ಶ್ರೀರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
|||
೧ ನೇ ಸಾಲು:
'''ಆದ್ಯ ರಂಗಾಚಾರ್ಯ ( ಶ್ರೀರಂಗ )''' (೧೯೦೪ - ೧೯೮೪) - ಕನ್ನಡದ
=='''ಸಾಹಿತ್ಯ'''==
ಶ್ರೀರಂಗರ ಸಾಹಿತ್ಯ ಅಪಾರ ಹಾಗು ವೈವಿಧ್ಯಮಯ. ಇವರು ೩೪ ದೊಡ್ಡ ನಾಟಕಗಳನ್ನು, ೫೦ ಏಕಾಂಕಗಳನ್ನು, ೧೦ ಕಾದಂಬರಿಗಳನ್ನು, ೧೨೦ ಹಾಸ್ಯ ಪ್ರಬಂಧಗಳನ್ನು ಹಾಗು ೯ ಗಂಭೀರ ಗ್ರಂಥಗಳನ್ನು ರಚಿಸಿದ್ದಾರೆ. [[ಧಾರವಾಡ|ಧಾರವಾಡದ]] ಪ್ರಸಿದ್ಧ ನಿಯತಕಾಲಿಕ "'ಜಯಂತಿ"'ಗೆ ಸತತ ೩ ವರ್ಷಗಳವರೆಗೆ ಅಂಕಣ ಬರೆದಿದ್ದಾರೆ. ವಿವಿಧ ಪತ್ರಿಕೆಗಳಲ್ಲಿ ೫೦ಕ್ಕೂ ಹೆಚ್ಚು ಬಿಡಿ ಲೇಖನಗಳನ್ನು ಬರೆದಿದ್ದಾರೆ. '''ಭರತನ ನಾಟ್ಯಶಾಸ್ತ್ರ''' ಇವರ ಪ್ರಸಿಧ್ಧ ಕೃತಿ.
=='''ನಾಟಕಗಳು'''==
* ಸ್ವಾರ್ಥತ್ಯಾಗ
* ಧರ್ಮವಿಜಯ
* ಉದರ ವೈರಾಗ್ಯ
* ಹರಿಜನ್ವಾರ
* ಸಂಸಾರಿಗ ಕಂಸ
* ಪ್ರಪಂಚ ಪಾಣಿಪತ್ತು
* ಜರಾಸಂಧಿ
* ವೈದ್ಯರಾಜ
* ದರಿದ್ರನಾರಾಯಣ
* ನರಕದಲ್ಲಿ ನರಸಿಂಹ
* ಗೆಳೆಯ ನೀನು ಹಳೆಯ ನಾನು
* ಶೋಕಚಕ್ರ
* ಪುರುಷಾರ್ಥ
* ಜೀವನ ಜೋಕಾಲಿ
* ಅಧಿಕ ಮಾಸ
* ಮುಕ್ಕಣ್ಣ ವಿರಾಟಪುರುಷ
* ಇದೇ ಸಂಸಾರ
* ಸಂಧ್ಯಾಕಾಲ
* ಕತ್ತಲೆ ಬೆಳಕು
* ನೀ ಮಾಯೆಯೊಳಗೋ? ನಿನ್ನೊಳು ಮಾಯೆಯೋ?
* ಗುಮ್ಮನೆಲ್ಲಿಹ ತೋರಮ್ಮ- ಇವು ೧೯೫೯ನೆಯ ಇಸವಿಗಿಂತ ಮೊದಲು ಶ್ರೀರಂಗರು ಬರೆದ ನಾಟಕಗಳು. " ಕತ್ತಲೆ ಬೆಳಕು" ನಾಟಕದ ನಂತರ ಅವರ ಬರವಣಿಗೆಯಲ್ಲಿ ಹೊಸ ಬದಲಾವಣೆ ಬಂದಿತು.
* ಕೇಳು ಜನಮೇಜಯ
* ಹುಟ್ಟಿದ್ದು ಹೊಲೆಯೂರು
* ಸಿರಿಪುರಂದರ
* ಸಂಜೀವನಿ
* ಸಾವಿತ್ರಿ
* ತೇಲಿಸೊ ರಂಗ,ಇಲ್ಲ ಮುಳುಗಿಸೊ
* ದಾರಿ ಯಾವುದಯ್ಯಾ ವೈಕುಂಠಕೆ?
* ರಂಗಭಾರತ
* ಸ್ವರ್ಗಕ್ಕೆ ಮೂರೆ ಬಾಗಿಲು - ಇವು ೧೯೫೯ರ ನಂತರದ ಅವರ ಶ್ರೇಷ್ಠ ನಾಟಕಗಳು.
ನಾಟಕಗಳನ್ನಲ್ಲದೆ ಶ್ರೀರಂಗರು ಹರಟೆಗಳನ್ನು ಹಾಗು ಕಾದಂಬರಿಗಳನ್ನು ಸಹ ಬರೆದಿದ್ದಾರೆ.ಇವರ ಕಾದಂಬರಿಗಳಲ್ಲಿ ಬರುವ ಪ್ರಜ್ಞಾಪ್ರವಾಹ ತಂತ್ರವು ಕನ್ನಡ ಕಾದಂಬರಿಗಳಲ್ಲಿ ವಿಶಿಷ್ಟವಾದದ್ದಾಗಿದೆ.ಭರಮಪ್ಪನ ಭೂತ,ವಿಶ್ವಾಮಿತ್ರನ ಸೃಷ್ಟಿ, ಕುಮಾರ ಸಂಭವ, ಅನಾದಿ, ಪ್ರಕೃತಿ ([[ಪ್ರಕೃತಿ ಪುಸ್ತಕದ ವಿಮರ್ಶೆ]]) ಮೊದಲಾದವು ಶ್ರೀರಂಗರ ಕಾದಂಬರಿಗಳು."ಗೀತಾ ಗಾಂಭೀರ್ಯ", "ಭಾರತೀಯ ರಂಗಭೂಮಿ", "ಕಾಳಿದಾಸ" ಮೊದಲಾದವು ಇವರ ಗಂಭೀರ ಗ್ರಂಥಗಳು. ಅಲ್ಲದೆ ಕಮಾಲ್ ಪಾಶಾ ಹಾಗು ಜವಾಹರಲಾಲ ನೆಹರೂರವರ[http://en.wikipedia.org/wiki/Jawaharlal_Nehru] ಚರಿತ್ರೆಯನ್ನು ಸಹ ಶ್ರೀರಂಗರು ಬರೆದಿದ್ದಾರೆ. ಇವರು " ಆಹ್ವಾನ" ಎನ್ನುವ ಕವನ ಸಂಕಲನವನ್ನೂ ಸಹ ರಚಿಸಿದ್ದಾರೆ.▼
▲ಅವರ ನಾಟಕಗಳನ್ನು ಹೆಚ್ಚಾಗಿ ಕಲಾವಿಲಾಸಿ ನಾಟಕಕಾರರು ಆಡುತ್ತಲಿದ್ದಾರೆ. (ಅವರೇ ಸ್ವತಃ [[೧೯೩೩]]ರಲ್ಲಿ ’ಕಲಾವಿಲಾಸಿ ನಾಟ್ಯಸಂಘ’ ಎನ್ನುವ ಸಂಸ್ಥೆಯನ್ನು [[ಧಾರವಾಡ|ಧಾರವಾಡದಲ್ಲಿ]] ಸ್ಥಾಪಿಸಿದರು.) " ದಾರಿ ಯಾವುದಯ್ಯಾ ವೈಕುಂಠಕೆ?" ನಾಟಕವು [[ಬಿ.ವಿ. ಕಾರಂತ|ಬಿ.ವಿ. ಕಾರಂತರಿಂದ]] ರಂಗದ ಮೇಲೆ ತರಲ್ಪಟ್ಟಿದೆ. ನಾಟಕಗಳನ್ನಲ್ಲದೆ ಶ್ರೀರಂಗರು ಹರಟೆಗಳನ್ನು ಹಾಗು ಕಾದಂಬರಿಗಳನ್ನು ಸಹ ಬರೆದಿದ್ದಾರೆ. ಇವರ ಕಾದಂಬರಿಗಳಲ್ಲಿ ಬರುವ ಪ್ರಜ್ಞಾಪ್ರವಾಹ ತಂತ್ರವು ಕನ್ನಡ ಕಾದಂಬರಿಗಳಲ್ಲಿ ವಿಶಿಷ್ಟವಾದದ್ದಾಗಿದೆ. ಭರಮಪ್ಪನ ಭೂತ, ವಿಶ್ವಾಮಿತ್ರನ ಸೃಷ್ಟಿ, ಕುಮಾರ ಸಂಭವ, ಅನಾದಿ, ಪ್ರಕೃತಿ ([[ಪ್ರಕೃತಿ ಪುಸ್ತಕದ ವಿಮರ್ಶೆ]]) ಮೊದಲಾದವು ಶ್ರೀರಂಗರ ಕಾದಂಬರಿಗಳು. "ಗೀತಾ ಗಾಂಭೀರ್ಯ", "ಭಾರತೀಯ ರಂಗಭೂಮಿ", "ಕಾಳಿದಾಸ" ಮೊದಲಾದವು ಇವರ ಗಂಭೀರ ಗ್ರಂಥಗಳು. ಅಲ್ಲದೆ ಕಮಾಲ್ ಪಾಶಾ ಹಾಗು ಜವಾಹರಲಾಲ ನೆಹರೂರವರ [http://en.wikipedia.org/wiki/Jawaharlal_Nehru] ಚರಿತ್ರೆಯನ್ನು ಸಹ ಶ್ರೀರಂಗರು ಬರೆದಿದ್ದಾರೆ. ಇವರು " ಆಹ್ವಾನ" ಎನ್ನುವ ಕವನ ಸಂಕಲನವನ್ನೂ ಸಹ ರಚಿಸಿದ್ದಾರೆ.
=='''ರಾಜಕೀಯ ಜೀವನ'''==
ಶ್ರೀರಂಗರು ಪ್ರತ್ಯಕ್ಷವಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಲಿಲ್ಲ. ಆದರೆ ಸ್ವಾತಂತ್ರ್ಯ ಹೋರಾಟಗಾರರಿಗೆ ಇವರ ಅಪ್ರತ್ಯಕ್ಷ ನೆರವು ಸದಾ ಸಿದ್ಧವಿರುತ್ತಿತ್ತು. ಕೆಲವು ಭೂಗತ ಹೋರಾಟಗಾರರು ಇವರ ಮನೆಯಲ್ಲಿ ಆಶ್ರಯ ಹಾಗು ವೈದ್ಯಕೀಯ ನೆರವು ಪಡೆದಿದ್ದಾರೆ. ಚಳವಳಿ ಮುಂದುವರೆಸಲು ಧನಸಹಾಯ ಪಡೆದಿದ್ದಾರೆ. ಸ್ವತಃ ಶ್ರೀರಂಗರು [[ಕರ್ಮವೀರ]] ವಾರಪತ್ರಿಕೆಯಲ್ಲಿ ರಾಜಕೀಯ ಅಗ್ರಲೇಖನಗಳನ್ನು ಬರೆದಿದ್ದಾರೆ. ತಮ್ಮ ಮನೆಯಿಂದಲೇ ‘ಬುಲೆಟಿನ್’ ಸೈಕ್ಲೊಸ್ಟೈಲ್ ಮಾಡಿಸಿ ಕಳುಹಿಸಿ ಕೊಟ್ಟಿದ್ದಾರೆ.
=='''ಕರ್ನಾಟಕ ಏಕೀಕರಣ'''==
ಕರ್ನಾಟಕ ಏಕೀಕರಣದಲ್ಲಿ ಇವರು ಅತ್ಯಂತ ಮಹತ್ವದ ಪಾತ್ರವನ್ನು ಮಾಡಿದ್ದಾರೆ. [[ಕರ್ನಾಟಕ ವಿದ್ಯಾವರ್ಧಕ ಸಂಘ| ಕರ್ನಾಟಕ ವಿದ್ಯಾವರ್ಧಕ ಸಂಘವು]] [[೧೯೦೬]]ರಲ್ಲಿಯೇ ಕರ್ನಾಟಕ ಏಕೀಕರಣದ ಗೊತ್ತುವಳಿಯನ್ನು ಸ್ವೀಕರಿಸಿತ್ತು. [[೧೯೪೪]]ರಲ್ಲಿ ಕೆಲವು ಗೆಳೆಯರ ಜೊತೆಗೆ ಕೂಡಿಕೊಂಡು, ಶ್ರೀರಂಗರು ಅಖಿಲ ಕರ್ನಾಟಕ ಏಕೀಕರಣ ಸಮಿತಿಯೊಂದನ್ನು ಸ್ಥಾಪಿಸಿದರು. ಈ ಸಮಿತಿಗೆ ಕರ್ನಾಟಕದ ಎಲ್ಲ ಭಾಗಗಳಿಂದಲೂ ಪ್ರತಿನಿಧಿಗಳನ್ನು ಆಯೋಜಿಸಲಾಗಿತ್ತು. [[೧೯೪೬]]ರ [[ಡಿಸೆಂಬರ್|ಡಿಸೆಂಬರದಲ್ಲಿ]] ಶ್ರೀರಂಗರು ಪ್ರಧಾನ ಮಂತ್ರಿ ಜವಾಹರಲಾಲ ನೆಹರೂ[http://en.wikipedia.org/wiki/Jawaharlal_Nehru]ರನ್ನು ಭೇಟಿಯಾಗಿ ಭಾಷಾವಾರು ಪ್ರಾಂತಗಳ ರಚನೆಗಾಗಿ ಉಪಸಮಿತಿಯ ರಚನೆ ಹಾಗು ಅದರಲ್ಲಿ ಕರ್ನಾಟಕ ಏಕೀಕರಣದ ವಿಷಯವು ಒಳಗೊಳ್ಳುವ ನಿರ್ಣಯದಲ್ಲಿ ಮಹತ್ವದ ಪಾತ್ರವಹಿಸಿದರು. ಆದರೆ [[ಭಾರತ|ಭಾರತಕ್ಕೆ]] ಸ್ವಾತಂತ್ರ್ಯ ದೊರೆತ ಬಳಿಕ [[೧೯೪೭]] [[ಸೆಪ್ಟೆಂಬರ್| ಸೆಪ್ಟೆಂಬರದಲ್ಲಿ]] ರಾಜಕೀಯ ವ್ಯಕ್ತಿಗಳ ಬೇರೊಂದು ಸಮಿತಿಯು ಅಸ್ತಿತ್ವಕ್ಕೆ ಬಂದಿತು. ಅಲ್ಲದೆ, ಶ್ರೀರಂಗರನ್ನು [[ಧಾರವಾಡ| ಧಾರವಾಡದಿಂದಲೇ]] ಹೊರಗೋಡಿಸುವ ಪ್ರಯತ್ನಗಳು ನಡೆದವು. ಆತ್ಮಾಭಿಮಾನಿ ಶ್ರೀರಂಗರು [[೧೯೪೮]]ರಲ್ಲಿ ನೌಕರಿಗೆ ರಾಜೀನಾಮೆ ನೀಡಿದರು.<ref>[https://kannada.yahoo.com/%E0%B2%B6-%E0%B2%B0-%E0%B2%B0-%E0%B2%97%E0%B2%B0-%E0%B2%B8-%E0%B2%AE%E0%B2%B0%E0%B2%A3-%E0%B2%AF-%E0%B2%A6-054057913.html 'ಶ್ರೀರಂಗರ ಸ್ಮರಣೆಯಿಂದ ಧಾರವಾಡ ನೆನಪು ಸಾಧ್ಯ': ಡಾ|ಬಿದರಕುಂದಿ] </ref>
Line ೪೭ ⟶ ೭೫:
=='''ಗೌರವ'''==
* ೧೯೫೪ರಲ್ಲಿ ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ '''ಶ್ರೀರಂಗ'''ರು ಅಧ್ಯಕ್ಷರಾಗಿದ್ದರು.
* [[೧೯೬೩]]ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ Playwright Award
* [[೧೯೬೮]]ರಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್
* [[೧೯೭೨]]ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ
* [[೧೯೭೨]]ರಲ್ಲಿ ರಾಜ್ಯ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ
* [[೧೯೭೨]]ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ
* [[ಕರ್ನಾಟಕ ವಿಶ್ವವಿದ್ಯಾಲಯ]] ನೀಡಿದ ಗೌರವ ಡಿ.ಲಿಟ್* [[ಮೈಸೂರು ವಿಶ್ವವಿದ್ಯಾಲಯ]] ನೀಡಿದ ಗೌರವ ಡಿ.ಲಿಟ್
ಹೆಸರಾಂತ ಭಾರತೀಯ ಆಂಗ್ಲ ಲೇಖಕಿ '''ಶಶಿ ದೇಶಪಾಂಡೆ''' ಶ್ರೀರಂಗರ ಮಗಳು. [http://en.wikipedia.org/wiki/Shashi_Deshpande] ೧೯೮೪ರಲ್ಲಿ ಶ್ರೀರಂಗರು ಬೆಂಗಳೂರಿನಲ್ಲಿ ನಿಧನರಾದರು.
=='''ಹೊರಗಿನ ಕೊಂಡಿಗಳು'''==
* [http://www.dli.gov.in/cgi-bin/metainfo.cgi
==ಉಲ್ಲೇಖಗಳು==
<References />
[[ವರ್ಗ:ಲೇಖಕರು]]
[[ವರ್ಗ:ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು]]
|