ಉಡುಪಿ ಬಿ.ಜಯರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
Yeshu.rash (ಚರ್ಚೆ | ಕಾಣಿಕೆಗಳು) No edit summary |
Yeshu.rash (ಚರ್ಚೆ | ಕಾಣಿಕೆಗಳು) No edit summary |
||
೨೬ ನೇ ಸಾಲು:
ಹೀಗೆ ಕಷ್ಟದಲ್ಲೆ ಬೆಳೆದ ಜಯರಾಮನಿಗೆ ತಂದೆಯ ಪ್ರೀತಿಯೇ ಅವರಿಗೆ ಸರ್ವಸ್ವ ವಾಗಿತ್ತು. ಹೀಗೆ ಹಾಡುತ್ತಾ ತಮ್ಮ ಸಂಗೀತ ಕಲಿಕೆಯ ವಿಭಾಗಗಳನ್ನು ಹಲವಾರು ವಾಧ್ಯಗಳನ್ನು ನುಡಿಸುವತ್ತ ಅಬ್ಯಾಸ ಮಾಡತೊಡಗಿದರು. ಅವರ ಬಾಲ್ಯದ ಗೆಳೆಯ ಪೇಜಾವರ ಮಠದ ವಿಶ್ವೆಶ್ವರ ತೀರ್ಥ ಸ್ವಾಮಿಜಿ ಸಹಪಾಠಿಯೂ ಹೌದು. ಇಬ್ಬರನ್ನು ಒಂದುಗೊಡಿಸಿದ್ದು ಸಂಗೀತವಂದರೆ ತಪ್ಪಾಗಲಾರದು. ಇವರು ಜೀವನದ ಮತ್ತೊಂದು ತಿರುವು ಬಾವ ಕೃಷ್ಣಕಾರಂತರು ಬಳಿ ಸೇರಿದ್ದು. ಇವರ ಅಕ್ಕ ಸುಶೀಲ ತಮ್ಮನ ಜೀವನಕ್ಕೆ ಎನಾದರು ದಾರಿ ಮಾಡಲೇಬೆಕೆಂಬ ಹಂಬಲದಿಂದ ಯಾರಿಗೂ ತಿಳಿಯದಂತೆ ದುಡ್ಡು ಹೊಂದಿಸಿ ತಮ್ಮನನ್ನು ತನ್ನ ತೀರಿ ಹೋದ ಸಹೋದರಿಯ ಗಂಡ ಕೃಷ್ಣಕಾರಂತರ ಹೂಟೆಲ್, ಅಲ್ಲಿದ್ದ ವಾಟರ್ ಫಾಲ್ಸ್ಸನಿಂದ ಅದ್ಬುತವಾಗಿ ನಡೆಯುತಿತ್ತು. ಕಾರಂತರು ಉದಾಸೀನ ಮಾಡದೆ ಜಯರಾಮರಿಗೆ ಆಶ್ರಯ ವಿತ್ತರು. ಆದರೆ ಜಯರಾಮರು ಸಿಕ್ಕ ಅವಕಾಶವನ್ನು ಸರಿಯಾಗಿಯೇ ಉಪಯೋಗಿಸಿಕೊಂಡು ಕಾರಂತರೇ ಸೈ ಎನ್ನುವಂತೆ ನಡೆದುಕೊಂಡರು. ಹಾಡುಗಾರಿಕೆಯನ್ನು ಎಷ್ಟೇ ನಿಷ್ಟೆಯಿಂದ ಹೊಟೆಲಿನ ಸಮಸ್ತ ಜವಾಬ್ದಾರಿ ಹೊತ್ತರು. ಹೀಗೆ ಇರುವಾಗ ಅವರ ಜೀವನದ ಮತ್ತೊಂದು ತಿರುವುತೆಗೆದುಕೊಂಡದ್ದು ಭಾವನ ಅಣ್ಣನ ಮಗ ಸೀತಾರಾಮ ಕಾರಂತರು ಜಯರಾಮನಿಗೆ ಸ್ನೇಹಿತ ಫಿಲಾಸಫರ್, ಗೈಡ್ ಎಲ್ಲವೂ ಆದರು.
==
ಜಯರಾಮರವರು ಮೊದಲಿಗೆ ಮೈಲಾಪುರದ
ಆನಂತರ ಜಯರಾಮರು 'ಸಿನ್ಹ 'ಎನ್ನುವ ಗುರುಗಳಿಂದ 'ಮಣಿಪುರಿ' ನೃತ್ಯವನ್ನು, [[ಕಥಕ್ಕಳಿ]] ನೃತ್ಯಶೈಲಿಯಲ್ಲಿ ಹೆಸರುವಾಸಿಯಾಗಿದ್ದ 'ಗೋಪಿನಾಥ್' ಅವರಲ್ಲಿ 'ಕಥಕಳೀ' ಶೈಲಿಯನ್ನು 'ಚೋಪ್ರಾ' ಅವರಿಂದ' ಪಂಜಾಬೀ' 'ಬಾಂಗ್ರ' ಪದ್ಧತಿಯನ್ನೂ ಅಭ್ಯಾಸಿಸಿದರು.'ಚಂದ್ರಲೇಖ' ಚಿತ್ರದ ಶೂಟಿಂಗ್ ಮುಗಿಯುವವೇಳೆಗೆ ಜಯರಾಮರು ಪ್ರಬುದ್ಧ ಭರಟನಾಟ್ಯ ಕಲಾವಿದರಾಗಿ' ರೂಪುಗೊಂಡಿದ್ದರು. ಹಲವಾರು ನೃತ್ಯ ಶೈಲಿಗಳ್ಳನ್ನು ತಿಳಿದಿದ್ದ ಜಯರಾಮರಿಗೆ ಎಷ್ಟೋ ಚಿತ್ರಗಳಲ್ಲಿ ನಿರ್ಧೇಶಿಸುವ ಅವಕಾಶ ದೊರೆಯಿತು.
==ನಟನೆಯ ಬಗೆಗಿನ ಆಸಕ್ತಿ==
೩೭ ನೇ ಸಾಲು:
==ದಾಂಪತ್ಯ ಜೀವನ ಮತ್ತು ಮಕ್ಕಳ ಪ್ರೀತಿ ==
ಈ ವೇಳೆಗಾಗಲೇ ಜಯರಾಮರಿಗೆ ಇಪ್ಪತ್ನಾಲ್ಕರ ಹರಯ. ಸಿನಿಮಾಗೆ ಪಾಲಾದರು ಅನ್ನುವ ತೀರ್ಮಾನಕ್ಕೆ ಮನೆಯವರೆಲ್ಲಾ ಬಂದಾಗಿತ್ತು. ಸಿನಿಮಾಗೆ ಸೇರಿದವರು ಬಹಳ ಬೇಗ ಹಾದಿಬಿಡುತ್ತಾರೆ ಎನ್ನುವ ಪುರಾತನ ವಾದನವನ್ನು ನಂಬಿದ್ದ ಜಯರಾಮರ ತಂದೆಯವರು ೧೯೫೪ರ ಜೂನ್ ೧೦ರಂದು ಜಯರಮರವರನ್ನು ಸರೋಜ ರವರ ಜೊತೆ ವಿವಾಹಮಾಡಿಸಿದರು.ಈ ದಂಪತಿಗಳಿಗೆ ೧೯೫೫ರಲ್ಲಿ ಒಂದು
==ಮಾರ್ಡನ್ ಥಿಯೇಟರ್ಸ್ನನಿಂದ ಆಹ್ವಾನ==
ಈ ವೇಗಾಗಲೇ ಸಿನಿಮಾ ಮಾಧ್ಯಮ ಜಯರಾಮರಲ್ಲಿದ ಪ್ರತಿಭೆಯನ್ನು ಗುರುತಿಸಿಯಾಗಿತ್ತು. ಹಲವಾರು ಹೆಸರಾಂತ ಸಂಸ್ಥೆಗಳು ಇವರಿಗೆ ಆಹ್ವಾನ ಕೊಡಲು ಆರಂಭಿಸಿದ್ದವು. ಅವುಗಳಲ್ಲಿ ಈ ಸಂಸ್ಥೆಯು ಒಂದಾಗಿತ್ತು. ಈ ಥಿಯೇಟರ್ಸ್ ಮಾಲಿಕರಾದ ಟಿ.ಆರ್.ಸುಂದರಂ ಆ ಕಾಲದಲ್ಲಿ ಓರ್ವ ಜನಪ್ರಿಯ ನಿರ್ಮಾಪಕರು. ತಮ್ಮ ಮಾರ್ಡನ್ ಸ್ಟ್ಡುಡಿಯೋವನ್ನು ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣಕ್ಕೆ ಬಾಡಿಗೆಗೂ ಕೊಡುತ್ತಿದ್ದರು. ಹಾಗೆಯೇ ತಮ್ಮ ಸ್ಟ್ಡುಡಿಯೋದಲ್ಲೆ ನಡೆಯುವ ಇತರ ಚಿತ್ರಗಳ ಚಿತ್ರೀಕರಣವನ್ನು ಶ್ರಧ್ಹೆಯಿಂದ ಗಮನಿಸುತ್ತಿದ್ದರು. ಹಾಗೆ ಗಮನಿಸುವಾಗ ಯಾವುದಾದರು ವಿಶೇಷ ಪ್ರತಿಭೆ ಕಂಡರೆ,ಆ ಪ್ರತಿಭೆಯನ್ನು ತಕ್ಷಣ ತಮ್ಮ ನಿರ್ಮಾಣಗಳಲ್ಲಿ ಬಳಸಿಕೊಳ್ಳುತ್ತಿದ್ದರು.ಅಂತಹ ಸಮಯದಲ್ಲಿ ಅವರಿಗೆ ಜಯರಾಮರು ಕೆಲಸದಲ್ಲಿ ತೋರಿಸುತ್ತಿದ್ದ ಆಸಕ್ತಿ ,ಅವರಲ್ಲಿದ್ದ ಅಗಾದವಾದ ಪ್ರತಿಭೆ ಎಲ್ಲವೂ ಬಹಳಷ್ಟು ಮೆಚ್ಚುಗೆಯಾಯಿತ್ತು. ಅವರು ತಮ್ಮ ನಿರ್ಮಾಣದ ಎಲ್ಲಾ ಚಿತ್ರಗಳಿಗೂ ಜಯರಾಂರವರನ್ನೇ ನೃತ್ಯ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಳ್ಳಲು ಪ್ರಾರಂಭಿಸಿದರು. ಈ ಸಂದರ್ಭದಲ್ಲೇ ಕರ್ನಾಟಕದ ಜಯರಾಂ ತಮಿಳರ ಪ್ರೀತಿಯ ಬಿ.ಜಯರಾಮನ್ ಆಗಿ, ಸಿನಿಮಾರಂಗದಲ್ಲಿ ತಮ್ಮ ಅಸ್ತಿತ್ವವನ್ನು ದಾಖಲಿಸತೊಡಗಿದರು.ಜಯರಾಂ ಮತ್ತು ಸುಂದರಂರವರಿಬ್ಬರ ಬಾಂಧವ್ಯ ಎಷ್ಟ್ಟು ಗಾಢವಾಗಿತ್ತೆಂದರೆ ಸುಂದರಂರವರು ತಾವು ವಿಧಿವಶರಾಗುವ ಮುನ್ನ ಬರೆದ ವಿಲ್ ನಲ್ಲಿ ಮುಂದೆಯೂ ಮಾರ್ಡನ್ ಥಿಯೇಟರ್ಸ್ನ ನಿರ್ಮಿಸುವ ಎಲ್ಲಾ ಚಿತ್ರಗಳಿಗೆ ಜಯರಾಂ ಮಾಸ್ಟರ್ ಅವರಿಂದಲೇ ನೃತ್ಯ ನಿರ್ದೇಶನ ಮಾಡಿಸಬೇಕು ಎಂದು ಬರೆದಿದ್ದರಂತೆ.ಜಯರಾಂರವರು ಈ ಸಂಸ್ಥೆಯಲ್ಲಿ ಕೆಲವು ವರ್ಷಗಳ ಕಲ ತಮ್ಮ ಸೇವೆ ಸಲ್ಲಿಸಿದರು.
==
==
[[ವರ್ಗ:ಚಲನಚಿತ್ರ ನೃತ್ಯ ನಿರ್ದೇಶಕರು]]
|