗಂಭೀರಾ' ಮಾತಿಗೇ ಹೆಸರಾಗಿದ್ದಾರೆ ಇವರ ಇನ್ನಿತರ ಪ್ರಮುಕ ಕೃತಿಗಳಿಂದರೆ ಮಾರ್ಕ್ಸ್ ವಾದಿ ವಿಮರ್ಶೆ (೧೯೯೫)