ಶತಾವಧಾನಿ ಆರ್. ಗಣೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೯ ನೇ ಸಾಲು:
 
==ಅವಧಾನ ಕಲೆಯಲ್ಲಿ ಸಾಧನೆಗಳು==
ಹಿರಿಯ ಕವಿಶ್ರೇಷ್ಠರಾಗಿದ್ದ [[ಬೆಳ್ಳಾವೆ ನರಹರಿಶಾಸ್ತ್ರಿ]] ಗಳು, ೧೯೩೩-೩೬ ರ ಸಮಯದಲ್ಲಿ ಅವಧಾನವೊಂದನ್ನು ಮಾಡಿ ತೋರಿಸಿದರು. ಅವರಿಗೆ ಪ್ರೇರಣೆಯೆಂದರೆ, ತೆಲುಗಿನ ದಿದುಪತಿ ಚಿದಂಬರ ಶಾಸ್ತ್ರಿಗಳು. ಕನ್ನಡದ ಇತಿಹಾಸದಲ್ಲಿಯೇ ಅವಧಾನ ಕಲೆಯ ಬಗ್ಗೆ ಮೊದಲ ಉಲ್ಲೇಖ ಸಿಗುವುದಾದರೂ ಅವಧಾನ ಮಾಡುವ ಪ್ರತಿಭೆಯುಳ್ಳವರು ಯಾರೂ ಇರಲಿಲ್ಲ.<ref>[http://kathaakaala.blogspot.in/2011/03/blog-post.html 'ಕಥಾಕಾಲ', 'ಅವಧಾನ'-ಒಂದು ಅದ್ಭುತ ಕಲೆ']</ref> ಲೇಪಾಕ್ಷಿ ಮೆದಾವರಂ ಮಲ್ಲಿಕಾರ್ಜುನ ಶರ್ಮರನ್ನು ಕಂಡು, ಗಣೇಶರು, ತಾವೂ ಪ್ರಭಾವಿತರಾಗಿ ತಮ್ಮ ಗೆಳೆಯರ ಮುಂದೆ ೧೯೮೧ ರಿಂದ ೮೭ ರ ತನಕ ಆಗಾಗ ಮಾಡಿ ತೋರಿಸಿದ್ದರು. ಒಟ್ಟು ೧೩ ಬಾರಿ. ೧೯೮೧ ರಲ್ಲಿ ಗಣೇಶರು ಅವಧಾನಕಲೆಯನ್ನು ಪ್ರಸಿದ್ಧಿಪಡಿಸಿದರು. ಹೀಗೆ ಆರಂಭವಾದ ಅವರ ಆಸಕ್ತಿ, ೧೯೮೭ ರಲ್ಲಿ ಕೋಲಾರದಲ್ಲಿ ಮೊಟ್ಟ ಮೊದಲು ಮೊಳಕೆಯೊಡೆಯಿತು. ಅದು 'ಡಾ. ಡಿ.ವಿ.ಜಿ'ಯವರ ನೂರನೆಯ ವರ್ಧಂತ್ಯೋತ್ಸವ' ದ ಸುಸಂದರ್ಭದಲ್ಲಿ. ಸಾವಿರಾರು ಜನ ನೆರೆದಿದ್ದ ಸಭಾಂಗಣದಲ್ಲಿ ೧೦೦ ನೆಯ ಮತ್ತು ನಂತರ ತಮ್ಮ ೨೦೦ ನೆಯ '[[ಅಷ್ಟಾವಧಾನ]]' ಗಳನ್ನೂ ತಮ್ಮ ತವರೂರಾದ ಕೋಲಾರದಲ್ಲಿಯೇ ನೆರವೇರಿಸಿದರು. ಮಳೆಯನ್ನೂ ಲೆಕ್ಕಿಸದೆ ಬಂದ ಜನಗಳು ಸಾವಿರಾರು. ೮ ಭಾಷೆಗಳಲ್ಲಿ ಸಂಸ್ಕೃತ, ಕನ್ನಡ, ತೆಲುಗುಗಳಲ್ಲಿ ಅವಧಾನವನ್ನು ಪ್ರಸ್ತುತಪಡಿಸಿದ್ದರು. 'ಚಿತ್ರಕಾವ್ಯ' ಗಣೇಶ್ ರವರ ವಿಶೇಷತೆಗಳಲ್ಲೊಂದು. ಅವರು, ಅಮೆರಿಕ ಮತ್ತು ಯೂರೋಪ್ ದೇಶಗಳಲ್ಲಿ ಒಮ್ಮೆ ಭೆಟ್ಟಿ ಕೊಟ್ಟ ಸಮಯದಲ್ಲಿ ೨೦ ಪ್ರದರ್ಶನಗಳನ್ನು ನೀಡಿದರು. ೧೯೯೧ ರ ಡಿಸೆಂಬರ್, ೧೫ ರಂದು ಮೊದಲ ಶತಾವಧಾನ ಪ್ರದರ್ಶನವನ್ನು ಅವರು, ಬೆಂಗಳೂರಿನ ಭಾರತೀಯ ವಿದ್ಯಾಭವನದ ಪ್ರಾಂಗಣದಲ್ಲಿ ಇಟ್ಟುಕೊಂಡಿದ್ದರು. ಇದಾದ ಕೇವಲ ೧೫ ದಿನಗಳಲ್ಲೇ ಮತ್ತೊಂದು ೧೯೯೨ ರಲ್ಲಿ, ಮತ್ತು ೧೯೯೩ ರಲ್ಲಿ ಹಾಗೆಯೇ ೨೦೧೨ ರಲ್ಲಿ, ಸಂಪೂರ್ಣ ಕನ್ನಡದಲ್ಲಿ ನಡೆಸಿಕೊಟ್ಟರು. ಎಳೆಯರಿಗೆ ಅನುಕೂಲವಾಗುವಂತೆ ೨ ಪುಸ್ತಕಗಳ ರಚನೆಮಾಡಿದರು.
* ಶತಾವಧಾನ ಶಾರದೆ,
* ಶತಾವಧಾನ ಶ್ರೀವಿದ್ಯೆ,