ಶಬ್ದಮಣಿದರ್ಪಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩ ನೇ ಸಾಲು:
*ಕೇಶಿರಾಜ ತನ್ನ ವ್ಯಾಕರಣಕ್ಕೆ ಶ್ರೀವಿಜಯನಿಂದಿಡಿದು ಪಂಪನವರೆಗೆ ಸುಮಾರು ೪೦೦ ವರ್ಷಗಳ ಕಾಲದ ಭಾಷೆಯನ್ನು ಆಧರಿಸಿರುವನು. ಜೊತೆಗೆ ತನ್ನ ವ್ಯಾಕೆರಣಕ್ಕೆ ಗಜಗ, ಗುಣನಂದಿ, ಮನಸಿಜ, ಅಸಗ, ಚಂದ್ರಭಟ್ಟ, ಗುಣವರ್ಮ, ಪೊನ್ನ, ಸುಜನೋತ್ತಂಸ, ರನ್ನ, ನಾಗವರ್ಮ, ನಾಗಚಂದ್ರ, ನೇಮಿಚಂದ್ರ, ಹಂಸರಾಜ, ಬ್ರಹ್ಮಶಿವ ಮೊದಲಾದ ಕವಿಗಳ, ವೈಯಾಕರಣರ ಗ್ರಂಥಗಳಿಂದ ಉದಾಹರಣೆಗಳನ್ನು ತೆಗೆದುಕೊಂಡಿದ್ದಾನೆ.
== ಮಣಿದರ್ಪಣ-ನಲ್ನುಡಿಗನ್ನಡಿ ==
*ಶ್ರೀ ಕೇಶೀರಾಜರ ಶಬ್ದ ಮಣಿದರ್ಪಣಕ್ಕೆ ೯೮೫ ಪುಟದ ವಿಸ್ತೃತವಾದ ವ್ಯಾಖ್ಯಾನವನ್ನು, ಬೆಂಗಳೂರು ಸರ್ಕಾರಿ ವಾಣಿವಲಾಸ ಜೂನಿಯರ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀ ಭುವನಹಳ್ಳಿ ಪದ್ಮನಾಭಶರ್ಮರು ೧೯೭೫/1975 ರಲ್ಲಿ ಬರೆದು ೧೯೭೬ ರಲ್ಲಿ ಪ್ರಕಟಿಸಿದ್ದಾರೆ ಅದನ್ನು ಬಹಳಷ್ಟು ವಿದ್ವಾಂಸರು ಗಮನಿಸಿದಂತೆ ಕಾಣುವುದಿಲ್ಲ.. (ಅವರೇ ಶ್ರೀಮದ್ ಭಟ್ಟಾಕಲಂಕದೇವ ವಿರಚತ ಕರ್ನಾಟಕ ಶಬ್ದಾನುಶಾಸನಕ್ಕೆ ವ್ಯಾಖ್ಯನ ಬರದು, ೧೯೬೭ರಲ್ಲಿ ಪ್ರಕಟಿಸಿದ್ದಾರೆ) ಅದರ ಬಗ್ಗೆ ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಜಿ. ನಾರಾಯಣ , (ಮಾಜಿ ಬೆಂಗಳೂರು ಮೇಯರ್) ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು,ಅದೇ ಗ್ರಂಥದಲ್ಲಿ ಬರೆದ, ಅವರ ಅಭಿಪ್ರಾಯವನ್ನು ನೋಡಿದರೆ ಗ್ರಂಥದ ಪರಿಚಯ ಸಾಮಾನ್ಯ ಮಟ್ಟಗೆ ತಿಳಿಯುವುದು.
{| class="wikitable"
|-
|:: '''ಅಂದಿನ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಜಿ. ನಾರಾಯಣ ಅವರ ಅಭಿಪ್ರಾಯ''' ---ಹಳಗನ್ನಡದ ಅಧಿಕೃತ ಸ್ವಭಾವವನ್ನು ಗುರುತಿಸಬೇಕಾದರೆ ಕೇಶಿರಾಜರ ಸಹಾಯವಿಲ್ಲದೆ ಆಗುವುದಿಲ್ಲ.---ಈ ಕಾರಣದಿಂದಲೇ ಭಾಷಾವಿದ್ವಾಂಸರು ಶಬ್ದಮಣಿದರ್ಪಣವನ್ನು ಅಧಿಕೃತಗ್ರಂಥವಾಗಿಅಧಿಕೃತ ಗ್ರಂಥವಾಗಿ ಉಳಿಸಿಕೊಂಡು ಬಂದಿದ್ದಾರೆ.---ಇದರ ಇನ್ನೂ ಹಲವಾರು ಪ್ರಕಟಣೆಗಳು ಈಗಾಗಲೇಬಂದಿವೆ. --- ಶ್ರೀ ಭುವನಹಳ್ಳಿ ಪದ್ಮನಾಭಶರ್ಮರು ಕನ್ನಡ ಪಂಡಿತರು, ವಿದ್ವಾಂಸರು, ಸಂಸ್ಕೃತಾದಿ ಹಲವು ಭಾಷೆಗಳನ್ನು ಬಲ್ಲವರು, ಅವರು ತಮ್ಮದೇ ಆದ '''ನಲ್ನುಡಿಗನ್ನಡಿ''' ಎಂಬ ವ್ಯಾಖ್ಯಾನ ಸಹಿತವಾಗಿ ಶಬ್ದಮಣಿದರ್ಪಣದ ಹೊಸ ಆವೃತ್ತಿಯನ್ನು ತಂದಿದ್ದಾರೆ . ಅವರು ಈ ವ್ಯಾಕರಣದ ಅಭ್ಯಾಸ ಎಲ್ಲರಿಗೂ ಸುಲಭವಾಗಲಿ ಎಂದು ಸರಳವಾಗಿ ವಿಷಯಗಳನ್ನು ನಿರೂಪಿಸಿ, ಪ್ರತಿಸೂತ್ರಕ್ಕೆ ಪದವಿಭಾಗ, ಪದಾನ್ವಯ, ಅನ್ವಾನುಕ್ರಮವಾದ ಅರ್ಥ, ಕೇಶಿರಾಜರ ವೃತ್ತಿ, ಅದಕ್ಕೆ ಕನ್ನಡದಲ್ಲಿ ವಿವರಣ ತ್ಮಕವಾದವಿವರಣಾತ್ಮಕವಾದ ಅರ್ಥ, ನಿಟ್ಟೂರುನಂಜಯ್ಯನನಿಟ್ಟೂರು ನಂಜಯ್ಯನ ವ್ಯಾಖ್ಯಾನ, ಉದಾಹರಣೆಗಳು, ಭಾಷಾಭೂಷಣ ಇತ್ಯಾದಿ ಇತರ ವ್ಯಾಕರಣಗಳ ಸೂತ್ರಗಳ ಅನ್ವಯ, ಮತ್ತು ಕಠಿಣ ಶಬ್ದಗಳ ಅರ್ಥ, ಮತ್ತುವಿಶೇಷಮತ್ತು ವಿಶೇಷ ವಿಷಯಗಳು,(ಕೊನೆಯಲ್ಲಿ ಃಈಗೆವಿಷಯ ಸೂಚಿ-ಪರಿಶಿಷ್ಟ) ಹೀಗೆ ವಿವರಣೆ --ನೀಡಿದ್ದಾರೆ . ಭೂಮಿಕೆ (ಪೀಠಿಕೆ) ಭಾಗದಲ್ಲಿ ಭಾಎಭಾಷೆ ಮತ್ತು-- ಅದರ ವಿಷಯಗಳ ವ್ಯಾಕರಣ ಅಭ್ಯಾಸಕ್ಕೆ ಬೇಕಾದ ಎಲ್ಲಾ ವಿಚಾರಗಳನ್ನೂ ಸಂಗ್ರಹಿಸಿ ಕೊಟ್ಟಿದ್ದಾರೆ ಇದೊಂದು ಉಪಯುಕ್ತ ಪ್ರಕಟಣೆ. ಅಭಿಪ್ರಾಯ: (ಶ್ರೀ) ಜಿ. ನಾರಾಯಣ , (ಮಾಜಿ ಬೆಂಗಳೂರು ಮೇಯರ್) ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ ಬೆಂಗಳೂರು ; (೧೯೭೫ )
|}
 
"https://kn.wikipedia.org/wiki/ಶಬ್ದಮಣಿದರ್ಪಣ" ಇಂದ ಪಡೆಯಲ್ಪಟ್ಟಿದೆ