ಆದಿ ಶಂಕರರು ಮತ್ತು ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೧೧೫ ನೇ ಸಾಲು:
**೨.'''ಪ್ರಾತಿಭಾಸಿಕ ಸತ್ತೆ :''' ಇದು ತಿರಾ ಕೆಳಗಿನ ಹಂತದ ಸತ್ಯ. ನಂಬುಗೆ ಇರುವ ವರೆಗೆ ಮಾತ್ರ ಇರುತ್ತದೆ. ಉದಾಹರಣೆಗೆ ಹಗ್ಗವನ್ನು ಹಾವೆಂದು ತಿಳಿಯುವುದು. ಹಾವು ಅನುಭವಕ್ಕೆ ಬರುವುದರಿಂದ ಇಲ್ಲವೆನ್ನುವಂತಿಲ್ಲ; ಅನುಭವ ಇರುವವರೆಗೂ ಸತ್ಯವಾಗೇ ಇರುತ್ತದೆ. ಇದು ಪ್ರಾತಿಭಾಸಿಕ ಸತ್ಯ
**೩.'''ಪಾರಮಾರ್ಥಿಕ ಸತ್ತೆ :''' ಇದು ತ್ರಿಕಾಲಾಬಾಧಿತ ಸತ್ಯ. ಭೂತ ಭವಿಷ್ಯತ್ ವರ್ತಮಾನಗಳಲ್ಲೂ ಬಾಧಿತವಾಗದೆ ಇರುವುದು. ಎಚ್ಚರ ಕನಸು ನಿದ್ದೆ ಈಮೂರೂ ಅವಸ್ಥೆಗಳಲ್ಲೂ ಸಾಕ್ಷಿರೂಪದಲ್ಲಿ ಒಂದೇ ರೀತಿಯಾಗಿರುವುದು. ಮೂರೂ ಕಾಲಗಳಲ್ಲಿ ಮೂರೂ ಅವಸ್ಥೆಗಳಲ್ಲಿ ಬದಲಾವಣೆ ಆಗುವುದಿಲ್ಲ ; ಒಂದೇರೀತಿಇರುತ್ತದೆ. ಇದು ಪಾರಮಾರ್ಥಿಕ ಸತ್ಯ. ಈ ಗುಣವನ್ನು ಹೊಂದಿರುವುದು, ಈತತ್ವಕ್ಕೆ ಅರ್ಹವದುದು ಬ್ರಹ್ಮವೊಂದೇ. ಆದ್ದರಿಂದ ಬ್ರಹ್ಮ ವೊಂದೇ ಪಾರಮಾರ್ಥಿಕ ಸತ್ಯ ವಾಗಿದೆ.
*'''೭] ಜೀವ - ಬ್ರಹ್ಮ ತತ್ವ :''' ಮನ, ಬುದ್ಧಿ, ಅಹಂಕಾರ, ಚಿತ್ತ, ಈ ಅಂತಃಕರಣ ದಿಂದ ಆವರಿಸಲ್ಪಟ್ಟ ಮೂಲ ಚೈತನ್ಯವೇ ಜೀವ. ಮಾಯೆಯಿಂದ ಆವರಿಸಲ್ಪಟ್ಟ ಬ್ರಹ್ಮ ಮಾಯೆಯ ಉಪಾದಿಯಿಂದ ಈಶ್ವರನೆನಿಸಿ ಕೊಳ್ಳುತ್ತಾನೆ. ಅದೇ ಅವಿದ್ಯೆಯ[[ಅವಿದ್ಯೆ]]ಯ (ಅಜ್ಜ್ಞಾನ) ದ ಉಪಾದಿಯಿಂದ ಜೀವನೆನಿಸುತ್ತಾನೆ. ಜೀವನಿಗೆ ಈ ಉಪಾದಿಗಳಿಂದ ಸ್ಥೂಲ, ಸೂಕ್ಷ್ಮ, ಕಾರಣಗಳೆಂಬ ಮೂರು ಶರೀರಗಳು. ಜಗ್ರತ್, ಸ್ವಪ್ನ, ಸುಷುಪ್ತಿ ಗಳೆಂಬ ಮೂರು [[ಅವಸ್ಥೆಗಳು]]. ಅವಿದ್ಯೆಯಿಂದ[[ಅವಿದ್ಯೆ]]ಯಿಂದ ಅಥವಾ ಅಜ್ಞಾನದಿಂದ [ಮಾಯಾ ಪ್ರಭಾವದಿಂದ ; ಮಾಯೆ ಸಮಷ್ಟಿಯನ್ನು ಎಂದರೆ ಇಡೀ ಜಗತ್ತನ್ನು ಕುರಿತು ಹೇಳುವಾಗ ಉಪಯೋಗಿಸುವ ಪದ; [[ಅವಿದ್ಯೆ]] ವ್ಯಷ್ಟಿಯನ್ನು ಎಂದರೆ ಒಂದು ಜೀವಿಯನ್ನು ಕುರಿತು ಉಪಯೋಗಿಸುವ ಪದ; ಎರಡಕ್ಕೂ ಒಂದೇ ಅರ್ಥ.] ಬಿಡುಗಡೆಯಾದರೆ ಜೀವವು ಬ್ರಹ್ಮದಲ್ಲಿ ಲೀನವಾಗುವುದು- ಅಪರೋಕ್ಷಾನುಭೂತಿಯಾದಾಗ ತಾನೇ ಬ್ರಹ್ಮ ವೆಂಬ ಅನುಭವವಾಗುವುದು ; ತಾನು ಸಚ್ಚಿದಾನಂದ ರೂಪವೆಂಬ ಅನುಭವವಾಗುವುದು. ಇದು ಪಾರಮಾರ್ಥಿಕ ಸತ್ಯ.
*'''೮] ಸಂಸಾರವು ಅಥವಾ ಈ ದ್ವೈತ ಜಗತ್ತು :''' ಈ ಸಂಸಾರವು ಅಥವಾ ಬೇರೆ ಬೇರೆ, ಅನೇಕ, ಎಂಬ ಭಾವವು [[ಅವಿದ್ಯೆ]] [ಅಜ್ಞಾನ]ಯಿಂದ ಉಂಟಾದುದು. ಜ್ಞಾನದಿಂದ ಮಾತ್ರಾ ತನ್ನನ್ನು [ಬ್ರಹ್ಮವನ್ನು] ನಿಜವಾದ ರೂಪವನ್ನು ಅರಿಯಬಹುದು. ಕರ್ಮಯೋಗ, ರಾಜಯೋಗ, ಭಕ್ತಿಯೊಗ ಇವು ಸಾಧಕನ ಮನಸ್ಸನ್ನು ಶುದ್ಧಿಗೋಳಿಸಲು ಪ್ರಯೋಜನ. [[ಅವಿದ್ಯೆ]] ಅಥವ ಅಜ್ಞಾನ ದೂರವಾದರೆ ತಾನೇ ಜ್ಞಾನವಾಗುವುದು.
 
=== ಜ್ಞಾನ ಮತ್ತು ಮುಕ್ತಿ : ===
-------------
*ಬ್ರಹ್ಮ ಜ್ಞಾನವು ಹೊರಗಡೆಯಿಂದ ಏನನ್ನೋ ತನ್ನಲ್ಲಿ ಇರದೆ ಇರುವುದನ್ನು ಪಡೆಯುವುದಲ್ಲ. ಕಾಣದ್ದನ್ನು ಕಾಣುವುದಲ್ಲ. ಏಕೆಂದರೆ ಬ್ರಹ್ಮ ವು ನೋಡಲ್ಪಡುವ ವಸ್ತುವಲ್ಲ. ಅದು ನೋಡುವ ಚೈತನ್ಯ - ಸಾಕ್ಷಿ. [[ಅವಿದ್ಯೆ]]- ಅಜ್ಞಾನವನ್ನು ದೂರಮಾಡುವುದೇ ಬ್ರಹ್ಮ ಜ್ಞಾನ ಮತ್ತು ಮುಕ್ತಿ.
'''ವೇದಗಳ ಆಧಾರ :-'''
*ಮಹಾವಾಕ್ಯಗಳು : ಶ್ರೀ ಶಂಕರರು ತಮ್ಮ ಅದ್ವೈತ ಸಿದ್ಧಾಂತಕ್ಕೆ ನಾಲ್ಕು ವೇದಗಳಿಂದ ಪ್ರತಿಯೊಂದರಿಂದಲೂ ಒಂದೊಂದು ವಾಕ್ಯವನ್ನು ಆಯ್ದು ಕೊಂಡಿದ್ದಾರೆ.