ಕಸ್ತೂರಿ ನಿವಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೨೫ ನೇ ಸಾಲು:
[[Category:ವರ್ಷ-೧೯೭೧ ಕನ್ನಡಚಿತ್ರಗಳು]]
==ಕಸ್ತೂರಿ ನಿವಾಸ==
ಈ ಚಿತ್ರವನ್ನು ೧೯೭೧ ರಲ್ಲಿ ತಯಾರಿಸಲಾಯ್ತು. ಈ ಚಿತ್ರದ ಕತೆಯನ್ನು ಮೊದಲು ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಅವರಿಗೆ ಹೇಳಲಾಗಿತ್ತು. ಆದರೆ ಕೊನೆಯಲ್ಲಿ ನಾಯಕ ಸಾಯುವ ಈ ಕತೆಯನ್ನು ಚಿತ್ರ ಮಾಡಿದರೆ ಅದು ಓಡಲ್ಲ ಎಂದು ಹೇಳಿ ಅವರು ನಿರಾಕರಿಸಿದ್ದರಂತೆ. ನಂತರ ಅದೇ ಕತೆಯನ್ನು ದೊರೆ-ಭಗವಾನ್ ಜೋಡಿ ಕನ್ನಡದಲ್ಲಿ ಡಾ. ರಾಜ್ಕುಮಾರ್ ಅವರನ್ನು ನಾಯಕರನ್ನಾಗಿ ಹಾಕಿಕೊಂಡು ಚಿತ್ರೀಕರಿಸಿದರು.
ಅಂದು ಈ ಚಿತ್ರಕ್ಕೆ ಸುಮಾರು ನಾಲ್ಕು ಲಕ್ಷ ರೂಪಾಯಿ ಮಾತ್ರ ವೆಚ್ಚವಾಗಿತ್ತು ಎಂದು ಹೇಳಲಾಗಿದೆ. ಬಿಡುಗಡೆಯಾದ ನಂತರ ೧೬ ಚಿತ್ರಮಂದಿರಗಳಲ್ಲಿ ಅಮೋಘ ನೂರು ದಿನ ಪೂರೈಸಿತು. ಇದನ್ನು ತಿಳಿದ ಶಿವಾಜಿ ಗಣೇಶನ್ ಬಂದು ರಾಜ್ ಅಭಿನಯವನ್ನು ನೋಡಿ ಕಣ್ಣೀರಾದರಂತೆ. ಮೊದಲು ತಾವು ಕತೆಯನ್ನು ನಿರಾಕರಿಸಿದ್ದನ್ನು ನೆನೆದು ನೊಂದುಕೊಂಡು ತಾವೇ ನಾಯಕರಾಗಿ ಈ ಕತೆಯನ್ನು ತಮಿಳಿನಲ್ಲಿ ತೆಗೆಯಲು ಬಯಸಿದರು. ಹಾಗೂ ಅವರ ನಟನೆಯ ತಮಿಳಿನ ಈ ಚಿತ್ರವೂ ಸಹ ಅಲ್ಲಿ ಅಮೋಘ ಯಶಸ್ಸನ್ನೂ ಪಡೆಯಿತು.
|