ಆಕಾಶನಗರ ಚರ್ಚುಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಹೊಸ ಪುಟ: ಬೆಂಗಳೂರಿನ ಕೃಷ್ಣರಾಜಪುರ ರೈಲುನಿಲ್ದಾಣಕ್ಕೆ ಸಮೀಪವಿರುವ ಉದಯನಗರ]ದ ಫಾತ... |
( ಯಾವುದೇ ವ್ಯತ್ಯಾಸವಿಲ್ಲ )
|
೧೯:೪೬, ೧೮ ಮೇ ೨೦೧೪ ನಂತೆ ಪರಿಷ್ಕರಣೆ
ಬೆಂಗಳೂರಿನ ಕೃಷ್ಣರಾಜಪುರ ರೈಲುನಿಲ್ದಾಣಕ್ಕೆ ಸಮೀಪವಿರುವ ಉದಯನಗರ]ದ ಫಾತಿಮಾ ಶಾಲೆಯ ಸಭಾಂಗಣದಲ್ಲಿ ಭಾನುವಾರ ಮತ್ತು ಹಬ್ಬದ ದಿನಗಳಲ್ಲಿ ರಾಮಮೂರ್ತಿನಗರದ ಪವಿತ್ರ ಕುಟುಂಬ ದೇವಾಲಯದಿಂದ ಗುರುಗಳು ಬಂದು ಬಲಿಪೂಜೆಗಳನ್ನು ಅರ್ಪಿಸುತ್ತಿದ್ದರು. ಆಗ ಇದನ್ನು ನಿತ್ಯ ಸಹಾಯ ಮಾತೆ ಉಪ ಧರ್ಮಕೇಂದ್ರವೆಂದು ಕರೆಯುತ್ತಿದ್ದರು. ಫಾದರ್ ಚಿನ್ನಪ್ಪನ್ ಅವರು ಬಿ ನಾರಾಯಣಪುರದ ಆಕಾಶನಗರದಲ್ಲಿ ಜಮೀನನ್ನು ಖರೀದಿಸಿದ ಮೇಲೆ ೨೦೦೩ರಲ್ಲಿ ಮಹಾಧರ್ಮಾಧ್ಯಕ್ಷ ಇಗ್ನೇಷಿಯಸ್ ಪಿಂಟೋ ಅವರು ಹೊಸ ದೇವಾಲಯದ ಶಂಕುಸ್ಥಾಪನೆಯನ್ನು ನೆರವೇರಿಸಿದರು. ೨೦೦೫ರಲ್ಲಿ ನಿತ್ಯಸಹಾಯಮಾತೆಯಾಲಯದ ಕೆಲಸ ಪೂರ್ಣವಾಗಿ ಮಹಾಧರ್ಮಾಧ್ಯಕ್ಷ ಬೆರ್ನಾಡ್ ಮೊರಾಸ್ ಅವರು ಉದ್ಘಾಟಿಸಿ ಪವಿತ್ರೀಕರಿಸಿ ಸ್ವತಂತ್ರ ಧರ್ಮಕೇಂದ್ರವನ್ನಾಗಿ ಘೋಷಿಸಿದರು.