ಶಬ್ದಮಣಿದರ್ಪಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೬ ನೇ ಸಾಲು:
 
==ಕೇಶಿರಾಜನ ಕಿರುಪರಿಚಯ/ಇತರ ಕೃತಿಗಳು==
'''ಕೇಶಿರಾಜ'''ನ ಕಾಲ ಸುಮಾರು ಕ್ರಿ.ಶ.[[೧೨೬೦]]. ಈತನು [[ಜನ್ನ]]ನ ಸೋದರಳಿಯ.ಪ್ರಸಿದ್ಧ ಕವಿ ಹಾಗೂ ವಿದ್ವಾಂಸರ ಮನೆತನಕ್ಕೆ ಸೇರಿದವನು. ಈತನ ತಂದೆ ಹಳಗನ್ನಡ ಕಾವ್ಯ ಸಂಕಲನ ಗ್ರಂಥವಾದ "ಸೂಕ್ತಿಸುಧಾರ್ಣವ"ದ ಕರ್ತೃ ಯೋಗಿಪ್ರವರ ಚಿದಾನಂದ ಮಲ್ಲಿಕಾರ್ಜುನ; ತಾಯಿಯ ತಂದೆ ಕವಿಯೂ ಯಾದವಕಟಕಾಚಾರ್ಯನೂ ಆಗಿದ್ದ "ಸುಮನೋಬಾಣ" ಎಂದು ಶಬ್ದಮಣಿದರ್ಪಣದ ಆದಿಯಲ್ಲಿ ಕೇಶಿರಾಜನೇ ಹೇಳಿದ್ದಾನೆ.<br /> [[:ವರ್ಗ:ಕನ್ನಡ ವ್ಯಾಕರಣ|ವ್ಯಾಕರಣ]]ವನ್ನು ವಿವರಿಸುವ [[ಶಬ್ದಮಣಿದರ್ಪಣ]] ಈತನ ಪ್ರಖ್ಯಾತ ಕೃತಿ. <br />
 
ಕವಿ ಸುಮನೋಬಾಣನ ಯಾ<br />
-ದವಕಟಕಾಚಾರ್ಯನೆಸೆವ ದೌಹಿತ್ರನೆ ನಾಂ|<br />
ಕವಿ ಕೇಶವನೆಂ ಯೋಗಿ<br />
ಪ್ರವರಚಿದಾನಂದ ಮಲ್ಲಿಕಾರ್ಜುನ ಸುತನೆಂ||<br />
(ಶಬ್ದಮಣಿದರ್ಪಣ-ಪೀಠಿಕೆ-೨)<br />
 
ಸುಮನೋಬಾಣಾನು ಇಮ್ಮಡಿ ನರಸಿಂಹನ ಆಸ್ಥಾನದಲ್ಲಿದ್ದ.(೧೨೩೦) ಅವನ ಅನಂತನಾಥಪುರಾಣದಲ್ಲಿ ಅದರ ಸೂಚನೆಯಿದೆ. ಕೇಶಿರಾಜ ಚೋಳರಾಜನಾದ ಇಮ್ಮಡಿ ನರಸಿಂಹನ ಹಗೂ ಅವನ ಮಗ ಸೋಮೇಶ್ವರನ ಆಳಿಕೆಯಲ್ಲಿದ್ದನೆಂದು ವಿದ್ವಾಂಸರು ಹೇಳುತ್ತಾರೆ. ಇಮ್ಮಡಿ ನರಸಿಂಹನ ಆಳ್ವಿಕೆಯಕಾಲ ೧೨೨೦-೩೮. ಅಲ್ಲದೇ ಅವನ ಮಗನಾದ ಸೋಮೇಶ್ವರನ ಕಾಲ ೧೨೩೩-೬೭. ಈ ಕಾಲಘಟ್ಟದಲ್ಲಿಯೇ ಕೇಶಿರಾಜನ ಶಬ್ದಮಣಿದರ್ಪಣ ರಚನೆಯಾದದ್ದು.
 
ಈತನ ಇತರ ಕೃತಿಗಳು: ಪ್ರಬೋಧಚಂದ್ರ, ಚೋಳಪಾಲಕ ಚರಿತ, ಕಿರಾತ, ಸುಭದ್ರಾ ಹರಣ, ಶ್ರೀ ಚಿತ್ರಮಾಲೆ. ಆದರೆ ಇವು ಯಾವುವೂ ಪ್ರಸ್ತುತ ಲಭ್ಯವಿಲ್ಲವಾಗಿವೆ.
 
==ಶಬ್ದಮಣಿದರ್ಪಣ-ನಲ್ನುಡಿಗನ್ನಡಿ ==
"https://kn.wikipedia.org/wiki/ಶಬ್ದಮಣಿದರ್ಪಣ" ಇಂದ ಪಡೆಯಲ್ಪಟ್ಟಿದೆ