ಕಾರ್ಕಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
→ಕಾರ್ಕಳದ ಇತಿಹಾಸ: ಬಾಹುಬಲಿಗೆ ಮಹಾಮಜ್ಜನ++++ |
No edit summary |
||
೧ ನೇ ಸಾಲು:
==ಪೀಠಿಕೆ==
[[File:Gomateshwara Statue, Karkala.jpg|thumb|right|ಕಾರ್ಕಳದ ಗೊಮ್ಮಟೇಶ್ವರ ಮೂರ್ತಿ]]▼
{{Infobox ಭಾರತದ ಭೂಪಟ |
native_name=ಕಾರ್ಕಳ |
Line ೨೬ ⟶ ೨೫:
website_caption = Karkala Municipal Office|
}}
▲[[File:Gomateshwara Statue, Karkala.jpg|thumb|right|ಕಾರ್ಕಳದ ಗೊಮ್ಮಟೇಶ್ವರ ಮೂರ್ತಿ]]
'''ಕಾರ್ಕಳ''' [[ಉಡುಪಿ]] ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಕಾರ್ಕಳವು ಬೆಂಗಳೂರಿನಿಂದ ಸುಮಾರು ೩೬೦ ಕಿ. ಮೀ ದೂರದಲ್ಲಿದೆ. ಪಶ್ಚಿಮ ಘಟ್ಟದ ಬುಡದಲ್ಲಿರುವ ಈ ಊರು ಹಲವು ಶತಮಾನಗಳ ಹಿಂದೆ ಜೈನ ರಾಜರ ಆಳ್ವಿಕೆಯ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು. ಕಾಲಕ್ರಮೇಣ ಇಲ್ಲಿರುವ ಕರಿ ಬಂಡೆಗಳಿಂದ "ಕರಿಕಲ್ಲು" ಎಂದು ಪ್ರಸಿದ್ಧವಾಗಿತ್ತು. ಮುಂದೆ 'ಕರಿಕಲ್ಲು' ತುಳುವಿನಲ್ಲಿ 'ಕಾರ್ಲ'ವೆಂದು ಮಾರ್ಪಟ್ಟು ಕನ್ನಡದಲ್ಲಿ 'ಕಾರ್ಕಳ' ಎಂದು ಹೆಸರಾಗಿದೆ. ೪೨ಅಡಿ ಎತ್ತರದ ಏಕಶಿಲಾ ಗೊಮ್ಮಟೇಶ್ವರ ಮೂರ್ತಿ, ಚತುರ್ಮುಖ ಬಸದಿ ಮತ್ತು ಇತರ ಧಾರ್ಮಿಕ ಕ್ಷೇತ್ರಗಳ ಮೂಲಕ ಕಾರ್ಕಳವು ಪ್ರವಾಸಿ ಸ್ಥಳವಾಗಿ ಛಾಪು ಮೂಡಿಸಿದೆ.
೩೩ ನೇ ಸಾಲು:
===ಪದಗಳ ಮೂಲ===
*ಈ ಊರು ಜೈನರ ಕಾಲದಲ್ಲಿ ಪಾಂಡ್ಯ ನಗರಿ ಎಂದು ಪ್ರಸಿಧ್ದಿ ಪಡೆದಿತ್ತು. ಕಾರ್ಕಳದ ಆಸುಪಾಸಿನ ಪ್ರದೇಶದಲ್ಲಿ ಬಂಡೆಕಲ್ಲು ಹೇರಳವಾಗಿರುವುದರಿಂದ "ಕರಿಕಲ್ಲು" ಎಂದು ಜನಜನಿತವಾಗಿತ್ತು. ಇನ್ನೂ ಕೆಲವು ಮೂಲಗಳ ಪ್ರಕಾರ ಕಾರ್ಕಳದ ಮಧ್ಯಭಾಗದಲ್ಲಿರುವ 'ಆನೆಕರೆ'ಯು ಹಿಂದೆ 'ಕರಿ-ಕೊಳ' ಎಂದು ಹೆಸರಾಗಿತ್ತೆಂದೂ, ಅದರಿಂದ ಕಾರ್ಕಳದ ಹೆಸರು ಊರಿಗೆ ಬಂತೆಂದೂ ತಿಳಿದುಬರುತ್ತದೆ.
*ಕಾರ್ಕಳದಲ್ಲಿ ಬಹುಸಂಖ್ಯೆಯಲ್ಲಿರುವ ತುಳುವರು "ಕಾರ್ಲ" ಎಂದು ಕರೆಯುತ್ತಾರೆ ಹಾಗೆಯೇ, ಕೊಂಕಣಿ ಮಾತನಾಡುವ ಜನರು "ಕಾರ್ಕೊಳ್" ಎಂದು ಕರೆಯುತ್ತಾರೆ. ಕಾರ್ಕಳವು ಇಲ್ಲಿರುವ ಜೈನ ಬಸದಿಗಳು ಮತ್ತು ಗೊಮ್ಮಟೇಶ್ವರ ಮೂರ್ತಿಯಿಂದ "ಜೈನ ತೀರ್ಥ" ಎಂದೂ ಪ್ರಸಿದ್ದವಾಗಿದೆ. ===ಪ್ರಾಚೀನ ಕಾರ್ಕಳ ===
*ಕಾರ್ಕಳದಲ್ಲಿ ಜನಜೀವನ ಎಂದು ಆರಂಭವಾಯಿತು ಎಂಬುದಕ್ಕೆ ಅನಾದಿಕಾಲದ ಆಧಾರಗಳು ನಮಗೆ ಸಿಗುತ್ತಿಲ್ಲವಾದರೂ ಬೃಹತ್ ಶಿಲಾಯುಗಕ್ಕೆ ಕಾಲಿಟ್ಟಾಗ ಒಂದು ಸ್ಪಷ್ಟ ಚಿತ್ರ ದೊರೆಯುತ್ತದೆ. ತತ್ಸಂಬಂಧವಾದ ಹಲವಾರು ಪಳೆಯುಳಿಕೆಗಳು ಕಾಣಸಿಗುತ್ತವೆ. ಇಲ್ಲಿ
*ಕಾಲದ ಪ್ರಭಾವದಿಂದಾಗಿ ಆದ ಹಲವಾರು ಬದಲಾವಣೆಗಳನ್ನು ನಾವು ಇಲ್ಲಿ ಕಾಣಬಹುದು. ಗವಿಯ ಮುಂದೆ ಕಿರಿದಾದ ಸಣ್ಣ ಕಣಿವೆ, ಇಲ್ಲೊಂದು ಅಷ್ಟೇ ಸಣ್ಣದಾದ ಝರಿ. ಇದು ಪ್ರಾಚೀನ ಕಾಲದಲ್ಲಿ ಮಾನವ ವಾಸ್ತವ್ಯಕ್ಕೆ ಅತ್ಯಂತ ಸೂಕ್ತವಾದ ಸ್ಥಳವಾಗಿತ್ತು. ಆಧುನಿಕ ಮಾನವನ ಸಂಪರ್ಕ ಹೊಂದಿರುವ ಈ ಗವಿ ಇದ್ದಿರಬಹುದಾದ ಪಳೆಯುಳಿಕೆಗಳನ್ನು ತನ್ನ ಗರ್ಭದಲ್ಲಿ ಸೇರಿಸಿಕೊಂಡಿದೆ. ಬೆಳುವಾಯಿ ಸಮೀಪದ ದರೆಗುಡ್ಡೆ ಮತ್ತು ಬೈಲೂರು ಸಮೀಪದ ಕಣಜಾರು ಬೆಟ್ಟ ಪ್ರದೇಶಗಳಲ್ಲಿ ಹೆಬ್ಬಂಡೆ ವಾಸ್ತವ್ಯದ (Rock Shelters) ಕುರುಹುಗಳಿವೆ. *ಇಲ್ಲಿ ಬೃಹತ್ ಶಿಲಾಯುಗಕ್ಕೂ ಹಿಂದಿನ ಕಾಲದ ಮಾನವ ವಾಸವಾಗಿದ್ದಿರಬಹುದು. ಸಾವಿರಾರು ವರ್ಷಗಳ ಘನಘೋರ ವರ್ಷಧಾರೆಯಿಂದ ಇಲ್ಲಿನ ಕುರುಹುಗಳು ನಾಶವಾಗಿವೆ. ರೆಂಜಾಳದ ಸಮೀಪ ಇರುವ ಬೋರುಕಟ್ಟೆ ಎಂಬ ಹಳ್ಳಿಯಲ್ಲಿ ಒಂದು ಬೃಹತ್ ಶಿಲಾ ಸಮಾಧಿ ಇದೆ. ಇದನ್ನು ಅಲ್ಲಿನ ಜನ “ಪಾಂಡವರಕಲ್ಲು” ಎಂದು ಕರೆಯುತ್ತಾರೆ. ಈ ಹೆಸರು ಸಮಾಧಿಯ ಪ್ರಾಚೀನತೆಯನ್ನು ಸೂಚಿಸುತ್ತದೆ ಅಷ್ಟೇ. ಜಿಲ್ಲೆಯ ಇತರೆಡೆಗಳಲ್ಲೂ ಪಾಂಡವರಕಲ್ಲು ಎಂದು ಕರೆಸಿಕೊಳ್ಳುವ ಸ್ಥಳಗಳಿವೆ. *ಬೋರುಕಟ್ಟೆ ಸಮಾಧಿಯು ಸಣ್ಣ ರಂಧ್ರದ(Pot-hole) ಸಮಾಧಿ. ಇದರ ಮೇಲೆ ತೆಳುವಾದ ಕಲ್ಲು ಚಪ್ಪಡಿಗಳ ಒಂದು ಚಪ್ಪರ ಇದೆ. ಮಾನವ ಆ ವೇಳೆಗೆ ಲೋಹದ ಮುಖ್ಯವಾಗಿ, ಕಬ್ಬಿಣದ ಉಪಯೋಗ ಪಡೆದಿದ್ದನೆಂಬುದಕ್ಕೆ ಇದು ಸಾಕ್ಷಿ. ಇಲ್ಲಿನ ಬೃಹತ್ ಶಿಲಾಯುಗದ ಸ್ಮಾರಕಗಳು ಸುಮಾರು ಕ್ರಿ. ಪೂ. 4ನೇಯ ಶತಮಾನ ಮತ್ತು ಅನಂತರದ ಕಾಲವೆಂದು ಅಂದಾಜಿಸಬಹುದು. ಆದರೆ ವೈಜ್ಞಾನಿಕವಾಗಿ ಉತ್ಖನನ ಕಾರ್ಯ ನಡೆಯುವವರೆಗೆ ಈ ಕಾಲವನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ===ಕಾರ್ಕಳದ ಇತಿಹಾಸ===
*ಅಲುಪರು ಕಾರ್ಕಳವನ್ನಾಳಿದವರಲ್ಲಿ ಮೊದಲಿಗರು. ತದನಂತರ ಸಂತರರು ಆಳ್ವಿಕೆಯನ್ನು ಮುಂದುವರೆಸಿದರು. ಕಾರ್ಕಳ ಅಥವಾ ಪ್ರಾಚೀನ ಪಾಂಡ್ಯನಗರಿ, ಭೈರರಸ ಒಡೆಯರಿಂದ ಕ್ರಿ. ಶ. ೧೩-೧೬ನೇ ಶತಮಾನದಲ್ಲಿದ್ದ ಕಳಸ-ಕಾರ್ಕಳ ಸಾಮ್ರಾಜ್ಯದ ಕಾಲದಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪಡೆಯಿತು. ಕಾರ್ಕಳದ ರಾಜಮನೆತನ ಹೊಯ್ಸಳರ ಕಾಲದಲ್ಲಿ ಪ್ರಾಧಾನ್ಯ ಪಡೆದುಕೊಂಡಿತು. ಮುಂದೆ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ತನ್ನ ವೈಭವವನ್ನು ಇನ್ನೂ ವಿಸ್ತರಿಸಿಕೊಂಡಿತು.
==ಬಾಹುಬಲಿಗೆ ಮಹಾಮಜ್ಜನ==
:ಐದು ಅಡಿ ಎತ್ತರದ ವಿಶಾಲ ಕರಿಕಲ್ಲು ಬಂಡೆಯ ಮೇಲೆ 180 ಮೆಟ್ಟಿಲುಗಳ ತುತ್ತ ತುದಿಯಲ್ಲಿ 42 ಅಡಿ ಆಳೆತ್ತರದಲಿ ನಿಂತಿರುವ ಬಾಹುಬಲಿಯ ಮಹಾಮಸ್ತಾಭಿಷೇಕಕ್ಕೆ ಕಾರ್ಕಳ ಸಜ್ಜಾಗಿ ನಿಂತಿದೆ.
:ತಪಸ್ಸು ಮಾಡುತ್ತಿರುವಂತೆ ಗೋಚರಿಸುವ ಈ ಮೂರ್ತಿಯದ್ದು ‘ಕಾಯೋತ್ಸರ್ಗ’ ಅಥವಾ ‘ಪ್ರತಿಮಾ ಯೋಗ ಭಂಗಿ’ ಎನ್ನಲಾಗುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಇದೇ 21-1-2015ರಿಂದ 31-1-2015ರವರೆಗೆ ಕಾರ್ಕಳ ಸಾಕ್ಷಿಯಾಗಲಿದೆ. ಈ ಮೊದಲು 2002ರಲ್ಲಿ ಮಹಾ ಮಜ್ಜನ ನಡೆದಿತ್ತು. 12 ವರ್ಷದ ಲೆಕ್ಕದಲ್ಲಿ ನೋಡಿದರೆ ಕಳೆದ ವರ್ಷವೇ ಮಸ್ತಕಾಭಿಷೇಕ ನಡೆಯಬೇಕಿತ್ತು. ಚುನಾವಣೆ ಮತ್ತಿತರ ಕಾರಣಗಳಿಂದ ಮುಂದೂಡಲಾಯಿತು.
==ಹನ್ನೆರಡು ವರ್ಷದ ನಿಯಮ==
:ಬಾಹುಬಲಿ 12 ವರ್ಷಗಳ ಕಾಲ ತಪಸ್ಸು ಮಾಡಿದ ಕಾರಣ ಅಷ್ಟೇ ವರ್ಷಕ್ಕೆ ಮಸ್ತಕಾಭಿಷೇಕ ಮಾಡಲಾಗುತ್ತದೆ ಎಂಬ ಅಭಿಪ್ರಾಯವಿದೆ. ಒಂದು ಹೊಸ ಮನೆಯನ್ನು ಕಟ್ಟಿ ಪೂಜಾ ಕೈಂಕರ್ಯಗಳನ್ನು ಪೂರೈಸಿ ಗೃಹ ಪ್ರವೇಶ ಮಾಡಿದ ನಂತರ ಮತ್ತೆ 12 ವರ್ಷದ ನಂತರ ಪೂಜಾ ವಿಧಿಗಳನ್ನು ನಡೆಸಲಾಗುತ್ತದೆ. ಅದೇ ರೀತಿ ಇಲ್ಲಿಯೂ 12 ವರ್ಷಗಳಿಗೊಮ್ಮೆ ಮಹಾ ಮಜ್ಜನ, ಪೂಜಾ ವಿಧಿಗಳನ್ನು ನೆರವೇರಿಸಲಾಗುತ್ತದೆ ಎನ್ನಲಾಗುತ್ತದೆ.
:ಬೃಹತ್ ಗಾತ್ರದ ಮೂರ್ತಿಗೆ ಪ್ರತಿ ನಿತ್ಯವೂ ಅಭಿಷೇಕ ಮಾಡುವುದು ಅಸಾಧ್ಯ ಮತ್ತು ಅತಿ ವೆಚ್ಚದಾಯಕವಾದ್ದರಿಂದ 12 ವರ್ಷಗಳಿಗೊಮ್ಮೆ ಅಭಿಷೇಕ ಮಾಡಲಾಗುತ್ತದೆ. ಆ ನೆಪದಲ್ಲಿ ಮೂರ್ತಿಯನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಗುತ್ತದೆ.
ಈ ಬಾರಿ ಸರ್ಕಾರ ₨15 ಕೋಟಿ ಬಿಡುಗಡೆ ಮಾಡಿದ್ದು, ಮೂಲ ಸೌಕರ್ಯ ಅಭಿವೃದ್ಧಿ ಕೆಲಸಗಳು ಭರದಿಂದ ನಡೆಯುತ್ತಿದೆ. ಮಹಾಮಸ್ತಕಾಭಿಷೇಕ ಮಾಡಲು ಬೃಹತ್ ಅಟ್ಟಣಿಗೆಯನ್ನು ನಿರ್ಮಾಣ ಮಾಡಲಾಗಿದೆ.
:ಸುಮಾರು 500 ಜನರು ಇದರಲ್ಲಿ ನಿಲ್ಲಬಹುದು. ನೀರು, ಎಳನೀರು, ಹಾಲು, ಕಬ್ಬಿನ ಹಾಲು, ಅಕ್ಕಿಹಿಟ್ಟು, ಅರಿಶಿಣ, ಅಷ್ಟಗಂಧ ಮತ್ತು ವನಸ್ಪತಿಗಳಿಂದ ತಯಾರಿಸಿದ ಕಷಾಯದಿಂದ ಅಭಿಷೇಕ ಮಾಡಲಾಗುತ್ತದೆ. ಮೊದಲ ದಿನ 108 ಕಲಶಗಳನ್ನು ಇಟ್ಟರೆ ಕೊನೆಯ ದಿನ 1008 ಕಲಶಗಳನ್ನಿಡಲಾಗುತ್ತದೆ. 31ರಂದು ಪೂಜಾ ಕೈಂಕರ್ಯದ ವಿಸರ್ಜನೆ ಮತ್ತು ಮಹಾಪ್ರಸಾದ ವಿತರಣೆ ನಡೆಯುತ್ತದೆ.(ಪ್ರಜಾವಾಣಿ-ಎಂ.ನವೀನ್ ಕುಮಾರ್-Tue, 13/01/2015-ಆಧಾರ)
|