ಪ್ರಗತಿಶೀಲ ಭಾರತದಲ್ಲಿ ಶಿಕ್ಷಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary |
No edit summary |
||
೫೦ ನೇ ಸಾಲು:
ಒಂಬತ್ತು ಮತ್ತು ಹತ್ತನೆಯ ತರಗತಿಗಳಲ್ಲಿ ಈ ಕೆಳಗಿನ ನಿರ್ದಿಷ್ಟ ಉದ್ದೇಶಗಳಿದ್ದವು.
ಅ. ವಿದ್ಯಾರ್ಥಿಗಳು ಕಲಸಕ್ಕೆ ತೊಡಗುವಂತೆ ಮಾಡುವ ಅಥವಾ ಶಿಕ್ಷಣವನ್ನು ಮುಂದುವರೆಸುವಂತೆ ಮಾಡುವ, ಸಾಂಪ್ರಾಯಿಕ ಅಥವಾ ಅಸಂಪ್ರದಾಯಿಕ ರೀತಿಯಲ್ಲಿ ವೃತ್ತಿಪರ ಅಥವಾ ಸಾಮಾನ್ಯ ಶಿಕ್ಷಣವನ್ನು ಮುಂದುವರೆಸಲು ಅನುಕೂಲ ಆಗುವಂತಹ ಶಿಕ್ಷಣ ನೀಡುವುದು.
ಆ. ನಿತ್ಯ ಜೀವನದಲ್ಲಿಯ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಪರಿಹರಿಸಿಕೊಳ್ಳಲು ಸಾಧ್ಯವಾಗುವಂತೆ ನಿಸರ್ಗದ ಮೂಲಭೂತ ನಿಯಮಗಳನ್ನು ಅದರ ಕಾರ್ಯಗಳನ್ನು ತಿಳಿಸುವುದು.
ಇ. ಭಾರತಕ್ಕೆ ಸಂಬಂಧಪಟ್ಟಂತೆ ಮಾನವ ಮತ್ತು ಪರಿಸರ, ಭೌಗೋಲಿಕ, ಐತಿಹಾಸಿಕ, ಸಮಾಜಿಕ, ರಾಜಕೀಯ ಮತ್ತು ಆರ್ಥಿಕ ವಿಷಯಗಳ ಕುರಿತು ತಿಳಿಸುವುದು.
ಈ. ಕೆಲಸದ ಅಭ್ಯಾಸ ಮತ್ತು ಕೆಲಸದ ಕುರಿತು ಗೌರವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವುದು.
ಉ. ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಅಭಿರುಚಿಗಳನ್ನು ಕಂಡುಕೊಳ್ಳುವಲ್ಲಿ ಸಮರ್ಥಿಸುವದು.
ಊ. ದೈಹಿಕ ಸ್ವಾಸ್ಥ್ಯ ಮತ್ತು ಆರೋಗ್ಯ ಜೀವನಕ್ಕೆ ಅವಶ್ಯವಿರುವ ಜ್ಞಾನ ನೀಡುವುದು.
೯.ವೈಜ್ಞಾನಿಕ ರೀತಿಯ ಪರೀಕ್ಷೆಗಳು
ಬೋಧನೆಯ ಮಟ್ಟ ಮತ್ತು ಪರೀಕ್ಷಾ ಮಟ್ಟವನ್ನು ಹೆಚ್ಚಿಸುವ ದೃಷ್ಠಿಯಿಂದ ಪರೀಕ್ಷೆ ಮತ್ತು ಮೌಲ್ಯಮಾಪನಗಳನ್ನು ಆಧುನೀಕರಣಗೊಳಿಸುವುದು ಮತ್ತು ಸರಳಗೊಳಿಸುವುದು
ಅ. ವಿದ್ಯಾರ್ಥಿಗಳ ಆಸಕ್ತಿ ಮತ್ತು ಬೆಳವಣೆಗೆಯನ್ನು ಹೆಚ್ಚಿಸುವ ದೃಷ್ಠಿಯಿಂದ ನಿರಂತರ ಮೌಲ್ಯಮಾಪನ ಮಾಡಬೇಕೆ ಹೊರತು ವರ್ಷದ ಕೊನೆಗೆ ಮಾತ್ರವಲ್ಲ.
ಆ. ಶ್ರೇಣೆಗಳಲ್ಲಿ ಮೌಲ್ಯಮಾಪನ ಮಾಡಬೇಕು, ಅಂಕಗಳಲಲ್ಲ. ಉತ್ತೀರ್ಣ ಅಥವಾ ಅನುತ್ತೀರ್ಣ ಎಂದು ತಿಳಿಸುವದಕ್ಕಿಂತ ವಿದ್ಯಾರ್ಥಿಗಳ ಸಾಮರ್ಥ್ಯ ಅಭಿರುಚಿಗಳಿಗನುಗುಣವಾಗಿ ಸಮಾಜದಲ್ಲಿ ತಮ್ಮ ಸ್ಥಾನ ಕಂಡುಕೊಳ್ಳಲು ಸಹಾಯ ಮಾಡಬೇಕು. ಬೋಧಿಸುವ ವಿಷಯಗಳು ಇವುಗಳಿರಬೇಕೆಂದು ೧೦+೨+೩ ಶಿಕ್ಷಣ ಪದ್ಧತಿಯು ತಿಳಿಸಿದೆ, ಒಂದು ಮತ್ತು ಎರಡನೇ ವಿಷಯಗಳು, ಭಾಷೆಗಳು- ಹಿಂದಿ, ಇಂಗ್ಲಿಷ್, ಆಸ್ಸಾಮಿ, ಪಂಜಾಬಿ, ಸಿಂಧಿ, ಗುಜರಾತಿ, ಕನ್ನಡ, ಮರಾಠಿ, ಮಲಯಾಳಮ್, ತಲಗು, ಉರ್ದು, ಮತ್ತು ಮೂರನೆ ವಿಷಯ ಗಣೆತ, ನಾಲ್ಕನೇ ವಿಷಯ ವಿಜ್ಞಾನ ೧.ಭೌತಶಾಸ್ತ್ರ, ೨.ರಸಾಯನಶಾಸ್ತ್ರ ೩.ಜೀವಶಾಸ್ತ್ರ, ಐದನೇಯ ವಿಷಯ ಸಾಮಾಜಿಕ ವಿಜ್ಞಾನ- ಇತಿಹಾಸ, ಪೌರನೀತಿ, ಭೂಗೋಳ, ಅರ್ಥಶಾಸ್ತ್ರ, ವಾಣೆಜ್ಯ, ಆರನೇಯ ವಿಷಯ ಕಾರ್ಯಾನುಭವ, ತೋಟಗಾರಿಕೆ, ಬೀಜಗಳು ಉತ್ಪಾದನೆ, ಜೇನು ಸಾಕಾಣೆಕೆ, ಹೈನುಗಾರಿಕೆ, ರೇಷ್ಮೆ ಸಾಕಾಣೆಕೆ, ಮೀನುಗಾರಿಕೆ, ಮಡಕೆ ಮಾಡುವುದು, ಹೊಲಿಯುವುದು, ಗೊಂಬೆಗಳನ್ನು ತಯಾರಿಸುವುದು, ಮುದ್ರಣ ಕಲೆ ಮುಂತಾದವುಗಳು, ಏಳನೇ ವಿಷಯ- ಆರೋಗ್ಯ್ ಮತ್ತು ದೈಹಿಕ ಶಿಕ್ಷಣ, ಎಂಟನೇಯ ವಿಷಯ ಹೆಚ್ಚಿನ ಭಾಷೆಗಳು. ಆರಿಸಿಕೊಂಡ ಮೂರು ಭಾಷೆಗಳಲ್ಲಿ ಹಿಂದಿ ಇಂಗ್ಲಿಷನ್ನು ಕೊನೆಯ ಪಕ್ಷ ಎಂಟನೇಯ ತರಗತಿಯವರಗೆ ಅಭ್ಯಾಸಿಸಬೇಕು.
|