ದೇವೇಂದ್ರ ಜಿ. ಫಡ್ನವಿಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫ ನೇ ಸಾಲು:
'ದೇವೇಂದ್ರ', ಮಹಾರಾಷ್ಟ್ರ ರಾಜ್ಯದ 'ದೇಶಸ್ಥ ಬ್ರಾಹ್ಮಣರ ಮನೆತನ'ದಲ್ಲಿ ೨೨, ಜುಲೈ,೧೯೭೦ ರಲ್ಲಿ ಜನಿಸಿದರು. ತಂದೆ 'ಗಂಗಾಧರ್ ಫಡ್ನವಿಸ್'. ಮಹಾರಾಷ್ಟ್ರದ ನಾಗಪುರ ಲೆಜಿಸ್ಲೇಟೀವ್ ಕೌನ್ಸಿಲ್ ಗೆ ೨ ಬಾರಿ ಆರಿಸಿಬಂದಿದ್ದರು. (ಮೊದಲು ಜನಸಂಘದಿಂದ, ನಂತರ ಜನತ ಪಕ್ಷ, ಹಾಗೂ ಮುಂದೆ, ಬಿಜೆಪಿ ಪಕ್ಷದಿಂದ) ತಾಯಿ, 'ಸರಿತ ಫಡ್ನವಿಸ್', ಗೃಹಸ್ತೆ. 'ವಿಧರ್ಭ ಹೌಸಿಂಗ್ ಕ್ರೆಡಿಟ್ ಸೊಸೈಟಿಯ ನಿರ್ದೇಶಕಿ'. ಅಣ್ಣ, 'ಅಶಿಶ್ ಫಡ್ನವಿಸ್', ಅಖಿಲಭಾರತೀಯ ವಿದ್ಯಾರ್ಥಿ ಪರಿಶದ್ (ABVP) ನಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಕೆಲಸಮಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಫಡ್ನವಿಸ್ ಬೆಳೆದರು. ದೇವೇಂದ್ರನ ಚಿಕ್ಕಮ್ಮ, 'ಶೋಭಾತಾಯಿ ಫಡ್ನವಿಸ್' ಈಗಿನ 'ಸ್ಟೇಟ್ ಲೆಜಿಸ್ಲೇಟೀವ್ ಸದಸ್ಯೆ' ; ಹಿಂದೆ ೧೯೯೫ ರಲ್ಲಿ ಶಿವಸೇನೆ-ಬಿಜೆಪಿ ಸಹಯೋಗದ ಸರಕಾರದಲ್ಲಿ ಮಂತ್ರಿಯಾಗಿದ್ದರು. ನಾಗಪುರದಿಂದ ೧೪೩ ಕಿ.ಮೀ ದೂರದ ಚಂದ್ರಪುರ ಜಿಲ್ಲೆಯ 'ಮೂಲ್ ಟೌನ್' ನಲ್ಲಿ ಫಡ್ನಿವಿಸ್ ಮನೆತನದ ಪೂರ್ವಜರು ವಾಸಿಸುತ್ತಿದ್ದಾರೆ. ಅವರೆಲ್ಲಾ ಮೂಲತಃ ಜಮೀನುದಾರರು ಮತ್ತು ಕೃಷಿಕರು. ಕಾಲಾನುಕ್ರಮದಲ್ಲಿ ರಾಜಕೀಯದಲ್ಲಿ ಆಸಕ್ತಿವಹಿಸಿದರು. ಬಹಳ ಹಿಂದೆ ಪೂರ್ವಜರು 'ಸತಾರ ಜಿಲ್ಲೆ'ಯ 'ವೈ'ನಲ್ಲಿ ವಾಸಿಸುತ್ತಿದ್ದು, ಪೇಷ್ವೆಗಳ ಆಡಳಿತಾವಧಿಯಲ್ಲಿ, ಚಂದ್ರಪುರದ 'ಸಾವಲಿ'ಯಲ್ಲಿ ಜಹಗೀರು ದೊರೆಯಿತು. ಹಾಗೆಯೇ ಮುಂದುವರೆದ ಅವರ ವಂಶಜರಿಗೆ 'ಮೂಲ್ ಗ್ರಾಮ'ದಲ್ಲಿ 'ವಾತಂದರಿ' ದೊರೆತಮೇಲೆ ಅಲ್ಲಿ ನೆಲೆಸಲು ಪ್ರಾರಂಭಿಸಿದರು.
ಬಾಲಕ, ದೇವೇಂದ್ರ, ಮಾಜಿ ಪ್ರಧಾನಿ, ಇಂದಿರಾ ಗಾಂಧಿಯವರ ಹೆಸರಿನ ’ಇಂದಿರಾ ಕಾನ್ವೆಂಟ್’ ಗೆ ಕಲಿಯಲು ಹೋಗುತ್ತಿದ್ದರು. ಜನಸಂಘದ ಕಾರ್ಯಕರ್ತರಾಗಿದ್ದ ದೇವೇಂದ್ರನ ತಂದೆ, ಗಂಗಾಧರ ಫಡ್ನವಿಸ್ ರನ್ನು, ’ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾಂಗ್ರೆಸ್ ಸರಕಾರ ಜೈಲಿಗೆ ಕಳಿಸಿದರು.<ref>[http://www.telegraphindia.com/1141029/jsp/nation/story_18975975.jsp#.VFXQvjSUeSp Kid who protested Emergency - Nagpur’s Mr Popular set to don CM mantle, Oct, 29,2014]</ref> ಇದರಿಂದಾಗಿ ದೇವೇಂದ್ರನನ್ನು 'ಸರಸ್ವತಿ ವಿದ್ಯಾಲಯ'ಕ್ಕೆ ಸೇರಿಸಲಾಯಿತು. ಅಲ್ಲಿ ಪ್ರಾಥಮಿಕ, ಮತ್ತು ಮಾಧ್ಯಮಿಕ, ಹಾಗೂ ಪ್ರೌಢ ಶಿಕ್ಷಣವನ್ನು ಗಳಿಸಿದರು.೧೯೮೬-೮೭ ರಲ್ಲಿ 'ಧರಮ್ ಪೆಟ್ ಜೂನಿಯರ್ ಕಾಲೇಜ್', ಗೆ ಸೇರಿ, ಮುಂದೆ 'ಲಾ ಕಾಲೇಜ್ ನಾಗ್ಪುರ್' ನಿಂದ 'ಕಾನೂನು ಪದವಿ' ಗಳಿಸಿದರು. ಮೊದಲಿನಿಂದಲೂ (ABVP) ಯ, ಸಕ್ರಿಯ ಕಾರ್ಯಕರ್ತನಾಗಿ ದುಡಿದಿದ್ದರು. ಪರಿಷತ್ತಿನ ಎಲ್ಲಾ ಕೆಲಸಗಳನ್ನೂ ನಿಷ್ಠೆಯಿಂದ ಮಾಡುತ್ತಿದ್ದರು. ಗೋಡೆಗೆ ಬಣ್ಣ ಬಳಿಯುವುದು, ರಾಜಕೀಯಪಟುಗಳ ಬಗ್ಗೆ ಮುದ್ರಿಸಲಾದ ಭಿತ್ತಿಪತ್ರಗಳನ್ನು ನಗರದ ಗೋಡೆಗಳ ಮೇಲೆ ಅಂಟಿಸುವ ಕೆಲಸ, ಇತ್ಯಾದಿ.
'ಬರ್ಲಿನ್ ಜರ್ಮನ್ ಫೌಂಡೇಶನ್ ಫಾರ್ ಇಂಟರ್ನ್ಯಾಷನಲ್ ಡೆವೆಲೊಪ್ಮೆಂಟ್' (DSE) ನ ವತಿಯಿಂದ, 'ಬಿಜಿನೆಸ್ ಮ್ಯಾನೇಜ್ಮೆಂಟ್' ನಲ್ಲಿ ಸ್ನಾತಕೋತ್ತರ ಪದವಿ, ಹಾಗೂ 'ಡಿಪ್ಲೊಮಾ ಇನ್ ಮೆಥಡ್ಸ್ ಅಂಡ್ ಟೆಕ್ನಿಕ್ಸ್ ಆಫ್ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್' ಗಳಿಸಿದರು. ದೇವೇಂದ್ರ ಫಡ್ನವಿಸ್ ತಮ್ಮ ಸರಕಾರದ ಕಾನ್ಫಿಡೆನ್ಸ್ ಮತಗಣನೆಯಲ್ಲಿ ೨೦೧೪ ರ, ನವೆಂಬರ್ ೧೨ ರಂದು 'ವಾಯ್ಸ್ ಓಟಿನ ಮೂಲಕ' ಗಳಿಸಿದರು.
<ref>[http://www.dnaindia.com/mumbai/report-how-devendra-fadnavis-won-trust-vote-2034699 DNA, Maharashtra: How Devendra Fadnavis led BJP government won trust vote..13th Nov,2013] </ref>
 
==ಪರಿವಾರ ಮತ್ತು ವೈಯಕ್ತಿಕ ಜೀವನ==