ಕಮಲಾ ಹಂಪನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೧ ನೇ ಸಾಲು:
ಪ್ರೊಫೆಸರ್ '''ಕಮಲಾ ಹಂಪನಾ''' ಅವರು ಕನ್ನಡದ ಬಹುದೊಡ್ಡ ಲೇಖಕರು. ಅವರು ವಿದ್ವಾಂಸರಾಗಿ, ಉತ್ತಮ ಪ್ರಾಧ್ಯಾಪಕರಾಗಿ, ಪ್ರಾಚೀನ ಅರ್ವಾಚೀನ ಕೃತಿಗಳ ಅನುಸಂಧಾನಕಾರರಾಗಿ ಅಪಾರವಾಗಿ ಶ್ರಮಿಸಿದ್ದಾರೆ. ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸಾರ್ಥಕವಾದ ಗಂಭೀರವಾದ ಅಧ್ಯಯನ ಮತ್ತು ಸಂಶೋಧನೆಯನ್ನು ಕೈಗೊಂಡು ಆ ಎಲ್ಲ ಪ್ರಕಾರಗಳಲ್ಲೂ ಅತ್ಯಂತ ಗಂಭೀರವಾದ ಹಾಗೂ ಸ್ವೋಪಜ್ಞಶೀಲತೆಯ ಚಿಂತನೆಗಳಿಂದ ಕೂಡಿದ ಮೌಲಿಕ ಕೊಡುಗೆಗಳನ್ನು ನೀಡಿದ್ದಾರೆ. ಸ್ತ್ರೀ ಸಂವೇದನೆಗೆ ಸಂಬಂಧಿಸಿದ ಅವರ ಸಂಶೋಧನೆಗಳು ಅವರಿಗೆ ಅಪಾರ ಕೀರ್ತಿ ಗೌರವಗಳನ್ನು ತಂದುಕೊಟ್ಟಿವೆ. ಜೈನ ಕೃತಿಗಳನ್ನು ಕುರಿತು ಆಳವಾದ ವಿವೇಚನೆಯನ್ನು ಒಳನೋಟವನ್ನು ಅವರು ತಮ್ಮ ಬರಹಗಳಲ್ಲಿ ಹೊಮ್ಮಿಸಿದ್ದಾರೆ. ಕಮಲಾ ಹಂಪನಾ ಇವರು [[೧೯೩೫]]ರಲ್ಲಿ ಜನಿಸಿದರು. ಮೈಸೂರಿನಲ್ಲಿ ಬಿ.ಎ (ಆನರ್ಸ್)ಹಾಗು ಎಮ್.ಎ.ಪದವಿ ಪಡೆದ ಬಳಿಕ [[ಬೆಂಗಳೂರು|ಬೆಂಗಳೂರಿನ]] ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕಿಯಾದರು.[[ಹಂ.ಪ.ನಾಗರಾಜಯ್ಯ]]ನವರು ಇವರ ಪತಿ.
[[೨೦೦೩]] [[ಡಿಸೆಂಬರ್]] ತಿಂಗಳಲ್ಲಿ [[ಮೂಡುಬಿದಿರೆ]]ಯಲ್ಲಿ ಜರುಗಿದ ೭೧ ನೆಯ [[ಕನ್ನಡ ಸಾಹಿತ್ಯ ಸಮ್ಮೇಳನ|ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ]]ಕ್ಕೆ ಕಮಲಾ ಹಂಪನಾ ಅಧ್ಯಕ್ಷರಾಗಿದ್ದರು.
Line ೭೫ ⟶ ೭೪:
* ಭಾರತದಲ್ಲಿ ಜಾತಿಗಳು
* ಏಶಿಯಾದ ಹಣತೆಗಳು, ಜಾತಿಮೀಮಾಂಸೆ
ಹೀಗೆ ಸೃಜನಶೀಲ ಲೇಖಕಿಯಾಗಿ, ಶ್ರೇಷ್ಠ ವಾಗ್ಮಿಯಾಗಿ, ನಿರ್ಭೀತ ವಿಚಾರವಂತರಾಗಿ, ಪ್ರೌಢ ವಿಮರ್ಶಕಿಯಾಗಿ ಮತ್ತು ಸಂಶೋಧಕರಾಗಿ ಅವರು ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಗಟ್ಟಿಯಾದುದು ಮತ್ತು ಚಿರಂತನವಾದುದು.
[[ವರ್ಗ:ಕನ್ನಡ ಸಾಹಿತ್ಯ]]
[[ವರ್ಗ:ಸಾಹಿತಿಗಳು|ಕಮಲಾ ಹಂಪನಾ]]
[[ವರ್ಗ:ಲೇಖಕಿಯರು|ಕಮಲಾ ಹಂಪನಾ]]
[[ವರ್ಗ:
|